ರೆಡ್ ಕಾರ್ನರ್, ಬ್ಲಾಕ್, ಗ್ರೀನ್ ಕಾರ್ನರ್ ನೋಟಿಸ್ ಬಗ್ಗೆ ಗೊತ್ತಿದ್ಯಾ?
ಬಿಡದಿ ನಿತ್ಯಾನಂದ ಸ್ವಾಮೀಜಿಗೂ ಬ್ಲೂ ನೋಟಿಸ್ ನೀಡಲಾಗಿತ್ತು
ಈ ಏಳು ನೋಟಿಸ್ಗಳ ಬಗ್ಗೆ ತಿಳಿದುಕೊಳ್ಳಲೇಬೇಕು
ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ. ಸದ್ಯ ಇವರ ಬರುವಿಕೆಗಾಗಿ ಎಸ್ಐಟಿ ಕಾಯುತ್ತಿದೆ. ಮತ್ರವಲ್ಲದೆ ಕೇಂದ್ರಿಯಾ ತನಿಖಾ ದಳ ಪ್ರಜ್ವಲ್ಗಾಗಿ ಬಲೆ ಬೀಸಿದೆ. ಮಾತ್ರವಲ್ಲದೆ, ‘ಬ್ಲೂ ಕಾರ್ನರ್ ನೋಟಿಸ್’ ಕೂಡ ನೀಡಿದೆ. ಆದರೆ ಬಹುತೇಕ ಜನರಿಗೆ ‘ಬ್ಲೂ ಕಾರ್ನರ್ ನೋಟಿಸ್’ ಎಂದರೆ ಏನು ಎಂದು ತಿಳಿಯದು. ಈ ಬಗ್ಗೆ ಮಾಹಿತಿ ಇಲ್ಲಿದೆ.
ಬ್ಲೂ ಕಾರ್ನರ್ ನೋಟಿಸ್ ಮಾತ್ರವಲ್ಲ, ಕೆಂಪು ಕಾರ್ನರ್ ನೋಟಿಸ್, ಹಳದಿ ಕಾರ್ನರ್ ನೋಟಿಸ್, ಬ್ಲಾಕ್ ಕಾರ್ನರ್ ನೋಟಿಸ್, ಹಸಿರು ಕಾರ್ನರ್ ನೋಟಿಸ್, ಆರೆಂಜ್ ಕಾರ್ನರ್ ನೋಟಿಸ್, ನೇರಳೆ ಕಾರ್ನರ್ ನೋಟಿಸ್ ಹೀಗೆ 7 ನೋಟಿಸ್ಗಳಿವೆ. ಅವುಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಪ್ರಕರಣದ ಆಳವನ್ನು ಗಮನಿಸಿಕೊಂಡು ನೋಟಿಸ್ ನೀಡಲಾಗುತ್ತದೆ.
ನೀಲಿ ಕಾರ್ನರ್ ನೋಟಿಸ್
ಅದರಂತೆಯೇ ಪಜ್ವಲ್ ರೇವಣ್ಣಗೆ ಬ್ಲೂ ನೋಟಿಸ್ ನೀಡಲಾಗಿದೆ. ಇದು ಇಂಟರ್ಪೋಲ್ನ ಕೋಡೆಡ್ ನೋಟಿಸ್ಗಳ ಒಂದು ಭಾಗ. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗಿರುವ ಕಾರಣಕ್ಕೆ ಪ್ರಜ್ವಲ್ ರೇವಣ್ಣಗೆ ನೀಲಿ ಕಾರ್ನರ್ ನೋಟಿಸ್ ನೀಡಲಾಗಿದೆ.
ಬ್ಲೂ ಕಾರ್ನರ್ ನೋಟಿಸ್ ಜಗತ್ತಿನಾದ್ಯಂತ ಮಾಹಿತಿ, ಎಚ್ಚರಿಕೆಯ ಸಂದೇಶ ಮತ್ತು ಮನವಿಗಳನ್ನು ವಿವಿಧ ದೇಶಗಳ ಅಧಿಕಾರಿಗಳಿಗೆ ರವಾನಿಸುತ್ತದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹೋಗಿದ್ದಾರೆ ಎಂಬ ಮಾಹಿತಿ ಮೇರೆಗೆ ಹಾಗೂ ಪ್ರಕರಣದ ವಿಚಾರಣೆ ಭಾರತಕ್ಕೆ ಬರಬೇಕು ಎಂಬ ಕಾರಣಕ್ಕೆ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.
ಸದ್ಯ ಮಾಹಿತಿ ಪ್ರಕಾರ ಜರ್ಮನಿಯಿಂದ ಪ್ರಜ್ವಲ್ ದುಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ‘ಬ್ಲೂ ನೋಟಿಸ್’ ಸಹಾಯದಿಂದ ತನಿಖಾ ಏಜೆನ್ಸಿಗಳು ಪಾಸ್ಪೋರ್ಟ್ ಎಂಟ್ರಿ ಸಹಾಯದಿಂದ ವ್ಯಕ್ತಿ ಯಾವ ದೇಶದಲ್ಲಿ ಇದ್ದಾರೆ ಎಂದು ಅಧಿಕಾರಿಗಳು ಪತ್ತೆಹಚ್ಚುತ್ತಾರೆ.
ನಿತ್ಯಾನಂದ ಸ್ವಾಮೀಜಿಗೂ ಬ್ಲೂ ನೋಟಿಸ್ ನೀಡಲಾಗಿತ್ತು. ಸ್ವಯಂ ಘೋಷಿತ ದೇವ ಮಾನವ ಅತ್ಯಾಚಾರ ಮತ್ತು ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿ ವಿದೇಶಕ್ಕೆ ಪರಾರಿಯಾಗಿದ್ದರು. ಈ ವೇಳೆ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿತ್ತು.
ರೆಡ್ ಕಾರ್ನರ್ ನೋಟಿಸ್
ರೆಡ್ ನೋಟಿಸ್ ಕಳುಹಿಸುವುದು ತೀರಾ ವಿರಳ. ಅದರಲ್ಲೂ ವ್ಯಕ್ತಿ ಅಪರಾಧ ಚಟುವಟಿಕೆಯ ಭಾಗವಾಗಿದ್ದು, ಆತ ಕಣ್ಮರೆಯಾಗಿದ್ದರೆ, ಆತನ ಸ್ಥಳ ಹುಡುಕಾಡಲು, ಬಂಧಿಸಲು, ನ್ಯಾಯಾಲಕ್ಕೆ ಒಪ್ಪಿಸಲು ಈ ನೋಟಿಸ್ ಹೊರಡಿಸಲಾಗುತ್ತದೆ.
ಹಳದಿ ಕಾರ್ನರ್ ನೋಟಿಸ್
ಕಾಣೆಯಾದ ವ್ಯಕ್ತಿಗಳನ್ನು ಹುಡುಕಾಡಲು ಈ ನೋಟಿಸ್ ಕಳುಹಿಸಲಾಗುತ್ತದೆ. ಅಪ್ರಾಪ್ತ ವಯಸ್ಕರು, ಗುರುತಿಸಿಕೊಳ್ಳಲು ಸಾಧ್ಯವಾದ ವ್ಯಕ್ತಿಗಳನ್ನು ಹುಡುಕಾಡಲು ಈ ನೋಟಿಸ್ ಸಹಕಾರಿಯಾಗಿದೆ. ಹೀಗಾಗಿ ಇದರ ಅನ್ವಯ ಕಾಣೆಯಾದವರನ್ನು ಹುಡುಕಲು ಸಹಾಯ ಮಾಡುತ್ತದೆ.
ಕಪ್ಪು ಕಾರ್ನರ್ ನೋಟಿಸ್
ಕಪ್ಪು ಕಾರ್ನರ್ ನೋಟಿಸ್ ಅಪರಿಚಿತ ವ್ಯಕ್ತಿಗಳ ದೇಹದ ಗುರುತನ್ನು ಪತ್ತೆಹಚ್ಚಲು ಈ ನೋಟಿಸ್ ಕಳುಹಿಸಲಾಗುತ್ತದೆ. ಇದರ ಸಹಾಯದಿಂದ ಅಧಿಕಾರಿಗಳಿಗೆ ಹುಡುಕಾಡಲು ಸಹಾಯಕವಾಗುತ್ತದೆ.
ಹಸಿರು ಕಾರ್ನರ್ ನೋಟಿಸ್
ಅಪರಾಧ ಚಟುವಟಿಕೆಯಲ್ಲಿದ್ದ ವ್ಯಕ್ತಿ ಬಗ್ಗೆ ಬೇರೆಯವರಿಗೆ ಎಚ್ಚರಿಕೆ ನೀಡಲು, ಸಾರ್ವಜನಿಕ ಸುರಕ್ಷತೆಗೆ ಒತ್ತು ನೀಡಲು ಈ ನೋಟಿಸ್ ನೀಡಲಾಗುತ್ತದೆ.
ಆರೆಂಜ್ ನೋಟಿಸ್
ಸಾರ್ವಜನಿಕ ಸುರಕ್ಷತೆ ಮತ್ತು ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಕಳುಹಿಸುವ ನೋಟಿಸ್ ಇದಾಗಿದೆ. ವ್ಯಕ್ತಿ, ಘಟನೆ, ಎಚ್ಚರಿಕೆ ನೀಡಲು ಆರೆಂಜ್ ನೋಟಿಸ್ ಜಾರಿಗೊಳಿಸಲಾಗುತ್ತದೆ.
ಇದನ್ನೂ ಓದಿ: ಪ್ರಜ್ವಲ್ ಮೇಲೆ ಹದ್ದಿನ ಕಣ್ಣು, ಲೊಕೇಶನ್ ಪತ್ತೆಹಚ್ಚಿದ SIT; ಇಂದು ವಶಕ್ಕೆ ಪಡೆಯಲು ಸಿದ್ಧತೆ
ನೇರಳೆ ನೋಟಿಸ್
ಅಪರಾಧಿ ಬಳಸುವ ಶಸ್ತ್ರಾಸ್ತ್ರಗಳು, ವಸ್ತುಗಳನ್ನು ಮರೆಮಾಚುವ ವಿಧಾನಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಈ ನೋಟಿಸ್ ಅನ್ನು ಹೊರಡಿಸಲಾಗುತ್ತದೆ. ಇದರ ಅನ್ವರ ಪ್ರಕರಣ ತನಿಖೆ ಮಾಡಲು ಸುಲಭವಾಗುತ್ತದೆ.
ಈ ಏಳು ನೋಟಿಸ್ಗಳು ದೇಶಕ್ಕೆ ಬಹಳ ಸಹಾಯ ಮಾಡುತ್ತದೆ. ಅಂದರೆ ವಿದೇಶದಲ್ಲಿರುವ ಅಧಿಕಾರಿಗಳಿಗೆ ಈ ಮಾಹಿತಿ ತಲುಪಿದಂತೆ ಭಾರತಕ್ಕೆ ಬೇಕಾದ ವ್ಯಕ್ತಿ ಅಥವಾ ಅಪರಾಧಿಯನ್ನು ಜಾಗರೂಕತೆಯಿಂದ ಹಿಂತಿರುಗಿಸುವ ಕೆಲಸ ಮಾಡುತ್ತಾರೆ.
ವಿಶೇಷ ವರದಿ: ಹರ್ಷಿತ್ ಅಚ್ರಪ್ಪಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೆಡ್ ಕಾರ್ನರ್, ಬ್ಲಾಕ್, ಗ್ರೀನ್ ಕಾರ್ನರ್ ನೋಟಿಸ್ ಬಗ್ಗೆ ಗೊತ್ತಿದ್ಯಾ?
ಬಿಡದಿ ನಿತ್ಯಾನಂದ ಸ್ವಾಮೀಜಿಗೂ ಬ್ಲೂ ನೋಟಿಸ್ ನೀಡಲಾಗಿತ್ತು
ಈ ಏಳು ನೋಟಿಸ್ಗಳ ಬಗ್ಗೆ ತಿಳಿದುಕೊಳ್ಳಲೇಬೇಕು
ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ. ಸದ್ಯ ಇವರ ಬರುವಿಕೆಗಾಗಿ ಎಸ್ಐಟಿ ಕಾಯುತ್ತಿದೆ. ಮತ್ರವಲ್ಲದೆ ಕೇಂದ್ರಿಯಾ ತನಿಖಾ ದಳ ಪ್ರಜ್ವಲ್ಗಾಗಿ ಬಲೆ ಬೀಸಿದೆ. ಮಾತ್ರವಲ್ಲದೆ, ‘ಬ್ಲೂ ಕಾರ್ನರ್ ನೋಟಿಸ್’ ಕೂಡ ನೀಡಿದೆ. ಆದರೆ ಬಹುತೇಕ ಜನರಿಗೆ ‘ಬ್ಲೂ ಕಾರ್ನರ್ ನೋಟಿಸ್’ ಎಂದರೆ ಏನು ಎಂದು ತಿಳಿಯದು. ಈ ಬಗ್ಗೆ ಮಾಹಿತಿ ಇಲ್ಲಿದೆ.
ಬ್ಲೂ ಕಾರ್ನರ್ ನೋಟಿಸ್ ಮಾತ್ರವಲ್ಲ, ಕೆಂಪು ಕಾರ್ನರ್ ನೋಟಿಸ್, ಹಳದಿ ಕಾರ್ನರ್ ನೋಟಿಸ್, ಬ್ಲಾಕ್ ಕಾರ್ನರ್ ನೋಟಿಸ್, ಹಸಿರು ಕಾರ್ನರ್ ನೋಟಿಸ್, ಆರೆಂಜ್ ಕಾರ್ನರ್ ನೋಟಿಸ್, ನೇರಳೆ ಕಾರ್ನರ್ ನೋಟಿಸ್ ಹೀಗೆ 7 ನೋಟಿಸ್ಗಳಿವೆ. ಅವುಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಪ್ರಕರಣದ ಆಳವನ್ನು ಗಮನಿಸಿಕೊಂಡು ನೋಟಿಸ್ ನೀಡಲಾಗುತ್ತದೆ.
ನೀಲಿ ಕಾರ್ನರ್ ನೋಟಿಸ್
ಅದರಂತೆಯೇ ಪಜ್ವಲ್ ರೇವಣ್ಣಗೆ ಬ್ಲೂ ನೋಟಿಸ್ ನೀಡಲಾಗಿದೆ. ಇದು ಇಂಟರ್ಪೋಲ್ನ ಕೋಡೆಡ್ ನೋಟಿಸ್ಗಳ ಒಂದು ಭಾಗ. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗಿರುವ ಕಾರಣಕ್ಕೆ ಪ್ರಜ್ವಲ್ ರೇವಣ್ಣಗೆ ನೀಲಿ ಕಾರ್ನರ್ ನೋಟಿಸ್ ನೀಡಲಾಗಿದೆ.
ಬ್ಲೂ ಕಾರ್ನರ್ ನೋಟಿಸ್ ಜಗತ್ತಿನಾದ್ಯಂತ ಮಾಹಿತಿ, ಎಚ್ಚರಿಕೆಯ ಸಂದೇಶ ಮತ್ತು ಮನವಿಗಳನ್ನು ವಿವಿಧ ದೇಶಗಳ ಅಧಿಕಾರಿಗಳಿಗೆ ರವಾನಿಸುತ್ತದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹೋಗಿದ್ದಾರೆ ಎಂಬ ಮಾಹಿತಿ ಮೇರೆಗೆ ಹಾಗೂ ಪ್ರಕರಣದ ವಿಚಾರಣೆ ಭಾರತಕ್ಕೆ ಬರಬೇಕು ಎಂಬ ಕಾರಣಕ್ಕೆ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.
ಸದ್ಯ ಮಾಹಿತಿ ಪ್ರಕಾರ ಜರ್ಮನಿಯಿಂದ ಪ್ರಜ್ವಲ್ ದುಬೈಗೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ‘ಬ್ಲೂ ನೋಟಿಸ್’ ಸಹಾಯದಿಂದ ತನಿಖಾ ಏಜೆನ್ಸಿಗಳು ಪಾಸ್ಪೋರ್ಟ್ ಎಂಟ್ರಿ ಸಹಾಯದಿಂದ ವ್ಯಕ್ತಿ ಯಾವ ದೇಶದಲ್ಲಿ ಇದ್ದಾರೆ ಎಂದು ಅಧಿಕಾರಿಗಳು ಪತ್ತೆಹಚ್ಚುತ್ತಾರೆ.
ನಿತ್ಯಾನಂದ ಸ್ವಾಮೀಜಿಗೂ ಬ್ಲೂ ನೋಟಿಸ್ ನೀಡಲಾಗಿತ್ತು. ಸ್ವಯಂ ಘೋಷಿತ ದೇವ ಮಾನವ ಅತ್ಯಾಚಾರ ಮತ್ತು ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿ ವಿದೇಶಕ್ಕೆ ಪರಾರಿಯಾಗಿದ್ದರು. ಈ ವೇಳೆ ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿತ್ತು.
ರೆಡ್ ಕಾರ್ನರ್ ನೋಟಿಸ್
ರೆಡ್ ನೋಟಿಸ್ ಕಳುಹಿಸುವುದು ತೀರಾ ವಿರಳ. ಅದರಲ್ಲೂ ವ್ಯಕ್ತಿ ಅಪರಾಧ ಚಟುವಟಿಕೆಯ ಭಾಗವಾಗಿದ್ದು, ಆತ ಕಣ್ಮರೆಯಾಗಿದ್ದರೆ, ಆತನ ಸ್ಥಳ ಹುಡುಕಾಡಲು, ಬಂಧಿಸಲು, ನ್ಯಾಯಾಲಕ್ಕೆ ಒಪ್ಪಿಸಲು ಈ ನೋಟಿಸ್ ಹೊರಡಿಸಲಾಗುತ್ತದೆ.
ಹಳದಿ ಕಾರ್ನರ್ ನೋಟಿಸ್
ಕಾಣೆಯಾದ ವ್ಯಕ್ತಿಗಳನ್ನು ಹುಡುಕಾಡಲು ಈ ನೋಟಿಸ್ ಕಳುಹಿಸಲಾಗುತ್ತದೆ. ಅಪ್ರಾಪ್ತ ವಯಸ್ಕರು, ಗುರುತಿಸಿಕೊಳ್ಳಲು ಸಾಧ್ಯವಾದ ವ್ಯಕ್ತಿಗಳನ್ನು ಹುಡುಕಾಡಲು ಈ ನೋಟಿಸ್ ಸಹಕಾರಿಯಾಗಿದೆ. ಹೀಗಾಗಿ ಇದರ ಅನ್ವಯ ಕಾಣೆಯಾದವರನ್ನು ಹುಡುಕಲು ಸಹಾಯ ಮಾಡುತ್ತದೆ.
ಕಪ್ಪು ಕಾರ್ನರ್ ನೋಟಿಸ್
ಕಪ್ಪು ಕಾರ್ನರ್ ನೋಟಿಸ್ ಅಪರಿಚಿತ ವ್ಯಕ್ತಿಗಳ ದೇಹದ ಗುರುತನ್ನು ಪತ್ತೆಹಚ್ಚಲು ಈ ನೋಟಿಸ್ ಕಳುಹಿಸಲಾಗುತ್ತದೆ. ಇದರ ಸಹಾಯದಿಂದ ಅಧಿಕಾರಿಗಳಿಗೆ ಹುಡುಕಾಡಲು ಸಹಾಯಕವಾಗುತ್ತದೆ.
ಹಸಿರು ಕಾರ್ನರ್ ನೋಟಿಸ್
ಅಪರಾಧ ಚಟುವಟಿಕೆಯಲ್ಲಿದ್ದ ವ್ಯಕ್ತಿ ಬಗ್ಗೆ ಬೇರೆಯವರಿಗೆ ಎಚ್ಚರಿಕೆ ನೀಡಲು, ಸಾರ್ವಜನಿಕ ಸುರಕ್ಷತೆಗೆ ಒತ್ತು ನೀಡಲು ಈ ನೋಟಿಸ್ ನೀಡಲಾಗುತ್ತದೆ.
ಆರೆಂಜ್ ನೋಟಿಸ್
ಸಾರ್ವಜನಿಕ ಸುರಕ್ಷತೆ ಮತ್ತು ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಕಳುಹಿಸುವ ನೋಟಿಸ್ ಇದಾಗಿದೆ. ವ್ಯಕ್ತಿ, ಘಟನೆ, ಎಚ್ಚರಿಕೆ ನೀಡಲು ಆರೆಂಜ್ ನೋಟಿಸ್ ಜಾರಿಗೊಳಿಸಲಾಗುತ್ತದೆ.
ಇದನ್ನೂ ಓದಿ: ಪ್ರಜ್ವಲ್ ಮೇಲೆ ಹದ್ದಿನ ಕಣ್ಣು, ಲೊಕೇಶನ್ ಪತ್ತೆಹಚ್ಚಿದ SIT; ಇಂದು ವಶಕ್ಕೆ ಪಡೆಯಲು ಸಿದ್ಧತೆ
ನೇರಳೆ ನೋಟಿಸ್
ಅಪರಾಧಿ ಬಳಸುವ ಶಸ್ತ್ರಾಸ್ತ್ರಗಳು, ವಸ್ತುಗಳನ್ನು ಮರೆಮಾಚುವ ವಿಧಾನಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಈ ನೋಟಿಸ್ ಅನ್ನು ಹೊರಡಿಸಲಾಗುತ್ತದೆ. ಇದರ ಅನ್ವರ ಪ್ರಕರಣ ತನಿಖೆ ಮಾಡಲು ಸುಲಭವಾಗುತ್ತದೆ.
ಈ ಏಳು ನೋಟಿಸ್ಗಳು ದೇಶಕ್ಕೆ ಬಹಳ ಸಹಾಯ ಮಾಡುತ್ತದೆ. ಅಂದರೆ ವಿದೇಶದಲ್ಲಿರುವ ಅಧಿಕಾರಿಗಳಿಗೆ ಈ ಮಾಹಿತಿ ತಲುಪಿದಂತೆ ಭಾರತಕ್ಕೆ ಬೇಕಾದ ವ್ಯಕ್ತಿ ಅಥವಾ ಅಪರಾಧಿಯನ್ನು ಜಾಗರೂಕತೆಯಿಂದ ಹಿಂತಿರುಗಿಸುವ ಕೆಲಸ ಮಾಡುತ್ತಾರೆ.
ವಿಶೇಷ ವರದಿ: ಹರ್ಷಿತ್ ಅಚ್ರಪ್ಪಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ