/newsfirstlive-kannada/media/post_attachments/wp-content/uploads/2024/08/karun_nair.jpg)
ಆರ್​ಸಿಬಿಯ ಮಾಜಿ ಪ್ಲೇಯರ್​, 2024ರ ಆಕ್ಷನ್​ನಲ್ಲಿ ಅನ್​ಸೋಲ್ಡ್​ ಆಗಿದ್ದ ಕರುಣ್ ನಾಯರ್ ಮಿಂಚಿನ ಬ್ಯಾಟಿಂಗ್ ಮಾಡಿದ್ದಾರೆ. ಮಹಾರಾಜ ​ಟ್ರೋಫಿಯ ಟಿ20 ಪಂದ್ಯದಲ್ಲಿ ಕೇವಲ 48 ಎಸೆತದಲ್ಲಿ ಅಮೋಘವಾದ ಸೆಂಚುರಿ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ:ಸಮೋಸ ತಿಂದ ಅನಾಥಾಶ್ರಮದ ಮೂವರು ವಿದ್ಯಾರ್ಥಿಗಳು ಸಾವು.. ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು
ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟೂರ್ನಿಯಲ್ಲಿ ಟಾಸ್ ಗೆದ್ದ ಮಂಗಳೂರು ಡ್ರಾಗನ್ಸ್ ಟೀಮ್​, ಮೈಸೂರು ವಾರಿಯರ್ಸ್ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್ ಮಾಡಲು ಆಗಮಿಸಿದ ಮೈಸೂರು ವಾರಿಯರ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ಸ್​ ವಿಫಲ ಬ್ಯಾಟಿಂಗ್ ಮಾಡಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಆಗಮಿಸಿದ ಕ್ಯಾಪ್ಟನ್​ ಕರುಣ್ ನಾಯರ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನ ಸೇಫ್ ಮಾಡಿದರು.
KARUN NAIR SHOW AT CHINNASWAMY STADIUM. ?
- 124* runs from just 48 balls including 13 fours & 9 sixes in the Maharaja Trophy by the Captain. ? ? pic.twitter.com/ViJ2LnL0mN
— Johns. (@CricCrazyJohns)
KARUN NAIR SHOW AT CHINNASWAMY STADIUM. 🥶
- 124* runs from just 48 balls including 13 fours & 9 sixes in the Maharaja Trophy by the Captain. 🤯 🔥 pic.twitter.com/ViJ2LnL0mN— Johns. (@CricCrazyJohns) August 19, 2024
">August 19, 2024
ಕ್ರೀಸ್​ಗೆ ಬರುತ್ತಿದ್ದಂತೆ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯರ್ ಕೇವಲ 27 ಎಸೆತದಲ್ಲಿ ಹಾಫ್​ಸೆಂಚುರಿ ಬಾರಿಸಿದರು. ಮಂಗಳೂರು ಬೌಲರ್​ಗಳನ್ನ ಬೇಟೆಯಾಡಿದ ನಾಯರ್ ಮುಂದಿನ 16 ಎಸೆತದಲ್ಲಿ ಸೆಂಚುರಿ ಸಿಡಿಸಿದರು. ಒಟ್ಟು 48 ಎಸೆತಗಳನ್ನು ಎದುರಿಸಿದ ಕರುಣ್ ನಾಯರ್, 9 ಆಕಾಶದೆತ್ತರ ಸಿಕ್ಸರ್ಸ್​, 13 ಬೌಂಡರಿ ಸಮೇತ 124 ರನ್​ ಚಚ್ಚಿ ಅಜೇಯರಾಗಿ ಉಳಿದರು. ಈ ಮೂಲಕ ಮೈಸೂರು ತಂಡ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿತು. ಈ ಟಾರ್ಗೆಟ್ ಬೆನ್ನತ್ತಿದ್ದ ಮಂಗಳೂರು ತಂಡ ಬ್ಯಾಟಿಂಗ್ ಮಾಡುವಾಗ ಮಳೆ ಬಂದಿದ್ದರಿಂದ 14 ಓವರ್​ಗಳಲ್ಲಿ 166 ರನ್​ಗಳ ಗುರಿ ನೀಡಲಾಗಿತ್ತು. ಆದರೆ ಮಂಗಳೂರು ಡ್ರಾಗನ್ಸ್ ಟೀಮ್ 138 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲೋಪ್ಪಿಕೊಂಡಿತು. ಈ ಮೂಲಕ ಮೈಸೂರು ವಾರಿಯರ್ಸ್ ತಂಡ 27 ರನ್​ಗಳ ಭರ್ಜರಿ ಜಯ ಸಾಧಿಸಿತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ