newsfirstkannada.com

×

ಟೀಂ ಇಂಡಿಯಾ ತವರಿಗೆ ಆಗಮಿಸೋ ಟೈಮ್‌ ಫಿಕ್ಸ್.. ನಾಳೆ ಭರ್ಜರಿ ಸ್ವಾಗತ; ಕಾರ್ಯಕ್ರಮಗಳ ಲಿಸ್ಟ್​ ಇಲ್ಲಿದೆ

Share :

Published July 3, 2024 at 4:24pm

    ವರ್ಲ್ಡ್​​ಕಪ್ ಗೆದ್ದ ಮೇಲೆ ಬಾರ್ಬಡೋಸ್​ನಲ್ಲೇ ಉಳಿದಿದ್ದ ತಂಡ

    ದೆಹಲಿಯಿಂದ ಮುಂಬೈವರೆಗೆ ಭಾರತ ತಂಡದ ಕಾರ್ಯಕ್ರಮಗಳು?

    ವಿಶೇಷ ವಿಮಾನದಲ್ಲಿ ಭಾರತಕ್ಕೆ ಆಗಮಿಸುತ್ತಿರುವ ಆಟಗಾರರು

T20 ವಿಶ್ವಕಪ್ ಟ್ರೋಫಿ ಗೆದ್ದ ಮೇಲೆ​ ಭೀಕರ ಬೆರಿಲ್ ಸೈಕ್ಲೋನ್​ ಅಪ್ಪಳಿಸಿದ್ದಕ್ಕೆ ಟೀಮ್ ಇಂಡಿಯಾ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲೇ ಉಳಿದುಕೊಂಡಿತ್ತು. ಆದರೆ ಸ್ಪೆಷಲ್ ಚಾರ್ಟರ್ ಏರ್ ಇಂಡಿಯಾ ವಿಮಾನದ ಮೂಲಕ ರೋಹಿತ್​ ಶರ್ಮಾ ಬಾಯ್ಸ್​ ಭಾರತಕ್ಕೆ ಆಗಮಿಸುತ್ತಿದ್ದು ನಾಳೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. ಇಳಿದ ನಂತರ ಟೀಮ್ ಇಂಡಿಯಾದ ಇವೆಂಟ್ಸ್​ ಏನೇನು ಇವೆ ಎಂಬುದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್​ ಗೆದ್ದ ತಂಡಕ್ಕೆ ಸೈಕ್ಲೋನ್ ಕಂಟಕ.. ಕೊನೆಗೂ ಸ್ವದೇಶಕ್ಕೆ ಮರಳಲು ಸ್ಪೆಷಲ್ ಫ್ಲೈಟ್ ಸಿದ್ಧ; ವಾಪಸ್‌ ಯಾವಾಗ?

ಬಾರ್ಬಡೋಸ್​ನಿಂದ 17 ಗಂಟೆಗಳ ಪ್ರಯಾಣದ ನಂತರ ನೇರ ದೆಹಲಿಯ ವಿಮಾನ ನಿಲ್ದಾಣದಲ್ಲಿ ಭಾರತ ತಂಡದ ಆಟಗಾರರು ಇಳಿಯಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿ ಮಾಡಿ, ಬೆಳಗಿನ ಉಪಾಹಾರವನ್ನು ಪ್ರಧಾನಿಯವರೊಂದಿಗೆ​ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದ ಮೇಲೆ ಭಾರತ ತಂಡ ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡಲಿದೆ. ಮುಂಬೈಗೆ ತೆರಳಿದ ಮೇಲೆ ನಾರಿಮನ್ ಪಾಯಿಂಟ್​ನಿಂದ ವಾಂಖೇಡೆ ಸ್ಟೇಡಿಯಂವರೆಗೆ ಓಪನ್ ಬಸ್​​ನಲ್ಲಿ ವಿಕ್ಟರಿ ಪೆರೇಡ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ದರ್ಶನ್​ ಕೈದಿ ನಂಬರ್ ಫೋಟೋ ಶೂಟ್​.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ!

ಈ ಎಲ್ಲ ಕಾರ್ಯಕ್ರಮ ಆದ ನಂತರ ಬಿಸಿಸಿಐ ಕಾರ್ಯದರ್ಶಿ ಜೈಶಾ ಅವರು ಎಲ್ಲ ಆಟಗಾರರಿಗೆ, ಕೋಚ್, ಸಿಬ್ಬಂದಿ ವರ್ಗದವರಿಗೆ 125 ಕೋಟಿ ಬಹುಮಾನದ ಹಣವನ್ನು ವಿತರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಭಾರತ ತಂಡದ ಆಟಗಾರರೆಲ್ಲ ಒಂದೇ ಪ್ಲೈಟ್​​ನಲ್ಲಿ ಬಾರ್ಬಡೋಸ್​ನಿಂದ ದೆಹಲಿಗೆ ಬರುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲೂ ಸೆಲೆಬ್ರೆಷನ್ ಮಾಡಲಿದ್ದಾರೆ ಎನ್ನಲಾಗಿದ್ದು ಅಭಿಮಾನಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾ ತವರಿಗೆ ಆಗಮಿಸೋ ಟೈಮ್‌ ಫಿಕ್ಸ್.. ನಾಳೆ ಭರ್ಜರಿ ಸ್ವಾಗತ; ಕಾರ್ಯಕ್ರಮಗಳ ಲಿಸ್ಟ್​ ಇಲ್ಲಿದೆ

https://newsfirstlive.com/wp-content/uploads/2024/07/SURYA_KUMAR-2.jpg

    ವರ್ಲ್ಡ್​​ಕಪ್ ಗೆದ್ದ ಮೇಲೆ ಬಾರ್ಬಡೋಸ್​ನಲ್ಲೇ ಉಳಿದಿದ್ದ ತಂಡ

    ದೆಹಲಿಯಿಂದ ಮುಂಬೈವರೆಗೆ ಭಾರತ ತಂಡದ ಕಾರ್ಯಕ್ರಮಗಳು?

    ವಿಶೇಷ ವಿಮಾನದಲ್ಲಿ ಭಾರತಕ್ಕೆ ಆಗಮಿಸುತ್ತಿರುವ ಆಟಗಾರರು

T20 ವಿಶ್ವಕಪ್ ಟ್ರೋಫಿ ಗೆದ್ದ ಮೇಲೆ​ ಭೀಕರ ಬೆರಿಲ್ ಸೈಕ್ಲೋನ್​ ಅಪ್ಪಳಿಸಿದ್ದಕ್ಕೆ ಟೀಮ್ ಇಂಡಿಯಾ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲೇ ಉಳಿದುಕೊಂಡಿತ್ತು. ಆದರೆ ಸ್ಪೆಷಲ್ ಚಾರ್ಟರ್ ಏರ್ ಇಂಡಿಯಾ ವಿಮಾನದ ಮೂಲಕ ರೋಹಿತ್​ ಶರ್ಮಾ ಬಾಯ್ಸ್​ ಭಾರತಕ್ಕೆ ಆಗಮಿಸುತ್ತಿದ್ದು ನಾಳೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. ಇಳಿದ ನಂತರ ಟೀಮ್ ಇಂಡಿಯಾದ ಇವೆಂಟ್ಸ್​ ಏನೇನು ಇವೆ ಎಂಬುದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವಿಶ್ವಕಪ್​ ಗೆದ್ದ ತಂಡಕ್ಕೆ ಸೈಕ್ಲೋನ್ ಕಂಟಕ.. ಕೊನೆಗೂ ಸ್ವದೇಶಕ್ಕೆ ಮರಳಲು ಸ್ಪೆಷಲ್ ಫ್ಲೈಟ್ ಸಿದ್ಧ; ವಾಪಸ್‌ ಯಾವಾಗ?

ಬಾರ್ಬಡೋಸ್​ನಿಂದ 17 ಗಂಟೆಗಳ ಪ್ರಯಾಣದ ನಂತರ ನೇರ ದೆಹಲಿಯ ವಿಮಾನ ನಿಲ್ದಾಣದಲ್ಲಿ ಭಾರತ ತಂಡದ ಆಟಗಾರರು ಇಳಿಯಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿ ಮಾಡಿ, ಬೆಳಗಿನ ಉಪಾಹಾರವನ್ನು ಪ್ರಧಾನಿಯವರೊಂದಿಗೆ​ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದ ಮೇಲೆ ಭಾರತ ತಂಡ ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡಲಿದೆ. ಮುಂಬೈಗೆ ತೆರಳಿದ ಮೇಲೆ ನಾರಿಮನ್ ಪಾಯಿಂಟ್​ನಿಂದ ವಾಂಖೇಡೆ ಸ್ಟೇಡಿಯಂವರೆಗೆ ಓಪನ್ ಬಸ್​​ನಲ್ಲಿ ವಿಕ್ಟರಿ ಪೆರೇಡ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ದರ್ಶನ್​ ಕೈದಿ ನಂಬರ್ ಫೋಟೋ ಶೂಟ್​.. ಮಗುವಿನ ತಂದೆ, ತಾಯಿ, ವೈರಲ್ ಮಾಡಿದವ್ರಿಗೆ ಸಂಕಷ್ಟ!

ಈ ಎಲ್ಲ ಕಾರ್ಯಕ್ರಮ ಆದ ನಂತರ ಬಿಸಿಸಿಐ ಕಾರ್ಯದರ್ಶಿ ಜೈಶಾ ಅವರು ಎಲ್ಲ ಆಟಗಾರರಿಗೆ, ಕೋಚ್, ಸಿಬ್ಬಂದಿ ವರ್ಗದವರಿಗೆ 125 ಕೋಟಿ ಬಹುಮಾನದ ಹಣವನ್ನು ವಿತರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಭಾರತ ತಂಡದ ಆಟಗಾರರೆಲ್ಲ ಒಂದೇ ಪ್ಲೈಟ್​​ನಲ್ಲಿ ಬಾರ್ಬಡೋಸ್​ನಿಂದ ದೆಹಲಿಗೆ ಬರುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲೂ ಸೆಲೆಬ್ರೆಷನ್ ಮಾಡಲಿದ್ದಾರೆ ಎನ್ನಲಾಗಿದ್ದು ಅಭಿಮಾನಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More