Advertisment

ಜೈಲಿನಿಂದ ರಘು ಕೂಡ ವಿಡಿಯೋ ಕಾಲ್​​ ಮಾಡಿದ್ದ! ಬಾಯಿತಪ್ಪಿ ಸತ್ಯ ಬಿಚ್ಚಿಟ್ಟ ಸಹೋದರ

author-image
AS Harshith
Updated On
ಜೈಲಿನಿಂದ ರಘು ಕೂಡ ವಿಡಿಯೋ ಕಾಲ್​​ ಮಾಡಿದ್ದ! ಬಾಯಿತಪ್ಪಿ ಸತ್ಯ ಬಿಚ್ಚಿಟ್ಟ ಸಹೋದರ
Advertisment
  • ರೇಣುಕಾಸ್ವಾಮಿ ಕೊಲೆ ಪ್ರಕರಣದ A4 ಆರೋಪಿ ರಘು
  • ತಮ್ಮ ರಘು ಬಗ್ಗೆ ಸಹೋದರನೇ ಬಾಯ್ಬಿಟ್ಟ ಸತ್ಯ
  • ಜೈಲಿನಿಂದ ರಘು ವಿಡಿಯೋ ಕರೆ ಮಾಡಿದ್ದ ಎಂದ ಅಣ್ಣ

ದರ್ಶನ್​​ ಮಾತ್ರವಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ A4 ಆರೋಪಿ ರಘು ಜೈಲಿನಿಂದ ವಿಡಿಯೋ ಕರೆ ಮಾಡಿರುವ ಸಂಗತಿ ಇದೀಗ ಬಯಲಾಗಿದೆ. ಆತನ ಸಹೋದರ ಮುರಳಿಯೇ ಈ ಸಂಗತಿ ಬಾಯಿಬಿಟ್ಟಿದ್ದಾರೆ.

Advertisment

ನ್ಯೂಸ್​​ಫಸ್ಟ್​ ಜೊತೆಗೆ ಮಾತನಾಡಿದ ರಘು ಸಹೋದರ ಮುರಳಿ, ನನ್ನ ಇನ್ನೊಬ್ಬ ತಮ್ಮನಿಗೆ ರಘು ವಿಡಿಯೋ ಕಾಲ್ ಮಾಡಿದ್ದ. ಆದಷ್ಟು ಬೇಗ ಬರ್ತೀನಿ ಅಂತಾ ಹೇಳಿದ್ದಾನೆ ಎಂದು ಹೇಳಿರುವ ಸಂಗತಿಯನ್ನು ಹೇಳಿದ್ದಾರೆ.

publive-image

ಇದನ್ನೂ ಓದಿ: ದರ್ಶನ್​ಗೆ ಜೈಲಲ್ಲಿ ಎಲ್ಲಾ ಸಿಕ್ತಿದೆ.. ಬಡವರ ಮಕ್ಕಳ ಗತಿ ಏನು? A7 ಆರೋಪಿ ಅನುಕುಮಾರ್ ತಾಯಿ ಆಕ್ರೋಶ

ಬಳಿಕ ಮಾತನಾಡಿದ ಮುರಳಿ, ದರ್ಶನ್​ಗೆ ಆದ್ಯತೆ ಕೊಡುವಂತೆ ಉಳಿದವರಿಗೂ ಕೊಡಬೇಕು. ದರ್ಶನ್​  ಹೆಗಿದ್ದಾರೋ ಅವರ ಜೊತೆಗಿರೋರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ದರ್ಶನ್ ಇತರ ಆರೋಪಿಗಳನ್ನೂ ಕೂಡ ಹೊರತರಲು ನೋಡಬೇಕು ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ಜೈಲಲ್ಲೇ ಕುಳಿತು ದರ್ಶನ್​ ವಿಡಿಯೋ ಕಾಲ್​​.. ತನಿಖೆಗೆ ಆದೇಶಿಸಿದ ಕಾರಾಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ ಯಾರು?

ನನ್ನ ತಾಯಿ ತೀರಿದಾಗ ದರ್ಶನ್ ಕಡೆಯವರು 25 ಸಾವಿರ ಹಣ ಕಳುಹಿಸಿದ್ರು. ಅವರ ಕಡೆಯವರೇ ಬಂದು ಹಣ ಕೊಟ್ಟು ಹೋದ್ರು. ರಘುಗೆ ಹೆಂಡ್ತಿ ಇದ್ದಾಳೆ, ಅವರಿಗೆ ದರ್ಶನ್ ಕಡೆಯವರು ಸಹಾಯ ಮಾಡ್ತಾರೆ. ಆಮೇಲೆ ದರ್ಶನ್ ಕಡೆಯವರು ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಚಿತ್ರದುರ್ಗದಲ್ಲಿ ರಘು ಸಹೋದರ ಮುರಳಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment