ಕ್ಯಾಪ್ಟನ್ ರೋಹಿತ್ ಸಿರೀಯಸ್ ವಾರ್ನಿಂಗ್
ಯುವ ಆಟಗಾರರಿಗೆ ರೋಹಿತ್ ಶರ್ಮಾ ಅಭಯ
ಯುವಕರಿಗೆ ಬಹುಪರಾಕ್.. ಭವಿಷ್ಯದ ಭರವಸೆ
ರಾಂಚಿ ಟೆಸ್ಟ್ ಗೆದ್ದ ಟೀಮ್ ಇಂಡಿಯಾ, ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿದೆ. ಈ ಟೆಸ್ಟ್ ಸರಣಿ ಗೆಲುವಿನ ಬಳಿಕ ರೋಹಿತ್ ಆಡಿದ ಒಂದೇ ಒಂದು ಮಾತು ಹಲವರ ಎದೆಯಲ್ಲಿ ನಡುಕ ಹುಟ್ಟಿದೆ. ಕೆಲ ಆಟಗಾರರ ಪಾಲಿಗೆ ಟೀಮ್ ಇಂಡಿಯಾ ಡೋರ್ ಕಂಪ್ಲೀಟ್ ಕ್ಲೋಸ್ ಆಯ್ತಾ ಎಂಬ ಪ್ರಶ್ನೆಯೂ ಹುಟ್ಟಿದೆ.
ರಾಂಚಿ ಟೆಸ್ಟ್ ಗೆದ್ದ ಟೀಮ್ ಇಂಡಿಯಾ, ಟೆಸ್ಟ್ ನಲ್ಲಿ ಗೆಲುವಿನ ನಾಗಲೋಟ ಮುಂದುವರಿಸಿದೆ. ತವರಿನಲ್ಲಿ ಸತತ 17 ಟೆಸ್ಟ್ ಸರಣಿ ಗೆಲುವುಗಳ ದಾಖಲೆ ಬರೆದಿದೆ. ಈ ಗೆಲುವಿನ ಸಂಭ್ರದಲ್ಲಿದ್ದಾಗಲೇ ಹಿಟ್ಮ್ಯಾನ್ ರೋಹಿತ್, ಕೆಲ ಆಟಗಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಯುವಕರಿಗೆ ರೋಹಿತ್ ಅಭಯ.. ಸ್ಥಾನ ಗ್ಯಾರಂಟಿ
ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಆಟಗಾರ ಕಮಿಟ್ಮೆಂಟ್ಗೆ ರೋಹಿತ್ ಫಿದಾ ಆಗಿದ್ದಾರೆ. ಕಷ್ಟಕರ ಪಿಚ್ಗಲ್ಲಿ ಯುವಕರ ದಿಟ್ಟ ಹೋರಾಟಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಯಂಗ್ ಸ್ಟರ್ಗಳ ಪ್ರದರ್ಶನಕ್ಕೆ ಸಲಾಂ ಹೇಳಿರೋ ರೋಹಿತ್, ತಂಡದಲ್ಲಿ ಸ್ಥಾನ ನೀಡುವ ಅಭಯವನ್ನು ನೀಡಿದ್ದಾರೆ. ಇದೇ ವೇಳೆ ತಂಡ ಬಿಟ್ಟವರಿಗೆ ವಾರ್ನಿಂಗ್ ನೀಡಿದ್ದಾರೆ.
ಸಾಕಷ್ಟು ಯುವ ಆಟಗಾರರು ಹಿಂದೆ ಟೆಸ್ಟ್ ಕ್ರಿಕೆಟ್ ಆಡಿರಲಿಲ್ಲ. ಡ್ರೆಸ್ಸಿಂಗ್ ರೂಮ್ನ ಭಾಗವೂ ಆಗಿರಲಿಲ್ಲ. ಪ್ರಮುಖವಾಗಿ ಡ್ರೆಸ್ಸಿಂಗ್ ರೂಮ್ ಕಲ್ಚರ್ ಅರ್ಥ ಮಾಡಿಕೊಳ್ಳುವುದು ಮುಖ್ಯ. ನಮಗೆ ಬೇಕಾದದ್ದು ಅಡಾಪ್ಟ್ ಮಾಡಿಕೊಂಡು ಆಡುವುದು ಮುಖ್ಯ. ಈ ಆಟಗಾರರು ಮುಕ್ತ ಮನಸ್ಸಿನಿಂದ ತಂಡದ ಅಗತ್ಯತೆಗೆ ತಕ್ಕಂತೆ ಆಡಿದ್ದಾರೆ. ಇಂಥಹ ಆಟಗಾರರೇ ತಂಡಕ್ಕೆ ಬೇಕಾಗಿದ್ದಾರೆ. ವೈಯಕ್ತಿಕ ಆದ್ಯತೆಗಿಂತ ತಂಡದ ಹಿತಾಸಕ್ತಿಗೆ ಆದ್ಯತೆ ನೀಡುವವರ ಅವಶ್ಯಕತೆ ಇರುತ್ತೆ. ಈ ಆಟಗಾರರು ಅದನ್ನೇ ತೋರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಅತ್ಯಂತ ಕಠಿಣ ಫಾರ್ಮೆಟ್. ಈ ಮಾದರಿಯ ಕ್ರಿಕೆಟ್ನಲ್ಲಿ ನಿಮಗೆ ಯಶಸ್ಸು ಸಿಗಬೇಕಾದರೆ ಹಸಿವು ಇರಬೇಕು. ಯಾವ ಆಟಗಾರರಲ್ಲಿ ಹಸಿವಿದೆ, ಯಾರಲ್ಲಿ ಇಲ್ಲ ಎನ್ನವುದು ನೋಡಿದರೇ ಗೊತ್ತಾಗುತ್ತದೆ. ಕಷ್ಟಕರ ಕಂಡೀಷನ್ಸ್ನಲ್ಲಿ ಯುವ ಆಟಗಾರರು ಆಡಿದ್ದಾರೆ. ಅಂತಹ ಆಟಗಾರರಿಗೆ ಆದ್ಯತೆ ನೀಡಲೇಬೇಕಿದೆ. ಐಪಿಎಲ್ ಕೂಡ ಉತ್ತಮ ಫಾರ್ಮೆಟ್ ಆಗಿದೆ. ಅದರಲ್ಲಿ ಅನುಮಾನವೇ ಇಲ್ಲ. ಆದ್ರೆ, ಈ ಫಾರ್ಮೆಟ್ ಬಹಳಷ್ಟು ಕಷ್ಟಕರ-ರೋಹಿತ್ ಶರ್ಮಾ, ನಾಯಕ
ಇಂತಹ ಯುವ ಆಟಗಾರರೇ ತಂಡಕ್ಕೆ ಬೇಕಿದ್ದಾರೆ ಎಂದಿರುವ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ ಆಡಲು ಬಯಸದೆ, ಐಪಿಎಲ್ನತ್ತ ಫೋಕಸ್ ಮಾಡ್ತಿರುವವರಿಗೂ ಡೈರೆಕ್ಟ್ ಹಿಟ್ ಹೊಡೆದಿದ್ದಾರೆ. ನಿಮ್ಮ ಪಾಲಿಗೆ ಡೋರ್ಕ್ಲೋಸ್ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಹೆಸರು ಹೇಳದೇ ಇಶಾನ್ ಕಿಶನ್-ಶ್ರೇಯಸ್ಗೆ ಟಾಂಗ್..?
ರೋಹಿತ್ ಶರ್ಮಾರ ಹೇಳಿಕೆ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ತಂಡ ತೊರೆದ ಇಶಾನ್ ಕಿಶನ್ ಹಾಗೂ ಕಳೆದ 5 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಆಡದೆ, ವೈಟ್ಬಾಲ್ನತ್ತ ಮಾತ್ರ ಫೋಕಸ್ ಮಾಡ್ತಿರೋ ಹಾರ್ದಿಕ್ ಪಾಂಡ್ಯಗೆ ನೇರವಾಗಿ ಹೇಳಿದಂತಿದೆ. ಇಬ್ಬರೂ ಟೆಸ್ಟ್ ಕ್ರಿಕೆಟ್ನತ್ತ ಗಮನವನ್ನೇ ನೀಡದೇ ಐಪಿಎಲ್ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇನ್ನು, ಶ್ರೇಯಸ್ ಅಯ್ಯರ್ ಕೂಡ ಇದೇ ಹಾದಿಯಲ್ಲಿದ್ದಾರೆ. ಪರೋಕ್ಷವಾಗಿ ರೋಹಿತ್ ಇವ್ರಿಗೆ ಹೇಳಿದ್ದು ಅನ್ನೋದು ಎಲ್ಲರ ವಿಶ್ಲೇಷಣೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕ್ಯಾಪ್ಟನ್ ರೋಹಿತ್ ಸಿರೀಯಸ್ ವಾರ್ನಿಂಗ್
ಯುವ ಆಟಗಾರರಿಗೆ ರೋಹಿತ್ ಶರ್ಮಾ ಅಭಯ
ಯುವಕರಿಗೆ ಬಹುಪರಾಕ್.. ಭವಿಷ್ಯದ ಭರವಸೆ
ರಾಂಚಿ ಟೆಸ್ಟ್ ಗೆದ್ದ ಟೀಮ್ ಇಂಡಿಯಾ, ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿದೆ. ಈ ಟೆಸ್ಟ್ ಸರಣಿ ಗೆಲುವಿನ ಬಳಿಕ ರೋಹಿತ್ ಆಡಿದ ಒಂದೇ ಒಂದು ಮಾತು ಹಲವರ ಎದೆಯಲ್ಲಿ ನಡುಕ ಹುಟ್ಟಿದೆ. ಕೆಲ ಆಟಗಾರರ ಪಾಲಿಗೆ ಟೀಮ್ ಇಂಡಿಯಾ ಡೋರ್ ಕಂಪ್ಲೀಟ್ ಕ್ಲೋಸ್ ಆಯ್ತಾ ಎಂಬ ಪ್ರಶ್ನೆಯೂ ಹುಟ್ಟಿದೆ.
ರಾಂಚಿ ಟೆಸ್ಟ್ ಗೆದ್ದ ಟೀಮ್ ಇಂಡಿಯಾ, ಟೆಸ್ಟ್ ನಲ್ಲಿ ಗೆಲುವಿನ ನಾಗಲೋಟ ಮುಂದುವರಿಸಿದೆ. ತವರಿನಲ್ಲಿ ಸತತ 17 ಟೆಸ್ಟ್ ಸರಣಿ ಗೆಲುವುಗಳ ದಾಖಲೆ ಬರೆದಿದೆ. ಈ ಗೆಲುವಿನ ಸಂಭ್ರದಲ್ಲಿದ್ದಾಗಲೇ ಹಿಟ್ಮ್ಯಾನ್ ರೋಹಿತ್, ಕೆಲ ಆಟಗಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಯುವಕರಿಗೆ ರೋಹಿತ್ ಅಭಯ.. ಸ್ಥಾನ ಗ್ಯಾರಂಟಿ
ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಯುವ ಆಟಗಾರ ಕಮಿಟ್ಮೆಂಟ್ಗೆ ರೋಹಿತ್ ಫಿದಾ ಆಗಿದ್ದಾರೆ. ಕಷ್ಟಕರ ಪಿಚ್ಗಲ್ಲಿ ಯುವಕರ ದಿಟ್ಟ ಹೋರಾಟಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಯಂಗ್ ಸ್ಟರ್ಗಳ ಪ್ರದರ್ಶನಕ್ಕೆ ಸಲಾಂ ಹೇಳಿರೋ ರೋಹಿತ್, ತಂಡದಲ್ಲಿ ಸ್ಥಾನ ನೀಡುವ ಅಭಯವನ್ನು ನೀಡಿದ್ದಾರೆ. ಇದೇ ವೇಳೆ ತಂಡ ಬಿಟ್ಟವರಿಗೆ ವಾರ್ನಿಂಗ್ ನೀಡಿದ್ದಾರೆ.
ಸಾಕಷ್ಟು ಯುವ ಆಟಗಾರರು ಹಿಂದೆ ಟೆಸ್ಟ್ ಕ್ರಿಕೆಟ್ ಆಡಿರಲಿಲ್ಲ. ಡ್ರೆಸ್ಸಿಂಗ್ ರೂಮ್ನ ಭಾಗವೂ ಆಗಿರಲಿಲ್ಲ. ಪ್ರಮುಖವಾಗಿ ಡ್ರೆಸ್ಸಿಂಗ್ ರೂಮ್ ಕಲ್ಚರ್ ಅರ್ಥ ಮಾಡಿಕೊಳ್ಳುವುದು ಮುಖ್ಯ. ನಮಗೆ ಬೇಕಾದದ್ದು ಅಡಾಪ್ಟ್ ಮಾಡಿಕೊಂಡು ಆಡುವುದು ಮುಖ್ಯ. ಈ ಆಟಗಾರರು ಮುಕ್ತ ಮನಸ್ಸಿನಿಂದ ತಂಡದ ಅಗತ್ಯತೆಗೆ ತಕ್ಕಂತೆ ಆಡಿದ್ದಾರೆ. ಇಂಥಹ ಆಟಗಾರರೇ ತಂಡಕ್ಕೆ ಬೇಕಾಗಿದ್ದಾರೆ. ವೈಯಕ್ತಿಕ ಆದ್ಯತೆಗಿಂತ ತಂಡದ ಹಿತಾಸಕ್ತಿಗೆ ಆದ್ಯತೆ ನೀಡುವವರ ಅವಶ್ಯಕತೆ ಇರುತ್ತೆ. ಈ ಆಟಗಾರರು ಅದನ್ನೇ ತೋರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಅತ್ಯಂತ ಕಠಿಣ ಫಾರ್ಮೆಟ್. ಈ ಮಾದರಿಯ ಕ್ರಿಕೆಟ್ನಲ್ಲಿ ನಿಮಗೆ ಯಶಸ್ಸು ಸಿಗಬೇಕಾದರೆ ಹಸಿವು ಇರಬೇಕು. ಯಾವ ಆಟಗಾರರಲ್ಲಿ ಹಸಿವಿದೆ, ಯಾರಲ್ಲಿ ಇಲ್ಲ ಎನ್ನವುದು ನೋಡಿದರೇ ಗೊತ್ತಾಗುತ್ತದೆ. ಕಷ್ಟಕರ ಕಂಡೀಷನ್ಸ್ನಲ್ಲಿ ಯುವ ಆಟಗಾರರು ಆಡಿದ್ದಾರೆ. ಅಂತಹ ಆಟಗಾರರಿಗೆ ಆದ್ಯತೆ ನೀಡಲೇಬೇಕಿದೆ. ಐಪಿಎಲ್ ಕೂಡ ಉತ್ತಮ ಫಾರ್ಮೆಟ್ ಆಗಿದೆ. ಅದರಲ್ಲಿ ಅನುಮಾನವೇ ಇಲ್ಲ. ಆದ್ರೆ, ಈ ಫಾರ್ಮೆಟ್ ಬಹಳಷ್ಟು ಕಷ್ಟಕರ-ರೋಹಿತ್ ಶರ್ಮಾ, ನಾಯಕ
ಇಂತಹ ಯುವ ಆಟಗಾರರೇ ತಂಡಕ್ಕೆ ಬೇಕಿದ್ದಾರೆ ಎಂದಿರುವ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ ಆಡಲು ಬಯಸದೆ, ಐಪಿಎಲ್ನತ್ತ ಫೋಕಸ್ ಮಾಡ್ತಿರುವವರಿಗೂ ಡೈರೆಕ್ಟ್ ಹಿಟ್ ಹೊಡೆದಿದ್ದಾರೆ. ನಿಮ್ಮ ಪಾಲಿಗೆ ಡೋರ್ಕ್ಲೋಸ್ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಹೆಸರು ಹೇಳದೇ ಇಶಾನ್ ಕಿಶನ್-ಶ್ರೇಯಸ್ಗೆ ಟಾಂಗ್..?
ರೋಹಿತ್ ಶರ್ಮಾರ ಹೇಳಿಕೆ ಸೌತ್ ಆಫ್ರಿಕಾದಲ್ಲಿ ಟೆಸ್ಟ್ ತಂಡ ತೊರೆದ ಇಶಾನ್ ಕಿಶನ್ ಹಾಗೂ ಕಳೆದ 5 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಆಡದೆ, ವೈಟ್ಬಾಲ್ನತ್ತ ಮಾತ್ರ ಫೋಕಸ್ ಮಾಡ್ತಿರೋ ಹಾರ್ದಿಕ್ ಪಾಂಡ್ಯಗೆ ನೇರವಾಗಿ ಹೇಳಿದಂತಿದೆ. ಇಬ್ಬರೂ ಟೆಸ್ಟ್ ಕ್ರಿಕೆಟ್ನತ್ತ ಗಮನವನ್ನೇ ನೀಡದೇ ಐಪಿಎಲ್ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇನ್ನು, ಶ್ರೇಯಸ್ ಅಯ್ಯರ್ ಕೂಡ ಇದೇ ಹಾದಿಯಲ್ಲಿದ್ದಾರೆ. ಪರೋಕ್ಷವಾಗಿ ರೋಹಿತ್ ಇವ್ರಿಗೆ ಹೇಳಿದ್ದು ಅನ್ನೋದು ಎಲ್ಲರ ವಿಶ್ಲೇಷಣೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್