Advertisment

ಸಿಎಂ ಸಿದ್ದು ಪತ್ನಿ ಹಾದಿಯನ್ನೇ ತುಳಿದ ಖರ್ಗೆ ಪುತ್ರ! ಕೆಐಎಡಿಬಿ ಸೈಟ್ ವಾಪಸ್ ನೀಡಲು ಸಿದ್ಧತೆ

author-image
Gopal Kulkarni
Updated On
ಸಿಎಂ ಸಿದ್ದು ಪತ್ನಿ ಹಾದಿಯನ್ನೇ ತುಳಿದ ಖರ್ಗೆ ಪುತ್ರ! ಕೆಐಎಡಿಬಿ ಸೈಟ್ ವಾಪಸ್ ನೀಡಲು ಸಿದ್ಧತೆ
Advertisment
  • ರಾಹುಲ್, ಖರ್ಗೆ ನೇತೃತ್ವದ ಟ್ರಸ್ಟ್​​ಗೆ ನೀಡಿದ ಭೂಮಿ ವಾಪಸ್​ಗೆ ಚಿಂತನೆ
  • ಕೆಐಎಡಿಬಿಗೆ ಪತ್ರ ಬರೆದು ಆಡಳಿತಾತ್ಮಕ ಕ್ರಮಕ್ಕೆ ಮುಂದಾದ ಟ್ರಸ್ಟ್
  • ಸಿಎ ಸೈಟ್ ವಾಪಸ್ ನೀಡೋದಾಗಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

ಕಾಂಗ್ರೆಸ್​ ನಾಯಕರ ಬೆನ್ನಿಗೆ ಅಕ್ರಮದ ಭೂತ ಬೆನ್ನತ್ತಿದೆ. ಒಬ್ಬರಾದ ಮೇಲ್ಲೊಬ್ಬರ ಮೇಲೆ ಹಗರಣದ ಆರೋಪ ಕೇಳಿ ಬರ್ತಿದೆ. ಮಾಜಿ ಸಚಿವ ಬಿ.ನಾಗೇಂದ್ರ ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿದ್ರೆ, ಸಿಎಂ ಸಿದ್ದರಾಮಯ್ಯಗೆ ಮೂಡಾ ಮುಳ್ಳು ಸುತ್ತಿಕೊಂಡಿದೆ. ಈ ಬೆನ್ನಲ್ಲೇ ಖರ್ಗೆ ಕುಟುಂಬದ ಮೇಲೂ ಅಕ್ರಮದ ಆರೋಪಗಳು ಕೇಳಿ ಬರ್ತಿದೆ. ಅದರಿಂದ ಪಾರಾಗಲು ಖರ್ಗೆ ಪುತ್ರ ಕೂಡ ಸಿಎಂ ಹಾದಿ ಹಿಡಿಯೋಕೆ ಮುಂದಾಗಿದ್ದಾರೆ.

Advertisment

ಇದನ್ನೂ ಓದಿ:ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಮತ್ತೊಂದು ದೂರು ದಾಖಲು; ಎಡಿಜಿಪಿ ಚಂದ್ರಶೇಖರ್​ ಅವರಿಂದ ಕಂಪ್ಲೇಂಟ್

ಅದೇನೋ ಗೊತ್ತಿಲ್ಲ ಕಾಂಗ್ರೆಸ್​ ನಾಯಕರಿಗೆ ಸೈಟ್​ ಸಂಕಷ್ಟ ಎದುರಾಗಿದೆ. ಸಿಎಂ ಸಿದ್ದರಾಮಯ್ಯಗೆ ಮುಡಾ ಸೈಟ್​ ಮುಳ್ಳಾಗಿದ್ರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಕುಟುಂಬಕ್ಕೆ ಕೆಐಎಡಿಬಿ ಕಂಟಕ ಎದುರಾಗಿತ್ತು. ಸಿಎಂ ಮುಡಾ ಸೈಟ್​ ಹಿಂದಿರುಗಿಸಿದ ಬೆನ್ನಲ್ಲೇ ಖರ್ಗೆ ಪುತ್ರರು ಭೂಮಿ ವಾಪಸ್​ ಕೊಡಲು ನಿರ್ಧರಿಸಿದ್ದಾರೆ.

publive-image

ಮಲ್ಲಿಕಾರ್ಜುನ್​ ಖರ್ಗೆ ನೇತೃತ್ವದ ಟ್ರಸ್ಟ್​ಗೆ ಕೆಐಎಡಿಬಿಯಿಂದ 5 ಎಕರೆ ಭೂಮಿಯನ್ನ ನೀಡಲಾಗಿತ್ತು. ಬೆಂಗಳೂರಿನ ಏರೋಸ್ಪೇಸ್ ಬಳಿ ಭೂಮಿ ಮಂಜೂರು ಮಾಡಿದ್ದ ಕೆಐಎಡಿಬಿ. ಆದ್ರೀಗ ಭೂಮಿ ನೀಡಿದ ಕ್ರಮ ವಿವಾದದ ಸ್ವರೂಪ ಪಡೆದ ಹಿನ್ನೆಲೆ, ಸಿದ್ದಾರ್ಥ ವಿಹಾರ್ ಟ್ರಸ್ಟ್​ಗೆ ನೀಡಲಾದ 5 ಎಕರೆ ಕೆಐಎಡಿಬಿ ಭೂಮಿಯನ್ನ ಕೆಐಎಡಿಬಿಗೆ ಹಿಂದಿರುಗಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಟ್ರಸ್ಟ್ ಕೆಐಎಡಿಬಿಗೆ ಪತ್ರ ಬರೆದು ಆಡಳಿತಾತ್ಮಕ ಕ್ರಮಕ್ಕೆ ಮುಂದಾಗಿದೆ.

Advertisment

ಮುಡಾ ಸೈಟ್ ವಾಪಸ್ ಬೆನ್ನಲ್ಲೇ, ಸಿಎ ಸೈಟ್ ಹಿಂದಿರುಗಿಸಲು ಚಿಂತನೆ
ಸಿಎಂ ಸಿದ್ದರಾಮಯ್ಯ ಮುಡಾ ಸೈಟ್​ ವಾಪಸ್​ ನೀಡಿದ ಬೆನ್ನಲ್ಲೇ ಖರ್ಗೆ ಕುಟುಂಬ ಸಿಎ ಸೈಟ್​ ಹಿಂದಿರುಗಿಸಲು ಚಿಂತನೆ ನಡೆಸಿದ್ದಾರೆ. 15 ದಿನಗಳ ಹಿಂದೆಯೇ ಭೂಮಿ ವಾಪಸ್ ಕೊಡಲು ಚಿಂತನೆ ನಡೆಸಿದ್ದಾರೆ. ಅಲ್ಲದೆ, ಪ್ರಿಯಾಂಕ್​ ಖರ್ಗೆ, ಭೂಮಿ ವಾಪಸ್ ಕ್ರಮದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಭೂಮಿ ವಾಪಸ್ ಪಡೆಯುವ ಮುನ್ನ ಕೆಐಎಡಿಬಿ ಆಡಳಿತ ಮಂಡಳಿ ಸಭೆ ನಡೆಯಬೇಕು, ಬಳಿಕ ಸರ್ಕಾರದ ಅನುಮತಿ ಪಡೆದು ಭೂಮಿ ಹಂಚಿಕೆ ರದ್ದು ಮಾಡಬೇಕು. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಹಾಗೂ ಕೆಐಎಡಿಬಿ ಕಾನೂನಾತ್ಮಕ ಅಂಶಗಳ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಿಯಾಂಕ್​ ಖರ್ಗೆ, ನಮಗೆ ಕೊಟ್ಟ ಸಿಎ ಸೈಟ್ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ರಾಜಕೀಯದಿಂದ ಬೇಸರವಾಗಿ ಸಿಎ ಸೈಟ್ ಬೇಡವೆಂಬ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಅಲ್ಲದೆ, ಸೈಟ್​ ವಾಪಸ್​ ಕೊಡೋದಾಗಿ ಸ್ಪಷ್ಟ ಪಡಿಸಿದ್ದಾರೆ.

publive-image

ಇದನ್ನೂ ಓದಿ:VIDEO: ಮುಡಾ ಕೇಸ್​ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ!

ಇನ್ನು ಈ ಬಗ್ಗೆ ಪ್ರತಿಕ್ರಿಯೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷರನ್ನೇ ಕೇಳಿ ಎನ್ನುವ ಮೂಲಕ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ. ಒಟ್ಟಿನಲ್ಲಿ ಸಿಎಂ ಬೆನ್ನಲ್ಲೇ ಅಕ್ರಮದ ತೂಗುಕತ್ತಿಯಿಂದ ತಪ್ಪಿಸಿಕೊಳ್ಳೋಕೆ ಖರ್ಗೆ ಕುಟುಂಬ ಕೂಡ ಸೈಟ್​ ವಾಪಸ್​ ಮಾಡೋಕೆ ನಿರ್ಧರಿಸಿದ್ದು. ಇದು ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆಯಾ ಅನ್ನೋ ಅನುಮಾನಗಳು ಕೂಡ ದಟ್ಟವಾಗಿವೆ.

Advertisment
Advertisment
Advertisment
Advertisment