ಆರ್ಸಿಬಿಗೆ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು
ಎಷ್ಟು ಬಾರಿ ಸೋತ್ರೂ ಬುದ್ಧಿ ಕಲಿಯದ ಮ್ಯಾನೇಜ್ಮೆಂಟ್
ಚೆನ್ನಾಗಿ ಆಡಿದ್ರೂ ಕನ್ನಡಿಗರಿಗೆ ಆರ್ಸಿಬಿಯಲ್ಲಿ ಇಲ್ಲ ಅವಕಾಶ
ಇತ್ತೀಚೆಗೆ ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರ್ಸಿಬಿ ಮತ್ತೊಮ್ಮೆ ಮುಗ್ಗರಿಸಿದೆ. ನಿಜ ಹೇಳಬೇಕಂದ್ರೆ ಲಕ್ನೋ ಎದುರು ಗೆಲ್ಲೋ ಅವಕಾಶ ಆರ್ಸಿಬಿಗೆ ಇತ್ತು. ಆದರೆ, ಆರ್ಸಿಬಿ ಮಾಡಿದ ಎಡುವಟ್ಟುಗಳಿಂದಲೇ ಮ್ಯಾಚ್ ಸೋಲುವಂತಾಗಿದೆ.
ಹೌದು, ಎಮ್.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ ಸೋತಿತ್ತು. ಇದಾದ ಬೆನ್ನಲ್ಲೇ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಬಳಿಕ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಆರ್ಸಿಬಿ ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಂಡಿಯೂರಿದೆ. ಆದ್ದರಿಂದ ಆರ್ಸಿಬಿ ಪ್ಲೇ ಆಫ್ಗೆ ಹೋಗಲು ಅವಕಾಶ ಇದ್ಯಾ? ಅನ್ನೋ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲ, ಆರ್ಸಿಬಿಯಲ್ಲಿ ಕನ್ನಡಿಗರಿಗೆ ಬೆಲೆ ಇಲ್ವಾ? ಅನ್ನೋ ಆಕ್ರೋಶ ಮಾತುಗಳು ಕೂಡ ಕೇಳಿ ಬಂದಿವೆ.
Vijaykumar Vyshak had figures of 1/23 in four overs against KKR.
RCB decided to drop him from today’s game 🤷🏻♂️
— Sameer Allana (@HitmanCricket) April 2, 2024
ಚೆನ್ನಾಗಿ ಆಡಿದ್ರೂ ಕನ್ನಡಿಗನಿಗೆ ಅವಕಾಶ ನೀಡದ ಆರ್ಸಿಬಿ
ವಿಜಯ್ಕುಮಾರ್ ವೈಶಾಕ್ ಆರ್ಸಿಬಿ ತಂಡದ ಸ್ಟಾರ್ ಬೌಲರ್. ಇವರು ಕರ್ನಾಟಕ ತಂಡದ ಕ್ರಿಕೆಟಿಗ. ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಎಲ್ಲರೂ ರನ್ಗಳನ್ನು ಬಿಟ್ಟುಕೊಟ್ಟರೂ ನಮ್ಮ ಕರ್ನಾಟಕದ ಹುಡುಗ ವಿಜಯ್ ಮಾತ್ರ ತಾನು ಮಾಡಿದ 4 ಓವರ್ಗಳಲ್ಲಿ 1 ವಿಕೆಟ್ ತೆಗೆದು ಕೇವಲ 23 ರನ್ ಕೊಟ್ಟಿದ್ದ. ಅದೇ ಪಂದ್ಯದಲ್ಲಿ ಎಲ್ಲರೂ ಆವರೇಜ್ 40ಕ್ಕೂ ಹೆಚ್ಚು ರನ್ ಕೊಟ್ಟಿದ್ದರು. ಅಷ್ಟು ಅದ್ಭುತವಾಗಿ ಪ್ರದರ್ಶನ ನೀಡಿದ್ರೂ ಲಕ್ನೋ ವಿರುದ್ಧದ ಪಂದ್ಯದಲ್ಲಿ ವಿಜಯ್ಕುಮಾರ್ ವೈಶಾಕ್ಗೆ ಆರ್ಸಿಬಿ ಅವಕಾಶ ನೀಡಲಿಲ್ಲ. ಹಾಗಾಗಿ ಆರ್ಸಿಬಿ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಚೆನ್ನಾಗಿ ಆಡುತ್ತಿದ್ದ ಕನ್ನಡಿಗನನ್ನು ಬೆಂಚ್ ಕಾಯಿಸಿದ್ದು ಎಷ್ಟು ಸರಿ? ಅನ್ನೋ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಹೀನಾಯ ಸೋಲು; ಪ್ಲೇ ಆಫ್ಗೆ ಹೋಗಲು ಆರ್ಸಿಬಿಗೆ ಅವಕಾಶ ಇದ್ಯಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆರ್ಸಿಬಿಗೆ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು
ಎಷ್ಟು ಬಾರಿ ಸೋತ್ರೂ ಬುದ್ಧಿ ಕಲಿಯದ ಮ್ಯಾನೇಜ್ಮೆಂಟ್
ಚೆನ್ನಾಗಿ ಆಡಿದ್ರೂ ಕನ್ನಡಿಗರಿಗೆ ಆರ್ಸಿಬಿಯಲ್ಲಿ ಇಲ್ಲ ಅವಕಾಶ
ಇತ್ತೀಚೆಗೆ ಹೋಮ್ಗ್ರೌಂಡ್ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರ್ಸಿಬಿ ಮತ್ತೊಮ್ಮೆ ಮುಗ್ಗರಿಸಿದೆ. ನಿಜ ಹೇಳಬೇಕಂದ್ರೆ ಲಕ್ನೋ ಎದುರು ಗೆಲ್ಲೋ ಅವಕಾಶ ಆರ್ಸಿಬಿಗೆ ಇತ್ತು. ಆದರೆ, ಆರ್ಸಿಬಿ ಮಾಡಿದ ಎಡುವಟ್ಟುಗಳಿಂದಲೇ ಮ್ಯಾಚ್ ಸೋಲುವಂತಾಗಿದೆ.
ಹೌದು, ಎಮ್.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ ಸೋತಿತ್ತು. ಇದಾದ ಬೆನ್ನಲ್ಲೇ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಬಳಿಕ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಆರ್ಸಿಬಿ ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮಂಡಿಯೂರಿದೆ. ಆದ್ದರಿಂದ ಆರ್ಸಿಬಿ ಪ್ಲೇ ಆಫ್ಗೆ ಹೋಗಲು ಅವಕಾಶ ಇದ್ಯಾ? ಅನ್ನೋ ಚರ್ಚೆ ನಡೆಯುತ್ತಿದೆ. ಅಷ್ಟೇ ಅಲ್ಲ, ಆರ್ಸಿಬಿಯಲ್ಲಿ ಕನ್ನಡಿಗರಿಗೆ ಬೆಲೆ ಇಲ್ವಾ? ಅನ್ನೋ ಆಕ್ರೋಶ ಮಾತುಗಳು ಕೂಡ ಕೇಳಿ ಬಂದಿವೆ.
Vijaykumar Vyshak had figures of 1/23 in four overs against KKR.
RCB decided to drop him from today’s game 🤷🏻♂️
— Sameer Allana (@HitmanCricket) April 2, 2024
ಚೆನ್ನಾಗಿ ಆಡಿದ್ರೂ ಕನ್ನಡಿಗನಿಗೆ ಅವಕಾಶ ನೀಡದ ಆರ್ಸಿಬಿ
ವಿಜಯ್ಕುಮಾರ್ ವೈಶಾಕ್ ಆರ್ಸಿಬಿ ತಂಡದ ಸ್ಟಾರ್ ಬೌಲರ್. ಇವರು ಕರ್ನಾಟಕ ತಂಡದ ಕ್ರಿಕೆಟಿಗ. ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಎಲ್ಲರೂ ರನ್ಗಳನ್ನು ಬಿಟ್ಟುಕೊಟ್ಟರೂ ನಮ್ಮ ಕರ್ನಾಟಕದ ಹುಡುಗ ವಿಜಯ್ ಮಾತ್ರ ತಾನು ಮಾಡಿದ 4 ಓವರ್ಗಳಲ್ಲಿ 1 ವಿಕೆಟ್ ತೆಗೆದು ಕೇವಲ 23 ರನ್ ಕೊಟ್ಟಿದ್ದ. ಅದೇ ಪಂದ್ಯದಲ್ಲಿ ಎಲ್ಲರೂ ಆವರೇಜ್ 40ಕ್ಕೂ ಹೆಚ್ಚು ರನ್ ಕೊಟ್ಟಿದ್ದರು. ಅಷ್ಟು ಅದ್ಭುತವಾಗಿ ಪ್ರದರ್ಶನ ನೀಡಿದ್ರೂ ಲಕ್ನೋ ವಿರುದ್ಧದ ಪಂದ್ಯದಲ್ಲಿ ವಿಜಯ್ಕುಮಾರ್ ವೈಶಾಕ್ಗೆ ಆರ್ಸಿಬಿ ಅವಕಾಶ ನೀಡಲಿಲ್ಲ. ಹಾಗಾಗಿ ಆರ್ಸಿಬಿ ವಿರುದ್ಧ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಚೆನ್ನಾಗಿ ಆಡುತ್ತಿದ್ದ ಕನ್ನಡಿಗನನ್ನು ಬೆಂಚ್ ಕಾಯಿಸಿದ್ದು ಎಷ್ಟು ಸರಿ? ಅನ್ನೋ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಹೀನಾಯ ಸೋಲು; ಪ್ಲೇ ಆಫ್ಗೆ ಹೋಗಲು ಆರ್ಸಿಬಿಗೆ ಅವಕಾಶ ಇದ್ಯಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ