/newsfirstlive-kannada/media/post_attachments/wp-content/uploads/2024/04/Hardik_Rohit_IPL2.jpg)
ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​​ ಪ್ರೀಮಿಯರ್​​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​​​, ರಾಜಸ್ಥಾನ್​ ರಾಯಲ್ಸ್​​​ ತಂಡಗಳು ಮುಖಾಮುಖಿ ಆಗಿವೆ.
ಸತತ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್​​​ ಇಂದು ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಇನ್ನೊಂದೆಡೆ 3ನೇ ಪಂದ್ಯದಲ್ಲೂ ತನ್ನ ಗೆಲುವಿನ ನಾಗಲೋಟ ಮುಂದುವರಿಸಲು ರಾಜಸ್ತಾನ್​ ಮುಂದಾಗಿದೆ. ಈ ಮಧ್ಯೆ ಟಾಸ್​ ವೇಳೆ ಮತ್ತೆ ಹಾರ್ದಿಕ್​ ಪಾಂಡ್ಯಗೆ ರೋಹಿತ್​ ಶರ್ಮಾ ಫ್ಯಾನ್ಸ್​ ಅವಮಾನ ಮಾಡಿದ್ದಾರೆ.
Sanjay Manjrekar asking Wankhede crowd to behave. pic.twitter.com/rxLRSO33yN
— Mufaddal Vohra (@mufaddal_vohra)
Sanjay Manjrekar asking Wankhede crowd to behave. pic.twitter.com/rxLRSO33yN
— Mufaddal Vohra (@mufaddal_vohra) April 1, 2024
">April 1, 2024
ಹೌದು, ಟಾಸ್​ಗಾಗಿ ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ, ರಾಜಸ್ತಾನ್​ ರಾಯಲ್ಸ್​ ನಾಯಕ ಸಂಜು ಸ್ಯಾಮ್ಸನ್​ ಬಂದರು. ಈ ಸಂದರ್ಭದಲ್ಲಿ ಹಾರ್ದಿಕ್​ ಮುಂದೆ ಇಡೀ ವಾಂಖೆಡೆ ಸ್ಟೇಡಿಯಮ್​​ನಲ್ಲಿ ರೋಹಿತ್​ ಅಭಿಮಾನಿಗಳು ರೋಹಿತ್​​.. ರೋಹಿತ್​ ಎಂದು ಕೂಗಿದರು. ಇದರಿಂದ ಸಿಟ್ಟಿಗೆದ್ದ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​ ಸಂಜಯ್​ ಮಂಜ್ರೇಕರ್​​​ ಫ್ಯಾನ್ಸ್​ಗೆ ಬಿಹೇವ್​​ ಯುವರ್​​ ಸೆಲ್ಫ್​ ಎಂದು ಆಕ್ರೋಶ ಹೊರಹಾಕಿದ್ರು. ಇದಕ್ಕೆ ಹಾರ್ದಿಕ್​ ಸ್ಮೈಲ್​ ಕೊಟ್ಟು ಸುಮ್ಮನಾದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us