ಯಾರಿಗಾದ್ರೂ ಮನೆ ಬಾಡಿಗೆ ನೀಡುವಾಗ ಎಚ್ಚರ
ಬಾಡಿಗೆ ಕೇಳುವಾಗ ನಿಮ್ಮ ಪ್ರಾಣ ಹೋಗಬಹುದು
ಬೆಂಗಳೂರಿನಲ್ಲಿ ನಡೆದಿದೆ ಒಂದು ಭೀಕರ ಕೃತ್ಯ..!
ಬೆಂಗಳೂರು: ಮನೆ ಬಾಡಿಗೆ ಕೊಡೋ ಮುನ್ನ ಸ್ವಲ್ಪ ಯೋಚ್ನೆ ಮಾಡಿ. ಇಲ್ಲ ಅಂದ್ರೆ ಗಂಡಾಂತರ ಕಟ್ಟಿಟ್ಟ ಬುತ್ತಿ. ಈಕೆ ಹೆಸ್ರು ಶ್ರೀದೇವಿ. ಕಳೆದ 16 ವರ್ಷಗಳಿಂದ ಈಕೆ ಮುನೇಶ್ವರ ನಗರದಲ್ಲಿ ಫಯಾಜ್ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದಳು. ಬಿಲ್ಡಿಂಗ್ ಓನರ್ ಫಯಾಜ್ ವಿದೇಶದಲ್ಲಿ ನೆಲೆಸಿದ್ದರಿಂದ ಶ್ರೀದೇವಿ ಪ್ರತಿ ತಿಂಗಳ ಬಾಡಿಗೆಯನ್ನ ಕಲೆಕ್ಟ್ ಮಾಡಿ ಓನರ್ಗೆ ಟ್ರಾನ್ಸ್ಫರ್ ಮಾಡುತ್ತಿದ್ದಳು.
ಎಂದಿನಂತೆ ಅಂದೂ ಕೂಡ ರೆಂಟ್ ಕಲೆಕ್ಟ್ ಮಾಡಲು ಹೋದಲು ಶ್ರೀದೇವಿ. ಅದೇ ಬಿಲ್ಡಿಂಗ್ನಲ್ಲಿ ವಾಸವಾಗಿದ್ದ ನಜೀರ್ ಫ್ಯಾಮಿಲಿ, ರೆಂಟ್ ಕೇಳ್ತೀಯಾ ಎಂದು ತರಕಾರಿ ಕಟ್ ಮಾಡೋ ಚಾಕುವಿನಿಂದ ಶ್ರೀದೇವಿ ಬಾಯಿ, ಕೈಗೆ ಇರಿದರು. ಮತ್ತೆ ಬಾಡಿಗೆ ಕೇಳಿದ್ರೆ ಜೀವ ತೆಗೆಯೋದಾಗಿ ಬೆದರಿಕೆಯೊಡ್ಡಿ ರೌಡಿಸಂ ನಡೆಸಿದ್ದಾರೆ.
ಈ ಸಂಬಂಧ ಬಂಡೆಪಾಳ್ಯ ಠಾಣೆ ಮೆಟ್ಟಿಲೇರಿದ ಶ್ರೀದೇವಿಗೆ ಅಲ್ಲಿ ಅನ್ಯಾಯವಾಗಿತ್ತಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಣ ಕೇಳಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ.
ಸಾಮಾಜಿಕ ಕಾರ್ಯಕರ್ತ, ಶ್ರೀದೇವಿ ಸಂಬಂಧಿಕರ ಮಧ್ಯೆ ನಡೆದ ಸಂಭಾಷಣೆ ಹೀಗಿದೆ..!
ಸಾಮಾಜಿಕ ಕಾರ್ಯಕರ್ತ : ಬಂಡೆಪಾಳ್ಯ ಸ್ಟೇಷನ್ನಿಂದ ಏನ್ ಹೇಳ್ತಿದ್ದಾರೆ ನಿಮ್ಗೆ..?
ಶ್ರೀದೇವಿ ಸಂಬಂಧಿಕ : ಅದೇ… ಯಾರೋ ಹುಡುಗ ಬಂದು, ನಿಮ್ಮ ಪೈಲ್ ಬಿಸಾಕ್ತೀವಿ ಅಂದ
ಸಾಮಾಜಿಕ ಕಾರ್ಯಕರ್ತ : ಹಾ..
ಶ್ರೀದೇವಿ ಸಂಬಂಧಿಕ : 6 ಸಾವಿರ ದುಡ್ಡು ಕೊಡಿ, ನಾವ್ ಕೈಯಿಂದ ಕಾಸ್ ಹಾಕಿ ಕೋರ್ಟ್ಗೆ ಕಳುಹಿಸೋದಕ್ಕೆ ಆಗಲ್ಲ. ಜೆರಾಕ್ಸ್ಗಳೆಲ್ಲಾ ಮಾಡಿಸಬೇಕು.
ಸಾಮಾಜಿಕ ಕಾರ್ಯಕರ್ತ : ಹುಂ
ಶ್ರೀದೇವಿ ಸಂಬಂಧಿಕ : ದುಡ್ಡು ಕೊಡಿ ಅಂತ ಬೆದರಿಕೆ ಹಾಕ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತ : 6 ಸಾವಿರ ದುಡ್ಡು..?
ಶ್ರೀದೇವಿ ಸಂಬಂಧಿಕ : 6 ಸಾವಿರ ದುಡ್ಡು ಕೊಡ್ಬೇಕು.. ಇಲ್ಲ ಅಂದ್ರೆ ನಿನ್ ಕೇಸ್ನ ಕೋರ್ಟ್ಗೆ ಕಳಿಸೋದಿಲ್ಲ. ಬಿಸಾಕ್ತೀನಿ, ಎಲ್ಲಾ ಎತ್ಕೊಂಡು ಹೋಗು ಫೈಲ್ಗಳನ್ನೆಲ್ಲ ಅಂದ್ರು
ಸಾಮಾಜಿಕ ಕಾರ್ಯಕರ್ತ : ಹುಂ
ಒಟ್ಟಾರೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸದೇ ದಾಖಲಾಗಿರೋ ಎಫ್ಐಆರ್ನಲ್ಲಿ ಐಪಿಸಿ ಸೆಕ್ಷನ್ 307 ಅಡಿ, ಅಂದ್ರೆ ಕೊಲೆಯತ್ನ ಕೇಸ್ ಅನ್ನೂ ಕೂಡ ಉಲ್ಲೇಖಿಸದೇ ಇರುವುದು ಇದೀಗ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯಾರಿಗಾದ್ರೂ ಮನೆ ಬಾಡಿಗೆ ನೀಡುವಾಗ ಎಚ್ಚರ
ಬಾಡಿಗೆ ಕೇಳುವಾಗ ನಿಮ್ಮ ಪ್ರಾಣ ಹೋಗಬಹುದು
ಬೆಂಗಳೂರಿನಲ್ಲಿ ನಡೆದಿದೆ ಒಂದು ಭೀಕರ ಕೃತ್ಯ..!
ಬೆಂಗಳೂರು: ಮನೆ ಬಾಡಿಗೆ ಕೊಡೋ ಮುನ್ನ ಸ್ವಲ್ಪ ಯೋಚ್ನೆ ಮಾಡಿ. ಇಲ್ಲ ಅಂದ್ರೆ ಗಂಡಾಂತರ ಕಟ್ಟಿಟ್ಟ ಬುತ್ತಿ. ಈಕೆ ಹೆಸ್ರು ಶ್ರೀದೇವಿ. ಕಳೆದ 16 ವರ್ಷಗಳಿಂದ ಈಕೆ ಮುನೇಶ್ವರ ನಗರದಲ್ಲಿ ಫಯಾಜ್ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದಳು. ಬಿಲ್ಡಿಂಗ್ ಓನರ್ ಫಯಾಜ್ ವಿದೇಶದಲ್ಲಿ ನೆಲೆಸಿದ್ದರಿಂದ ಶ್ರೀದೇವಿ ಪ್ರತಿ ತಿಂಗಳ ಬಾಡಿಗೆಯನ್ನ ಕಲೆಕ್ಟ್ ಮಾಡಿ ಓನರ್ಗೆ ಟ್ರಾನ್ಸ್ಫರ್ ಮಾಡುತ್ತಿದ್ದಳು.
ಎಂದಿನಂತೆ ಅಂದೂ ಕೂಡ ರೆಂಟ್ ಕಲೆಕ್ಟ್ ಮಾಡಲು ಹೋದಲು ಶ್ರೀದೇವಿ. ಅದೇ ಬಿಲ್ಡಿಂಗ್ನಲ್ಲಿ ವಾಸವಾಗಿದ್ದ ನಜೀರ್ ಫ್ಯಾಮಿಲಿ, ರೆಂಟ್ ಕೇಳ್ತೀಯಾ ಎಂದು ತರಕಾರಿ ಕಟ್ ಮಾಡೋ ಚಾಕುವಿನಿಂದ ಶ್ರೀದೇವಿ ಬಾಯಿ, ಕೈಗೆ ಇರಿದರು. ಮತ್ತೆ ಬಾಡಿಗೆ ಕೇಳಿದ್ರೆ ಜೀವ ತೆಗೆಯೋದಾಗಿ ಬೆದರಿಕೆಯೊಡ್ಡಿ ರೌಡಿಸಂ ನಡೆಸಿದ್ದಾರೆ.
ಈ ಸಂಬಂಧ ಬಂಡೆಪಾಳ್ಯ ಠಾಣೆ ಮೆಟ್ಟಿಲೇರಿದ ಶ್ರೀದೇವಿಗೆ ಅಲ್ಲಿ ಅನ್ಯಾಯವಾಗಿತ್ತಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಣ ಕೇಳಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ.
ಸಾಮಾಜಿಕ ಕಾರ್ಯಕರ್ತ, ಶ್ರೀದೇವಿ ಸಂಬಂಧಿಕರ ಮಧ್ಯೆ ನಡೆದ ಸಂಭಾಷಣೆ ಹೀಗಿದೆ..!
ಸಾಮಾಜಿಕ ಕಾರ್ಯಕರ್ತ : ಬಂಡೆಪಾಳ್ಯ ಸ್ಟೇಷನ್ನಿಂದ ಏನ್ ಹೇಳ್ತಿದ್ದಾರೆ ನಿಮ್ಗೆ..?
ಶ್ರೀದೇವಿ ಸಂಬಂಧಿಕ : ಅದೇ… ಯಾರೋ ಹುಡುಗ ಬಂದು, ನಿಮ್ಮ ಪೈಲ್ ಬಿಸಾಕ್ತೀವಿ ಅಂದ
ಸಾಮಾಜಿಕ ಕಾರ್ಯಕರ್ತ : ಹಾ..
ಶ್ರೀದೇವಿ ಸಂಬಂಧಿಕ : 6 ಸಾವಿರ ದುಡ್ಡು ಕೊಡಿ, ನಾವ್ ಕೈಯಿಂದ ಕಾಸ್ ಹಾಕಿ ಕೋರ್ಟ್ಗೆ ಕಳುಹಿಸೋದಕ್ಕೆ ಆಗಲ್ಲ. ಜೆರಾಕ್ಸ್ಗಳೆಲ್ಲಾ ಮಾಡಿಸಬೇಕು.
ಸಾಮಾಜಿಕ ಕಾರ್ಯಕರ್ತ : ಹುಂ
ಶ್ರೀದೇವಿ ಸಂಬಂಧಿಕ : ದುಡ್ಡು ಕೊಡಿ ಅಂತ ಬೆದರಿಕೆ ಹಾಕ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತ : 6 ಸಾವಿರ ದುಡ್ಡು..?
ಶ್ರೀದೇವಿ ಸಂಬಂಧಿಕ : 6 ಸಾವಿರ ದುಡ್ಡು ಕೊಡ್ಬೇಕು.. ಇಲ್ಲ ಅಂದ್ರೆ ನಿನ್ ಕೇಸ್ನ ಕೋರ್ಟ್ಗೆ ಕಳಿಸೋದಿಲ್ಲ. ಬಿಸಾಕ್ತೀನಿ, ಎಲ್ಲಾ ಎತ್ಕೊಂಡು ಹೋಗು ಫೈಲ್ಗಳನ್ನೆಲ್ಲ ಅಂದ್ರು
ಸಾಮಾಜಿಕ ಕಾರ್ಯಕರ್ತ : ಹುಂ
ಒಟ್ಟಾರೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸದೇ ದಾಖಲಾಗಿರೋ ಎಫ್ಐಆರ್ನಲ್ಲಿ ಐಪಿಸಿ ಸೆಕ್ಷನ್ 307 ಅಡಿ, ಅಂದ್ರೆ ಕೊಲೆಯತ್ನ ಕೇಸ್ ಅನ್ನೂ ಕೂಡ ಉಲ್ಲೇಖಿಸದೇ ಇರುವುದು ಇದೀಗ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ