ಲಕ್ನೋ ಪ್ಲೇಯರ್ಸ್ ಚಿನ್ನಸ್ವಾಮಿಯಲ್ಲಿ ಅತಿರೇಕವಾಗಿ ವರ್ತಿಸಿದ್ದರು
ಆವೇಶ್ ಎಲ್ಮೆಟ್ ಎಸೆದ್ರೆ, ರವಿ ಬಿಷ್ಣೋಯಿ ವಿಶ್ವ ಗೆದ್ದಂತೆ ವರ್ತಿಸಿದ್ರು
ಕೈ ಸೆನ್ನೆ ಮಾಡಿ RCB ಫ್ಯಾನ್ಸ್ಗಳನ್ನ ಕಿಚಾಯಿಸಿದ್ದ ಗೌತಮ್ ಗಂಭೀರ್
ಲಕ್ನೋ ಸೂಪರ್ ಜೈಂಟ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಇಂದಿನ ಪಂದ್ಯ, ಕೇವಲ ಪಂದ್ಯ ಮಾತ್ರವಲ್ಲ, ಇದೊಂದು ಸೇಡಿನ ಸಮರ. ರಾಹುಲ್ ಬಳಗದ ಎದುರು ಸೇಡು ತೀರಿಸಿಕೊಳ್ಳಲು ಕಿಂಗ್ ಕೊಹ್ಲಿ ತೊಡೆ ತಟ್ಟಿ ಸಜ್ಜಾಗಿದ್ದಾರೆ. ಹೀಗಾಗಿ ಹೋಮ್ಗ್ರೌಂಡ್ನಲ್ಲಿ ವಿರಾಟರೂಪ ದರ್ಶನವಾಗೋದು ಪಕ್ಕಾ.
ಐಪಿಎಲ್ ಟೂರ್ನಿಯ 15ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿಂದು ಮೆಗಾ ಕದನ ನಡೆಯಲಿದ್ದು ಆರ್ಸಿಬಿ -ಲಕ್ನೋ ತಂಡಗಳು ಮುಖಾಮುಖಿಯಾಗ್ತಿವೆ. ಈ ಪಂದ್ಯವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಯಾಕಂದ್ರೆ, ಇದು ಸೇಡಿನ ಸಮರ. ರಣಕಣದಲ್ಲಿರೋದು ವಾರಿಯರ್ ವಿರಾಟ್ ಕೊಹ್ಲಿ.
ಏಪ್ರಿಲ್ 10, 2023
ಚಿನ್ನಸ್ವಾಮಿಯಲ್ಲಿ ಲಕ್ನೋ ಆಟಗಾರರ ಅತಿರೇಕದ ಸಂಭ್ರಮಾಚರಣೆ
ಕಳೆದ ಸೀಸನ್ನ 15 ಪಂದ್ಯದಲ್ಲಿ ಲಕ್ನೋ- ಆರ್ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಮುಖಾಮುಖಿ ಆಗಿದ್ವು. ಆರ್ಸಿಬಿ 212 ರನ್ಗಳ ಬಿಗ್ ಟಾರ್ಗೆಟ್ ಸೆಟ್ ಮಾಡಿತ್ತು. ಈ ಟಾರ್ಗೆಟ್ ಅನ್ನ ರಣರೋಚಕ ರೀತಿಯಲ್ಲಿ ಬೆನ್ನತ್ತಿದ ಲಕ್ನೋ ಗೆಲುವಿನ ನಗಾರಿ ಬಾರಿಸಿತು.
ಗೆದ್ದು ಸುಮ್ಮನಾಗಿದ್ರೆ ಎಲ್ಲ ಸರಿ ಇರ್ತಾ ಇತ್ತು. ಆದ್ರೆ, ಲಕ್ನೋ ಆಟಗಾರರು ಅತಿರೇಕದ ಸಂಭ್ರಮಾಚರಣೆ ಮಾಡಿದ್ರು. ವೇಗಿ ಆವೇಶ್ ಎಲ್ಮೆಟ್ ಎಸೆದು ಸಂಭ್ರಮಿಸಿದ್ರೆ, ರವಿ ಬಿಷ್ಣೋಯಿ ವಿಶ್ವ ಗೆದ್ದವನಂತೆ ಎಗರಾಡಿದ್ದರು. ಇನ್ನೂ ಒಂದೆಜ್ಜೆ ಮುಂದೆ ಹೋದ ಅಂದಿನ ಲಕ್ನೋ ಮೆಂಟರ್ ಗೌತಮ್ ಗಂಭೀರ್, ಕೈ ಸೆನ್ನೆ ಮೂಲಕ ಆರ್ಸಿಬಿ ಅಭಿಮಾನಿಗಳನ್ನ ಕಿಚಾಯಿಸಿದ್ದರು.
ಲಕ್ನೋದಲ್ಲಿ ಜ್ವಾಲೆಯಾಗಿ ಉರಿದ ಚಿನ್ನಸ್ವಾಮಿಯಲ್ಲಿ ಹೊತ್ತಿದ ಕಿಡಿ
ಅಂದು ಚಿನ್ನಸ್ವಾಮಿಯಲ್ಲಿ ಲಕ್ನೋ ಆಟಗಾರರ ಅತಿರೇಕವನ್ನ ನೋಡಿಯು ನೋಡದಂತೆ ಕೊಹ್ಲಿ ಹಾಗೂ ಆರ್ಸಿಬಿ ಆಟಗಾರರು ಸುಮ್ಮನಿದ್ದರು. ಆದ್ರೆ, ಸೀಸನ್ನ 2ನೇ ಪಂದ್ಯವನ್ನಾಡಲು ಲಕ್ನೋಗೆ ಕಾಲಿಟ್ಟಾಗ ಬಡ್ಡಿ ಸಮೇತ ವಾಪಾಸ್ ಕೊಟ್ಟಿದ್ರು. ಚಿನ್ನಸ್ವಾಮಿದಲ್ಲಿ ಹೊತ್ತಿದ್ದ ಕಿಡಿ ಲಕ್ನೋದಲ್ಲಿ ಜ್ವಾಲೆಯಾಗಿ ಉರಿದಿತ್ತು.
ಪಂದ್ಯದಲ್ಲಿ ಕೇವಲ 127 ರನ್ಗಳ ಸಾಧಾರಣ ಟಾರ್ಗೆಟ್ ಅನ್ನ ಆರ್ಸಿಬಿ ಅಚ್ಚರಿಯ ರೀತಿಯಲ್ಲಿ ಡಿಫೆಂಡ್ ಮಾಡಿಕೊಳ್ತು. ಒಂದೊಂದು ವಿಕೆಟ್ಗೂ ಕಿಂಗ್ ಕೊಹ್ಲಿ ಅಗ್ರೆಸ್ಸೀವ್ ಸೆಲಬ್ರೇಷನ್ ಮಾಡಿದ್ರು. ಹೋಮ್ಗ್ರೌಂಡ್ನಲ್ಲಿ ಲಕ್ನೋ ಹೀನಾಯ ಸೋಲಿಗೆ ಗುರಿಯಾಯ್ತು. ಈ ಸೆಲಬ್ರೇಷನ್ ನೋಡಿ ಲಕ್ನೋ ಆಟಗಾರರು ಯಾವ ಮಟ್ಟಕ್ಕೆ ಹತಾಶರಾಗಿದ್ರು ಅಂದ್ರೆ, ವೇಗಿ ನವೀನ್ ಉಲ್ ಹಕ್, ಕೊಹ್ಲಿಯನ್ನ ಸುಖಾಸುಮ್ಮನೆ ಕೆಣಕಿದ್ರು. ಮೆಂಟರ್ ಗೌತಮ್ ಗಂಭೀರ್ ಕಾಲ್ಕೆರೆದು ಜಗಳಕ್ಕೆ ಬಂದಿದ್ರು. ಕ್ರಿಕೆಟ್ ಫೀಲ್ಡ್ ವಾರ್ ಫೀಲ್ಡ್ ಆಗಿ ಬದಲಾಗಿತ್ತು.
ಇದನ್ನೂ ಓದಿ: ವೆಬ್ಸೈಟ್ ಮೂಲಕ ಫೇಕ್ IPL ಟಿಕೆಟ್ ಮಾರಾಟ.. ಸೈಬರ್ ಪೊಲೀಸರಿಂದ 7 ಆರೋಪಿಗಳು ಅರೆಸ್ಟ್
ಚಿನ್ನಸ್ವಾಮಿಯಲ್ಲಿಂದು ಸೇಡಿನ ಸಮರಕ್ಕೆ ಕೌಂಟ್ಡೌನ್.!
ಕಳೆದ ಸೀಸನ್ನಿಂದ ಈ ಸೀಸನ್ಗೆ ಎಲ್ಲ ಬದಲಾಗಿದೆ. ಲಕ್ನೋ ಮೆಂಟರ್ ಗೌತಮ್ ಗಂಭೀರ್ ಕೆಕೆಆರ್ ಸೇರಿದ್ದಾರೆ. ನವೀನ್ ಉಲ್ ಹಕ್- ವಿರಾಟ್ ಕೊಹ್ಲಿ ದುಷ್ಮನಿ ಮರೆತು ಫ್ರೆಂಡ್ಸ್ ಆಗಿದ್ದಾರೆ. ಆದ್ರೆ, ಆ ಗಾಯ ಮಾತ್ರ ಮಾಗಿಲ್ಲ. ತವರಿನ ಲಾಯಲ್ ಅಭಿಮಾನಿಗಳ ಎದುರಾದ ಅವಮಾನದ ನೋವು ಹಾಗೇ ಇದೆ. ಇಂದು ಆ ಅಪಮಾನದ ಸೇಡನ್ನ ತೀರಿಸಿಕೊಳ್ಳಲು ಕಿಂಗ್ ಕೊಹ್ಲಿ ಕಾತರರಾಗಿದ್ದಾರೆ.
ಒಂದೆಡೆ ಕೊಹ್ಲಿ ಕಳೆದ ಸೀಸನ್ನ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ರೆ, ಇನ್ನೊಂದೆಡೆ ಕೆ.ಎಲ್ ರಾಹುಲ್ ಆಡಿ ಬೆಳೆದ ಸ್ಟೇಡಿಯಂನಲ್ಲಿ ಗೆದ್ದು ಬೀಗೋ ವಿಶ್ವಾಸದಲ್ಲಿದ್ದಾರೆ. ಈ ಹಿಂದಿನ ಇತಿಹಾಸ, ಆಟಗಾರರಲ್ಲಿರೋ ಜಿದ್ದು ಪಂದ್ಯಕ್ಕೆ ಹೈವೋಲ್ಟೆಜ್ ಟಚ್ ನೀಡಿದೆ. ಬ್ಯಾಟಲ್ ಪೀಲ್ಡ್ ಏನಾಗುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಲಕ್ನೋ ಪ್ಲೇಯರ್ಸ್ ಚಿನ್ನಸ್ವಾಮಿಯಲ್ಲಿ ಅತಿರೇಕವಾಗಿ ವರ್ತಿಸಿದ್ದರು
ಆವೇಶ್ ಎಲ್ಮೆಟ್ ಎಸೆದ್ರೆ, ರವಿ ಬಿಷ್ಣೋಯಿ ವಿಶ್ವ ಗೆದ್ದಂತೆ ವರ್ತಿಸಿದ್ರು
ಕೈ ಸೆನ್ನೆ ಮಾಡಿ RCB ಫ್ಯಾನ್ಸ್ಗಳನ್ನ ಕಿಚಾಯಿಸಿದ್ದ ಗೌತಮ್ ಗಂಭೀರ್
ಲಕ್ನೋ ಸೂಪರ್ ಜೈಂಟ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಇಂದಿನ ಪಂದ್ಯ, ಕೇವಲ ಪಂದ್ಯ ಮಾತ್ರವಲ್ಲ, ಇದೊಂದು ಸೇಡಿನ ಸಮರ. ರಾಹುಲ್ ಬಳಗದ ಎದುರು ಸೇಡು ತೀರಿಸಿಕೊಳ್ಳಲು ಕಿಂಗ್ ಕೊಹ್ಲಿ ತೊಡೆ ತಟ್ಟಿ ಸಜ್ಜಾಗಿದ್ದಾರೆ. ಹೀಗಾಗಿ ಹೋಮ್ಗ್ರೌಂಡ್ನಲ್ಲಿ ವಿರಾಟರೂಪ ದರ್ಶನವಾಗೋದು ಪಕ್ಕಾ.
ಐಪಿಎಲ್ ಟೂರ್ನಿಯ 15ನೇ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿಂದು ಮೆಗಾ ಕದನ ನಡೆಯಲಿದ್ದು ಆರ್ಸಿಬಿ -ಲಕ್ನೋ ತಂಡಗಳು ಮುಖಾಮುಖಿಯಾಗ್ತಿವೆ. ಈ ಪಂದ್ಯವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಯಾಕಂದ್ರೆ, ಇದು ಸೇಡಿನ ಸಮರ. ರಣಕಣದಲ್ಲಿರೋದು ವಾರಿಯರ್ ವಿರಾಟ್ ಕೊಹ್ಲಿ.
ಏಪ್ರಿಲ್ 10, 2023
ಚಿನ್ನಸ್ವಾಮಿಯಲ್ಲಿ ಲಕ್ನೋ ಆಟಗಾರರ ಅತಿರೇಕದ ಸಂಭ್ರಮಾಚರಣೆ
ಕಳೆದ ಸೀಸನ್ನ 15 ಪಂದ್ಯದಲ್ಲಿ ಲಕ್ನೋ- ಆರ್ಸಿಬಿ ಚಿನ್ನಸ್ವಾಮಿ ಮೈದಾನದಲ್ಲಿ ಮುಖಾಮುಖಿ ಆಗಿದ್ವು. ಆರ್ಸಿಬಿ 212 ರನ್ಗಳ ಬಿಗ್ ಟಾರ್ಗೆಟ್ ಸೆಟ್ ಮಾಡಿತ್ತು. ಈ ಟಾರ್ಗೆಟ್ ಅನ್ನ ರಣರೋಚಕ ರೀತಿಯಲ್ಲಿ ಬೆನ್ನತ್ತಿದ ಲಕ್ನೋ ಗೆಲುವಿನ ನಗಾರಿ ಬಾರಿಸಿತು.
ಗೆದ್ದು ಸುಮ್ಮನಾಗಿದ್ರೆ ಎಲ್ಲ ಸರಿ ಇರ್ತಾ ಇತ್ತು. ಆದ್ರೆ, ಲಕ್ನೋ ಆಟಗಾರರು ಅತಿರೇಕದ ಸಂಭ್ರಮಾಚರಣೆ ಮಾಡಿದ್ರು. ವೇಗಿ ಆವೇಶ್ ಎಲ್ಮೆಟ್ ಎಸೆದು ಸಂಭ್ರಮಿಸಿದ್ರೆ, ರವಿ ಬಿಷ್ಣೋಯಿ ವಿಶ್ವ ಗೆದ್ದವನಂತೆ ಎಗರಾಡಿದ್ದರು. ಇನ್ನೂ ಒಂದೆಜ್ಜೆ ಮುಂದೆ ಹೋದ ಅಂದಿನ ಲಕ್ನೋ ಮೆಂಟರ್ ಗೌತಮ್ ಗಂಭೀರ್, ಕೈ ಸೆನ್ನೆ ಮೂಲಕ ಆರ್ಸಿಬಿ ಅಭಿಮಾನಿಗಳನ್ನ ಕಿಚಾಯಿಸಿದ್ದರು.
ಲಕ್ನೋದಲ್ಲಿ ಜ್ವಾಲೆಯಾಗಿ ಉರಿದ ಚಿನ್ನಸ್ವಾಮಿಯಲ್ಲಿ ಹೊತ್ತಿದ ಕಿಡಿ
ಅಂದು ಚಿನ್ನಸ್ವಾಮಿಯಲ್ಲಿ ಲಕ್ನೋ ಆಟಗಾರರ ಅತಿರೇಕವನ್ನ ನೋಡಿಯು ನೋಡದಂತೆ ಕೊಹ್ಲಿ ಹಾಗೂ ಆರ್ಸಿಬಿ ಆಟಗಾರರು ಸುಮ್ಮನಿದ್ದರು. ಆದ್ರೆ, ಸೀಸನ್ನ 2ನೇ ಪಂದ್ಯವನ್ನಾಡಲು ಲಕ್ನೋಗೆ ಕಾಲಿಟ್ಟಾಗ ಬಡ್ಡಿ ಸಮೇತ ವಾಪಾಸ್ ಕೊಟ್ಟಿದ್ರು. ಚಿನ್ನಸ್ವಾಮಿದಲ್ಲಿ ಹೊತ್ತಿದ್ದ ಕಿಡಿ ಲಕ್ನೋದಲ್ಲಿ ಜ್ವಾಲೆಯಾಗಿ ಉರಿದಿತ್ತು.
ಪಂದ್ಯದಲ್ಲಿ ಕೇವಲ 127 ರನ್ಗಳ ಸಾಧಾರಣ ಟಾರ್ಗೆಟ್ ಅನ್ನ ಆರ್ಸಿಬಿ ಅಚ್ಚರಿಯ ರೀತಿಯಲ್ಲಿ ಡಿಫೆಂಡ್ ಮಾಡಿಕೊಳ್ತು. ಒಂದೊಂದು ವಿಕೆಟ್ಗೂ ಕಿಂಗ್ ಕೊಹ್ಲಿ ಅಗ್ರೆಸ್ಸೀವ್ ಸೆಲಬ್ರೇಷನ್ ಮಾಡಿದ್ರು. ಹೋಮ್ಗ್ರೌಂಡ್ನಲ್ಲಿ ಲಕ್ನೋ ಹೀನಾಯ ಸೋಲಿಗೆ ಗುರಿಯಾಯ್ತು. ಈ ಸೆಲಬ್ರೇಷನ್ ನೋಡಿ ಲಕ್ನೋ ಆಟಗಾರರು ಯಾವ ಮಟ್ಟಕ್ಕೆ ಹತಾಶರಾಗಿದ್ರು ಅಂದ್ರೆ, ವೇಗಿ ನವೀನ್ ಉಲ್ ಹಕ್, ಕೊಹ್ಲಿಯನ್ನ ಸುಖಾಸುಮ್ಮನೆ ಕೆಣಕಿದ್ರು. ಮೆಂಟರ್ ಗೌತಮ್ ಗಂಭೀರ್ ಕಾಲ್ಕೆರೆದು ಜಗಳಕ್ಕೆ ಬಂದಿದ್ರು. ಕ್ರಿಕೆಟ್ ಫೀಲ್ಡ್ ವಾರ್ ಫೀಲ್ಡ್ ಆಗಿ ಬದಲಾಗಿತ್ತು.
ಇದನ್ನೂ ಓದಿ: ವೆಬ್ಸೈಟ್ ಮೂಲಕ ಫೇಕ್ IPL ಟಿಕೆಟ್ ಮಾರಾಟ.. ಸೈಬರ್ ಪೊಲೀಸರಿಂದ 7 ಆರೋಪಿಗಳು ಅರೆಸ್ಟ್
ಚಿನ್ನಸ್ವಾಮಿಯಲ್ಲಿಂದು ಸೇಡಿನ ಸಮರಕ್ಕೆ ಕೌಂಟ್ಡೌನ್.!
ಕಳೆದ ಸೀಸನ್ನಿಂದ ಈ ಸೀಸನ್ಗೆ ಎಲ್ಲ ಬದಲಾಗಿದೆ. ಲಕ್ನೋ ಮೆಂಟರ್ ಗೌತಮ್ ಗಂಭೀರ್ ಕೆಕೆಆರ್ ಸೇರಿದ್ದಾರೆ. ನವೀನ್ ಉಲ್ ಹಕ್- ವಿರಾಟ್ ಕೊಹ್ಲಿ ದುಷ್ಮನಿ ಮರೆತು ಫ್ರೆಂಡ್ಸ್ ಆಗಿದ್ದಾರೆ. ಆದ್ರೆ, ಆ ಗಾಯ ಮಾತ್ರ ಮಾಗಿಲ್ಲ. ತವರಿನ ಲಾಯಲ್ ಅಭಿಮಾನಿಗಳ ಎದುರಾದ ಅವಮಾನದ ನೋವು ಹಾಗೇ ಇದೆ. ಇಂದು ಆ ಅಪಮಾನದ ಸೇಡನ್ನ ತೀರಿಸಿಕೊಳ್ಳಲು ಕಿಂಗ್ ಕೊಹ್ಲಿ ಕಾತರರಾಗಿದ್ದಾರೆ.
ಒಂದೆಡೆ ಕೊಹ್ಲಿ ಕಳೆದ ಸೀಸನ್ನ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ರೆ, ಇನ್ನೊಂದೆಡೆ ಕೆ.ಎಲ್ ರಾಹುಲ್ ಆಡಿ ಬೆಳೆದ ಸ್ಟೇಡಿಯಂನಲ್ಲಿ ಗೆದ್ದು ಬೀಗೋ ವಿಶ್ವಾಸದಲ್ಲಿದ್ದಾರೆ. ಈ ಹಿಂದಿನ ಇತಿಹಾಸ, ಆಟಗಾರರಲ್ಲಿರೋ ಜಿದ್ದು ಪಂದ್ಯಕ್ಕೆ ಹೈವೋಲ್ಟೆಜ್ ಟಚ್ ನೀಡಿದೆ. ಬ್ಯಾಟಲ್ ಪೀಲ್ಡ್ ಏನಾಗುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ