/newsfirstlive-kannada/media/post_attachments/wp-content/uploads/2024/05/Rohit_Pandya.jpg)
ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪ್ಲೇ ಆಫ್​​ ರೇಸ್​ನಿಂದ ಮುಂಬೈ ಇಂಡಿಯನ್ಸ್​​ ಹೊರಬಿದ್ದಿದೆ. ಹಾರ್ದಿಕ್​ ಪಾಂಡ್ಯ ಗುಜರಾತ್​ ಟೈಟನ್ಸ್​ ತಂಡ ತೊರೆದು ಕ್ಯಾಪ್ಟನ್​ ಆದ ಬಳಿಕ ಮುಂಬೈ ರೋಹಿತ್, ಸೂರ್ಯ ರೀತಿಯ ಬಲಿಷ್ಠ ಆಟಗಾರರು ಇದ್ರೂ ಹೀನಾಯ ಸೋಲು ಕಂಡಿದೆ. ಇಡೀ ತಂಡದಲ್ಲಿ ಒಗ್ಗಟ್ಟಿಲ್ಲ ಅನ್ನೋದು ಜಗಜ್ಜಾಹೀರಾಗಿದೆ. ಈ ಮಧ್ಯೆ ಮತ್ತೊಂದು ಶಾಕಿಂಗ್​ ವಿಚಾರ ಬೆಳಕಿಗೆ ಬಂದಿದೆ.
ಯೆಸ್​​, ಐಪಿಎಲ್​​ ಬೆನ್ನಲ್ಲೇ ಟಿ20 ವಿಶ್ವಕಪ್​ ನಡೆಯಲಿದೆ. ಸದ್ಯ ನಡೆಯುತ್ತಿರೋ ಐಪಿಎಲ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡು ವಿಭಾಗದಲ್ಲೂ ಫೇಲ್ಯೂರ್​ ಆದ್ರೂ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ, ಪಾಂಡ್ಯ ಆಯ್ಕೆಗೆ ಸ್ವತಃ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಚೀಫ್​ ಸೆಲೆಕ್ಟರ್​ ಅಜಿತ್ ಅರ್ಗಕರ್ ವಿರೋಧ ವ್ಯಕ್ತಪಡಿಸಿದ್ದರು ಎಂಬುದು ವರದಿಯಾಗಿದೆ.
/newsfirstlive-kannada/media/post_attachments/wp-content/uploads/2024/05/Rohit_Ajit.jpg)
ಟಿ20 ವಿಶ್ವಕಪ್ಗೆ ಹಾರ್ದಿಕ್ ಪಾಂಡ್ಯ ಸೇರ್ಪಡೆಗೆ ರೋಹಿತ್ ಮತ್ತು ಅಜಿತ್ ಅಗರ್ಕರ್ ಸೇರಿ ಕೆಲವು ಆಯ್ಕೆ ಸಮಿತಿ ಸದಸ್ಯರು ವಿರೋಧಿಸಿದ್ದರು ಎಂದು ವರದಿಯಾಗಿದೆ. ಯಾರದ್ದೋ ಒತ್ತಡದಲ್ಲಿ ಪಾಂಡ್ಯ ಅವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಹಾರ್ದಿಕ್ ಪಾಂಡ್ಯ ತಾನು ಆಡಿರೋ 13 ಪಂದ್ಯಗಳಲ್ಲಿ 144.93 ಸ್ಟ್ರೈಕ್ ರೇಟ್ನೊಂದಿಗೆ ಕೇವಲ 200 ರನ್​ ಗಳಿಸಿದ್ದಾರೆ. ಜತೆಗೆ ಕೇವಲ 11 ವಿಕೆಟ್​ ತೆಗೆದಿದ್ದು, ಇವರ ಬೌಲಿಂಗ್​ ಎಕಾನಮಿ 10.59 ಇದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us