ಹಲವು ವರ್ಷಗಳ ನಂತರ ಮಹತ್ವದ ನಿರ್ಧಾರ; ಫ್ಯಾನ್ಸ್​​ಗೆ ಗುಡ್​ನ್ಯೂಸ್​ ಕೊಟ್ಟ ರೋಹಿತ್​​, ಕೊಹ್ಲಿ..!

author-image
Ganesh Nachikethu
Updated On
ಕೊಹ್ಲಿ, ರೋಹಿತ್ ಭವಿಷ್ಯ ನಿರ್ಧರಿಸಲಿದ್ದಾರೆ ಅಗರ್ಕರ್! ನೂತನ ಆಯ್ಕೆ ಸಮಿತಿ ಮುಖ್ಯಸ್ಥನ ಮೇಲಿದೆ ದೊಡ್ಡ ಜವಾಬ್ದಾರಿ 
Advertisment
  • ಮುಂದಿನ ತಿಂಗಳು ಸೆಪ್ಟೆಂಬರ್ 5ನೇ ತಾರೀಕಿನಿಂದ ದುಲೀಪ್ ಟ್ರೋಫಿ ಶುರು
  • ದುಲೀಪ್​​ ಟ್ರೋಫಿಗಾಗಿ 4 ತಂಡಗಳು ಅನೌನ್ಸ್​ ಮಾಡಿರೋ ಸೆಲೆಕ್ಷನ್​ ಕಮಿಟಿ
  • ಟೀಮ್​ ಇಂಡಿಯಾ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಕೊಹ್ಲಿ, ರೋಹಿತ್ ಶರ್ಮಾ!​​

ಮುಂದಿನ ತಿಂಗಳು ಸೆಪ್ಟೆಂಬರ್ 5ನೇ ತಾರೀಕಿನಿಂದ ದುಲೀಪ್ ಟ್ರೋಫಿ ಶುರುವಾಗಲಿದೆ. ದುಲೀಪ್​​ ಟ್ರೋಫಿ 5ನೇ ತಾರೀಕಿನಿಂದ 22ರ ತನಕ ನಡೆಯಲಿದೆ. ವಿಶೇಷ ಎಂದರೆ ಸೀನಿಯರ್​ ಆಟಗಾರರು ದೇಶೀಯ ಕ್ರಿಕೆಟ್​​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಿದ್ದು, ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಎಂದಿನಂತೆ ಈ ಸಲವೂ ದುಲೀಪ್ ಟ್ರೋಫಿಯನ್ನು ಯಾವುದೇ ನಾಕೌಟ್ ಪಂದ್ಯಗಳಿಲ್ಲದೆ ರೌಂಡ್-ರಾಬಿನ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಅದಕ್ಕಾಗಿ ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ಸಿ ಹಾಗೂ ಇಂಡಿಯಾ ಡಿ ಅನೌನ್ಸ್ ಮಾಡಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ತಂಡಗಳನ್ನು ಆಯ್ಕೆ ಮಾಡಿದ್ದು, ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಅವರನ್ನು ಯಾವ ತಂಡಕ್ಕೂ ಆಯ್ಕೆ ಮಾಡಿಲ್ಲ. ಇದರ ಮಧ್ಯೆ ಗುಡ್​ನ್ಯೂಸ್​ ಒಂದಿದೆ.

ದುಲೀಪ್​​ ಟ್ರೋಫಿಗೆ ಕೊಹ್ಲಿ, ರೋಹಿತ್​​?

ಇತ್ತೀಚೆಗಷ್ಟೇ ವಿಶ್ವಕಪ್​ ಗೆದ್ದ ಬೆನ್ನಲ್ಲೇ ವಿರಾಟ್​ ಕೊಹ್ಲಿ, ರೋಹಿತ್​ 20 ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಅಷ್ಟೇ ಅಲ್ಲದೇ ಶ್ರೀಲಂಕಾ ಪ್ರವಾಸದಿಂದ ರೆಸ್ಟ್​ ಕೂಡ ಕೇಳಿದ್ದರು. ಬಿಸಿಸಿಐ ಕೊಹ್ಲಿ, ರೋಹಿತ್​​ ಮತ್ತು ಬುಮ್ರಾಗೆ ರೆಸ್ಟ್​ ನೀಡಿತ್ತು. ಗಂಭೀರ್​ ಕೋಚ್​ ಆದ ಬಳಿಕ ಇದು ಮೊದಲ ಸರಣಿ ಆಗಿದ್ದು, ಮೂವರು ಸ್ಟಾರ್​ ಆಟಗಾರರು ಶ್ರೀಲಂಕಾ ವಿರುದ್ಧ ಏಕದಿನ ಸೀರೀಸ್​ ಆಡಲೇಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ವಿರಾಟ್​ ಕೊಹ್ಲಿ, ರೋಹಿತ್​​ ಸಮ್ಮತಿಸಿದ್ದು, ತಂಡಕ್ಕೆ ವಾಪಸ್ಸಾಗಿದ್ರು. ಈಗ ಶ್ರೀಲಂಕಾ ಸೀರೀಸ್​ ಮುಗಿದಿದ್ದು, ದುಲೀಪ್​​ ಟ್ರೋಫಿ ಆಡುವುದಾಗಿ ಹೇಳಿದ್ದಾರೆ. ಈ ಮೂಲಕ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಯಾವಾಗ ಬೇಕಾದ್ರೂ ರೋಹಿತ್​​ ಮತ್ತು ಕೊಹ್ಲಿ ತಂಡಗಳು ಸೇರಿಕೊಳ್ಳಬಹುದು.

ಇದನ್ನೂ ಓದಿ: ಶುಭ್ಮನ್​​ ಗಿಲ್​ ಅಡಿಯಲ್ಲಿ ಕನ್ನಡಿಗ ಆಡಬೇಕಾ? ಬಿಸಿಸಿಐನಿಂದ KL​ ರಾಹುಲ್​ಗೆ ಘನಘೋರ ಮೋಸ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment