newsfirstkannada.com

ಕೊನೆಗೂ ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ.. ಎಲ್ಲಿಂದ ಬರ್ತಿದ್ದಾರೆ ಗೊತ್ತಾ?

Share :

Published May 29, 2024 at 7:37am

    4-5 ಬಾರಿ ಟಿಕೆಟ್​ ಬುಕ್​ ಮಾಡಿ ಕ್ಯಾನ್ಸಲ್​ ಮಾಡಿದ್ದ ಪ್ರಜ್ವಲ್​ ರೇವಣ್ಣ

    ಲೈಂಗಿಕ ಹಗರಣದಲ್ಲಿ ಸಿಲುಕಿ, ವಿದೇಶದಲ್ಲಿ ನಾಪತ್ತೆಯಾಗಿರುವ ಪ್ರಜ್ವಲ್

    ಪ್ರಜ್ವಲ್ ರೇವಣ್ಣ ಯಾವ ಎರ್​​ಪೋರ್ಟ್​ ಮೂಲಕ ಭಾರತಕ್ಕೆ ಬರುತ್ತಾರೆ?

ವಿದೇಶದಲ್ಲಿರೋ ಪ್ರಜ್ವಲ್‌ ರೇವಣ್ಣ ವಾಪಸ್ ಬರಲು ಮುಹೂರ್ತ ಫಿಕ್ಸ್ ಆಗಿದೆ. ವಿದೇಶದಿಂದ ದೇಶಕ್ಕೆ ಮರಳುವ ಮನಸ್ಸು ಮಾಡಿದ್ದು, ಮೇ 31ಕ್ಕೆ ಬೆಂಗಳೂರಿಗೆ ರಿಟರ್ನ್​ ಆಗಲು ಫ್ಲೈಟ್​ಟಿಕೆಟ್​ ಬುಕ್​ ಮಾಡಿದ್ದಾರೆ..

ಭಾರತಕ್ಕೆ ಬರಲು ಪ್ರಜ್ವಲ್ ರೇವಣ್ಣ ಫ್ಲೈಟ್ ಟಿಕೆಟ್ ಬುಕ್

ಅಶ್ಲೀಲ ವಿಡಿಯೋ ಕೇಸ್‌ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರು. ಇದೀಗ ಎಸ್ಐಟಿ ಕಬಂಧ ಬಾಹುವನ್ನ ಬಿಗಿಗೊಳಿಸ್ತೋ ಒಂದು ತಿಂಗಳ ಬಳಿಕ ವಿಡಿಯೋದಲ್ಲಿ ಪ್ರತ್ಯಕ್ಷರಾಗಿದ್ದ ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ಬರೋದಾಗಿ ತಿಳಿಸಿದ್ದಾರೆ. ಮೇ 31ರಂದು ರಾಜಧಾನಿ ಬೆಂಗಳೂರಿಗೆ ಪ್ರಜ್ವಲ್​ ಬರೋದು ಕನ್ಫರ್ಮ್ ಎಂಬ ಮಾಹಿತಿ ಎಸ್​ಐಟಿ ಮೂಲಗಳಿಂದ ಲಭ್ಯವಾಗಿದೆ.

ಪ್ರಜ್ವಲ್ ರಿಟರ್ನ್‌ ಟಿಕೆಟ್‌ ಬುಕ್!

  • ಭಾರತಕ್ಕೆ ಬರಲು ಟಿಕೆಟ್ ಬುಕ್ಕಿಂಗ್ ಮಾಡಿದ ಪ್ರಜ್ವಲ್ ರೇವಣ್ಣ
  • ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ಗೆ ಬರಲಿರುವ ಪ್ರಜ್ವಲ್
  • ಜರ್ಮನಿಯ ಮ್ಯೂನಿಚ್​ನಿಂದ ಟಿಕೆಟ್​ ಬುಕ್​ ಆಗಿರುವ ಮಾಹಿತಿ
  • ಮ್ಯೂನಿಚ್​​ನಿಂದ ಮೇ.30ರ ಮಧ್ಯಾಹ್ನ 12:05ಕ್ಕೆ ಹೊರಡುವ ಸಾಧ್ಯತೆ
  • ಮೇ 31ರ ಮಧ್ಯರಾತ್ರಿ 12:30ಕ್ಕೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ
  • ಲುಫ್ತಾನ್ಸಾ ಏರ್​ಲೈನ್ಸ್​ನಲ್ಲಿ ಟಿಕೆಟ್​ ಬುಕ್​ ಮಾಡಿರುವ ಪ್ರಜ್ವಲ್​
  • ಸುಮಾರು 9 ಗಂಟೆಗಳ ಪ್ರಯಾಣ ಮಾಡಿ ಬೆಂಗಳೂರಿಗೆ ಆಗಮನ
  • ಶುಕ್ರವಾರ ಎಸ್​​ಐಟಿ ಮುಂದೆ ಹಾಜರಾಗಲಿರುವ ಪ್ರಜ್ವಲ್ ರೇವಣ್ಣ

ಪ್ರಜ್ವಲ್​ ಬರುತ್ತಿದ್ದಂತೆ ವಿಚಾರಣೆಗೆ ಎಸ್​ಐಟಿ ಪ್ಲಾನ್​

ಇನ್ನೂ ಮೇ 31ರ ಮಧ್ಯರಾತ್ರಿಯೇ ಪ್ರಜ್ವಲ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಪ್ರಜ್ವಲ್ ಬರ್ತಿದ್ದಂತೆ ಬಂಧನ?

  • ಪ್ರಜ್ವಲ್ ಟಿಕೆಟ್​ ಬುಕ್​ ಬೆನ್ನಲ್ಲೇ ಏರ್​ಪೋರ್ಟ್​​ನಲ್ಲಿ ಅಲರ್ಟ್
  • ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​​ನಲ್ಲಿ ಅಲರ್ಟ್
  • ಜರ್ಮನಿಯಿಂದ ಬರುವ ಲುಪ್ತಾನ್ಸಾ ಫ್ಲೈಟ್​ ಮೇಲೆ ಹದ್ದಿನ ಕಣ್ಣು
  • ಏರ್​ಪೋರ್ಟ್​ನಲ್ಲಿ ಗುಪ್ತಚರ ಹಾಗೂ ಎಸ್ಐಟಿ ಹದ್ದಿನ ಕಣ್ಣು‌
  • ಪ್ರಜ್ವಲ್​ನನ್ನು ಬಂಧಿಸಿ, ತನಿಖೆ ನಡೆಸುವ ಬಗ್ಗೆ ಎಸ್​ಐಟಿ ಪ್ಲಾನ್​
  • ಎಸ್​ಪಿಪಿ ಜಗದೀಶ್​ ಜೊತೆ ಎಸ್​ಐಟಿ ತನಿಖಾ ತಂಡ ಚರ್ಚೆ

ಇದನ್ನೂ ಓದಿ: ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡ್ತಿದ್ಯಾ ರಾಜ್ಯ ಸರ್ಕಾರ? ಎಲ್ಲರೂ ಓದಲೇಬೇಕಾದ ಸ್ಟೋರಿ!

ಒಂದೆಡೆ ಪ್ರಜ್ವಲ್​ ಬರುವಿಕೆಗಾಗಿ ಕಾಯ್ತಿರುವ ಎಸ್​ಐಟಿ, ಇತ್ತ ಹಾಸನದಲ್ಲಿ ಪೆನ್​ಡ್ರೈವ್​ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ. ಹಾಸನದ ಸಂಸದರ‌ ನಿವಾಸ ಹಾಗೂ ಹೊಳೆನರಸೀಪುರದ ಎಚ್.ಡಿ.ರೇವಣ್ಣ ‌ನಿವಾಸ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಕಡದಲ್ಲಿರುವ ಫಾರ್ಮ್ ಹೌಸ್​ಗೆ ಏಕಕಾಲಕ್ಕೆ ಆಗಮಿಸಿ, ಸ್ಥಳ ಮಹಜರು ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ.. ಎಲ್ಲಿಂದ ಬರ್ತಿದ್ದಾರೆ ಗೊತ್ತಾ?

https://newsfirstlive.com/wp-content/uploads/2024/05/Prajwal-Revanna-5.jpg

    4-5 ಬಾರಿ ಟಿಕೆಟ್​ ಬುಕ್​ ಮಾಡಿ ಕ್ಯಾನ್ಸಲ್​ ಮಾಡಿದ್ದ ಪ್ರಜ್ವಲ್​ ರೇವಣ್ಣ

    ಲೈಂಗಿಕ ಹಗರಣದಲ್ಲಿ ಸಿಲುಕಿ, ವಿದೇಶದಲ್ಲಿ ನಾಪತ್ತೆಯಾಗಿರುವ ಪ್ರಜ್ವಲ್

    ಪ್ರಜ್ವಲ್ ರೇವಣ್ಣ ಯಾವ ಎರ್​​ಪೋರ್ಟ್​ ಮೂಲಕ ಭಾರತಕ್ಕೆ ಬರುತ್ತಾರೆ?

ವಿದೇಶದಲ್ಲಿರೋ ಪ್ರಜ್ವಲ್‌ ರೇವಣ್ಣ ವಾಪಸ್ ಬರಲು ಮುಹೂರ್ತ ಫಿಕ್ಸ್ ಆಗಿದೆ. ವಿದೇಶದಿಂದ ದೇಶಕ್ಕೆ ಮರಳುವ ಮನಸ್ಸು ಮಾಡಿದ್ದು, ಮೇ 31ಕ್ಕೆ ಬೆಂಗಳೂರಿಗೆ ರಿಟರ್ನ್​ ಆಗಲು ಫ್ಲೈಟ್​ಟಿಕೆಟ್​ ಬುಕ್​ ಮಾಡಿದ್ದಾರೆ..

ಭಾರತಕ್ಕೆ ಬರಲು ಪ್ರಜ್ವಲ್ ರೇವಣ್ಣ ಫ್ಲೈಟ್ ಟಿಕೆಟ್ ಬುಕ್

ಅಶ್ಲೀಲ ವಿಡಿಯೋ ಕೇಸ್‌ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರು. ಇದೀಗ ಎಸ್ಐಟಿ ಕಬಂಧ ಬಾಹುವನ್ನ ಬಿಗಿಗೊಳಿಸ್ತೋ ಒಂದು ತಿಂಗಳ ಬಳಿಕ ವಿಡಿಯೋದಲ್ಲಿ ಪ್ರತ್ಯಕ್ಷರಾಗಿದ್ದ ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ಬರೋದಾಗಿ ತಿಳಿಸಿದ್ದಾರೆ. ಮೇ 31ರಂದು ರಾಜಧಾನಿ ಬೆಂಗಳೂರಿಗೆ ಪ್ರಜ್ವಲ್​ ಬರೋದು ಕನ್ಫರ್ಮ್ ಎಂಬ ಮಾಹಿತಿ ಎಸ್​ಐಟಿ ಮೂಲಗಳಿಂದ ಲಭ್ಯವಾಗಿದೆ.

ಪ್ರಜ್ವಲ್ ರಿಟರ್ನ್‌ ಟಿಕೆಟ್‌ ಬುಕ್!

  • ಭಾರತಕ್ಕೆ ಬರಲು ಟಿಕೆಟ್ ಬುಕ್ಕಿಂಗ್ ಮಾಡಿದ ಪ್ರಜ್ವಲ್ ರೇವಣ್ಣ
  • ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ಗೆ ಬರಲಿರುವ ಪ್ರಜ್ವಲ್
  • ಜರ್ಮನಿಯ ಮ್ಯೂನಿಚ್​ನಿಂದ ಟಿಕೆಟ್​ ಬುಕ್​ ಆಗಿರುವ ಮಾಹಿತಿ
  • ಮ್ಯೂನಿಚ್​​ನಿಂದ ಮೇ.30ರ ಮಧ್ಯಾಹ್ನ 12:05ಕ್ಕೆ ಹೊರಡುವ ಸಾಧ್ಯತೆ
  • ಮೇ 31ರ ಮಧ್ಯರಾತ್ರಿ 12:30ಕ್ಕೆ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ
  • ಲುಫ್ತಾನ್ಸಾ ಏರ್​ಲೈನ್ಸ್​ನಲ್ಲಿ ಟಿಕೆಟ್​ ಬುಕ್​ ಮಾಡಿರುವ ಪ್ರಜ್ವಲ್​
  • ಸುಮಾರು 9 ಗಂಟೆಗಳ ಪ್ರಯಾಣ ಮಾಡಿ ಬೆಂಗಳೂರಿಗೆ ಆಗಮನ
  • ಶುಕ್ರವಾರ ಎಸ್​​ಐಟಿ ಮುಂದೆ ಹಾಜರಾಗಲಿರುವ ಪ್ರಜ್ವಲ್ ರೇವಣ್ಣ

ಪ್ರಜ್ವಲ್​ ಬರುತ್ತಿದ್ದಂತೆ ವಿಚಾರಣೆಗೆ ಎಸ್​ಐಟಿ ಪ್ಲಾನ್​

ಇನ್ನೂ ಮೇ 31ರ ಮಧ್ಯರಾತ್ರಿಯೇ ಪ್ರಜ್ವಲ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಪ್ರಜ್ವಲ್ ಬರ್ತಿದ್ದಂತೆ ಬಂಧನ?

  • ಪ್ರಜ್ವಲ್ ಟಿಕೆಟ್​ ಬುಕ್​ ಬೆನ್ನಲ್ಲೇ ಏರ್​ಪೋರ್ಟ್​​ನಲ್ಲಿ ಅಲರ್ಟ್
  • ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​​ನಲ್ಲಿ ಅಲರ್ಟ್
  • ಜರ್ಮನಿಯಿಂದ ಬರುವ ಲುಪ್ತಾನ್ಸಾ ಫ್ಲೈಟ್​ ಮೇಲೆ ಹದ್ದಿನ ಕಣ್ಣು
  • ಏರ್​ಪೋರ್ಟ್​ನಲ್ಲಿ ಗುಪ್ತಚರ ಹಾಗೂ ಎಸ್ಐಟಿ ಹದ್ದಿನ ಕಣ್ಣು‌
  • ಪ್ರಜ್ವಲ್​ನನ್ನು ಬಂಧಿಸಿ, ತನಿಖೆ ನಡೆಸುವ ಬಗ್ಗೆ ಎಸ್​ಐಟಿ ಪ್ಲಾನ್​
  • ಎಸ್​ಪಿಪಿ ಜಗದೀಶ್​ ಜೊತೆ ಎಸ್​ಐಟಿ ತನಿಖಾ ತಂಡ ಚರ್ಚೆ

ಇದನ್ನೂ ಓದಿ: ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡ್ತಿದ್ಯಾ ರಾಜ್ಯ ಸರ್ಕಾರ? ಎಲ್ಲರೂ ಓದಲೇಬೇಕಾದ ಸ್ಟೋರಿ!

ಒಂದೆಡೆ ಪ್ರಜ್ವಲ್​ ಬರುವಿಕೆಗಾಗಿ ಕಾಯ್ತಿರುವ ಎಸ್​ಐಟಿ, ಇತ್ತ ಹಾಸನದಲ್ಲಿ ಪೆನ್​ಡ್ರೈವ್​ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ. ಹಾಸನದ ಸಂಸದರ‌ ನಿವಾಸ ಹಾಗೂ ಹೊಳೆನರಸೀಪುರದ ಎಚ್.ಡಿ.ರೇವಣ್ಣ ‌ನಿವಾಸ ಮತ್ತು ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಕಡದಲ್ಲಿರುವ ಫಾರ್ಮ್ ಹೌಸ್​ಗೆ ಏಕಕಾಲಕ್ಕೆ ಆಗಮಿಸಿ, ಸ್ಥಳ ಮಹಜರು ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More