ದ್ರಾವಿಡ್ ಮಾರ್ಗದರ್ಶನದಲ್ಲಿ ಸೋಲಿನ ದರ್ಶನ
ವಿಶ್ವಕಪ್ ವರ್ಷದಲ್ಲಿ ಪ್ರಯೋಗ..ಫ್ಯಾನ್ಸ್ ಸಿಡಿಮಿಡಿ
ಕೋಚ್ ದ್ರಾವಿಡ್ ವೈಫಲ್ಯ ಮೆಟ್ಟಿ ನಿಂತಿದ್ದೇಗೆ..?
ವಿಶ್ವಕಪ್ ಸಂಗ್ರಾಮದಲ್ಲಿ ಟೀಮ್ ಇಂಡಿಯಾ ಅಜೇಯವಾಗಿ ಫೈನಲ್ಗೆ ಎಂಟ್ರಿಕೊಟ್ಟಿದೆ. ಹೆಡ್ಕೋಚ್ ರಾಹುಲ್ ದ್ರಾವಿಡ್ರನ್ನ ಹೊತ್ತು ಮೆರೆಸಲಾಗ್ತಿದೆ. ಕನ್ನಡದ ಕಣ್ಮಣಿಯೇ ಇದಕ್ಕೆಲ್ಲಾ ಕಾರಣ. ಅವರ ಕೋಚಿಂಗ್ ರೋಹಿತ್ ಬಳಗದ ಯಶಸ್ಸಿನ ಗುಟ್ಟು ಎಂದೆಲ್ಲಾ ಕೊಂಡಾಡ್ತಿದ್ದಾರೆ. ಎಲ್ಲವೂ ನಿಜ..ಆದರೆ ಇದೇ ದ್ರಾವಿಡ್ ಎರಡು ವರ್ಷಗಳ ಹಿಂದೆ ಎದುರಿಸಿದ್ದು ಸಾಲು ಸಾಲು ಟೀಕೆ. ದಿ ವಾಲ್ ಟೀಕೆಗಳ ಚಕ್ರವ್ಯೂಹ ಬೇಧಿಸಿದ್ದೇ ರೋಚಕ.
ಪ್ರಸಕ್ತ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಔಟ್ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ಜೊತೆ ಬಿಗ್ ಮಾರ್ಕ್ ಸೆಟ್ ಮಾಡಿದೆ. ಹತ್ತಕ್ಕೆ ಹತ್ತು ಪಂದ್ಯಗಳನ್ನ ಗೆದ್ದು ಫೈನಲ್ಗೆ ರೇಸ್ಗೆ ಎಂಟ್ರಿಕೊಟ್ಟಿದೆ. ಇಲ್ಲಿ ತನಕ ಭಾರತ ತಂಡದ ವಿಚಾರದಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದೆ. ಫೈನಲ್ ಪಂದ್ಯವೊಂದನ್ನು ಗೆದ್ದು ಬಿಟ್ಟರೆ ಏಕದಿನ ಅಧಿಪತಿಯಾಗಿ ಮೆರೆದಾಡಲಿದೆ.
ಕೋಚ್ ದ್ರಾವಿಡ್ ವೈಫಲ್ಯ ಮೆಟ್ಟಿ ನಿಂತಿದ್ದೇಗೆ..?
ಟೀಮ್ ಇಂಡಿಯಾವನ್ನ ಹೊಗಳಲು ಪದಗಳೇ ಇಲ್ಲ. ಯಾರ ಬಾಯಲ್ಲಿ ಕೇಳಿದ್ರೂ ಶಬ್ಬಾಸ್ಗಿರಿ. ಎಲ್ಲೇ ನೋಡಿದ್ರೂ ಟೀಮ್ ಇಂಡಿಯಾದ್ದೇ ಜಪ. ಇಡೀ ತಂಡವನ್ನ ಹೊಗಳಿ ಅಟ್ಟಕ್ಕೇರಿಸಲಾಗ್ತಿದೆ. ಆದರೆ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಭಾರತದ ಈ ಅಜೇಯ ಓಟದ ಹಿಂದೆ ದೊಡ್ಡ ಫೇಲ್ಯೂರ್ ಕಥೆ ಇದೆ. ಆ ವೈಫಲ್ಯ ಕಂಡಾಗಲೆಲ್ಲಾ ದ್ರೋಣಾಚಾರ್ಯ ದ್ರಾವಿಡ್ ಅನುಭವಿಸಿದ್ದು ಒಂದೆರಡು ನೋವಲ್ಲ.
ವಿಶ್ವಕಪ್ ರಣರಂಗದಲ್ಲಿ ಟೀಮ್ ಇಂಡಿಯಾವನ್ನ ಟಚ್ ಮಾಡೋರೆ ಇಲ್ಲ. ಅಷ್ಟೊಂದು ಭಯಾನಕವಾಗಿ ಆಟವಾಡ್ತಿದೆ. ಆದರೆ ಈಗ ನೋಡ್ತಿರುವ ಇದೇ ತಂಡ ಎರಡು ವರ್ಷಗಳ ಹಿಂದೆ ಇದ್ದಿದ್ದೇ ಬೇರೆ ಥರ. ಅವತ್ತಿನಿಂದ ಟೀಕೆಗಳ ಸುರಿಮಳೆಯನ್ನ ಎದುರಿಸಿದ್ರು. ಅದ್ಯಾವ ಮಟ್ಟಿಗೆ ಅಂದ್ರೆ ರೋಹಿತ್ ಶರ್ಮಾ ಆ್ಯಂಡ್ ಗ್ಯಾಂಗ್ ಅನ್ನ ದೇಶ-ವಿದೇಶಗಳಲ್ಲಿ ಫ್ಯಾನ್ಸ್ ಹಾಗೂ ಕ್ರಿಕೆಟ್ ಎಕ್ಸ್ಪರ್ಟ್ ಹುರಿದು ಮುಕ್ಕಿದ್ರು. ಆ ಮಟ್ಟಿಗೆ ಭಾರತ ತಂಡ ಪ್ರಮುಖ ಸರಣಿಗಳನ್ನ ಸೋತು ಜರ್ಝರಿತವಾಗಿತ್ತು.
ದ್ರಾವಿಡ್ ಮಾರ್ಗದರ್ಶನದಲ್ಲಿ ಸೋಲಿನ ದರ್ಶನ
ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ಮಾಸ್ಟರ್ ಆಗಿದ್ದೇ ಬಂತು. ಭಾರತಕ್ಕೆ ಬ್ಯಾಡ್ಲಕ್ ವಕ್ಕರಿಸಿತ್ತು. ಆರಂಭಿಕ ಎರಡು ವರ್ಷ ಇದೆ ಕಥೆ. ಆ ಕಥೆ ಕೆಲವರಿಗೆ ಬೇಸರ ತರಿಸಿದ್ರೆ ಹಲವರಿಗೆ ಟೀಕೆಗಳ ಅಸ್ತ್ರವಾಯ್ತು. ಆಳಿಗೊಂದು ಕಲ್ಲು ಎನ್ನುವಂತೆ ಸಿಕ್ಕ ಸಿಕ್ಕವರೆಲ್ಲಾ ಕೋಚ್ ದ್ರಾವಿಡ್ ವಿರುದ್ಧ ಟೀಕೆಗಳ ಬಾಣಸ್ತ್ರ ಪ್ರಯೋಗಿಸಿದ್ರು. ಅದಕ್ಕೆ ಕಾರಣ ಈ ಫೇಲ್ಯೂರ್.
ಸೋಲಿನ ಪಾಠ
ಕೋಚ್ ಹುದ್ದೆಗೆ ದ್ರಾವಿಡ್ ಅನ್ಫಿಟ್.. ಬದಲಾವಣೆಗೆ ಆಗ್ರಹ..!
ಒಂದೆಡೆ ಸಾಲು ಸಾಲು ಸರಣಿಗಳನ್ನ ಸೋಲುತ್ತಿದ್ದಂತೆ ಆಕ್ರೋಶದ ಕಿಚ್ಚು ಹತ್ತಿತ್ತು. ಅದ್ಯಾವ ಮಟ್ಟಿಗೆ ಅಂದ್ರೆ ದ್ರಾವಿಡ್ ಕಾರ್ಯವೈಖರಿಯನ್ನೇ ಪ್ರಶ್ನಿಸೋಕೆ ಶುರುಮಾಡಿದ್ರು. ಹೆಡ್ಕೋಚ್ ಹುದ್ದೆಗೆ ದಿ ವಾಲ್ ಅನ್ಫಿಟ್.. ಹುದ್ದೆಯಿಂದ ಅವರನ್ನ ಕೆಳಗಿಳಿಸಬೇಕು ಎಂದು ಖಾರವಾಗಿ ಟೀಕಿಸಿದ್ರು. ದ್ರಾವಿಡ್ ಜೊತೆ ಉಳಿದ ಸಪೋರ್ಟಿಂಗ್ ಸ್ಟಾಪ್ಸ್ ಕಾರ್ಯವೈಖರಿ ಅಭಿಮಾನಿಗಳನ್ನ ಕೆರಳಿ ಕೆಂಡವಾಗಿಸಿತ್ತು.
ವಿಶ್ವಕಪ್ ವರ್ಷದಲ್ಲಿ ಪ್ರಯೋಗ.. ಫ್ಯಾನ್ಸ್ ಸಿಡಿಮಿಡಿ..!
ಒನ್ಡೆ ವಿಶ್ವಕಪ್ ಸಮೀಪಿಸ್ತಿದ್ದಂತೆ ಎಲ್ಲಾ ತಂಡಗಳು ಭರ್ಜರಿ ಸಿದ್ಧತೆ ನಡೆಸಿದ್ವು. ಆದರೆ ದ್ರಾವಿಡ್ ಸೈನ್ಯ ಎಕ್ಸ್ಪೆರಿಮೆಂಟ್ನಲ್ಲೇ ಮುಳುಗಿ ಹೋಗಿತ್ತು. ಸೋಲಿನ ಕೋಪ ಒಂದೆಡೆ ಆದ್ರೆ ಬ್ಯಾಕ್ ಟು ಬ್ಯಾಕ್ ಪ್ಲೇಯರ್ಸ್ ಪ್ರಯೋಗ ಕ್ರಿಕೆಟ್ ಅಭಿಮಾನಿಗಳನ್ನ ರೊಚ್ಚಿಗೆಬ್ಬಿಸಿತ್ತು. ತಂಡದ ಮೇಲೆ ನಂಬಿಕೆ ಕಳೆದುಕೊಂಡ್ರು. ಇದೇನ್ ಟೀಮ್ ಇಂಡಿಯಾನಾ? ದುರ್ಬಲ ತಂಡದಂತೆ ಆಡ್ತಿದೆ ಎಂದೆಲ್ಲಾ ಜರಿಯಲು ಶುರುಮಾಡಿದ್ರು. ಇವರಿಗೆಲ್ಲಾ ಕೋಟಿ ಕೋಟಿ ನೀಡೋದು ದಂಡ ಅಂತೆಲ್ಲಾ ಮಾತನಾಡಿದ್ರು.
ಟೀಕೆಗಳ ಟಿಪ್ಪಣಿಗೆ ಕುಗ್ಗದ ‘ದ್ರೋಣಾಚಾರ್ಯ’
ಎಲ್ಲದಕ್ಕೂ ಟೈಮ್ ಅನ್ನೊದು ಬರ್ಬೇಕು.ಆ ಟೈಮ್ಗಾಗಿ ಕೋಚ್ ರಾಹುಲ್ ದ್ರಾವಿಡ್ ಕಾಯ್ತಿದ್ರು. ಅದುವೇ ಗ್ಲೋಬಲ್ ಇವೆಂಟ್ ಒನ್ಡೇ ವಿಶ್ವಕಪ್. ಈ ಮಹಾಸಮರದಲ್ಲಿ ದಿ ವಾಲ್ ತಾನೇನು, ತನ್ನ ತಾಕತ್ತೇನೂ ಅನ್ನೋದನ್ನ ಕ್ರಿಕೆಟ್ ಜಗತ್ತಿಗೆ ತೋರಿಸಿದ್ದಾರೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಇಂಡಿಯನ್ ಕಲಿಗಳು ಜಬರ್ದಸ್ತ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಆ್ಯಂಡ್ ಫೀಲ್ಡಿಂಗ್..ಮೂರರಲ್ಲೂ ಧೂಳೆಬ್ಬಿಸಿದ್ದಾರೆ. ಒಂದೂ ಸೋಲನ್ನೂ ಕಾಣದೇ ಫೈನಲ್ ಪ್ರವೇಶಿಸಿದ್ದಾರೆ. ಇದರ ಹಿಂದಿನ ರಿಯಲ್ ಸೂತ್ರದಾರಿ. ನಮ್ಮ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ದ್ರಾವಿಡ್ ಮಾರ್ಗದರ್ಶನದಲ್ಲಿ ಸೋಲಿನ ದರ್ಶನ
ವಿಶ್ವಕಪ್ ವರ್ಷದಲ್ಲಿ ಪ್ರಯೋಗ..ಫ್ಯಾನ್ಸ್ ಸಿಡಿಮಿಡಿ
ಕೋಚ್ ದ್ರಾವಿಡ್ ವೈಫಲ್ಯ ಮೆಟ್ಟಿ ನಿಂತಿದ್ದೇಗೆ..?
ವಿಶ್ವಕಪ್ ಸಂಗ್ರಾಮದಲ್ಲಿ ಟೀಮ್ ಇಂಡಿಯಾ ಅಜೇಯವಾಗಿ ಫೈನಲ್ಗೆ ಎಂಟ್ರಿಕೊಟ್ಟಿದೆ. ಹೆಡ್ಕೋಚ್ ರಾಹುಲ್ ದ್ರಾವಿಡ್ರನ್ನ ಹೊತ್ತು ಮೆರೆಸಲಾಗ್ತಿದೆ. ಕನ್ನಡದ ಕಣ್ಮಣಿಯೇ ಇದಕ್ಕೆಲ್ಲಾ ಕಾರಣ. ಅವರ ಕೋಚಿಂಗ್ ರೋಹಿತ್ ಬಳಗದ ಯಶಸ್ಸಿನ ಗುಟ್ಟು ಎಂದೆಲ್ಲಾ ಕೊಂಡಾಡ್ತಿದ್ದಾರೆ. ಎಲ್ಲವೂ ನಿಜ..ಆದರೆ ಇದೇ ದ್ರಾವಿಡ್ ಎರಡು ವರ್ಷಗಳ ಹಿಂದೆ ಎದುರಿಸಿದ್ದು ಸಾಲು ಸಾಲು ಟೀಕೆ. ದಿ ವಾಲ್ ಟೀಕೆಗಳ ಚಕ್ರವ್ಯೂಹ ಬೇಧಿಸಿದ್ದೇ ರೋಚಕ.
ಪ್ರಸಕ್ತ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಔಟ್ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ಜೊತೆ ಬಿಗ್ ಮಾರ್ಕ್ ಸೆಟ್ ಮಾಡಿದೆ. ಹತ್ತಕ್ಕೆ ಹತ್ತು ಪಂದ್ಯಗಳನ್ನ ಗೆದ್ದು ಫೈನಲ್ಗೆ ರೇಸ್ಗೆ ಎಂಟ್ರಿಕೊಟ್ಟಿದೆ. ಇಲ್ಲಿ ತನಕ ಭಾರತ ತಂಡದ ವಿಚಾರದಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿದೆ. ಫೈನಲ್ ಪಂದ್ಯವೊಂದನ್ನು ಗೆದ್ದು ಬಿಟ್ಟರೆ ಏಕದಿನ ಅಧಿಪತಿಯಾಗಿ ಮೆರೆದಾಡಲಿದೆ.
ಕೋಚ್ ದ್ರಾವಿಡ್ ವೈಫಲ್ಯ ಮೆಟ್ಟಿ ನಿಂತಿದ್ದೇಗೆ..?
ಟೀಮ್ ಇಂಡಿಯಾವನ್ನ ಹೊಗಳಲು ಪದಗಳೇ ಇಲ್ಲ. ಯಾರ ಬಾಯಲ್ಲಿ ಕೇಳಿದ್ರೂ ಶಬ್ಬಾಸ್ಗಿರಿ. ಎಲ್ಲೇ ನೋಡಿದ್ರೂ ಟೀಮ್ ಇಂಡಿಯಾದ್ದೇ ಜಪ. ಇಡೀ ತಂಡವನ್ನ ಹೊಗಳಿ ಅಟ್ಟಕ್ಕೇರಿಸಲಾಗ್ತಿದೆ. ಆದರೆ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಭಾರತದ ಈ ಅಜೇಯ ಓಟದ ಹಿಂದೆ ದೊಡ್ಡ ಫೇಲ್ಯೂರ್ ಕಥೆ ಇದೆ. ಆ ವೈಫಲ್ಯ ಕಂಡಾಗಲೆಲ್ಲಾ ದ್ರೋಣಾಚಾರ್ಯ ದ್ರಾವಿಡ್ ಅನುಭವಿಸಿದ್ದು ಒಂದೆರಡು ನೋವಲ್ಲ.
ವಿಶ್ವಕಪ್ ರಣರಂಗದಲ್ಲಿ ಟೀಮ್ ಇಂಡಿಯಾವನ್ನ ಟಚ್ ಮಾಡೋರೆ ಇಲ್ಲ. ಅಷ್ಟೊಂದು ಭಯಾನಕವಾಗಿ ಆಟವಾಡ್ತಿದೆ. ಆದರೆ ಈಗ ನೋಡ್ತಿರುವ ಇದೇ ತಂಡ ಎರಡು ವರ್ಷಗಳ ಹಿಂದೆ ಇದ್ದಿದ್ದೇ ಬೇರೆ ಥರ. ಅವತ್ತಿನಿಂದ ಟೀಕೆಗಳ ಸುರಿಮಳೆಯನ್ನ ಎದುರಿಸಿದ್ರು. ಅದ್ಯಾವ ಮಟ್ಟಿಗೆ ಅಂದ್ರೆ ರೋಹಿತ್ ಶರ್ಮಾ ಆ್ಯಂಡ್ ಗ್ಯಾಂಗ್ ಅನ್ನ ದೇಶ-ವಿದೇಶಗಳಲ್ಲಿ ಫ್ಯಾನ್ಸ್ ಹಾಗೂ ಕ್ರಿಕೆಟ್ ಎಕ್ಸ್ಪರ್ಟ್ ಹುರಿದು ಮುಕ್ಕಿದ್ರು. ಆ ಮಟ್ಟಿಗೆ ಭಾರತ ತಂಡ ಪ್ರಮುಖ ಸರಣಿಗಳನ್ನ ಸೋತು ಜರ್ಝರಿತವಾಗಿತ್ತು.
ದ್ರಾವಿಡ್ ಮಾರ್ಗದರ್ಶನದಲ್ಲಿ ಸೋಲಿನ ದರ್ಶನ
ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ಮಾಸ್ಟರ್ ಆಗಿದ್ದೇ ಬಂತು. ಭಾರತಕ್ಕೆ ಬ್ಯಾಡ್ಲಕ್ ವಕ್ಕರಿಸಿತ್ತು. ಆರಂಭಿಕ ಎರಡು ವರ್ಷ ಇದೆ ಕಥೆ. ಆ ಕಥೆ ಕೆಲವರಿಗೆ ಬೇಸರ ತರಿಸಿದ್ರೆ ಹಲವರಿಗೆ ಟೀಕೆಗಳ ಅಸ್ತ್ರವಾಯ್ತು. ಆಳಿಗೊಂದು ಕಲ್ಲು ಎನ್ನುವಂತೆ ಸಿಕ್ಕ ಸಿಕ್ಕವರೆಲ್ಲಾ ಕೋಚ್ ದ್ರಾವಿಡ್ ವಿರುದ್ಧ ಟೀಕೆಗಳ ಬಾಣಸ್ತ್ರ ಪ್ರಯೋಗಿಸಿದ್ರು. ಅದಕ್ಕೆ ಕಾರಣ ಈ ಫೇಲ್ಯೂರ್.
ಸೋಲಿನ ಪಾಠ
ಕೋಚ್ ಹುದ್ದೆಗೆ ದ್ರಾವಿಡ್ ಅನ್ಫಿಟ್.. ಬದಲಾವಣೆಗೆ ಆಗ್ರಹ..!
ಒಂದೆಡೆ ಸಾಲು ಸಾಲು ಸರಣಿಗಳನ್ನ ಸೋಲುತ್ತಿದ್ದಂತೆ ಆಕ್ರೋಶದ ಕಿಚ್ಚು ಹತ್ತಿತ್ತು. ಅದ್ಯಾವ ಮಟ್ಟಿಗೆ ಅಂದ್ರೆ ದ್ರಾವಿಡ್ ಕಾರ್ಯವೈಖರಿಯನ್ನೇ ಪ್ರಶ್ನಿಸೋಕೆ ಶುರುಮಾಡಿದ್ರು. ಹೆಡ್ಕೋಚ್ ಹುದ್ದೆಗೆ ದಿ ವಾಲ್ ಅನ್ಫಿಟ್.. ಹುದ್ದೆಯಿಂದ ಅವರನ್ನ ಕೆಳಗಿಳಿಸಬೇಕು ಎಂದು ಖಾರವಾಗಿ ಟೀಕಿಸಿದ್ರು. ದ್ರಾವಿಡ್ ಜೊತೆ ಉಳಿದ ಸಪೋರ್ಟಿಂಗ್ ಸ್ಟಾಪ್ಸ್ ಕಾರ್ಯವೈಖರಿ ಅಭಿಮಾನಿಗಳನ್ನ ಕೆರಳಿ ಕೆಂಡವಾಗಿಸಿತ್ತು.
ವಿಶ್ವಕಪ್ ವರ್ಷದಲ್ಲಿ ಪ್ರಯೋಗ.. ಫ್ಯಾನ್ಸ್ ಸಿಡಿಮಿಡಿ..!
ಒನ್ಡೆ ವಿಶ್ವಕಪ್ ಸಮೀಪಿಸ್ತಿದ್ದಂತೆ ಎಲ್ಲಾ ತಂಡಗಳು ಭರ್ಜರಿ ಸಿದ್ಧತೆ ನಡೆಸಿದ್ವು. ಆದರೆ ದ್ರಾವಿಡ್ ಸೈನ್ಯ ಎಕ್ಸ್ಪೆರಿಮೆಂಟ್ನಲ್ಲೇ ಮುಳುಗಿ ಹೋಗಿತ್ತು. ಸೋಲಿನ ಕೋಪ ಒಂದೆಡೆ ಆದ್ರೆ ಬ್ಯಾಕ್ ಟು ಬ್ಯಾಕ್ ಪ್ಲೇಯರ್ಸ್ ಪ್ರಯೋಗ ಕ್ರಿಕೆಟ್ ಅಭಿಮಾನಿಗಳನ್ನ ರೊಚ್ಚಿಗೆಬ್ಬಿಸಿತ್ತು. ತಂಡದ ಮೇಲೆ ನಂಬಿಕೆ ಕಳೆದುಕೊಂಡ್ರು. ಇದೇನ್ ಟೀಮ್ ಇಂಡಿಯಾನಾ? ದುರ್ಬಲ ತಂಡದಂತೆ ಆಡ್ತಿದೆ ಎಂದೆಲ್ಲಾ ಜರಿಯಲು ಶುರುಮಾಡಿದ್ರು. ಇವರಿಗೆಲ್ಲಾ ಕೋಟಿ ಕೋಟಿ ನೀಡೋದು ದಂಡ ಅಂತೆಲ್ಲಾ ಮಾತನಾಡಿದ್ರು.
ಟೀಕೆಗಳ ಟಿಪ್ಪಣಿಗೆ ಕುಗ್ಗದ ‘ದ್ರೋಣಾಚಾರ್ಯ’
ಎಲ್ಲದಕ್ಕೂ ಟೈಮ್ ಅನ್ನೊದು ಬರ್ಬೇಕು.ಆ ಟೈಮ್ಗಾಗಿ ಕೋಚ್ ರಾಹುಲ್ ದ್ರಾವಿಡ್ ಕಾಯ್ತಿದ್ರು. ಅದುವೇ ಗ್ಲೋಬಲ್ ಇವೆಂಟ್ ಒನ್ಡೇ ವಿಶ್ವಕಪ್. ಈ ಮಹಾಸಮರದಲ್ಲಿ ದಿ ವಾಲ್ ತಾನೇನು, ತನ್ನ ತಾಕತ್ತೇನೂ ಅನ್ನೋದನ್ನ ಕ್ರಿಕೆಟ್ ಜಗತ್ತಿಗೆ ತೋರಿಸಿದ್ದಾರೆ. ದ್ರಾವಿಡ್ ಮಾರ್ಗದರ್ಶನದಲ್ಲಿ ಇಂಡಿಯನ್ ಕಲಿಗಳು ಜಬರ್ದಸ್ತ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಆ್ಯಂಡ್ ಫೀಲ್ಡಿಂಗ್..ಮೂರರಲ್ಲೂ ಧೂಳೆಬ್ಬಿಸಿದ್ದಾರೆ. ಒಂದೂ ಸೋಲನ್ನೂ ಕಾಣದೇ ಫೈನಲ್ ಪ್ರವೇಶಿಸಿದ್ದಾರೆ. ಇದರ ಹಿಂದಿನ ರಿಯಲ್ ಸೂತ್ರದಾರಿ. ನಮ್ಮ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್