ಶ್ರೀಲಂಕಾ ಪ್ರವಾಸಕ್ಕೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ..!
ಆರ್ಸಿಬಿ ಸ್ಟಾರ್ ಬ್ಯಾಟರ್ಗಿಲ್ಲ ಭಾರತ ತಂಡದಲ್ಲಿ ಅವಕಾಶ
ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಆರ್ಸಿಬಿ ಫ್ಯಾನ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮೋಸ ಮಾಡಿದೆ ಎಂದು ಆರ್ಸಿಬಿ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ರಜತ್ ಪಾಟೀದಾರ್ ಅವಕಾಶ ನೀಡದಿದ್ರೆ ಟೀಮ್ ಇಂಡಿಯಾಗೆ ನಷ್ಟ ಎಂದು ಟ್ವಿಟರ್ನಲ್ಲಿ ಭಾರೀ ಟ್ರೆಂಡ್ ಮಾಡುತ್ತಿದ್ದಾರೆ.
ಜೂನ್ 27ನೇ ತಾರೀಕಿನಿಂದ ಶ್ರೀಲಂಕಾ, ಟೀಮ್ ಇಂಡಿಯಾ ಮಧ್ಯೆ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಶುರುವಾಗಲಿದೆ. ಈಗಾಗಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಸೆಲೆಕ್ಷನ್ ಕಮಿಟಿ ಜತೆ ಚರ್ಚಿಸಿ ಅಳೆದು ತೂಗಿ ಬಲಿಷ್ಠ ತಂಡವನ್ನು ಪ್ರಕಟಿಸಿದ್ದಾರೆ. ಟಿ20 ಮತ್ತು ಏಕದಿನ ಸರಣಿಗೆ ಪ್ರಕಟವಾದ ತಂಡದಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಅವರಿಗೆ ಅವಕಾಶ ನೀಡಿಲ್ಲ. ಹಾಗಾಗಿ ಬಿಸಿಸಿಐ ವಿರುದ್ಧ ಆರ್ಸಿಬಿ ಫ್ಯಾನ್ಸ್ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.
ಯಾರು ಈ ರಜತ್ ಪಾಟಿದಾರ್..?
ರಜತ್ ಪಾಟಿದಾರ್ ಆರ್ಸಿಬಿ ತಂಡದ ಟಾಪ್ ಆರ್ಡರ್ ಬ್ಯಾಟರ್. ಇವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೇ ಅತೀ ವೇಗದ ಶತಕ ಸಿಡಿಸಿದ ಆಟಗಾರರ ಪೈಕಿ ಒಬ್ಬರು. ತನ್ನ ವಿಭಿನ್ನ ಶಾಟ್ಗಳಿಂದಲೇ ಫೇಮಸ್ ಆಗಿರೋ ರಜತ್ ಅದ್ಭುತ ಆಟಗಾರ. ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಾಗ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ಎಡವಿದ್ರು. ಆತ ನಿಜಕ್ಕೂ ಅದ್ಭುತ ಆಟಗಾರನಾಗಿದ್ದು, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.
ಇದನ್ನೂ ಓದಿ: ‘ನೀನು ಕ್ರಿಕೆಟರ್ ಆಗೋಕೆ ಲಾಯಕ್ಕಿಲ್ಲ, ರಾಜಕಾರಣಿ ಆಗು’- ರೋಹಿತ್ ವಿರುದ್ಧ ಬಹಿರಂಗ ಅಸಮಾಧಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶ್ರೀಲಂಕಾ ಪ್ರವಾಸಕ್ಕೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ..!
ಆರ್ಸಿಬಿ ಸ್ಟಾರ್ ಬ್ಯಾಟರ್ಗಿಲ್ಲ ಭಾರತ ತಂಡದಲ್ಲಿ ಅವಕಾಶ
ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಆರ್ಸಿಬಿ ಫ್ಯಾನ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮೋಸ ಮಾಡಿದೆ ಎಂದು ಆರ್ಸಿಬಿ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ರಜತ್ ಪಾಟೀದಾರ್ ಅವಕಾಶ ನೀಡದಿದ್ರೆ ಟೀಮ್ ಇಂಡಿಯಾಗೆ ನಷ್ಟ ಎಂದು ಟ್ವಿಟರ್ನಲ್ಲಿ ಭಾರೀ ಟ್ರೆಂಡ್ ಮಾಡುತ್ತಿದ್ದಾರೆ.
ಜೂನ್ 27ನೇ ತಾರೀಕಿನಿಂದ ಶ್ರೀಲಂಕಾ, ಟೀಮ್ ಇಂಡಿಯಾ ಮಧ್ಯೆ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಶುರುವಾಗಲಿದೆ. ಈಗಾಗಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಸೆಲೆಕ್ಷನ್ ಕಮಿಟಿ ಜತೆ ಚರ್ಚಿಸಿ ಅಳೆದು ತೂಗಿ ಬಲಿಷ್ಠ ತಂಡವನ್ನು ಪ್ರಕಟಿಸಿದ್ದಾರೆ. ಟಿ20 ಮತ್ತು ಏಕದಿನ ಸರಣಿಗೆ ಪ್ರಕಟವಾದ ತಂಡದಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ರಜತ್ ಪಾಟಿದಾರ್ ಅವರಿಗೆ ಅವಕಾಶ ನೀಡಿಲ್ಲ. ಹಾಗಾಗಿ ಬಿಸಿಸಿಐ ವಿರುದ್ಧ ಆರ್ಸಿಬಿ ಫ್ಯಾನ್ಸ್ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.
ಯಾರು ಈ ರಜತ್ ಪಾಟಿದಾರ್..?
ರಜತ್ ಪಾಟಿದಾರ್ ಆರ್ಸಿಬಿ ತಂಡದ ಟಾಪ್ ಆರ್ಡರ್ ಬ್ಯಾಟರ್. ಇವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೇ ಅತೀ ವೇಗದ ಶತಕ ಸಿಡಿಸಿದ ಆಟಗಾರರ ಪೈಕಿ ಒಬ್ಬರು. ತನ್ನ ವಿಭಿನ್ನ ಶಾಟ್ಗಳಿಂದಲೇ ಫೇಮಸ್ ಆಗಿರೋ ರಜತ್ ಅದ್ಭುತ ಆಟಗಾರ. ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಾಗ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ಎಡವಿದ್ರು. ಆತ ನಿಜಕ್ಕೂ ಅದ್ಭುತ ಆಟಗಾರನಾಗಿದ್ದು, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.
ಇದನ್ನೂ ಓದಿ: ‘ನೀನು ಕ್ರಿಕೆಟರ್ ಆಗೋಕೆ ಲಾಯಕ್ಕಿಲ್ಲ, ರಾಜಕಾರಣಿ ಆಗು’- ರೋಹಿತ್ ವಿರುದ್ಧ ಬಹಿರಂಗ ಅಸಮಾಧಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ