ಯುವತಿಗೆ ಮದುವೆಯಾಗಲು ದೊಡ್ಡ ಕಂಟಕವಿದೆ ಎಂದು ನಂಬಿಸಿದ್ದ
ನಗ್ನ ವಿಡಿಯೋ, ಫೋಟೋಗಳನ್ನು ಇಟ್ಟುಕೊಂಡು ಬೆದರಿಕೆ ಆರೋಪ
ಮಹಿಳೆಯನ್ನು ಕರೆಸಿಕೊಂಡು ಅತ್ಯಾಚಾರ ಮಾಡಿರುವ ದೂರು ದಾಖಲು
ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಹಾಸನದ ಪ್ರಸಿದ್ಧ ದೇವಾಲಯದ ಪೂಜಾರಿಯನ್ನು ಬಗಲುಗುಂಟೆ ಪೊಲೀಸರು ಬಂಧಿಸಿದ್ದಾರೆ. ದಯಾನಂದ (39) ಬಂಧಿತ ಆರೋಪಿ.
ಆರೋಪಿ ದಯಾನಂದ ಹಾಸನದ ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿ. ಕೆಲ ದಿನಗಳ ಹಿಂದೆ ಇವರ ವಿರುದ್ಧ ಬಗಲುಗುಂಟೆ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ದಯಾನಂದ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಸಣ್ಣ ವಯಸ್ಸಿಗೆ ದುರಂತ ಅಂತ್ಯ.. ಯಕ್ಷಗಾನ ಸ್ತ್ರೀವೇಷಧಾರಿ ಗುರುಪ್ರಸಾದ್ ನಿಗೂಢ ಸಾವು; ಆಗಿದ್ದೇನು?
ಪೂಜಾರಿ ದಯಾನಂದ ವಿರುದ್ಧ ದೋಷ ನಿವಾರಣೆಗಾಗಿ ಪೂಜೆ ಮಾಡುತ್ತೇನೆಂದು ಹಣ ಪಡೆದಿದ್ದ ಆರೋಪ ಹಾಗೂ ಮಹಿಳೆಯನ್ನು ಕರೆಸಿಕೊಂಡು ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ.
ಏನಿದು ಕಾಮಪುರಾಣ?
ಪೂಜಾರಿ ದಯಾನಂದ ಅರಸೀಕೆರೆ ಬಳಿಯ ಗೊಲ್ಲರಹಳ್ಳಿ ಕುರುಗುಂದ ಗ್ರಾಮ ಪಂಚಾಯಿತಿಯ ಸದಸ್ಯನೂ ಆಗಿದ್ದಾರೆ. ಯುವತಿಯೊಬ್ಬರು ಪುರದಮ್ಮ ದೇವಸ್ಥಾನಕ್ಕೆ ಹೋಗಿದ್ದಾಗ ಪೂಜಾರಿ ದಯಾನಂದ ಅವರಿಗೆ ಪರಿಚಯವಾಗಿದೆ. ಮಾಂತ್ರಿಕನಾಗಿದ್ದ ಮತ್ತು ಶಾಸ್ತ್ರ ಹೇಳುತ್ತಿದ್ದ ದಯಾನಂದಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ.
ಯುವತಿಗೆ ಮದುವೆಯಾಗಲು ಕಂಟಕವಿದೆ ಎಂದು ಹೇಳಿದ್ದ ದಯಾನಂದ್, ಯುವತಿಯಿಂದ ಆಗಾಗ ಹಣ ಪಡೆಯುತ್ತಿದ್ದರಂತೆ. ಒಂದು ಲಕ್ಷಕ್ಕಿಂತ ಹೆಚ್ಚು ಹಣ ಪಡೆದಿದ್ದ ಆರೋಪಿಯು ಬೆಂಗಳೂರಿನ HSR ಲೇಔಟ್, ಮೈಸೂರು ರಸ್ತೆ, ಉಪ್ಪಾರಪೇಟೆ ಭಾಗದಲ್ಲಿ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ‘6 ಜನ ಇದ್ವಿ 3 ಮಂದಿ ಬದುಕಿದ್ದೀವಿ’- ಒಬ್ಬೊಬ್ಬರದು ಒಂದೊಂದು ಕಣ್ಣೀರಿನ ಕಥೆ; ನ್ಯೂಸ್ ಫಸ್ಟ್ ಗ್ರೌಂಡ್ ರಿಪೋರ್ಟ್
ಯುವತಿಯ ನಗ್ನ ವಿಡಿಯೋ ಫೋಟೋಗಳನ್ನು ಇಟ್ಟುಕೊಂಡಿದ್ದ ಆರೋಪಿ ಆಗಾಗ ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಹಣ ನೀಡದೆ ಇದ್ದಲ್ಲಿ ಆ ಫೋಟೋ, ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡುತ್ತೇನೆ ಎಂದು ಹೆದರಿಸುತ್ತಿದ್ದ. ಕೊನೆಗೆ ಧೈರ್ಯ ಮಾಡಿದ ಯುವತಿ ಬಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯುವತಿಗೆ ಮದುವೆಯಾಗಲು ದೊಡ್ಡ ಕಂಟಕವಿದೆ ಎಂದು ನಂಬಿಸಿದ್ದ
ನಗ್ನ ವಿಡಿಯೋ, ಫೋಟೋಗಳನ್ನು ಇಟ್ಟುಕೊಂಡು ಬೆದರಿಕೆ ಆರೋಪ
ಮಹಿಳೆಯನ್ನು ಕರೆಸಿಕೊಂಡು ಅತ್ಯಾಚಾರ ಮಾಡಿರುವ ದೂರು ದಾಖಲು
ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಹಾಸನದ ಪ್ರಸಿದ್ಧ ದೇವಾಲಯದ ಪೂಜಾರಿಯನ್ನು ಬಗಲುಗುಂಟೆ ಪೊಲೀಸರು ಬಂಧಿಸಿದ್ದಾರೆ. ದಯಾನಂದ (39) ಬಂಧಿತ ಆರೋಪಿ.
ಆರೋಪಿ ದಯಾನಂದ ಹಾಸನದ ಅರಸೀಕೆರೆಯ ಪುರದಮ್ಮ ದೇವಾಲಯದ ಪೂಜಾರಿ. ಕೆಲ ದಿನಗಳ ಹಿಂದೆ ಇವರ ವಿರುದ್ಧ ಬಗಲುಗುಂಟೆ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ ನೀಡಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ದಯಾನಂದ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಸಣ್ಣ ವಯಸ್ಸಿಗೆ ದುರಂತ ಅಂತ್ಯ.. ಯಕ್ಷಗಾನ ಸ್ತ್ರೀವೇಷಧಾರಿ ಗುರುಪ್ರಸಾದ್ ನಿಗೂಢ ಸಾವು; ಆಗಿದ್ದೇನು?
ಪೂಜಾರಿ ದಯಾನಂದ ವಿರುದ್ಧ ದೋಷ ನಿವಾರಣೆಗಾಗಿ ಪೂಜೆ ಮಾಡುತ್ತೇನೆಂದು ಹಣ ಪಡೆದಿದ್ದ ಆರೋಪ ಹಾಗೂ ಮಹಿಳೆಯನ್ನು ಕರೆಸಿಕೊಂಡು ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ.
ಏನಿದು ಕಾಮಪುರಾಣ?
ಪೂಜಾರಿ ದಯಾನಂದ ಅರಸೀಕೆರೆ ಬಳಿಯ ಗೊಲ್ಲರಹಳ್ಳಿ ಕುರುಗುಂದ ಗ್ರಾಮ ಪಂಚಾಯಿತಿಯ ಸದಸ್ಯನೂ ಆಗಿದ್ದಾರೆ. ಯುವತಿಯೊಬ್ಬರು ಪುರದಮ್ಮ ದೇವಸ್ಥಾನಕ್ಕೆ ಹೋಗಿದ್ದಾಗ ಪೂಜಾರಿ ದಯಾನಂದ ಅವರಿಗೆ ಪರಿಚಯವಾಗಿದೆ. ಮಾಂತ್ರಿಕನಾಗಿದ್ದ ಮತ್ತು ಶಾಸ್ತ್ರ ಹೇಳುತ್ತಿದ್ದ ದಯಾನಂದಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ.
ಯುವತಿಗೆ ಮದುವೆಯಾಗಲು ಕಂಟಕವಿದೆ ಎಂದು ಹೇಳಿದ್ದ ದಯಾನಂದ್, ಯುವತಿಯಿಂದ ಆಗಾಗ ಹಣ ಪಡೆಯುತ್ತಿದ್ದರಂತೆ. ಒಂದು ಲಕ್ಷಕ್ಕಿಂತ ಹೆಚ್ಚು ಹಣ ಪಡೆದಿದ್ದ ಆರೋಪಿಯು ಬೆಂಗಳೂರಿನ HSR ಲೇಔಟ್, ಮೈಸೂರು ರಸ್ತೆ, ಉಪ್ಪಾರಪೇಟೆ ಭಾಗದಲ್ಲಿ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ‘6 ಜನ ಇದ್ವಿ 3 ಮಂದಿ ಬದುಕಿದ್ದೀವಿ’- ಒಬ್ಬೊಬ್ಬರದು ಒಂದೊಂದು ಕಣ್ಣೀರಿನ ಕಥೆ; ನ್ಯೂಸ್ ಫಸ್ಟ್ ಗ್ರೌಂಡ್ ರಿಪೋರ್ಟ್
ಯುವತಿಯ ನಗ್ನ ವಿಡಿಯೋ ಫೋಟೋಗಳನ್ನು ಇಟ್ಟುಕೊಂಡಿದ್ದ ಆರೋಪಿ ಆಗಾಗ ಹಣ ಪಡೆಯುತ್ತಿದ್ದ ಎನ್ನಲಾಗಿದೆ. ಹಣ ನೀಡದೆ ಇದ್ದಲ್ಲಿ ಆ ಫೋಟೋ, ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡುತ್ತೇನೆ ಎಂದು ಹೆದರಿಸುತ್ತಿದ್ದ. ಕೊನೆಗೆ ಧೈರ್ಯ ಮಾಡಿದ ಯುವತಿ ಬಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ