ರೋಹಿತ್ ಬ್ಯಾಟಿಂಗ್ ಬಗ್ಗೆ ಅಶ್ವಿನ್ ಬಿಚ್ಚಿಟ್ರು ಕಹಿಸತ್ಯ
ನಾಯಕರಿಗೆ ರೋಹಿತ್ ಶರ್ಮಾ ಕಂಡ್ರೆ ಭಯವೇಕೆ..?
ಏಕದಿನ ವಿಶ್ವಕಪ್ನಲ್ಲಿ ನಡೆಯಲಿದ್ಯಾ ಫುಲ್ ಧಮಾಕಾ..?
ರೋಹಿತ್ ಶರ್ಮಾ.. ವಿಶ್ವ ಕ್ರಿಕೆಟ್ನ ಹಿಟ್ಮ್ಯಾನ್.. ಈತನ ಸಿಡಿಲಬ್ಬರಕ್ಕೆ ಸಿಲುಕಿದ್ರೆ ಎದುರಾಳಿಗೆ ನರಕ ದರ್ಶನ ಗ್ಯಾರಂಟಿ.. ಇಂಥಹ ರೋಹಿತ್ ಬಗ್ಗೆ ಅಶ್ವಿನ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ.. ರೋಹಿತ್ ಬಗ್ಗೆ ಭವಿಷ್ಯವೊಂದನ್ನ ನುಡಿದಿದ್ದಾರೆ.
ಹಿಟ್ಮ್ಯಾನ್ ರೋಹಿತ್ ಶರ್ಮಾ.. ವಿಶ್ವ ಕ್ರಿಕೆಟ್ನ ಮೋಸ್ಟ್ ಡೇಂಜರಸ್.. ಒಮ್ಮೆ ಕ್ರೀಸ್ನಲ್ಲಿ ನೆಲೆಯೂರಿದ್ರೆ, ಈತನ ಬ್ಯಾಟ್ನಿಂದ ಸಿಡಿಸಿಯೋದು ಸಿಕ್ಸರ್ಗಳ ಸುರಿಮಳೆ. ಸ್ಟೇಡಿಯಂ ಅಷ್ಟ ದಿಕ್ಕುಗಳಿಗೂ ಚೆಂಡನ್ನು ಬಡಿದಟ್ಟುವ ಈ ವೀರನ ಬ್ಯಾಟಿಂಗ್ ನೋಡೋದೆ ಕಣ್ಣಿಗೆ ಹಬ್ಬ. ಅದ್ರಲ್ಲೂ ರೋಹಿತ್, ಎಷ್ಟು ಡೇಂಜರಸ್ ಅನ್ನೋದಕ್ಕೆ ಸಾಕ್ಷಿ.. ಏಕದಿನ ಫಾರ್ಮೆಟ್ನಲ್ಲಿ ಸಿಡಿಸಿದ ಮೂರು ಶತಕಗಳು.
ಈ ದ್ವಿಶತಕಗಳ ಸರದಾರನ ಅಟ್ಟಹಾಸಕ್ಕೆ ಬಳಲಿ ಬೆಂಡಾದ ಬೌಲರ್ಗಳು ಲೆಕ್ಕಕ್ಕಿಲ್ಲ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಮುಂಬೈಕರ್ ಅಬ್ಬರದಾಟ ಬೌಲರ್ಗಳಿಗೆ ಮಾತ್ರವೇ ತಲೆನೋವಲ್ಲ. ಎದುರಾಳಿ ತಂಡದ ನಾಯಕರಿಗೂ ದುಸ್ವಪ್ನವೇ ಆಗಿದೆ. ಅದ್ಯಾಕೆ ಅನ್ನೋದನ್ನು ಸ್ವತಃ ಟೀಮ್ ಇಂಡಿಯಾ ಕ್ರಿಕೆಟಿಗರೇ ಬಿಚ್ಚಿಟ್ಟಿದ್ದಾರೆ.
ಹಿಟ್ಮ್ಯಾನ್ ಬಗ್ಗೆ ಕೊಹ್ಲಿ ಅಂದು ಹೇಳಿದ್ದೇನು..?
ಟೀಮ್ ಇಂಡಿಯಾ ನಾಯಕ ರೋಹಿತ್ ಬ್ಯಾಟಿಂಗ್ ಬಗ್ಗೆ ಸ್ವತಃ ಆಫ್ ಸ್ಪಿನ್ನರ್ ಅಶ್ವಿನ್ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ.. ಕಿಂಗ್ ಕೊಹ್ಲಿ ಕೂಡ ರೋಹಿತ್ ಬಗ್ಗೆ ಗುಣಗಾನ ಮಾಡಿದ್ದಾರೆ. ಜೊತೆಗೆ ಪರೋಕ್ಷ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
5-6 ವರ್ಷದ ಹಿಂದೆ ನಾನು-ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ಯಾಟಿಂಗ್ ಬಗ್ಗೆ ಚರ್ಚೆ ನಡೆಸಿದ್ವಿ. ಅದು ಯಾವ ಮ್ಯಾಚ್ ಎಂಬ ಬಗ್ಗೆ ಸರಿಯಾಗಿ ನೆನಪಿಲ್ಲ. ರೋಹಿತ್ ಬ್ಯಾಟಿಂಗ್ ನೋಡುತ್ತಾ ನಾನು ಯೋಚಿಸುತ್ತಿದ್ದೆ. ರೋಹಿತ್ ಸೆಟಲ್ ಆದ 15 ರಿಂದ 20 ಓವರ್ ನಂತರ ಎಲ್ಲಿ ಬೌಲ್ ಮಾಡೋದು ಎಂದು. ವಿರಾಟ್ ಕೇಳಿದ್ರು ನಿನಗೆ ಗೊತ್ತಾ ಡೆತ್ನಲ್ಲಿ ಕ್ಯಾಪ್ಟನ್ಸ್ಗೆ ದುಸ್ವಪ್ನಾವಾಗಿ ಕಾಡೋದು ಯಾರೆಂದು..? ನಾನು ಹೇಳಿದೆ, ಅದು ಧೋನಿನಾ..? ಕೊಹ್ಲಿ ನೋ ರೋಹಿತ್.. ನಾನು ಯಾಕೆ ಎಂದೆ. ವಿರಾಟ್ ಹೇಳಿದ್ರು, ನಿನಗೆ ಬೌಲ್ ಎಲ್ಲಿ ಮಾಡಬೇಕೆಂದು ಗೊತ್ತಿಲ್ವಲ್ಲ- ಆರ್.ಅಶ್ವಿನ್, ಟೀಮ್ ಇಂಡಿಯಾ ಆಟಗಾರ
ಇದೇ ಕಾರಣಕ್ಕೆ ರೋಹಿತ್ ಶರ್ಮಾ ಅಂದ್ರೆ, ಎದುರಾಳಿ ನಾಯಕರಿಗೆ ಟೆನ್ಶನ್. ಯಾಕಂದ್ರೆ ಡೆತ್ ಓವರ್ಗಳಲ್ಲಿ ರೋಹಿತ್, ಕ್ರೀಸ್ನಲ್ಲಿ ಉಳಿದ್ರೆ, ಫೀಲ್ಡರ್ಸ್ ಬೇಕಾಗಿಲ್ಲ. ಇದಕ್ಕೆ ಕಾರಣ ಬೌಂಡರಿ ಗೆರೆಯಾಚೆ ಸಿಡಿಯೋ ಚೆಂಡನ್ನ ಗ್ಯಾಲರಿಯಲ್ಲಿ ಕುಳಿತಿರೋ ಪ್ರೇಕ್ಷಕರೆ ವಾಪಸ್ ನೀಡ್ತಾರೆ. ಹೀಗಾಗಿ ಎದುರಾಳಿ ತಂಡದ ನಾಯಕ ಎಂಥಹ ಚಾಣಾಕ್ಷನೇ ಆಗಲಿರಲಿ. ಢವಢವ ಶುರುವಾಗೋದು ಗ್ಯಾರಂಟಿ.
ದ್ವಿಶತಕ ವೀರನ ಬಗ್ಗೆ ಆರ್.ಅಶ್ವಿನ್ ಭವಿಷ್ಯ..!
ಏಕದಿನ ವಿಶ್ವಕಪ್ಗೆ ಸಜ್ಜಾಗ್ತಿರುವ ಈ ಹೊತ್ತಲ್ಲಿ ಆರ್.ಅಶ್ವಿನ್, ಹಿಟ್ಮ್ಯಾನ್ ರೋಹಿತ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ರೋಹಿತ್ ಬಗ್ಗೆ ನುಡಿದಿರುವ ಈ ಭವಿಷ್ಯ ನಿಜಕ್ಕೂ ಎದುರಾಳಿ ತಂಡಗಳಿಗೆ ನಿಜಕ್ಕೂ ಎಚ್ಚರಿಕೆ ಕರೆಗಂಟೆಯೇ ಆಗಿದೆ. 2019ರ ಏಕದಿನ ವಿಶ್ವಕಪ್ನಲ್ಲಿ 5 ಸೆಂಚೂರಿ ಸಿಡಿಸಿ ಅರ್ಭಟಿಸಿದ್ದ ರೋಹಿತ್, ಈ ಬಾರಿಯ ವಿಶ್ವಕಪ್ನಲ್ಲಿ 4ನೇ ಡಬಲ್ ಸೆಂಚೂರಿ ಸಿಡಿಸ್ತಾರೆ ಅಂತೆ.
ನನಗೊಂದು ಡೌಟ್.. ನಾವು ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಡಬಲ್ ಹಂಡ್ರೆಡ್ ನೋಡುವುದು ಖಾಯಂ. ಲೆಫ್ಟ್ ಕವರ್ಸ್ ಮೇಲೆ ಬೌಂಡರಿ ಹೋಯ್ತು. ವೆಲ್ಲಲ್ಲಾಗೆ ಮಿಸ್ ಫೀಲ್ಡ್ ಫೋರ್ ಹೋಯ್ತು. ಅಂತಹ ಟೈಮಿಂಗ್ ಶಾಟ್ ಹೊಡೆದ್ರೆ, ಆ ದಿನ ರೋಹಿತ್ ದಿನ ಎಂದು ಭಾವಿಸಬೇಕಷ್ಟೆ. ವಿಶೇಷವಾಗಿ ಏಕದಿನ ವಿಶ್ವಕಪ್, ನಮಗೆ ಕೊಲ್ಕತ್ತಾದಲ್ಲಿ ಪಂದ್ಯ ಇದೆ. ಅದು ಆತನ ಫೇವರಿಟ್ ಬೇಟೆಯ ಮೈದಾನ-ಆರ್.ಅಶ್ವಿನ್, ಟೀಮ್ ಇಂಡಿಯಾ ಆಟಗಾರ
ಅಶ್ವಿನ್ರ ಈ ಭವಿಷ್ಯ ನಿಜವಾದರೂ ಅಚ್ಚರಿ ಇಲ್ಲ. ಯಾಕಂದ್ರೆ ಸದ್ಯ ಸಾಲಿಡ್ ಟಚ್ನಲ್ಲಿರುವ ರೋಹಿತ್ ಶರ್ಮಾ, ನಾಯಕನಾಗಿ ಅವಿಸ್ಮರಣೀಯ ಕ್ಷಣಗಳನ್ನ ಸೃಷ್ಟಿಸುವ ಇರಾದೆಯಲ್ಲಿದ್ದಾರೆ. ವಿಶ್ವಕಪ್ ಗೆಲುವಿನ ಕನಸು ಕಾಣ್ತಿರುವ ರೋಹಿತ್, ರೌದ್ರವತಾರ ತಾಳಿದ್ರೆ, ನಿಜಕ್ಕೂ ನಡೆಯೋದು ಎದುರಾಳಿಗಳ ಮಾರಣಹೋಮ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೋಹಿತ್ ಬ್ಯಾಟಿಂಗ್ ಬಗ್ಗೆ ಅಶ್ವಿನ್ ಬಿಚ್ಚಿಟ್ರು ಕಹಿಸತ್ಯ
ನಾಯಕರಿಗೆ ರೋಹಿತ್ ಶರ್ಮಾ ಕಂಡ್ರೆ ಭಯವೇಕೆ..?
ಏಕದಿನ ವಿಶ್ವಕಪ್ನಲ್ಲಿ ನಡೆಯಲಿದ್ಯಾ ಫುಲ್ ಧಮಾಕಾ..?
ರೋಹಿತ್ ಶರ್ಮಾ.. ವಿಶ್ವ ಕ್ರಿಕೆಟ್ನ ಹಿಟ್ಮ್ಯಾನ್.. ಈತನ ಸಿಡಿಲಬ್ಬರಕ್ಕೆ ಸಿಲುಕಿದ್ರೆ ಎದುರಾಳಿಗೆ ನರಕ ದರ್ಶನ ಗ್ಯಾರಂಟಿ.. ಇಂಥಹ ರೋಹಿತ್ ಬಗ್ಗೆ ಅಶ್ವಿನ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ.. ರೋಹಿತ್ ಬಗ್ಗೆ ಭವಿಷ್ಯವೊಂದನ್ನ ನುಡಿದಿದ್ದಾರೆ.
ಹಿಟ್ಮ್ಯಾನ್ ರೋಹಿತ್ ಶರ್ಮಾ.. ವಿಶ್ವ ಕ್ರಿಕೆಟ್ನ ಮೋಸ್ಟ್ ಡೇಂಜರಸ್.. ಒಮ್ಮೆ ಕ್ರೀಸ್ನಲ್ಲಿ ನೆಲೆಯೂರಿದ್ರೆ, ಈತನ ಬ್ಯಾಟ್ನಿಂದ ಸಿಡಿಸಿಯೋದು ಸಿಕ್ಸರ್ಗಳ ಸುರಿಮಳೆ. ಸ್ಟೇಡಿಯಂ ಅಷ್ಟ ದಿಕ್ಕುಗಳಿಗೂ ಚೆಂಡನ್ನು ಬಡಿದಟ್ಟುವ ಈ ವೀರನ ಬ್ಯಾಟಿಂಗ್ ನೋಡೋದೆ ಕಣ್ಣಿಗೆ ಹಬ್ಬ. ಅದ್ರಲ್ಲೂ ರೋಹಿತ್, ಎಷ್ಟು ಡೇಂಜರಸ್ ಅನ್ನೋದಕ್ಕೆ ಸಾಕ್ಷಿ.. ಏಕದಿನ ಫಾರ್ಮೆಟ್ನಲ್ಲಿ ಸಿಡಿಸಿದ ಮೂರು ಶತಕಗಳು.
ಈ ದ್ವಿಶತಕಗಳ ಸರದಾರನ ಅಟ್ಟಹಾಸಕ್ಕೆ ಬಳಲಿ ಬೆಂಡಾದ ಬೌಲರ್ಗಳು ಲೆಕ್ಕಕ್ಕಿಲ್ಲ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಮುಂಬೈಕರ್ ಅಬ್ಬರದಾಟ ಬೌಲರ್ಗಳಿಗೆ ಮಾತ್ರವೇ ತಲೆನೋವಲ್ಲ. ಎದುರಾಳಿ ತಂಡದ ನಾಯಕರಿಗೂ ದುಸ್ವಪ್ನವೇ ಆಗಿದೆ. ಅದ್ಯಾಕೆ ಅನ್ನೋದನ್ನು ಸ್ವತಃ ಟೀಮ್ ಇಂಡಿಯಾ ಕ್ರಿಕೆಟಿಗರೇ ಬಿಚ್ಚಿಟ್ಟಿದ್ದಾರೆ.
ಹಿಟ್ಮ್ಯಾನ್ ಬಗ್ಗೆ ಕೊಹ್ಲಿ ಅಂದು ಹೇಳಿದ್ದೇನು..?
ಟೀಮ್ ಇಂಡಿಯಾ ನಾಯಕ ರೋಹಿತ್ ಬ್ಯಾಟಿಂಗ್ ಬಗ್ಗೆ ಸ್ವತಃ ಆಫ್ ಸ್ಪಿನ್ನರ್ ಅಶ್ವಿನ್ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ.. ಕಿಂಗ್ ಕೊಹ್ಲಿ ಕೂಡ ರೋಹಿತ್ ಬಗ್ಗೆ ಗುಣಗಾನ ಮಾಡಿದ್ದಾರೆ. ಜೊತೆಗೆ ಪರೋಕ್ಷ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
5-6 ವರ್ಷದ ಹಿಂದೆ ನಾನು-ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬ್ಯಾಟಿಂಗ್ ಬಗ್ಗೆ ಚರ್ಚೆ ನಡೆಸಿದ್ವಿ. ಅದು ಯಾವ ಮ್ಯಾಚ್ ಎಂಬ ಬಗ್ಗೆ ಸರಿಯಾಗಿ ನೆನಪಿಲ್ಲ. ರೋಹಿತ್ ಬ್ಯಾಟಿಂಗ್ ನೋಡುತ್ತಾ ನಾನು ಯೋಚಿಸುತ್ತಿದ್ದೆ. ರೋಹಿತ್ ಸೆಟಲ್ ಆದ 15 ರಿಂದ 20 ಓವರ್ ನಂತರ ಎಲ್ಲಿ ಬೌಲ್ ಮಾಡೋದು ಎಂದು. ವಿರಾಟ್ ಕೇಳಿದ್ರು ನಿನಗೆ ಗೊತ್ತಾ ಡೆತ್ನಲ್ಲಿ ಕ್ಯಾಪ್ಟನ್ಸ್ಗೆ ದುಸ್ವಪ್ನಾವಾಗಿ ಕಾಡೋದು ಯಾರೆಂದು..? ನಾನು ಹೇಳಿದೆ, ಅದು ಧೋನಿನಾ..? ಕೊಹ್ಲಿ ನೋ ರೋಹಿತ್.. ನಾನು ಯಾಕೆ ಎಂದೆ. ವಿರಾಟ್ ಹೇಳಿದ್ರು, ನಿನಗೆ ಬೌಲ್ ಎಲ್ಲಿ ಮಾಡಬೇಕೆಂದು ಗೊತ್ತಿಲ್ವಲ್ಲ- ಆರ್.ಅಶ್ವಿನ್, ಟೀಮ್ ಇಂಡಿಯಾ ಆಟಗಾರ
ಇದೇ ಕಾರಣಕ್ಕೆ ರೋಹಿತ್ ಶರ್ಮಾ ಅಂದ್ರೆ, ಎದುರಾಳಿ ನಾಯಕರಿಗೆ ಟೆನ್ಶನ್. ಯಾಕಂದ್ರೆ ಡೆತ್ ಓವರ್ಗಳಲ್ಲಿ ರೋಹಿತ್, ಕ್ರೀಸ್ನಲ್ಲಿ ಉಳಿದ್ರೆ, ಫೀಲ್ಡರ್ಸ್ ಬೇಕಾಗಿಲ್ಲ. ಇದಕ್ಕೆ ಕಾರಣ ಬೌಂಡರಿ ಗೆರೆಯಾಚೆ ಸಿಡಿಯೋ ಚೆಂಡನ್ನ ಗ್ಯಾಲರಿಯಲ್ಲಿ ಕುಳಿತಿರೋ ಪ್ರೇಕ್ಷಕರೆ ವಾಪಸ್ ನೀಡ್ತಾರೆ. ಹೀಗಾಗಿ ಎದುರಾಳಿ ತಂಡದ ನಾಯಕ ಎಂಥಹ ಚಾಣಾಕ್ಷನೇ ಆಗಲಿರಲಿ. ಢವಢವ ಶುರುವಾಗೋದು ಗ್ಯಾರಂಟಿ.
ದ್ವಿಶತಕ ವೀರನ ಬಗ್ಗೆ ಆರ್.ಅಶ್ವಿನ್ ಭವಿಷ್ಯ..!
ಏಕದಿನ ವಿಶ್ವಕಪ್ಗೆ ಸಜ್ಜಾಗ್ತಿರುವ ಈ ಹೊತ್ತಲ್ಲಿ ಆರ್.ಅಶ್ವಿನ್, ಹಿಟ್ಮ್ಯಾನ್ ರೋಹಿತ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ರೋಹಿತ್ ಬಗ್ಗೆ ನುಡಿದಿರುವ ಈ ಭವಿಷ್ಯ ನಿಜಕ್ಕೂ ಎದುರಾಳಿ ತಂಡಗಳಿಗೆ ನಿಜಕ್ಕೂ ಎಚ್ಚರಿಕೆ ಕರೆಗಂಟೆಯೇ ಆಗಿದೆ. 2019ರ ಏಕದಿನ ವಿಶ್ವಕಪ್ನಲ್ಲಿ 5 ಸೆಂಚೂರಿ ಸಿಡಿಸಿ ಅರ್ಭಟಿಸಿದ್ದ ರೋಹಿತ್, ಈ ಬಾರಿಯ ವಿಶ್ವಕಪ್ನಲ್ಲಿ 4ನೇ ಡಬಲ್ ಸೆಂಚೂರಿ ಸಿಡಿಸ್ತಾರೆ ಅಂತೆ.
ನನಗೊಂದು ಡೌಟ್.. ನಾವು ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಡಬಲ್ ಹಂಡ್ರೆಡ್ ನೋಡುವುದು ಖಾಯಂ. ಲೆಫ್ಟ್ ಕವರ್ಸ್ ಮೇಲೆ ಬೌಂಡರಿ ಹೋಯ್ತು. ವೆಲ್ಲಲ್ಲಾಗೆ ಮಿಸ್ ಫೀಲ್ಡ್ ಫೋರ್ ಹೋಯ್ತು. ಅಂತಹ ಟೈಮಿಂಗ್ ಶಾಟ್ ಹೊಡೆದ್ರೆ, ಆ ದಿನ ರೋಹಿತ್ ದಿನ ಎಂದು ಭಾವಿಸಬೇಕಷ್ಟೆ. ವಿಶೇಷವಾಗಿ ಏಕದಿನ ವಿಶ್ವಕಪ್, ನಮಗೆ ಕೊಲ್ಕತ್ತಾದಲ್ಲಿ ಪಂದ್ಯ ಇದೆ. ಅದು ಆತನ ಫೇವರಿಟ್ ಬೇಟೆಯ ಮೈದಾನ-ಆರ್.ಅಶ್ವಿನ್, ಟೀಮ್ ಇಂಡಿಯಾ ಆಟಗಾರ
ಅಶ್ವಿನ್ರ ಈ ಭವಿಷ್ಯ ನಿಜವಾದರೂ ಅಚ್ಚರಿ ಇಲ್ಲ. ಯಾಕಂದ್ರೆ ಸದ್ಯ ಸಾಲಿಡ್ ಟಚ್ನಲ್ಲಿರುವ ರೋಹಿತ್ ಶರ್ಮಾ, ನಾಯಕನಾಗಿ ಅವಿಸ್ಮರಣೀಯ ಕ್ಷಣಗಳನ್ನ ಸೃಷ್ಟಿಸುವ ಇರಾದೆಯಲ್ಲಿದ್ದಾರೆ. ವಿಶ್ವಕಪ್ ಗೆಲುವಿನ ಕನಸು ಕಾಣ್ತಿರುವ ರೋಹಿತ್, ರೌದ್ರವತಾರ ತಾಳಿದ್ರೆ, ನಿಜಕ್ಕೂ ನಡೆಯೋದು ಎದುರಾಳಿಗಳ ಮಾರಣಹೋಮ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ