/newsfirstlive-kannada/media/post_attachments/wp-content/uploads/2024/07/SURYA_KUMAR-2.jpg)
T20 ವಿಶ್ವಕಪ್ ಟ್ರೋಫಿ ಗೆದ್ದ ಮೇಲೆ​ ಭೀಕರ ಬೆರಿಲ್ ಸೈಕ್ಲೋನ್​ ಅಪ್ಪಳಿಸಿದ್ದಕ್ಕೆ ಟೀಮ್ ಇಂಡಿಯಾ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲೇ ಉಳಿದುಕೊಂಡಿತ್ತು. ಆದರೆ ಸ್ಪೆಷಲ್ ಚಾರ್ಟರ್ ಏರ್ ಇಂಡಿಯಾ ವಿಮಾನದ ಮೂಲಕ ರೋಹಿತ್​ ಶರ್ಮಾ ಬಾಯ್ಸ್​ ಭಾರತಕ್ಕೆ ಆಗಮಿಸುತ್ತಿದ್ದು ನಾಳೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. ಇಳಿದ ನಂತರ ಟೀಮ್ ಇಂಡಿಯಾದ ಇವೆಂಟ್ಸ್​ ಏನೇನು ಇವೆ ಎಂಬುದರ ಮಾಹಿತಿ ಇಲ್ಲಿದೆ.
ಬಾರ್ಬಡೋಸ್​ನಿಂದ 17 ಗಂಟೆಗಳ ಪ್ರಯಾಣದ ನಂತರ ನೇರ ದೆಹಲಿಯ ವಿಮಾನ ನಿಲ್ದಾಣದಲ್ಲಿ ಭಾರತ ತಂಡದ ಆಟಗಾರರು ಇಳಿಯಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿ ಮಾಡಿ, ಬೆಳಗಿನ ಉಪಾಹಾರವನ್ನು ಪ್ರಧಾನಿಯವರೊಂದಿಗೆ​ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದ ಮೇಲೆ ಭಾರತ ತಂಡ ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡಲಿದೆ. ಮುಂಬೈಗೆ ತೆರಳಿದ ಮೇಲೆ ನಾರಿಮನ್ ಪಾಯಿಂಟ್​ನಿಂದ ವಾಂಖೇಡೆ ಸ್ಟೇಡಿಯಂವರೆಗೆ ಓಪನ್ ಬಸ್​​ನಲ್ಲಿ ವಿಕ್ಟರಿ ಪೆರೇಡ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ದರ್ಶನ್​ ಕೈದಿ ನಂಬರ್ ಫೋಟೋ ಶೂಟ್​.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ!
TEAM INDIA ARE OFF TO NEW DELHI. ??
- The heroes are coming with the World Cup. ? pic.twitter.com/FRgjvpceXa
— Mufaddal Vohra (@mufaddal_vohra)
TEAM INDIA ARE OFF TO NEW DELHI. 🇮🇳
- The heroes are coming with the World Cup. 🏆 pic.twitter.com/FRgjvpceXa— Mufaddal Vohra (@mufaddal_vohra) July 3, 2024
">July 3, 2024
ಈ ಎಲ್ಲ ಕಾರ್ಯಕ್ರಮ ಆದ ನಂತರ ಬಿಸಿಸಿಐ ಕಾರ್ಯದರ್ಶಿ ಜೈಶಾ ಅವರು ಎಲ್ಲ ಆಟಗಾರರಿಗೆ, ಕೋಚ್, ಸಿಬ್ಬಂದಿ ವರ್ಗದವರಿಗೆ 125 ಕೋಟಿ ಬಹುಮಾನದ ಹಣವನ್ನು ವಿತರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಭಾರತ ತಂಡದ ಆಟಗಾರರೆಲ್ಲ ಒಂದೇ ಪ್ಲೈಟ್​​ನಲ್ಲಿ ಬಾರ್ಬಡೋಸ್​ನಿಂದ ದೆಹಲಿಗೆ ಬರುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲೂ ಸೆಲೆಬ್ರೆಷನ್ ಮಾಡಲಿದ್ದಾರೆ ಎನ್ನಲಾಗಿದ್ದು ಅಭಿಮಾನಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us