newsfirstkannada.com

‘ಅನ್ನದಾತ’ ರಾಮೋಜಿ ರಾವ್​.. ಕೃಷಿ ಕುಟುಂಬದಿಂದ ಬಂದು ಬಡವರ ಹಸಿವು ನೀಗಿಸಿದ ಪುಣ್ಯಾತ್ಮ

Share :

Published June 8, 2024 at 8:48am

Update June 8, 2024 at 8:49am

    ಕನ್ನಡದಲ್ಲೂ ಸಿನಿಮಾ ಮಾಡಿದ್ದ ರಾಮೋಜಿ ರಾವ್​

    ಒಂದೆರಡಲ್ಲ ಅನೇಕ ಸಂಸ್ಥೆಗಳನ್ನು ಹುಟ್ಟು ಹಾಕಿದ ಧುರೀಣ

    ಸುದ್ಧಿ ಸಂಸ್ಥೆ, ವಿಶ್ವ ವಿಖ್ಯಾತ ಫಿಲ್ಮ್​ ಸಿಟಿಯನ್ನು ನಿರ್ಮಾಣ ಮಾಡಿದ್ದಾರೆ

ರಾಮೋಜಿ ಫಿಲ್ಮ್​ ಸಿಟಿಯ ಮುಖ್ಯಸ್ಥ ರಾಮೋಜಿ ರಾವ್​ ನಿಧನರಾಗಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗಿನ ಜಾವ 4.30ಕ್ಕೆ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೃಷಿ ಕುಟುಂಬದಿಂದ ಬಂದ ಅನ್ನದಾತ

ರಾಮೋಜಿ ರಾವ್​ ಅವರ ಪೂರ್ತಿ ಹೆಸರು ಚೆರಕುರಿ ರಾಮೋಜಿ ರಾವ್​. 16 ನವೆಂಬರ್​ 1936ರಲ್ಲಿ ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯ ಪೆದಪುರಿಯಲ್ಲಿ ಜನಿಸಿದರು. ಕೃಷಿ ಕುಟುಂಬದಿಂದ ಬಂದ ಇವರು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮೆರೆದರು. ಭಾರತೀಯ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ.

ರಾಮೋಜಿ ಗ್ರೂಪ್​ನ ನಿರ್ಮಾಣ

ಉದ್ಯಮ ಕ್ಷೇತ್ರದಲ್ಲಿ, ಮಾಧ್ಯಮ ಮತ್ತು ಸಿನಿಮಾ ನಿರ್ಮಾಣ ಕ್ಷೇತ್ರದಲ್ಲೂ ಇವರು ಕೆಲಸ ಮಾಡಿದ್ದಾರೆ. ರಾಮೋಜಿ ಗ್ರೂಪ್​ನ ಅಧ್ಯಕ್ಷರಾಗುವ ಮೂಲಕ ಅನೇಕ ಜನರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಬೆಳಕು ಚೆಲ್ಲಿದ್ದಾರೆ.

ಅನೇಕ ಸಂಸ್ಥೆಗಳನ್ನು ಕಟ್ಟಿದ ಪುಣ್ಯಾತ್ಮ

ವಿಶ್ವ ವಿಖ್ಯಾತ ರಾಮೋಜಿ ರಾವ್​ ಫಿಲ್ಮ್​ ಸಿಟಿ, ಈನಾಡು ಪತ್ರಿಕೆ, ಈಟಿವಿ ನೆಟ್​​​​ವರ್ಕ್​, ಅನ್ನದಾತ-ನಿಯತಕಾಲಿಕೆ, ಉಷಾ ಕಿರಣ್​ ಮೂವೀಸ್​​, ಚಿಟ್​ಫಂಡ್​, ಡಾಲ್ಫಿನ್​ ಗ್ರೂಪ್​ ಆಫ್​ ಹೋಟೆಲ್​ಗಳು, ಕಲಾಂಜಲಿ ಶಾಪಿಂಗ್​ ಮಾಲ್​, ಪ್ರಿಯಾ ಉಪ್ಪಿನಕಾಯಿ, ಮಯೂರಿ ಡಿಸ್ಟ್ರಿಬ್ಯೂಟರ್ಸ್​ಗಳನ್ನು ನಿರ್ಮಿಸಿ ಮುನ್ನೆಸುತ್ತಿದ್ದರು.

ಇದನ್ನೂ ಓದಿ: 5 ಗಂಟೆಗಳ ಕಾಲ ಭವಾನಿ ರೇವಣ್ಣ ವಿಚಾರಣೆ.. ತನಿಖೆ ವೇಳೆ ಏನು ಹೇಳಿದ್ರು ಗೊತ್ತಾ?

ಪ್ರಶಸ್ತಿಗಳ ಸುರಿಮಳೆ

ಚೆರಕುರಿ ರಾಮೋಜಿ ರಾವ್ ಅವರ ಸಾಧನೆಗೆ ಪದ್ಮ ವಿಭೂಷಣವನ್ನು ನೀಡಿ ಗೌರವಿಸಲಾಗಿದೆ. ಇದಲ್ಲದೆ ಸಿನಿಮಾ ಕ್ಷೇತ್ರದಲ್ಲೂ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಾಲ್ಕು ಫಿಲ್ಮ್​ಫೇರ್​ ಪ್ರಶಸ್ತಿ, 5 ನಂದಿ ಪ್ರಶಸ್ತಿ, ತೆಲುಗು ಚಿತ್ರರಂಗದಿಂದ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ದೂರವಾದ ಚಂದನ್​-ನಿವೇದಿತಾ ಜೋಡಿಹಕ್ಕಿ.. ಇವ್ರ ಮೇಲೆ ಯಾರ ಕಣ್ಣು ಬಿತ್ತೋ ಎಂದ ಫ್ಯಾನ್ಸ್!

ಕನ್ನಡದಲ್ಲೂ ಸಿನಿಮಾ ಮಾಡಿದ ಖ್ಯಾತಿ

ಇನ್ನು ಕನ್ನಡ ಸಿನಿಮಾ ರಂಗಕ್ಕೂ ರಾಮೋಜಿ ರಾವ್​ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲಿ ನಿನಗಾಗಿ, ಚಿತ್ರಾ, ಆನಂದ, ಸವಾರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

ಮಗನನ್ನು ಕಳೆದುಕೊಂಡಿದ್ದರು

ರಾಮೋಜಿ ರಾವ್​ ಅವರ ಬಾಳ ಸಂಗಾತಿ ರಮಾ ದೇವಿ. ಇವರ ಕಿರಿಯ ಮಗ ಚೆರಕುರಿ ಸುಮನ್​ 7 ಸೆಪ್ಟೆಂಬರ್​ 2012ರಲ್ಲಿ ಲ್ಯುಕೇಮಿಯಾದಿಂದ ಕೊನೆಯುಸಿರೆಳೆದರು.

ಉಸಿರು ಚೆಲ್ಲಿದ ರಾಮೋಜಿ ರಾವ್

ಇಂದು ರಾಮೋಜಿ ರಾವ್​ ನಿಧನರಾಗಿದ್ದು, ಓರ್ವ ಮಗ ಕಿರಣ್​ ಪ್ರಭಾಕರನ್ನು ಅಗಲಿದ್ದಾರೆ. ಇವರ ಸಾವಿಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅನ್ನದಾತ’ ರಾಮೋಜಿ ರಾವ್​.. ಕೃಷಿ ಕುಟುಂಬದಿಂದ ಬಂದು ಬಡವರ ಹಸಿವು ನೀಗಿಸಿದ ಪುಣ್ಯಾತ್ಮ

https://newsfirstlive.com/wp-content/uploads/2024/06/ramoji-rao-2.jpg

    ಕನ್ನಡದಲ್ಲೂ ಸಿನಿಮಾ ಮಾಡಿದ್ದ ರಾಮೋಜಿ ರಾವ್​

    ಒಂದೆರಡಲ್ಲ ಅನೇಕ ಸಂಸ್ಥೆಗಳನ್ನು ಹುಟ್ಟು ಹಾಕಿದ ಧುರೀಣ

    ಸುದ್ಧಿ ಸಂಸ್ಥೆ, ವಿಶ್ವ ವಿಖ್ಯಾತ ಫಿಲ್ಮ್​ ಸಿಟಿಯನ್ನು ನಿರ್ಮಾಣ ಮಾಡಿದ್ದಾರೆ

ರಾಮೋಜಿ ಫಿಲ್ಮ್​ ಸಿಟಿಯ ಮುಖ್ಯಸ್ಥ ರಾಮೋಜಿ ರಾವ್​ ನಿಧನರಾಗಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗಿನ ಜಾವ 4.30ಕ್ಕೆ ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೃಷಿ ಕುಟುಂಬದಿಂದ ಬಂದ ಅನ್ನದಾತ

ರಾಮೋಜಿ ರಾವ್​ ಅವರ ಪೂರ್ತಿ ಹೆಸರು ಚೆರಕುರಿ ರಾಮೋಜಿ ರಾವ್​. 16 ನವೆಂಬರ್​ 1936ರಲ್ಲಿ ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯ ಪೆದಪುರಿಯಲ್ಲಿ ಜನಿಸಿದರು. ಕೃಷಿ ಕುಟುಂಬದಿಂದ ಬಂದ ಇವರು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮೆರೆದರು. ಭಾರತೀಯ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ.

ರಾಮೋಜಿ ಗ್ರೂಪ್​ನ ನಿರ್ಮಾಣ

ಉದ್ಯಮ ಕ್ಷೇತ್ರದಲ್ಲಿ, ಮಾಧ್ಯಮ ಮತ್ತು ಸಿನಿಮಾ ನಿರ್ಮಾಣ ಕ್ಷೇತ್ರದಲ್ಲೂ ಇವರು ಕೆಲಸ ಮಾಡಿದ್ದಾರೆ. ರಾಮೋಜಿ ಗ್ರೂಪ್​ನ ಅಧ್ಯಕ್ಷರಾಗುವ ಮೂಲಕ ಅನೇಕ ಜನರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಬೆಳಕು ಚೆಲ್ಲಿದ್ದಾರೆ.

ಅನೇಕ ಸಂಸ್ಥೆಗಳನ್ನು ಕಟ್ಟಿದ ಪುಣ್ಯಾತ್ಮ

ವಿಶ್ವ ವಿಖ್ಯಾತ ರಾಮೋಜಿ ರಾವ್​ ಫಿಲ್ಮ್​ ಸಿಟಿ, ಈನಾಡು ಪತ್ರಿಕೆ, ಈಟಿವಿ ನೆಟ್​​​​ವರ್ಕ್​, ಅನ್ನದಾತ-ನಿಯತಕಾಲಿಕೆ, ಉಷಾ ಕಿರಣ್​ ಮೂವೀಸ್​​, ಚಿಟ್​ಫಂಡ್​, ಡಾಲ್ಫಿನ್​ ಗ್ರೂಪ್​ ಆಫ್​ ಹೋಟೆಲ್​ಗಳು, ಕಲಾಂಜಲಿ ಶಾಪಿಂಗ್​ ಮಾಲ್​, ಪ್ರಿಯಾ ಉಪ್ಪಿನಕಾಯಿ, ಮಯೂರಿ ಡಿಸ್ಟ್ರಿಬ್ಯೂಟರ್ಸ್​ಗಳನ್ನು ನಿರ್ಮಿಸಿ ಮುನ್ನೆಸುತ್ತಿದ್ದರು.

ಇದನ್ನೂ ಓದಿ: 5 ಗಂಟೆಗಳ ಕಾಲ ಭವಾನಿ ರೇವಣ್ಣ ವಿಚಾರಣೆ.. ತನಿಖೆ ವೇಳೆ ಏನು ಹೇಳಿದ್ರು ಗೊತ್ತಾ?

ಪ್ರಶಸ್ತಿಗಳ ಸುರಿಮಳೆ

ಚೆರಕುರಿ ರಾಮೋಜಿ ರಾವ್ ಅವರ ಸಾಧನೆಗೆ ಪದ್ಮ ವಿಭೂಷಣವನ್ನು ನೀಡಿ ಗೌರವಿಸಲಾಗಿದೆ. ಇದಲ್ಲದೆ ಸಿನಿಮಾ ಕ್ಷೇತ್ರದಲ್ಲೂ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಾಲ್ಕು ಫಿಲ್ಮ್​ಫೇರ್​ ಪ್ರಶಸ್ತಿ, 5 ನಂದಿ ಪ್ರಶಸ್ತಿ, ತೆಲುಗು ಚಿತ್ರರಂಗದಿಂದ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ದೂರವಾದ ಚಂದನ್​-ನಿವೇದಿತಾ ಜೋಡಿಹಕ್ಕಿ.. ಇವ್ರ ಮೇಲೆ ಯಾರ ಕಣ್ಣು ಬಿತ್ತೋ ಎಂದ ಫ್ಯಾನ್ಸ್!

ಕನ್ನಡದಲ್ಲೂ ಸಿನಿಮಾ ಮಾಡಿದ ಖ್ಯಾತಿ

ಇನ್ನು ಕನ್ನಡ ಸಿನಿಮಾ ರಂಗಕ್ಕೂ ರಾಮೋಜಿ ರಾವ್​ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲಿ ನಿನಗಾಗಿ, ಚಿತ್ರಾ, ಆನಂದ, ಸವಾರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

ಮಗನನ್ನು ಕಳೆದುಕೊಂಡಿದ್ದರು

ರಾಮೋಜಿ ರಾವ್​ ಅವರ ಬಾಳ ಸಂಗಾತಿ ರಮಾ ದೇವಿ. ಇವರ ಕಿರಿಯ ಮಗ ಚೆರಕುರಿ ಸುಮನ್​ 7 ಸೆಪ್ಟೆಂಬರ್​ 2012ರಲ್ಲಿ ಲ್ಯುಕೇಮಿಯಾದಿಂದ ಕೊನೆಯುಸಿರೆಳೆದರು.

ಉಸಿರು ಚೆಲ್ಲಿದ ರಾಮೋಜಿ ರಾವ್

ಇಂದು ರಾಮೋಜಿ ರಾವ್​ ನಿಧನರಾಗಿದ್ದು, ಓರ್ವ ಮಗ ಕಿರಣ್​ ಪ್ರಭಾಕರನ್ನು ಅಗಲಿದ್ದಾರೆ. ಇವರ ಸಾವಿಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More