ಅವಮಾನ ಸುಲಭಕ್ಕೆ ಮರೆಯೋ ಜಾಯಮಾನ ರೋಹಿತ್ದ್ದಲ್ಲ
ಹೊಸ ಟೀಮ್ ಸೇರಲು ಸಜ್ಜಾದ ಚಾಂಪಿಯನ್ ಕ್ಯಾಪ್ಟನ್ ರೋಹಿತ್
ಐಪಿಎಲ್ನಲ್ಲಿ ಯಾವ ತಂಡದ ಪರ ಆಡಲಿದ್ದಾರೆ ರೋಹಿತ್ ಶರ್ಮಾ?
ಭಾರತೀಯ ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಸುದ್ದಿಗಳು ಸಖತ್ ಸೌಂಡ್ ಮಾಡ್ತಿವೆ. ಮೆಗಾ ಆಕ್ಷನ್ಗೂ ಮುನ್ನ ರಿಟೈನ್-ರಿಲೀಸ್ ಲೆಕ್ಕಾಚಾರಗಳು ಆರಂಭವಾಗಿದ್ದು, ದಿನಕ್ಕೊಂದು ಶಾಕಿಂಗ್ ಸುದ್ದಿಗಳು ಹೊರ ಬೀಳ್ತಿವೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಲ್ಲಂತೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಫ್ರಾಂಚೈಸಿ ಕಂಡ ಸಕ್ಸಸ್ಫುಲ್ ಕ್ಯಾಪ್ಟನ್ ರೋಹಿತ್ ಶರ್ಮಾ, ಅಂಬಾನಿ ಬ್ರಿಗೆಡ್ಗೆ ಗುಡ್ ಬೈ ಹೇಳಲು ರೆಡಿಯಾಗಿದ್ದಾರೆ.
ಇದನ್ನೂ ಓದಿ: ಗಂಭೀರ್ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದ ಕನ್ನಡಿಗ ಯಾರು.. ಆ ಯುವ ಪ್ಲೇಯರ್ ಈಗ ಏನಾಗಿದ್ದಾರೆ?
ಕಳೆದ ಐಪಿಎಲ್ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾಗೆ ಕೊಕ್ ನೀಡಿದ್ದ ಅಂಬಾನಿ ಬ್ರಿಗೆಡ್ ಹಾರ್ದಿಕ್ ಪಾಂಡ್ಯನ ಕರೆತಂದು ಪಟ್ಟ ಕಟ್ಟಿತ್ತು. 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ, ಫ್ರಾಂಚೈಸಿ ಕಂಡ ಸರ್ವಶ್ರೇಷ್ಠ ನಾಯಕನನ್ನ ಕನಿಷ್ಠ ಒಂದು ಮಾತು ಕೇಳದೆ ಗೇಟ್ಪಾಸ್ ನೀಡಿತ್ತು. ಇದ್ರಿಂದಾಗಿ ಒನ್ ಫ್ಯಾಮಿಲಿ ಒಡೆದ ಮನೆಯಾಗಿ ಬದಲಾಗಿತ್ತು. ನೂತನ ನಾಯಕನದ್ದೊಂದು, ಹಳೆ ನಾಯಕ ಹಾಗೂ ಆತನ ಬೆಂಬಲಿಗರದ್ದೊಂದು ಬಣ ಸೃಷ್ಟಿಯಾಗಿತ್ತು. ಅಂದು ಬಂಡಾಯ ಎದ್ದವರು, ಇದೀಗ ತಂಡಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ.
ಇದನ್ನೂ ಓದಿ: ಮಫ್ಲರ್ನಿಂದ ನೇಣು ಬಿಗಿದುಕೊಂಡು SSLC ವಿದ್ಯಾರ್ಥಿ ಆತ್ಮ*ತ್ಯೆ.. ಬಾಲಕನ ಸಾವಿಗೆ ಅಸಲಿ ಕಾರಣ?
ಮುಂಬೈ ತೊರೆಯಲು ‘ಸ್ವಾಭಿಮಾನಿ’ ರೋಹಿತ್ ರೆಡಿ.!
ಟೀಮ್ ಇಂಡಿಯಾಗೆ ಪ್ರತಿಷ್ಠಿತ ವಿಶ್ವಕಪ್ ಗೆಲ್ಲಿಸಿಕೊಟ್ಟಿರೋ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಬೇಕಂದ್ರೆ ಹೇಗೆ ಸಾಧ್ಯ.? ಹೇಳಿ.., ಕೇಳಿ., ರೋಹಿತ್ ಶರ್ಮಾ ಸ್ವಾಭಿಮಾನಿ. ಅವಮಾನವನ್ನ ಸುಲಭಕ್ಕೆ ಮರೆಯೋ ಜಾಯಮಾನ ರೋಹಿತ್ದ್ದಲ್ಲ. ಕಳೆದ ಸೀಸನ್ನಲ್ಲೇ ಸಾಕಷ್ಟು ನೋವುಂಡ ರೋಹಿತ್ ಶರ್ಮಾ, ಆದ ಅಪಮಾನ, ನೋವನ್ನ ನುಂಗಿಕೊಂಡು ಆಟವಾಡಿದ್ರು. ಆದ್ರೆ, ಈ ಸೀಸನ್ನಲ್ಲಿ ಆಡೋ ಮಾತೇ ಇಲ್ಲ..
ಇದನ್ನೂ ಓದಿ: ಮಹಿಳೆಯರನ್ನ ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು.. ಭಯಾನಕ ಘಟನೆ!
ನಾಯಕತ್ವದಿಂದ ತೆಗದು ಹಾಕಿದ ಬೆನ್ನಲ್ಲೇ ರೋಹಿತ್ ಮುಂಬೈಗೆ ಗುಡ್ ಬೈ ಹೇಳೋ ಸುದ್ದಿ ಕಳೆದ ಆವೃತ್ತಿಯಲ್ಲೇ ಹರಿದಾಡಿತ್ತು. ಆದ್ರೆ, ಟೂರ್ನಿಗೆ ಸಮಯ ಹತ್ತಿರವಾಗಿದ್ದ ಕಾರಣಕ್ಕೋ ಏನೋ, ಒಲ್ಲದ ಮನಸ್ಸಿನಲ್ಲೇ ಮುಂಬೈ ಪರ ಮುಂಬೈಕರ್ ಆಡಿದ್ರು. ಕಳೆದ ಸೀಸನ್ನಲ್ಲೇ ಒಂದು ಕಾಲು ಹೊರಗಿಟ್ಟಿದ್ದ ರೋಹಿತ್, ಇದೀಗ ಮುಂಬೈಗೆ ಟಾಟಾ ಮಾಡಲು ಸಜ್ಜಾಗಿದ್ದಾರೆ. ಮುಂಬೈ ತೊರೆಯುವ ನಿರ್ಧಾರವನ್ನ ರೋಹಿತ್ ತಳೆದಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಕೆಕೆಆರ್ನಿಂದ ರೋಹಿತ್ ಶರ್ಮಾಗೆ ಆಫರ್.!
ಈಗಾಗಲೇ ಕೆಕೆಆರ್ ಫ್ರಾಂಚೈಸಿ ಮುಂಬೈನ ಮತ್ತೊಬ್ಬ ಅಸಮಾಧಾನಿತ ಆಟಗಾರ ಸೂರ್ಯಕುಮಾರ್ಗೆ ಬಿಗ್ ಆಫರ್ ಮಾಡಿದೆ. ಕ್ಯಾಪ್ಟನ್ಸಿ ಪಟ್ಟದೊಂದಿಗೆ, ₹30 ಕೋಟಿಯ ಆಫರ್ನ ಕೆಕೆಆರ್ ಮ್ಯಾನೇಜ್ಮೆಂಟ್ ಮಾಡಿದೆ. ಟೀಮ್ ಇಂಡಿಯಾ T20 ತಂಡದ ಹಾಲಿ ನಾಯಕನ ಬೆನ್ನಲ್ಲೇ, ಮಾಜಿ ನಾಯಕನಿಗೂ ಕೆಕೆಆರ್ ಬಲೆ ಬೀಸಿದೆ. ಮೂಲಗಳ ಪ್ರಕಾರ ರೋಹಿತ್ ಶರ್ಮಾರನ್ನೂ ಕೆಕೆಆರ್ ಫ್ರಾಂಚೈಸಿ ಈಗಾಗಲೇ ಸಂಪರ್ಕಿಸಿ ಚರ್ಚಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಯುವಕ ಜೋಗ ಜಲಪಾತದಲ್ಲಿ ಕಣ್ಮರೆ.. ಶೋಧ ಕಾರ್ಯ
ಹಾರ್ದಿಕ್ಗೆ ಪಟ್ಟ ಕಟ್ಟಿದಾಗ ಸೂರ್ಯಕುಮಾರ್ ಯಾದವ್ ಕೂಡ ಬೇಸರಗೊಂಡಿದ್ರು. ರೋಹಿತ್ ಶರ್ಮಾ ಜೊತೆಗೆ ಸೂರ್ಯ ಹೆಚ್ಚು ಗುರುತಿಸಿಕೊಂಡಿದ್ರು. ಸೂರ್ಯ ಸಕ್ಸಸ್ ಕಂಡಿದ್ದು ಕೂಡ ರೋಹಿತ್ ನಾಯಕತ್ವದಡಿಯಲ್ಲೇ. ಈಗ ಟೀಮ್ ಇಂಡಿಯಾ ನಾಯಕತ್ವ ಸೂರ್ಯನಿಗೆ ಸಿಕ್ಕಿದ್ರ, ಹಿಂದೆಯೋ ರೋಹಿತ್ ಪಾತ್ರವಿದೆ. ಇಬ್ಬರ ನಡುವೆ ಉತ್ತಮ ಬಾಂಡಿಂಗ್ ಇರೋದ್ರಿಂದ ಸೂರ್ಯ ನಾಯಕತ್ವದಲ್ಲಿ ಆಡಲು ರೋಹಿತ್ಗೆ ಯಾವುದೇ ಸಮಸ್ಯೆ ಇರಲ್ಲ. ಹೀಗಾಗಿ ಸೂರ್ಯ ಕೆಕೆಆರ್ ಸಾರಥ್ಯ ವಹಿಸಿಕೊಂಡ್ರೆ, ರೋಹಿತ್ ಕೆಕೆಆರ್ ಸೇರೋದು ಬಹುತೇಕ ಕನ್ಫರ್ಮ್ ಆದಂತೆ.
ರೋಹಿತ್ ಶರ್ಮಾ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ಕಣ್ಣು.!
ಕಳೆದ ಸೀಸನ್ನಲ್ಲಿ ರೋಹಿತ್ಗೆ ಮುಂಬೈ ಫ್ರಾಂಚೈಸಿ ಅವಮಾನ ಮಾಡಿದ ಸಮಯದಿಂದ ಡೆಲ್ಲಿ ಫ್ರಾಂಚೈಸಿ ಹಿಟ್ಮ್ಯಾನ್ ಮೇಲೆ ಕಣ್ಣಿಟ್ಟಿದೆ. ಇದೀಗ ರಿಷಬ್ ಪಂತ್ ತಂಡವನ್ನ ತೊರೆಯಲು ಸಜ್ಜಾಗಿದ್ದಾರೆ. ಫ್ರಾಂಚೈಸಿ ಕೂಡ ಸ್ಟಾರ್ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಭವಿಷ್ಯದ ತಂಡ ಕಟ್ಟೋ ಸಾಮರ್ಥ್ಯ ರೋಹಿತ್ಗಿರೋದ್ರಿಂದ ಡೆಲ್ಲಿ ಫ್ರಾಂಚೈಸಿ ನಾಯಕತ್ವದ ಆಫರ್ ನೀಡೋ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ರೋಹಿತ್ ಡೆಲ್ಲಿ ಸೇರಿದ್ದೇ ಆದ್ರೆ, ತಂಡದ ಚರಿಷ್ಮಾನೇ ಬದಲಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಅವಮಾನ ಸುಲಭಕ್ಕೆ ಮರೆಯೋ ಜಾಯಮಾನ ರೋಹಿತ್ದ್ದಲ್ಲ
ಹೊಸ ಟೀಮ್ ಸೇರಲು ಸಜ್ಜಾದ ಚಾಂಪಿಯನ್ ಕ್ಯಾಪ್ಟನ್ ರೋಹಿತ್
ಐಪಿಎಲ್ನಲ್ಲಿ ಯಾವ ತಂಡದ ಪರ ಆಡಲಿದ್ದಾರೆ ರೋಹಿತ್ ಶರ್ಮಾ?
ಭಾರತೀಯ ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಸುದ್ದಿಗಳು ಸಖತ್ ಸೌಂಡ್ ಮಾಡ್ತಿವೆ. ಮೆಗಾ ಆಕ್ಷನ್ಗೂ ಮುನ್ನ ರಿಟೈನ್-ರಿಲೀಸ್ ಲೆಕ್ಕಾಚಾರಗಳು ಆರಂಭವಾಗಿದ್ದು, ದಿನಕ್ಕೊಂದು ಶಾಕಿಂಗ್ ಸುದ್ದಿಗಳು ಹೊರ ಬೀಳ್ತಿವೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಲ್ಲಂತೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಫ್ರಾಂಚೈಸಿ ಕಂಡ ಸಕ್ಸಸ್ಫುಲ್ ಕ್ಯಾಪ್ಟನ್ ರೋಹಿತ್ ಶರ್ಮಾ, ಅಂಬಾನಿ ಬ್ರಿಗೆಡ್ಗೆ ಗುಡ್ ಬೈ ಹೇಳಲು ರೆಡಿಯಾಗಿದ್ದಾರೆ.
ಇದನ್ನೂ ಓದಿ: ಗಂಭೀರ್ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದ ಕನ್ನಡಿಗ ಯಾರು.. ಆ ಯುವ ಪ್ಲೇಯರ್ ಈಗ ಏನಾಗಿದ್ದಾರೆ?
ಕಳೆದ ಐಪಿಎಲ್ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾಗೆ ಕೊಕ್ ನೀಡಿದ್ದ ಅಂಬಾನಿ ಬ್ರಿಗೆಡ್ ಹಾರ್ದಿಕ್ ಪಾಂಡ್ಯನ ಕರೆತಂದು ಪಟ್ಟ ಕಟ್ಟಿತ್ತು. 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ, ಫ್ರಾಂಚೈಸಿ ಕಂಡ ಸರ್ವಶ್ರೇಷ್ಠ ನಾಯಕನನ್ನ ಕನಿಷ್ಠ ಒಂದು ಮಾತು ಕೇಳದೆ ಗೇಟ್ಪಾಸ್ ನೀಡಿತ್ತು. ಇದ್ರಿಂದಾಗಿ ಒನ್ ಫ್ಯಾಮಿಲಿ ಒಡೆದ ಮನೆಯಾಗಿ ಬದಲಾಗಿತ್ತು. ನೂತನ ನಾಯಕನದ್ದೊಂದು, ಹಳೆ ನಾಯಕ ಹಾಗೂ ಆತನ ಬೆಂಬಲಿಗರದ್ದೊಂದು ಬಣ ಸೃಷ್ಟಿಯಾಗಿತ್ತು. ಅಂದು ಬಂಡಾಯ ಎದ್ದವರು, ಇದೀಗ ತಂಡಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ.
ಇದನ್ನೂ ಓದಿ: ಮಫ್ಲರ್ನಿಂದ ನೇಣು ಬಿಗಿದುಕೊಂಡು SSLC ವಿದ್ಯಾರ್ಥಿ ಆತ್ಮ*ತ್ಯೆ.. ಬಾಲಕನ ಸಾವಿಗೆ ಅಸಲಿ ಕಾರಣ?
ಮುಂಬೈ ತೊರೆಯಲು ‘ಸ್ವಾಭಿಮಾನಿ’ ರೋಹಿತ್ ರೆಡಿ.!
ಟೀಮ್ ಇಂಡಿಯಾಗೆ ಪ್ರತಿಷ್ಠಿತ ವಿಶ್ವಕಪ್ ಗೆಲ್ಲಿಸಿಕೊಟ್ಟಿರೋ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಬೇಕಂದ್ರೆ ಹೇಗೆ ಸಾಧ್ಯ.? ಹೇಳಿ.., ಕೇಳಿ., ರೋಹಿತ್ ಶರ್ಮಾ ಸ್ವಾಭಿಮಾನಿ. ಅವಮಾನವನ್ನ ಸುಲಭಕ್ಕೆ ಮರೆಯೋ ಜಾಯಮಾನ ರೋಹಿತ್ದ್ದಲ್ಲ. ಕಳೆದ ಸೀಸನ್ನಲ್ಲೇ ಸಾಕಷ್ಟು ನೋವುಂಡ ರೋಹಿತ್ ಶರ್ಮಾ, ಆದ ಅಪಮಾನ, ನೋವನ್ನ ನುಂಗಿಕೊಂಡು ಆಟವಾಡಿದ್ರು. ಆದ್ರೆ, ಈ ಸೀಸನ್ನಲ್ಲಿ ಆಡೋ ಮಾತೇ ಇಲ್ಲ..
ಇದನ್ನೂ ಓದಿ: ಮಹಿಳೆಯರನ್ನ ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು.. ಭಯಾನಕ ಘಟನೆ!
ನಾಯಕತ್ವದಿಂದ ತೆಗದು ಹಾಕಿದ ಬೆನ್ನಲ್ಲೇ ರೋಹಿತ್ ಮುಂಬೈಗೆ ಗುಡ್ ಬೈ ಹೇಳೋ ಸುದ್ದಿ ಕಳೆದ ಆವೃತ್ತಿಯಲ್ಲೇ ಹರಿದಾಡಿತ್ತು. ಆದ್ರೆ, ಟೂರ್ನಿಗೆ ಸಮಯ ಹತ್ತಿರವಾಗಿದ್ದ ಕಾರಣಕ್ಕೋ ಏನೋ, ಒಲ್ಲದ ಮನಸ್ಸಿನಲ್ಲೇ ಮುಂಬೈ ಪರ ಮುಂಬೈಕರ್ ಆಡಿದ್ರು. ಕಳೆದ ಸೀಸನ್ನಲ್ಲೇ ಒಂದು ಕಾಲು ಹೊರಗಿಟ್ಟಿದ್ದ ರೋಹಿತ್, ಇದೀಗ ಮುಂಬೈಗೆ ಟಾಟಾ ಮಾಡಲು ಸಜ್ಜಾಗಿದ್ದಾರೆ. ಮುಂಬೈ ತೊರೆಯುವ ನಿರ್ಧಾರವನ್ನ ರೋಹಿತ್ ತಳೆದಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಕೆಕೆಆರ್ನಿಂದ ರೋಹಿತ್ ಶರ್ಮಾಗೆ ಆಫರ್.!
ಈಗಾಗಲೇ ಕೆಕೆಆರ್ ಫ್ರಾಂಚೈಸಿ ಮುಂಬೈನ ಮತ್ತೊಬ್ಬ ಅಸಮಾಧಾನಿತ ಆಟಗಾರ ಸೂರ್ಯಕುಮಾರ್ಗೆ ಬಿಗ್ ಆಫರ್ ಮಾಡಿದೆ. ಕ್ಯಾಪ್ಟನ್ಸಿ ಪಟ್ಟದೊಂದಿಗೆ, ₹30 ಕೋಟಿಯ ಆಫರ್ನ ಕೆಕೆಆರ್ ಮ್ಯಾನೇಜ್ಮೆಂಟ್ ಮಾಡಿದೆ. ಟೀಮ್ ಇಂಡಿಯಾ T20 ತಂಡದ ಹಾಲಿ ನಾಯಕನ ಬೆನ್ನಲ್ಲೇ, ಮಾಜಿ ನಾಯಕನಿಗೂ ಕೆಕೆಆರ್ ಬಲೆ ಬೀಸಿದೆ. ಮೂಲಗಳ ಪ್ರಕಾರ ರೋಹಿತ್ ಶರ್ಮಾರನ್ನೂ ಕೆಕೆಆರ್ ಫ್ರಾಂಚೈಸಿ ಈಗಾಗಲೇ ಸಂಪರ್ಕಿಸಿ ಚರ್ಚಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಯುವಕ ಜೋಗ ಜಲಪಾತದಲ್ಲಿ ಕಣ್ಮರೆ.. ಶೋಧ ಕಾರ್ಯ
ಹಾರ್ದಿಕ್ಗೆ ಪಟ್ಟ ಕಟ್ಟಿದಾಗ ಸೂರ್ಯಕುಮಾರ್ ಯಾದವ್ ಕೂಡ ಬೇಸರಗೊಂಡಿದ್ರು. ರೋಹಿತ್ ಶರ್ಮಾ ಜೊತೆಗೆ ಸೂರ್ಯ ಹೆಚ್ಚು ಗುರುತಿಸಿಕೊಂಡಿದ್ರು. ಸೂರ್ಯ ಸಕ್ಸಸ್ ಕಂಡಿದ್ದು ಕೂಡ ರೋಹಿತ್ ನಾಯಕತ್ವದಡಿಯಲ್ಲೇ. ಈಗ ಟೀಮ್ ಇಂಡಿಯಾ ನಾಯಕತ್ವ ಸೂರ್ಯನಿಗೆ ಸಿಕ್ಕಿದ್ರ, ಹಿಂದೆಯೋ ರೋಹಿತ್ ಪಾತ್ರವಿದೆ. ಇಬ್ಬರ ನಡುವೆ ಉತ್ತಮ ಬಾಂಡಿಂಗ್ ಇರೋದ್ರಿಂದ ಸೂರ್ಯ ನಾಯಕತ್ವದಲ್ಲಿ ಆಡಲು ರೋಹಿತ್ಗೆ ಯಾವುದೇ ಸಮಸ್ಯೆ ಇರಲ್ಲ. ಹೀಗಾಗಿ ಸೂರ್ಯ ಕೆಕೆಆರ್ ಸಾರಥ್ಯ ವಹಿಸಿಕೊಂಡ್ರೆ, ರೋಹಿತ್ ಕೆಕೆಆರ್ ಸೇರೋದು ಬಹುತೇಕ ಕನ್ಫರ್ಮ್ ಆದಂತೆ.
ರೋಹಿತ್ ಶರ್ಮಾ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ಕಣ್ಣು.!
ಕಳೆದ ಸೀಸನ್ನಲ್ಲಿ ರೋಹಿತ್ಗೆ ಮುಂಬೈ ಫ್ರಾಂಚೈಸಿ ಅವಮಾನ ಮಾಡಿದ ಸಮಯದಿಂದ ಡೆಲ್ಲಿ ಫ್ರಾಂಚೈಸಿ ಹಿಟ್ಮ್ಯಾನ್ ಮೇಲೆ ಕಣ್ಣಿಟ್ಟಿದೆ. ಇದೀಗ ರಿಷಬ್ ಪಂತ್ ತಂಡವನ್ನ ತೊರೆಯಲು ಸಜ್ಜಾಗಿದ್ದಾರೆ. ಫ್ರಾಂಚೈಸಿ ಕೂಡ ಸ್ಟಾರ್ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಭವಿಷ್ಯದ ತಂಡ ಕಟ್ಟೋ ಸಾಮರ್ಥ್ಯ ರೋಹಿತ್ಗಿರೋದ್ರಿಂದ ಡೆಲ್ಲಿ ಫ್ರಾಂಚೈಸಿ ನಾಯಕತ್ವದ ಆಫರ್ ನೀಡೋ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ರೋಹಿತ್ ಡೆಲ್ಲಿ ಸೇರಿದ್ದೇ ಆದ್ರೆ, ತಂಡದ ಚರಿಷ್ಮಾನೇ ಬದಲಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ