ವಿಶ್ವಕಪ್ ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ
ಸುಂದರ್ಗೆ ಬುಲಾವ್ ನೀಡಿದ್ದರೂ ಫಸ್ಟ್ ಚಾಯ್ಸ್ ಅಶ್ವಿನ್
6 ವರ್ಷದಲ್ಲಿ ಕೇವಲ 2 ಏಕದಿನ ಪಂದ್ಯ ಆಡಿರುವ ಅಶ್ವಿನ್
ಏಷ್ಯಾ ಮಿನಿ ಸಮರ ಗೆದ್ದಿರುವ ಟೀಮ್ ಇಂಡಿಯಾದ ನೆಕ್ಸ್ಟ್ ಟಾರ್ಗೆಟ್. ಏಕದಿನ ವಿಶ್ವಕಪ್ ಮಹಾ ಸಮರ. ಈ ಮಹಾ ಸಮರದಲ್ಲಿ ಅಶ್ವಿನ್ಗೆ ಚಾನ್ಸ್ ಸಿಕ್ಕಿಲ್ಲ. ಆದ್ರೀಗ ಈ ಮೆಗಾ ಟೂರ್ನಿಯಲ್ಲಿ ಆಫ್ ಸ್ಪಿನ್ನರ್ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಅದ್ಹೇಗೆ ಏನು..?
ಏಷ್ಯಾಕಪ್ ಎತ್ತಿ ಹಿಡಿದಿರುವ ಟೀಮ್ ಇಂಡಿಯಾ ಚಿತ್ತ, ಇದೀಗ ವಿಶ್ವಕಪ್ನತ್ತ ನೆಟ್ಟಿದೆ. ಭಾರತದಲ್ಲೇ ನಡೆಯುತ್ತಿರುವ ಈ ಮೆಗಾ ಟೂರ್ನಿಯನ್ನ ಗೆಲ್ಲಲೇಬೇಕಾದ ಹಠದಲ್ಲಿರುವ ಟೀಮ್ ಇಂಡಿಯಾ, ಈಗಾಗಲೇ 15 ಸದಸ್ಯರ ತಂಡವನ್ನ ಪ್ರಕಟಿಸಿ 15 ದಿನಗಳೇ ಕಳೆದಿವೆ. ಆದ್ರೀಗ ಇದೇ ತಂಡದಲ್ಲಿ ಬದಲಾವಣೆ ಆಗೋ ಸಾಧ್ಯತೆ ದಟ್ಟವಾಗಿದೆ.
ಏಕದಿನ ವಿಶ್ವಕಪ್ ಆರಂಭಕ್ಕೆ ಜಸ್ಟ್ 16 ದಿನಗಳಷ್ಟೇ ಬಾಕಿ ಉಳಿದಿದ್ದು, ಈ ನಡುವೆ ಟೀಮ್ ಇಂಡಿಯಾ, ಮತ್ತೆ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗುವ ಬಗ್ಗೆ ಸ್ವತಃ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾನೇ ಬಿಚ್ಚಿಟ್ಟಿದ್ದಾರೆ. ಏಷ್ಯಾಕಪ್ ಫೈನಲ್ ಬಳಿಕ ಇಂಥದ್ದೊಂದು ಹಿಂಟ್ ಕೊಟ್ಟಿರುವ ರೋಹಿತ್, ಏಕದಿನ ವಿಶ್ವಕಪ್ ರೇಸ್ನಲ್ಲಿರುವ ಆಟಗಾರನ ಬಗ್ಗೆ ಸುಳಿವು ನೀಡಿದ್ದಾರೆ.
ನೋಡಿ.. ಪ್ರತಿಯೊಬ್ಬ ಸ್ಪಿನ್ ಆಲ್ರೌಂಡರ್ಗಳು ರೇಸ್ನಲ್ಲಿದ್ದಾರೆ. ಸ್ಪಿನ್ ಆಲ್ರೌಂಡರ್ ಆಗಿ ಅಶ್ವಿನ್ ಸಹ ಯೋಜನೆಯಲ್ಲಿದ್ದಾರೆ. ನಾನು ಫೋನ್ನಲ್ಲಿ ಮಾತನಾಡುತ್ತಿದ್ದೇನೆ. ಕೊನೆ ಕ್ಷಣದಲ್ಲಿ ಅಕ್ಷರ್ ಪಟೇಲ್ ಗಾಯಗೊಂಡ್ರು. ತಡರಾತ್ರಿ ಇಂಜುರಿಗೆ ತುತ್ತಾಗಿದ್ದರು. ಕೆಲವರಿಗೆ ಫೋನ್ ಮಾಡಲಾಯ್ತು. ವಾಷಿಂಗ್ಟನ್ ಲಭ್ಯವಿದ್ದರು. ಹೀಗಾಗಿ ಆ ಸ್ಥಾನ ತುಂಬಿದರು. ಅದೃಷ್ಟವಶಾತ್ ಏಷ್ಯನ್ ಗೇಮ್ಸ್ ತಂಡದಲ್ಲಿದ್ದ ಸುಂದರ್, ಬೆಂಗಳೂರಿನ ತರಬೇತಿ ಶಿಬಿರದ ಭಾಗವಾಗಿ ಫಿಟ್ ಆಗಿದ್ದರು. ಫೀಲ್ಡ್ನಲ್ಲಿ ಟೈಮ್ ಸ್ಪೆಂಡ್ ಮಾಡಿದ್ದರು. ಹೀಗಾಗಿ ಆತನನ್ನ ಕರೆತಂದೆವು. ನಾನು ಆಟಗಾರರ ಬಗ್ಗೆ ಹಾಗೂ ಆಟಗಾರರ ರೋಲ್ಗಳ ಬಗ್ಗೆ ತುಂಬಾ ಸ್ಪಷ್ಟವಾಗಿದ್ದೇನೆ. ನಾನು ಎಲ್ಲರ ಬಗ್ಗೆಯೂ ಹೇಳುತ್ತಿದ್ದೇನೆ. ನಾನು ಹೆಸರುಗಳ ಬಗ್ಗೆ ಹೇಳಲ್ಲ. ಆದರೆ ಎಲ್ಲರೂ ಲೂಪ್ನಲ್ಲಿದ್ದಾರೆ-ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್
ಹಿಟ್ಮ್ಯಾನ್ ರೋಹಿತ್ ನೀಡಿರುವ ಈ ಒಂದು ಹೇಳಿಕೆಯೇ ವಿಶ್ವಕಪ್ ತಂಡದಲ್ಲಿನ ಬದಲಾವಣೆಗೆ ಹಿಂಟ್ಗೆ ಕಾರಣವಾಗಿರುವುದು. ಇದಕ್ಕೆ ಕಾರಣವೂ ಇದೆ. ಅದು ಆಲ್ರೌಂಡರ್ ಅಕ್ಷರ್ ಪಟೇಲ್ ಇಂಜುರಿ.
ಅಕ್ಷರ್ ಇಂಜುರಿ.. ವಿಶ್ವಕಪ್ ತಂಡದಲ್ಲಿ ಆಗುತ್ತಾ ಬದಲಾವಣೆ?
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿರುವ ಅಕ್ಷರ್ ಪಟೇಲ್, ಇಂಜುರಿಯಿಂದ ಚೇತರಿಸಿಕೊಳ್ಳಲು 7 ರಿಂದ 10 ದಿನಗಳು ಬೇಕಾಗಿದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅಕಸ್ಮಾತ್, ಏಕದಿನ ವಿಶ್ವಕಪ್ಗೂ ಮುನ್ನ ಸಂಪೂರ್ಣ ಚೇತರಿಸಿಕೊಳ್ಳದಿದ್ರೆ, ವಿಶ್ವಕಪ್ ತಂಡದಲ್ಲಿ ಬದಲಾವಣೆಯಾಗೋದು ಗ್ಯಾರಂಟಿ.
ಅಶ್ವಿನ್ಗೆ ಓಪನ್ ಇದೆ ವಿಶ್ವಕಪ್ ತಂಡದಲ್ಲಿ ಸ್ಥಾನ..!
ಹಿಟ್ಮ್ಯಾನ್ ರೋಹಿತ್ ಶರ್ಮಾನೇ ಹೇಳಿದಂತೆ ವಿಶ್ವಕಪ್ ತಂಡದಲ್ಲಿ ಸ್ಪಿನ್ ಆಲ್ರೌಂಡರ್ಗಳ ಬಾಗಿಲು ಓಪನ್ ಇದೆ. ಹೀಗಾಗಿ ಆಪ್ ಸ್ಪಿನ್ನರ್ ಕೋಟಾದಲ್ಲಿ ಅಶ್ವಿನ್ ಹಾಗೂ ವಾಷಿಂಗ್ಟನ್ ಸುಂದರ್ಗೆ ನೇರ ಪೈಪೋಟಿ ನಡೆಯಲಿದೆ. ಈ ಪೈಪೋಟಿಯಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯೋ ಸಾಧ್ಯತೆ ಹೆಚ್ಚಿದೆ. ಅಕ್ಷರ್ ಇಂಜುರಿ ಬೆನ್ನಲ್ಲೇ ಟೀಮ್ ಮ್ಯಾನೇಜ್ಮೆಂಟ್ ಮಾತುಕತೆ ನಡೆಸಿದ್ದು ಅಶ್ವಿನ್ ಜೊತೆ. ಅಶ್ವಿನ್ ಕ್ರಿಕೆಟ್ನಿಂದ ದೂರ ಉಳಿದಿದ್ದ ಕಾರಣ, ಮ್ಯಾಚ್ಗೆ ರೆಡಿಯಾಗಿದ್ದ ವಾಷಿಂಗ್ಟನ್ಗೆ ಬುಲಾವ್ ನೀಡಲಾಯ್ತು. ಈ ಕಾರಣಕ್ಕೆ ವಿಶ್ವಕಪ್ನಲ್ಲಿ ಬದಲಾವಣೆಗೆ ಮುಂದಾದರೆ ಅಶ್ವಿನ್ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ.
6 ವರ್ಷದಿಂದ 2 ಏಕದಿನ ಪಂದ್ಯ..ಅಶ್ವಿನ್ಗೆ ಯಾಕೆ ಚಾನ್ಸ್..?
6 ವರ್ಷಗಳಿಂದ ಕೇವಲ 2 ಏಕದಿನ ಪಂದ್ಯಗಳನ್ನಾಡಿದ ಅಶ್ವಿನ್ಗೆ ಯಾಕೆ ಚಾನ್ಸ್ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿರಬಹುದು. ಇದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿ ಶ್ರೇಷ್ಠ ಆಫ್ ಸ್ಪಿನ್ನರ್ ಎಂದಾಕ್ಷಣ ಕಾಣಿಸಿಕೊಳ್ಳುವುದು ಅಶ್ವಿನ್ ಮಾತ್ರ. ಭಾರತೀಯ ಕಂಡೀಷನ್ಸ್ನ ಚೆನ್ನಾಗಿ ತಿಳಿದಿರುವ ಅನುಭವಿ ತಂಡದಲ್ಲಿದ್ರೆ, ಟೀಮ್ ಇಂಡಿಯಾಗೆ ಹೆಚ್ಚುವರಿ ಲಾಭ ಆಗೋದು ಗ್ಯಾರಂಟಿ. ಈ ನಿಟ್ಟಿನಲ್ಲೇ ರೋಹಿತ್, ರೆಗ್ಯುಲರ್ ಆಗಿ ಅಶ್ವಿನ್ ಜೊತೆ ಮಾತುಕತೆಯೂ ನಡೆಸ್ತಿದ್ದಾರೆ. ಇದರ ಹಿಂದಿನ ಸ್ಪಷ್ಟ ಉದ್ದೇಶ ಅಕ್ಷರ್ ಅಲಭ್ಯರಾದ್ರೆ ಅಶ್ವಿನ್ಗೆ ಚಾನ್ಸ್ ನೀಡೋದು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ.
ಒಂದೆಡೆ ರೋಹಿತ್, ಅಶ್ವಿನ್ ಲಭ್ಯತೆಯ ಸುಳಿವನ್ನ ನೀಡಿದ್ರೆ, ಮತ್ತೊಂದೆಡೆ ಆರ್.ಅಶ್ವಿನ್, ನಾಳೆ ಟೀಮ್ ಇಂಡಿಯಾಗೆ ನನ್ನ ಸೇವೆಬೇಕಿದ್ರೆ, ನೂರರಷ್ಟು ಎಫರ್ಟ್ ಹಾಕುತ್ತೇನೆ ಎಂಬ ಸಂದೇಶವನ್ನೂ ನೀಡಿದ್ದಾರೆ. ಇದೆಲ್ಲವೂ ಅಕ್ಷರ್ ಪಟೇಲ್ ಇಂಜುರಿ ರಿಕವರಿ ಮೇಲೆಯೇ ನಿರ್ಣಯವಾಗಲಿದೆ. ಒಟ್ಟಿನಲ್ಲಿ ತಂಡದಲ್ಲಿ ಬದಲಾವಣೆ ಮಾಡಲು ಸೆಪ್ಟೆಂಬರ್ 28 ರವರೆಗೆ ಅವಕಾಶ ಇದೆ. ಹೀಗಾಗಿ ಅಕ್ಷರ್ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳದಿದ್ರೆ ಸುಂದರ್ ಅಥವಾ ಅಶ್ವಿನ್ ತಂಡಕ್ಕೆ ಎಂಟ್ರಿ ನೀಡೋದು ಫಿಕ್ಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಿಶ್ವಕಪ್ ಭಾರತ ತಂಡದಲ್ಲಿ ಬದಲಾವಣೆ ಸಾಧ್ಯತೆ
ಸುಂದರ್ಗೆ ಬುಲಾವ್ ನೀಡಿದ್ದರೂ ಫಸ್ಟ್ ಚಾಯ್ಸ್ ಅಶ್ವಿನ್
6 ವರ್ಷದಲ್ಲಿ ಕೇವಲ 2 ಏಕದಿನ ಪಂದ್ಯ ಆಡಿರುವ ಅಶ್ವಿನ್
ಏಷ್ಯಾ ಮಿನಿ ಸಮರ ಗೆದ್ದಿರುವ ಟೀಮ್ ಇಂಡಿಯಾದ ನೆಕ್ಸ್ಟ್ ಟಾರ್ಗೆಟ್. ಏಕದಿನ ವಿಶ್ವಕಪ್ ಮಹಾ ಸಮರ. ಈ ಮಹಾ ಸಮರದಲ್ಲಿ ಅಶ್ವಿನ್ಗೆ ಚಾನ್ಸ್ ಸಿಕ್ಕಿಲ್ಲ. ಆದ್ರೀಗ ಈ ಮೆಗಾ ಟೂರ್ನಿಯಲ್ಲಿ ಆಫ್ ಸ್ಪಿನ್ನರ್ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಅದ್ಹೇಗೆ ಏನು..?
ಏಷ್ಯಾಕಪ್ ಎತ್ತಿ ಹಿಡಿದಿರುವ ಟೀಮ್ ಇಂಡಿಯಾ ಚಿತ್ತ, ಇದೀಗ ವಿಶ್ವಕಪ್ನತ್ತ ನೆಟ್ಟಿದೆ. ಭಾರತದಲ್ಲೇ ನಡೆಯುತ್ತಿರುವ ಈ ಮೆಗಾ ಟೂರ್ನಿಯನ್ನ ಗೆಲ್ಲಲೇಬೇಕಾದ ಹಠದಲ್ಲಿರುವ ಟೀಮ್ ಇಂಡಿಯಾ, ಈಗಾಗಲೇ 15 ಸದಸ್ಯರ ತಂಡವನ್ನ ಪ್ರಕಟಿಸಿ 15 ದಿನಗಳೇ ಕಳೆದಿವೆ. ಆದ್ರೀಗ ಇದೇ ತಂಡದಲ್ಲಿ ಬದಲಾವಣೆ ಆಗೋ ಸಾಧ್ಯತೆ ದಟ್ಟವಾಗಿದೆ.
ಏಕದಿನ ವಿಶ್ವಕಪ್ ಆರಂಭಕ್ಕೆ ಜಸ್ಟ್ 16 ದಿನಗಳಷ್ಟೇ ಬಾಕಿ ಉಳಿದಿದ್ದು, ಈ ನಡುವೆ ಟೀಮ್ ಇಂಡಿಯಾ, ಮತ್ತೆ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗುವ ಬಗ್ಗೆ ಸ್ವತಃ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾನೇ ಬಿಚ್ಚಿಟ್ಟಿದ್ದಾರೆ. ಏಷ್ಯಾಕಪ್ ಫೈನಲ್ ಬಳಿಕ ಇಂಥದ್ದೊಂದು ಹಿಂಟ್ ಕೊಟ್ಟಿರುವ ರೋಹಿತ್, ಏಕದಿನ ವಿಶ್ವಕಪ್ ರೇಸ್ನಲ್ಲಿರುವ ಆಟಗಾರನ ಬಗ್ಗೆ ಸುಳಿವು ನೀಡಿದ್ದಾರೆ.
ನೋಡಿ.. ಪ್ರತಿಯೊಬ್ಬ ಸ್ಪಿನ್ ಆಲ್ರೌಂಡರ್ಗಳು ರೇಸ್ನಲ್ಲಿದ್ದಾರೆ. ಸ್ಪಿನ್ ಆಲ್ರೌಂಡರ್ ಆಗಿ ಅಶ್ವಿನ್ ಸಹ ಯೋಜನೆಯಲ್ಲಿದ್ದಾರೆ. ನಾನು ಫೋನ್ನಲ್ಲಿ ಮಾತನಾಡುತ್ತಿದ್ದೇನೆ. ಕೊನೆ ಕ್ಷಣದಲ್ಲಿ ಅಕ್ಷರ್ ಪಟೇಲ್ ಗಾಯಗೊಂಡ್ರು. ತಡರಾತ್ರಿ ಇಂಜುರಿಗೆ ತುತ್ತಾಗಿದ್ದರು. ಕೆಲವರಿಗೆ ಫೋನ್ ಮಾಡಲಾಯ್ತು. ವಾಷಿಂಗ್ಟನ್ ಲಭ್ಯವಿದ್ದರು. ಹೀಗಾಗಿ ಆ ಸ್ಥಾನ ತುಂಬಿದರು. ಅದೃಷ್ಟವಶಾತ್ ಏಷ್ಯನ್ ಗೇಮ್ಸ್ ತಂಡದಲ್ಲಿದ್ದ ಸುಂದರ್, ಬೆಂಗಳೂರಿನ ತರಬೇತಿ ಶಿಬಿರದ ಭಾಗವಾಗಿ ಫಿಟ್ ಆಗಿದ್ದರು. ಫೀಲ್ಡ್ನಲ್ಲಿ ಟೈಮ್ ಸ್ಪೆಂಡ್ ಮಾಡಿದ್ದರು. ಹೀಗಾಗಿ ಆತನನ್ನ ಕರೆತಂದೆವು. ನಾನು ಆಟಗಾರರ ಬಗ್ಗೆ ಹಾಗೂ ಆಟಗಾರರ ರೋಲ್ಗಳ ಬಗ್ಗೆ ತುಂಬಾ ಸ್ಪಷ್ಟವಾಗಿದ್ದೇನೆ. ನಾನು ಎಲ್ಲರ ಬಗ್ಗೆಯೂ ಹೇಳುತ್ತಿದ್ದೇನೆ. ನಾನು ಹೆಸರುಗಳ ಬಗ್ಗೆ ಹೇಳಲ್ಲ. ಆದರೆ ಎಲ್ಲರೂ ಲೂಪ್ನಲ್ಲಿದ್ದಾರೆ-ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್
ಹಿಟ್ಮ್ಯಾನ್ ರೋಹಿತ್ ನೀಡಿರುವ ಈ ಒಂದು ಹೇಳಿಕೆಯೇ ವಿಶ್ವಕಪ್ ತಂಡದಲ್ಲಿನ ಬದಲಾವಣೆಗೆ ಹಿಂಟ್ಗೆ ಕಾರಣವಾಗಿರುವುದು. ಇದಕ್ಕೆ ಕಾರಣವೂ ಇದೆ. ಅದು ಆಲ್ರೌಂಡರ್ ಅಕ್ಷರ್ ಪಟೇಲ್ ಇಂಜುರಿ.
ಅಕ್ಷರ್ ಇಂಜುರಿ.. ವಿಶ್ವಕಪ್ ತಂಡದಲ್ಲಿ ಆಗುತ್ತಾ ಬದಲಾವಣೆ?
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿರುವ ಅಕ್ಷರ್ ಪಟೇಲ್, ಇಂಜುರಿಯಿಂದ ಚೇತರಿಸಿಕೊಳ್ಳಲು 7 ರಿಂದ 10 ದಿನಗಳು ಬೇಕಾಗಿದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅಕಸ್ಮಾತ್, ಏಕದಿನ ವಿಶ್ವಕಪ್ಗೂ ಮುನ್ನ ಸಂಪೂರ್ಣ ಚೇತರಿಸಿಕೊಳ್ಳದಿದ್ರೆ, ವಿಶ್ವಕಪ್ ತಂಡದಲ್ಲಿ ಬದಲಾವಣೆಯಾಗೋದು ಗ್ಯಾರಂಟಿ.
ಅಶ್ವಿನ್ಗೆ ಓಪನ್ ಇದೆ ವಿಶ್ವಕಪ್ ತಂಡದಲ್ಲಿ ಸ್ಥಾನ..!
ಹಿಟ್ಮ್ಯಾನ್ ರೋಹಿತ್ ಶರ್ಮಾನೇ ಹೇಳಿದಂತೆ ವಿಶ್ವಕಪ್ ತಂಡದಲ್ಲಿ ಸ್ಪಿನ್ ಆಲ್ರೌಂಡರ್ಗಳ ಬಾಗಿಲು ಓಪನ್ ಇದೆ. ಹೀಗಾಗಿ ಆಪ್ ಸ್ಪಿನ್ನರ್ ಕೋಟಾದಲ್ಲಿ ಅಶ್ವಿನ್ ಹಾಗೂ ವಾಷಿಂಗ್ಟನ್ ಸುಂದರ್ಗೆ ನೇರ ಪೈಪೋಟಿ ನಡೆಯಲಿದೆ. ಈ ಪೈಪೋಟಿಯಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯೋ ಸಾಧ್ಯತೆ ಹೆಚ್ಚಿದೆ. ಅಕ್ಷರ್ ಇಂಜುರಿ ಬೆನ್ನಲ್ಲೇ ಟೀಮ್ ಮ್ಯಾನೇಜ್ಮೆಂಟ್ ಮಾತುಕತೆ ನಡೆಸಿದ್ದು ಅಶ್ವಿನ್ ಜೊತೆ. ಅಶ್ವಿನ್ ಕ್ರಿಕೆಟ್ನಿಂದ ದೂರ ಉಳಿದಿದ್ದ ಕಾರಣ, ಮ್ಯಾಚ್ಗೆ ರೆಡಿಯಾಗಿದ್ದ ವಾಷಿಂಗ್ಟನ್ಗೆ ಬುಲಾವ್ ನೀಡಲಾಯ್ತು. ಈ ಕಾರಣಕ್ಕೆ ವಿಶ್ವಕಪ್ನಲ್ಲಿ ಬದಲಾವಣೆಗೆ ಮುಂದಾದರೆ ಅಶ್ವಿನ್ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ.
6 ವರ್ಷದಿಂದ 2 ಏಕದಿನ ಪಂದ್ಯ..ಅಶ್ವಿನ್ಗೆ ಯಾಕೆ ಚಾನ್ಸ್..?
6 ವರ್ಷಗಳಿಂದ ಕೇವಲ 2 ಏಕದಿನ ಪಂದ್ಯಗಳನ್ನಾಡಿದ ಅಶ್ವಿನ್ಗೆ ಯಾಕೆ ಚಾನ್ಸ್ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿರಬಹುದು. ಇದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿ ಶ್ರೇಷ್ಠ ಆಫ್ ಸ್ಪಿನ್ನರ್ ಎಂದಾಕ್ಷಣ ಕಾಣಿಸಿಕೊಳ್ಳುವುದು ಅಶ್ವಿನ್ ಮಾತ್ರ. ಭಾರತೀಯ ಕಂಡೀಷನ್ಸ್ನ ಚೆನ್ನಾಗಿ ತಿಳಿದಿರುವ ಅನುಭವಿ ತಂಡದಲ್ಲಿದ್ರೆ, ಟೀಮ್ ಇಂಡಿಯಾಗೆ ಹೆಚ್ಚುವರಿ ಲಾಭ ಆಗೋದು ಗ್ಯಾರಂಟಿ. ಈ ನಿಟ್ಟಿನಲ್ಲೇ ರೋಹಿತ್, ರೆಗ್ಯುಲರ್ ಆಗಿ ಅಶ್ವಿನ್ ಜೊತೆ ಮಾತುಕತೆಯೂ ನಡೆಸ್ತಿದ್ದಾರೆ. ಇದರ ಹಿಂದಿನ ಸ್ಪಷ್ಟ ಉದ್ದೇಶ ಅಕ್ಷರ್ ಅಲಭ್ಯರಾದ್ರೆ ಅಶ್ವಿನ್ಗೆ ಚಾನ್ಸ್ ನೀಡೋದು ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ.
ಒಂದೆಡೆ ರೋಹಿತ್, ಅಶ್ವಿನ್ ಲಭ್ಯತೆಯ ಸುಳಿವನ್ನ ನೀಡಿದ್ರೆ, ಮತ್ತೊಂದೆಡೆ ಆರ್.ಅಶ್ವಿನ್, ನಾಳೆ ಟೀಮ್ ಇಂಡಿಯಾಗೆ ನನ್ನ ಸೇವೆಬೇಕಿದ್ರೆ, ನೂರರಷ್ಟು ಎಫರ್ಟ್ ಹಾಕುತ್ತೇನೆ ಎಂಬ ಸಂದೇಶವನ್ನೂ ನೀಡಿದ್ದಾರೆ. ಇದೆಲ್ಲವೂ ಅಕ್ಷರ್ ಪಟೇಲ್ ಇಂಜುರಿ ರಿಕವರಿ ಮೇಲೆಯೇ ನಿರ್ಣಯವಾಗಲಿದೆ. ಒಟ್ಟಿನಲ್ಲಿ ತಂಡದಲ್ಲಿ ಬದಲಾವಣೆ ಮಾಡಲು ಸೆಪ್ಟೆಂಬರ್ 28 ರವರೆಗೆ ಅವಕಾಶ ಇದೆ. ಹೀಗಾಗಿ ಅಕ್ಷರ್ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳದಿದ್ರೆ ಸುಂದರ್ ಅಥವಾ ಅಶ್ವಿನ್ ತಂಡಕ್ಕೆ ಎಂಟ್ರಿ ನೀಡೋದು ಫಿಕ್ಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ