newsfirstkannada.com

ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ದರ್ಶನ್, ಪವಿತ್ರ ಗೌಡ ಸೇರಿ ಮತ್ತೆ ಮೂವರ ಅರೆಸ್ಟ್; ಮುಂದೇನು?

Share :

Published June 11, 2024 at 3:39pm

    ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗೆ 13 ಮಂದಿ ಆರೋಪಿಗಳು ಅರೆಸ್ಟ್

    ದರ್ಶನ್, ಪವಿತ್ರಗೌಡ ಅವರಿಗೆ ಪೊಲೀಸ್ ಠಾಣೆಯಲ್ಲಿ ಮೆಡಿಕಲ್ ಟೆಸ್ಟ್

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪರಮಾಪ್ತರಿಗೆ ಸಂಕಷ್ಟ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ಚುರುಕಾಗಿದೆ. ನಟ ದರ್ಶನ್ ಅವರನ್ನು ಬಂಧಿಸಿದ ಬಳಿಕ ಮತ್ತಷ್ಟು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಮತ್ತಷ್ಟು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಮರ್ಮಾಂಗಕ್ಕೆ ಹೊಡೆತ, ಮೂಗು ಓಪನ್, ಪಕ್ಕೆಲುಬು ಕಟ್‌; ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ! 

ರೇಣುಕಾಸ್ವಾಮಿ ಕಿಡ್ನ್ಯಾಪ್ ಹಾಗೂ ಕೊಲೆ ಮಾಡಿದ ಈ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಒಟ್ಟು 13 ಮಂದಿಯನ್ನ ಬಂಧನ ಮಾಡಲಾಗಿದೆ. ದರ್ಶನ್ ಅವರ ಜೊತೆಗೆ ಅರೆಸ್ಟ್ ಮಾಡಲಾಗಿರುವ 13 ಮಂದಿಯ ಮೇಲೂ ರೇಣುಕಾಚಾರ್ಯ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ.

ಕೊಲೆ ಪ್ರಕರಣದಲ್ಲಿ ಬಂಧಿತರು

  1. ದರ್ಶನ್ ತೂಗುದೀಪ – ಚಾಲೆಂಜಿಂಗ್ ಸ್ಟಾರ್
  2. ಪವಿತ್ರಾ ಗೌಡ – ದರ್ಶನ್ ಸ್ನೇಹಿತೆ
  3. ವಿನಯ್ ವಿ – ಜಯಣ್ಣ ಫಾರ್ಮ್​ ಹೌಸ್​
  4. ನಾಗರಾಜು ಆರ್​ – ರಾಮಕೃಷ್ಣ ನಗರ ಮೈಸೂರು
  5. ಲಕ್ಷ್ಮಣ್​ ಎಂ – ಆರ್​ಪಿಸಿ ಲೇಔಟ್​, ಬೆಂಗಳೂರು
  6. ಪ್ರದೋಶ್​ ಎಸ್ – ಗಿರಿನಗರ
  7. ಪವನ್ ಕೆ – ಚನ್ನಪಟ್ಟಣ (ಆರ್​ ಆರ್​ ನಗರದಲ್ಲಿ ವಾಸ)
  8. ದೀಪಕ್ ಕುಮಾರ್​ ಎಂ – ಆರ್​ ಆರ್​ ನಗರ
  9. ನಂದೀಶ್​ – ಮಂಡ್ಯ (ಆರ್​ಆರ್​ ನಗರ ವಾಸ)
  10. ಕಾರ್ತಿಕ್​ – ಗಿರಿ ನಗರ
  11. ನಿಖಿಲ್ ನಾಯಕ್​ – ಬನ್ನೇರುಘಟ್ಟ ಮೇನ್​, ಕೆಂಬತ್ತಳ್ಳಿ ಗೊಟ್ಟಿಗೇರಿ
  12. ರಾಘವೇಂದ್ರ @ ರಾಘು – ಕೋಳಿಹಟ್ಟಿ ದೊಡ್ಡ ಪೇಟೆ, ಚಿತ್ರದುರ್ಗ
  13. ಕೇಶವ ಮೂರ್ತಿ – ಗಿರಿನಗರ

ರೇಣುಕಾಸ್ವಾಮಿ ಅವರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ ಅನ್ನೋ ಆರೋಪದಲ್ಲಿ ಪೊಲೀಸರು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಠಾಣೆಗೆ ವೈದ್ಯರನ್ನು ಕರೆಯಿಸಿಕೊಂಡು ಮೆಡಿಕಲ್ ಟೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್ ಆಪ್ತನ ಶೆಡ್‌ನಲ್ಲಿ ಕೊಲೆ ಮಾಡಿದ ಸುಳಿವು.. ಆಟೋದಲ್ಲಿ ಶವ ಶಿಫ್ಟ್‌? ಅಸಲಿಗೆ ಆಗಿದ್ದೇನು? 

ಸದ್ಯ ದರ್ಶನ್, ಪವಿತ್ರಗೌಡ ಸೇರಿದಂತೆ ಒಟ್ಟು ನಾಲ್ವರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಮೆಡಿಕಲ್ ಚೆಕಪ್ ಮಾಡಲಾಗಿದೆ. ಉಳಿದ 9 ಮಂದಿಗೆ ಬೆಳಗ್ಗೆಯೇ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಿಸಿ ಪೊಲೀಸರು ಕರೆತಂದಿದ್ದಾರೆ. ಬಂಧಿತ ಆರೋಪಿಗಳ ಮೆಡಿಕಲ್ ಟೆಸ್ಟ್ ಮುಗಿದ ಬಳಿಕ ಇಂದು ಸಂಜೆ 4:30ಕ್ಕೆ ACMM ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ದರ್ಶನ್, ಪವಿತ್ರ ಗೌಡ ಸೇರಿ ಮತ್ತೆ ಮೂವರ ಅರೆಸ್ಟ್; ಮುಂದೇನು?

https://newsfirstlive.com/wp-content/uploads/2024/06/Darshan-Pavithra-Gowda-Arrest.jpg

    ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗೆ 13 ಮಂದಿ ಆರೋಪಿಗಳು ಅರೆಸ್ಟ್

    ದರ್ಶನ್, ಪವಿತ್ರಗೌಡ ಅವರಿಗೆ ಪೊಲೀಸ್ ಠಾಣೆಯಲ್ಲಿ ಮೆಡಿಕಲ್ ಟೆಸ್ಟ್

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪರಮಾಪ್ತರಿಗೆ ಸಂಕಷ್ಟ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ಚುರುಕಾಗಿದೆ. ನಟ ದರ್ಶನ್ ಅವರನ್ನು ಬಂಧಿಸಿದ ಬಳಿಕ ಮತ್ತಷ್ಟು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಮತ್ತಷ್ಟು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಮರ್ಮಾಂಗಕ್ಕೆ ಹೊಡೆತ, ಮೂಗು ಓಪನ್, ಪಕ್ಕೆಲುಬು ಕಟ್‌; ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ! 

ರೇಣುಕಾಸ್ವಾಮಿ ಕಿಡ್ನ್ಯಾಪ್ ಹಾಗೂ ಕೊಲೆ ಮಾಡಿದ ಈ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಒಟ್ಟು 13 ಮಂದಿಯನ್ನ ಬಂಧನ ಮಾಡಲಾಗಿದೆ. ದರ್ಶನ್ ಅವರ ಜೊತೆಗೆ ಅರೆಸ್ಟ್ ಮಾಡಲಾಗಿರುವ 13 ಮಂದಿಯ ಮೇಲೂ ರೇಣುಕಾಚಾರ್ಯ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ.

ಕೊಲೆ ಪ್ರಕರಣದಲ್ಲಿ ಬಂಧಿತರು

  1. ದರ್ಶನ್ ತೂಗುದೀಪ – ಚಾಲೆಂಜಿಂಗ್ ಸ್ಟಾರ್
  2. ಪವಿತ್ರಾ ಗೌಡ – ದರ್ಶನ್ ಸ್ನೇಹಿತೆ
  3. ವಿನಯ್ ವಿ – ಜಯಣ್ಣ ಫಾರ್ಮ್​ ಹೌಸ್​
  4. ನಾಗರಾಜು ಆರ್​ – ರಾಮಕೃಷ್ಣ ನಗರ ಮೈಸೂರು
  5. ಲಕ್ಷ್ಮಣ್​ ಎಂ – ಆರ್​ಪಿಸಿ ಲೇಔಟ್​, ಬೆಂಗಳೂರು
  6. ಪ್ರದೋಶ್​ ಎಸ್ – ಗಿರಿನಗರ
  7. ಪವನ್ ಕೆ – ಚನ್ನಪಟ್ಟಣ (ಆರ್​ ಆರ್​ ನಗರದಲ್ಲಿ ವಾಸ)
  8. ದೀಪಕ್ ಕುಮಾರ್​ ಎಂ – ಆರ್​ ಆರ್​ ನಗರ
  9. ನಂದೀಶ್​ – ಮಂಡ್ಯ (ಆರ್​ಆರ್​ ನಗರ ವಾಸ)
  10. ಕಾರ್ತಿಕ್​ – ಗಿರಿ ನಗರ
  11. ನಿಖಿಲ್ ನಾಯಕ್​ – ಬನ್ನೇರುಘಟ್ಟ ಮೇನ್​, ಕೆಂಬತ್ತಳ್ಳಿ ಗೊಟ್ಟಿಗೇರಿ
  12. ರಾಘವೇಂದ್ರ @ ರಾಘು – ಕೋಳಿಹಟ್ಟಿ ದೊಡ್ಡ ಪೇಟೆ, ಚಿತ್ರದುರ್ಗ
  13. ಕೇಶವ ಮೂರ್ತಿ – ಗಿರಿನಗರ

ರೇಣುಕಾಸ್ವಾಮಿ ಅವರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ ಅನ್ನೋ ಆರೋಪದಲ್ಲಿ ಪೊಲೀಸರು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಠಾಣೆಗೆ ವೈದ್ಯರನ್ನು ಕರೆಯಿಸಿಕೊಂಡು ಮೆಡಿಕಲ್ ಟೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್ ಆಪ್ತನ ಶೆಡ್‌ನಲ್ಲಿ ಕೊಲೆ ಮಾಡಿದ ಸುಳಿವು.. ಆಟೋದಲ್ಲಿ ಶವ ಶಿಫ್ಟ್‌? ಅಸಲಿಗೆ ಆಗಿದ್ದೇನು? 

ಸದ್ಯ ದರ್ಶನ್, ಪವಿತ್ರಗೌಡ ಸೇರಿದಂತೆ ಒಟ್ಟು ನಾಲ್ವರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಮೆಡಿಕಲ್ ಚೆಕಪ್ ಮಾಡಲಾಗಿದೆ. ಉಳಿದ 9 ಮಂದಿಗೆ ಬೆಳಗ್ಗೆಯೇ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಿಸಿ ಪೊಲೀಸರು ಕರೆತಂದಿದ್ದಾರೆ. ಬಂಧಿತ ಆರೋಪಿಗಳ ಮೆಡಿಕಲ್ ಟೆಸ್ಟ್ ಮುಗಿದ ಬಳಿಕ ಇಂದು ಸಂಜೆ 4:30ಕ್ಕೆ ACMM ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More