ಬೆಂಗಳೂರು-ಮೈಸೂರು ಬಿಜೆಪಿ ಪಾದಯಾತ್ರೆ ನಡೆಯೋದು ಫಿಕ್ಸ್!
ಕುಮಾರಸ್ವಾಮಿ ಜೊತೆ ಮಾತುಕತೆಗೆ ಮುಂದಾದ ಕೇಂದ್ರ ನಾಯಕರು
ಯಾರನ್ನೂ ಬಿಟ್ಟು ಪಾದಯಾತ್ರೆ ಮಾಡುವುದಿಲ್ಲ ಅಂದಿದ್ಯಾರು?
ನವದೆಹಲಿ: ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಲು ರಾಜ್ಯ ಬಿಜೆಪಿ ಪಾಳಯ ಸಜ್ಜಾಗಿದೆ. ಬಿಜೆಪಿಯ ಈ ನಡೆಗೆ ಜೆಡಿಎಸ್ ಈಗಾಗಲೇ ಸಣ್ಣದೊಂದು ಅಪಸ್ವರವನ್ನು ತೆಗೆದಿದೆ. ಕುಮಾರಸ್ವಾಮಿ ಜೆಡಿಎಸ್ ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಈಗಾಗಲೇ ಹೇಳಿದ್ದಾರೆ. ಇದರ ನಡುವೆಯೂ ಅಮಿತ್ ಶಾ ನಿಮ್ಮ ಪಾಡಿಗೆ ನೀವು ಪಾದಯಾತ್ರೆ ಮಾಡಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಆನೆ ಬಲ ಬಂದಾಂತಾಗಿದೆ. ಈಗ ಬಿಜೆಪಿಯ ಮತ್ತೊಬ್ಬ ನಾಯಕ, ಕೇಂದ್ರ ಸಚಿವ ಪಾದಯಾತ್ರೆ ನಡೆದೇ ನಡೆಯುತ್ತೇ ಎಂದು ಹೇಳಿದ್ದಾರೆ.
ಇದನ್ನೂ ಓದಿ: BREAKING: ಕುಮಾರಸ್ವಾಮಿಗೆ ಚೆಕ್ ಇಟ್ಟ ಬಿಜೆಪಿ ಹೈಕಮಾಂಡ್; ವಿಜಯೇಂದ್ರ ಪಾದಯಾತ್ರೆಗೆ ಗ್ರೀನ್ಸಿಗ್ನಲ್?
ಜೆಡಿಎಸ್ ಬಿಟ್ಟು ಪಾದಯಾತ್ರೆ ಮಾಡುವುದಿಲ್ಲ: ಪ್ರಹ್ಲಾದ್ ಜೋಶಿ
ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬೆಂಗಳೂರು-ಮೈಸೂರು ಪಾದಯಾತ್ರೆ ನಡೆದೇ ನಡೆಯುತ್ತೆ. ಈ ಬಗ್ಗೆ ಹೆಚ್ ಡಿ ಕುಮಾರಸ್ವಾಮಿಯವರೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಅವರು ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಮತ್ತೊಂದು ಕಡೆ ಬಿಜೆಪಿಯಲ್ಲಿಯೂ ಪಾದಯಾತ್ರೆಯ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಹ್ಲಾದ್ ಜೋಶಿ ಅದರ ಬಗ್ಗೆ ಮಾತುಕತೆ ನಡೆಸಿ ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿಯವರೊಂದಿಗೆ ಮಾತುಕತೆ ನಡೆಸಿ ಮುಂದುವರಿಯುತ್ತೇವೆ. ಆದರೆ, ಹೋದರೆ, ಈ ರೇ ಅನ್ನೋದಕ್ಕೆಲ್ಲಾ ಉತ್ತರ ಕೊಡುತ್ತಾ ಕೂರುವುದಿಲ್ಲ, ಬರಲ್ಲ ಮಾಡಲ್ಲ ಅನ್ನೋದಕ್ಕೆ ಉತ್ತರ ಕೊಡಲಿಕ್ಕಾಗೋದಿಲ್ಲ. ಯತ್ನಾಳ್ ಹಾಗೂ ಜಾರಕಿಹೊಳಿ ಜೊತೆಯೂ ಕೂಡ ಮಾತನಾಡುತ್ತೇವೆ. ಎನ್ಡಿಎ ಸಹವರ್ತಿಯಾಗಿರುವ ಜೆಡಿಎಸ್ನ್ನು ಬಿಟ್ಟು ಪಾದಯಾತ್ರೆ ನಡೆಯಲ್ಲ. ನಾವು ಅವರೊಂದಿಗೆ ಮಾತನಾಡುತ್ತೇವೆ. ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಕೇಂದ್ರ ಸಚಿವ ಸ್ಪಷ್ಟನೆ ನೀಡಿದ್ದಾರೆ. ಇದು ಬಿಜೆಪಿ ಪಾಳಯಕ್ಕೆ ಹಾಗೂ ಬಿ ವೈ ವಿಜಯೇಂದ್ರಗೆ ಹೆಚ್ಚಿನ ಶಕ್ತಿಯನ್ನು ತಂದುಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಂಗಳೂರು-ಮೈಸೂರು ಬಿಜೆಪಿ ಪಾದಯಾತ್ರೆ ನಡೆಯೋದು ಫಿಕ್ಸ್!
ಕುಮಾರಸ್ವಾಮಿ ಜೊತೆ ಮಾತುಕತೆಗೆ ಮುಂದಾದ ಕೇಂದ್ರ ನಾಯಕರು
ಯಾರನ್ನೂ ಬಿಟ್ಟು ಪಾದಯಾತ್ರೆ ಮಾಡುವುದಿಲ್ಲ ಅಂದಿದ್ಯಾರು?
ನವದೆಹಲಿ: ಮುಡಾ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಲು ರಾಜ್ಯ ಬಿಜೆಪಿ ಪಾಳಯ ಸಜ್ಜಾಗಿದೆ. ಬಿಜೆಪಿಯ ಈ ನಡೆಗೆ ಜೆಡಿಎಸ್ ಈಗಾಗಲೇ ಸಣ್ಣದೊಂದು ಅಪಸ್ವರವನ್ನು ತೆಗೆದಿದೆ. ಕುಮಾರಸ್ವಾಮಿ ಜೆಡಿಎಸ್ ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಈಗಾಗಲೇ ಹೇಳಿದ್ದಾರೆ. ಇದರ ನಡುವೆಯೂ ಅಮಿತ್ ಶಾ ನಿಮ್ಮ ಪಾಡಿಗೆ ನೀವು ಪಾದಯಾತ್ರೆ ಮಾಡಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಆನೆ ಬಲ ಬಂದಾಂತಾಗಿದೆ. ಈಗ ಬಿಜೆಪಿಯ ಮತ್ತೊಬ್ಬ ನಾಯಕ, ಕೇಂದ್ರ ಸಚಿವ ಪಾದಯಾತ್ರೆ ನಡೆದೇ ನಡೆಯುತ್ತೇ ಎಂದು ಹೇಳಿದ್ದಾರೆ.
ಇದನ್ನೂ ಓದಿ: BREAKING: ಕುಮಾರಸ್ವಾಮಿಗೆ ಚೆಕ್ ಇಟ್ಟ ಬಿಜೆಪಿ ಹೈಕಮಾಂಡ್; ವಿಜಯೇಂದ್ರ ಪಾದಯಾತ್ರೆಗೆ ಗ್ರೀನ್ಸಿಗ್ನಲ್?
ಜೆಡಿಎಸ್ ಬಿಟ್ಟು ಪಾದಯಾತ್ರೆ ಮಾಡುವುದಿಲ್ಲ: ಪ್ರಹ್ಲಾದ್ ಜೋಶಿ
ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬೆಂಗಳೂರು-ಮೈಸೂರು ಪಾದಯಾತ್ರೆ ನಡೆದೇ ನಡೆಯುತ್ತೆ. ಈ ಬಗ್ಗೆ ಹೆಚ್ ಡಿ ಕುಮಾರಸ್ವಾಮಿಯವರೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಅವರು ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಮತ್ತೊಂದು ಕಡೆ ಬಿಜೆಪಿಯಲ್ಲಿಯೂ ಪಾದಯಾತ್ರೆಯ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಹ್ಲಾದ್ ಜೋಶಿ ಅದರ ಬಗ್ಗೆ ಮಾತುಕತೆ ನಡೆಸಿ ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿಯವರೊಂದಿಗೆ ಮಾತುಕತೆ ನಡೆಸಿ ಮುಂದುವರಿಯುತ್ತೇವೆ. ಆದರೆ, ಹೋದರೆ, ಈ ರೇ ಅನ್ನೋದಕ್ಕೆಲ್ಲಾ ಉತ್ತರ ಕೊಡುತ್ತಾ ಕೂರುವುದಿಲ್ಲ, ಬರಲ್ಲ ಮಾಡಲ್ಲ ಅನ್ನೋದಕ್ಕೆ ಉತ್ತರ ಕೊಡಲಿಕ್ಕಾಗೋದಿಲ್ಲ. ಯತ್ನಾಳ್ ಹಾಗೂ ಜಾರಕಿಹೊಳಿ ಜೊತೆಯೂ ಕೂಡ ಮಾತನಾಡುತ್ತೇವೆ. ಎನ್ಡಿಎ ಸಹವರ್ತಿಯಾಗಿರುವ ಜೆಡಿಎಸ್ನ್ನು ಬಿಟ್ಟು ಪಾದಯಾತ್ರೆ ನಡೆಯಲ್ಲ. ನಾವು ಅವರೊಂದಿಗೆ ಮಾತನಾಡುತ್ತೇವೆ. ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಕೇಂದ್ರ ಸಚಿವ ಸ್ಪಷ್ಟನೆ ನೀಡಿದ್ದಾರೆ. ಇದು ಬಿಜೆಪಿ ಪಾಳಯಕ್ಕೆ ಹಾಗೂ ಬಿ ವೈ ವಿಜಯೇಂದ್ರಗೆ ಹೆಚ್ಚಿನ ಶಕ್ತಿಯನ್ನು ತಂದುಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ