newsfirstkannada.com

VIDEO: ಹೌದು ತಗಡೇ.. ನಟ ದರ್ಶನ್‌ ಮಾತಿಗೆ ಉಮಾಪತಿ ಗೌಡ ಖಡಕ್ ರಿಯಾಕ್ಷನ್; ಏನಂದ್ರು?

Share :

Published February 20, 2024 at 2:39pm

    ನಾನು ಕಥೆ ಕೊಟ್ಟೆ, ಟೈಟಲ್​ ಕೊಟ್ಟೆ ಅಂತ ಯಾಕೆ ಹೇಳ್ತಿಯಾ?

    ಬಂದು ಬಂದು ಯಾಕೆ ಗುಮ್ಮಿಸ್ಕೋತಿಯಾ ಎಂದಿದ್ದ ನಟ ದರ್ಶನ್

    ನ್ಯೂಸ್ ಫಸ್ಟ್‌ಗೆ ರಿಯಾಕ್ಷನ್ ಕೊಟ್ಟ ಉಮಾಪತಿ ಗೌಡ ಹೇಳಿದ್ದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಸಿನಿಮಾದ 50ನೇ ದಿನದ ಸಂಭ್ರಮಾಚರಣೆಯಲ್ಲಿ ಆಡಿದ ಖಡಕ್‌ ಮಾತುಗಳು ಹೊಸ ಕಿಚ್ಚು ಹಚ್ಚಿದೆ. ನಿರ್ಮಾಪಕ ಉಮಾಪತಿ ಗೌಡಗೆ ನೇರವಾಗಿ ಟಾಂಗ್​ ಕೊಟ್ಟ ದರ್ಶನ್ ಅವರು ಅಯ್ಯೋ ತಗಡೇ ನಾನು ಕಥೆ ಕೊಟ್ಟೆ, ಟೈಟಲ್​ ಕೊಟ್ಟೆ ಅಂತ ಯಾಕೆ ಹೇಳ್ತಿಯಾ? ನಿನಗೆ ಟೈಟಲ್​ ಕೊಟ್ಟಿದ್ದೇ ನಾನು ಅಂತ ಸ್ಪಷ್ಟನೆ ಕೊಟ್ಟಿದ್ದರು. ಬಂದು ಬಂದು ಯಾಕೆ ಗುಮ್ಮಿಸ್ಕೋತಿಯಾ ಎಂದು ಉಮಾಪತಿ ವಿರುದ್ಧ ಆಕ್ರೋಶದ ಮಾತುಗಳನಾಡಿದ್ದರು.

ದರ್ಶನ್ ಅವರ ಈ ಮಾತುಗಳಿಗೆ ನಿರ್ಮಾಪಕ ಉಮಾಪತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಸ್ ಫಸ್ಟ್‌ಗೆ ರಿಯಾಕ್ಷನ್ ಕೊಟ್ಟ ಉಮಾಪತಿ ಗೌಡ ಅವರು ಇರಲಿ ದೊಡ್ಡವರು ಮಾತನಾಡಿದ್ದಾರೆ. ಏನು ತೊಂದರೆ ಇಲ್ಲ. ಗುಮ್ಮಿಸಿಕೊಳ್ಳೋದು ಅದೆಲ್ಲಾ ಭಗವಂತ ಮಾಡಬೇಕು. ಭಗವಂತ ಗುಮ್ಮಬೇಕು ಎಲ್ಲಾ ಗುಮ್ಮಿಸಿಕೊಳ್ಳಬೇಕು. ತೊಂದರೆ ಇಲ್ಲ. ಅವರಿಗೆ ದೇವರು ಚೆನ್ನಾಗಿ ಇಟ್ಟಿರಲಿ ಎಂದಿದ್ದಾರೆ.

ಇದನ್ನೂ ಓದಿ: ಅಯ್ಯೋ ತಗಡೇ.. ರಾಬರ್ಟ್​ಗೆ ಕಥೆ ಕೊಟ್ಟಿದ್ದೇ ನಾನು.. ವೇದಿಕೆ ಮೇಲೆ ಉಮಾಪತಿಗೆ ದರ್ಶನ್​​ ಟಾಂಗ್​

ಕಾಟೇರ ಸಿನಿಮಾದ ಟೈಟಲ್ ವಿವಾದಕ್ಕೆ ಉಮಾಪತಿ ಗೌಡ ಅವರು ನ್ಯೂಸ್ ಫಸ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ. ಫಿಲ್ಮ್ ಚೇಂಬರ್‌ಗೆ ಹೋಗಿ ನೋಡಿದ್ರೆ ನಿಮಗೆ ಸತ್ಯ ಏನು ಅನ್ನೋದು ಗೊತ್ತಾಗುತ್ತೆ. ಯಾರ ಹೆಸರಲ್ಲಿ ಟೈಟಲ್ ರಿಜಿಸ್ಟರ್ ಆಯ್ತು ಅಂತ ಗೊತ್ತಾಗುತ್ತೆ. ಈಗ ಅಕ್ಕ-ಪಕ್ಕ ಇರೋರೆಲ್ಲಾ ಅವರ ಪರವಾಗಿ ಮಾತನಾಡ್ತಿದ್ದಾರೆ ಸಂತೋಷ. ಚೆನ್ನಾಗಿರಲಿ ತೊಂದರೆ ಇಲ್ಲ. ನಾನು ಅವರ ಬಗ್ಗೆ ಮಾತಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ. ದೊಡ್ಡ ವ್ಯಕ್ತಿಯಾಗಿ ಬೆಳೆದ ಮೇಲೆ ಮಾತಾಡೋಣ ಎಂದಿದ್ದಾರೆ.

ಇನ್ನು, ಹೌದು ನಾವು ತಗಡುಗಳು. ಅವರ ಮಟ್ಟಕ್ಕೆ ಹೋಗಿ ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿಗಳಲ್ಲ. ತಗಡಾಗೇ ಇರ್ತೀವಿ. ಆಮೇಲೆ ಗುಮ್ಮಿಸಿಕೊಳ್ಳೋರು ನಾವೆಲ್ಲಾ ಹೀಗೆ ಇರ್ತೀವಿ. ಎಲ್ಲಾ ಭಗವಂತ ನೋಡ್ತಾ ಇರ್ತಾನೆ. ನಾನು ಯಾರಿಗೂ ಇಲ್ಲಿ ಉತ್ತರ ಕೊಡಲೇ ಬೇಕು ಅಂತ ಕಂಡೀಷನ್ ಹಾಕೋಕೆ ಆಗಲ್ಲ. ನಾವು ತಗಡುಗಳಾಗಿದ್ದೀವಿ. ಅವರ ಮಟ್ಟಕ್ಕೆ ನಾವು ಮಾತನಾಡೋಕೆ ಆಗಲ್ಲ. ಕ್ಲಾರಿಫೈ ಮಾಡೋ ಜಾಗದಲ್ಲಿ ನಾನು ಮಾಡುತ್ತೇನೆ ಎಂದು ಉಮಾಪತಿ ಗೌಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹೌದು ತಗಡೇ.. ನಟ ದರ್ಶನ್‌ ಮಾತಿಗೆ ಉಮಾಪತಿ ಗೌಡ ಖಡಕ್ ರಿಯಾಕ್ಷನ್; ಏನಂದ್ರು?

https://newsfirstlive.com/wp-content/uploads/2024/02/Darshan-Umapathy.jpg

    ನಾನು ಕಥೆ ಕೊಟ್ಟೆ, ಟೈಟಲ್​ ಕೊಟ್ಟೆ ಅಂತ ಯಾಕೆ ಹೇಳ್ತಿಯಾ?

    ಬಂದು ಬಂದು ಯಾಕೆ ಗುಮ್ಮಿಸ್ಕೋತಿಯಾ ಎಂದಿದ್ದ ನಟ ದರ್ಶನ್

    ನ್ಯೂಸ್ ಫಸ್ಟ್‌ಗೆ ರಿಯಾಕ್ಷನ್ ಕೊಟ್ಟ ಉಮಾಪತಿ ಗೌಡ ಹೇಳಿದ್ದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಸಿನಿಮಾದ 50ನೇ ದಿನದ ಸಂಭ್ರಮಾಚರಣೆಯಲ್ಲಿ ಆಡಿದ ಖಡಕ್‌ ಮಾತುಗಳು ಹೊಸ ಕಿಚ್ಚು ಹಚ್ಚಿದೆ. ನಿರ್ಮಾಪಕ ಉಮಾಪತಿ ಗೌಡಗೆ ನೇರವಾಗಿ ಟಾಂಗ್​ ಕೊಟ್ಟ ದರ್ಶನ್ ಅವರು ಅಯ್ಯೋ ತಗಡೇ ನಾನು ಕಥೆ ಕೊಟ್ಟೆ, ಟೈಟಲ್​ ಕೊಟ್ಟೆ ಅಂತ ಯಾಕೆ ಹೇಳ್ತಿಯಾ? ನಿನಗೆ ಟೈಟಲ್​ ಕೊಟ್ಟಿದ್ದೇ ನಾನು ಅಂತ ಸ್ಪಷ್ಟನೆ ಕೊಟ್ಟಿದ್ದರು. ಬಂದು ಬಂದು ಯಾಕೆ ಗುಮ್ಮಿಸ್ಕೋತಿಯಾ ಎಂದು ಉಮಾಪತಿ ವಿರುದ್ಧ ಆಕ್ರೋಶದ ಮಾತುಗಳನಾಡಿದ್ದರು.

ದರ್ಶನ್ ಅವರ ಈ ಮಾತುಗಳಿಗೆ ನಿರ್ಮಾಪಕ ಉಮಾಪತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಸ್ ಫಸ್ಟ್‌ಗೆ ರಿಯಾಕ್ಷನ್ ಕೊಟ್ಟ ಉಮಾಪತಿ ಗೌಡ ಅವರು ಇರಲಿ ದೊಡ್ಡವರು ಮಾತನಾಡಿದ್ದಾರೆ. ಏನು ತೊಂದರೆ ಇಲ್ಲ. ಗುಮ್ಮಿಸಿಕೊಳ್ಳೋದು ಅದೆಲ್ಲಾ ಭಗವಂತ ಮಾಡಬೇಕು. ಭಗವಂತ ಗುಮ್ಮಬೇಕು ಎಲ್ಲಾ ಗುಮ್ಮಿಸಿಕೊಳ್ಳಬೇಕು. ತೊಂದರೆ ಇಲ್ಲ. ಅವರಿಗೆ ದೇವರು ಚೆನ್ನಾಗಿ ಇಟ್ಟಿರಲಿ ಎಂದಿದ್ದಾರೆ.

ಇದನ್ನೂ ಓದಿ: ಅಯ್ಯೋ ತಗಡೇ.. ರಾಬರ್ಟ್​ಗೆ ಕಥೆ ಕೊಟ್ಟಿದ್ದೇ ನಾನು.. ವೇದಿಕೆ ಮೇಲೆ ಉಮಾಪತಿಗೆ ದರ್ಶನ್​​ ಟಾಂಗ್​

ಕಾಟೇರ ಸಿನಿಮಾದ ಟೈಟಲ್ ವಿವಾದಕ್ಕೆ ಉಮಾಪತಿ ಗೌಡ ಅವರು ನ್ಯೂಸ್ ಫಸ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ. ಫಿಲ್ಮ್ ಚೇಂಬರ್‌ಗೆ ಹೋಗಿ ನೋಡಿದ್ರೆ ನಿಮಗೆ ಸತ್ಯ ಏನು ಅನ್ನೋದು ಗೊತ್ತಾಗುತ್ತೆ. ಯಾರ ಹೆಸರಲ್ಲಿ ಟೈಟಲ್ ರಿಜಿಸ್ಟರ್ ಆಯ್ತು ಅಂತ ಗೊತ್ತಾಗುತ್ತೆ. ಈಗ ಅಕ್ಕ-ಪಕ್ಕ ಇರೋರೆಲ್ಲಾ ಅವರ ಪರವಾಗಿ ಮಾತನಾಡ್ತಿದ್ದಾರೆ ಸಂತೋಷ. ಚೆನ್ನಾಗಿರಲಿ ತೊಂದರೆ ಇಲ್ಲ. ನಾನು ಅವರ ಬಗ್ಗೆ ಮಾತಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ. ದೊಡ್ಡ ವ್ಯಕ್ತಿಯಾಗಿ ಬೆಳೆದ ಮೇಲೆ ಮಾತಾಡೋಣ ಎಂದಿದ್ದಾರೆ.

ಇನ್ನು, ಹೌದು ನಾವು ತಗಡುಗಳು. ಅವರ ಮಟ್ಟಕ್ಕೆ ಹೋಗಿ ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿಗಳಲ್ಲ. ತಗಡಾಗೇ ಇರ್ತೀವಿ. ಆಮೇಲೆ ಗುಮ್ಮಿಸಿಕೊಳ್ಳೋರು ನಾವೆಲ್ಲಾ ಹೀಗೆ ಇರ್ತೀವಿ. ಎಲ್ಲಾ ಭಗವಂತ ನೋಡ್ತಾ ಇರ್ತಾನೆ. ನಾನು ಯಾರಿಗೂ ಇಲ್ಲಿ ಉತ್ತರ ಕೊಡಲೇ ಬೇಕು ಅಂತ ಕಂಡೀಷನ್ ಹಾಕೋಕೆ ಆಗಲ್ಲ. ನಾವು ತಗಡುಗಳಾಗಿದ್ದೀವಿ. ಅವರ ಮಟ್ಟಕ್ಕೆ ನಾವು ಮಾತನಾಡೋಕೆ ಆಗಲ್ಲ. ಕ್ಲಾರಿಫೈ ಮಾಡೋ ಜಾಗದಲ್ಲಿ ನಾನು ಮಾಡುತ್ತೇನೆ ಎಂದು ಉಮಾಪತಿ ಗೌಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More