ಈ ಬಾರಿ ಐಪಿಎಲ್ನಲ್ಲಿ ಧೋನಿ ಕ್ಯಾಪ್ಟನ್ಸಿ ಡೌಟ್
ಭವಿಷ್ಯದ ನಾಯಕನ ಹುಡುಕಾಟದಲ್ಲಿ ಸಿಎಸ್ಕೆ
ಜಡೇಜಾಗೆ ಕ್ಯಾಪ್ಟನ್ಸಿ ಕೊಟ್ಟು ಕೈಸುಟ್ಟುಕೊಂಡಿದ್ದ CSK
ಮಹೇಂದ್ರ ಸಿಂಗ್ ಧೋನಿ ಸಿಎಸ್ಕೆ ತಂಡದ ನಾಯಕತ್ವ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದು, ಭವಿಷ್ಯದ ನಾಯಕನಿಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಿಎಸ್ಕೆ ಅಂದುಕೊಂಡಂತೆ ಎಲ್ಲವೂ ಆದರೆ ಈ ಬಾರಿಯ ಐಪಿಎಲ್ನಲ್ಲಿ ಧೋನಿ ಕ್ಯಾಪ್ಟನ್ಸಿ ಇರುವುದಿಲ್ಲ.
2022ರಲ್ಲಿ ಸರ್ ರವೀಂದ್ರ ಜಡೇಜಾಗೆ ಕ್ಯಾಪ್ಟನ್ಸಿ ಕೊಟ್ಟಿದ್ದ ಸಿಎಸ್ಕೆ, ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿರುವ ಋತುರಾಜ್ ಗಾಯಕ್ವಾಡ್ಗೆ ಕ್ಯಾಪ್ಟನ್ಸಿ ಹಸ್ತಾಂತರ ಮಾಡಲು ನಿರ್ಧರಿಸಿದ್ದಾರೆ. ಹಾಗಾದ್ರೆ ಧೋನಿ ಬದಲು ರುತುರಾಜ್ಗೆ ಕ್ಯಾಪ್ಟನ್ಸಿ ಹಸ್ತಾಂತರ ಮಾಡ್ತಿರೋದ್ಯಾಕೆ ? ತಂಡದಲ್ಲಿ ಅನುಭವಿ ಆಟಗಾರರಿದ್ರು ಗಾಯಕ್ವಾಡ್ ಮೇಲೆ ಹೆಚ್ಚು ಒಲವೇಕೆ ? ಅವರೇಕೆ ಚೆನ್ನೈ ಕ್ಯಾಪ್ಟನ್ ಆಗಲು ಯೋಗ್ಯ? ಅನ್ನೋದಕ್ಕೆ ಕಾರಣ ಇಲ್ಲಿದೆ.
ಗಾಯಕ್ವಾಡ್ ಯಾಕೆ ಕ್ಯಾಪ್ಟನ್ ಆಗ್ಬೇಕು..?
ರುತುರಾಜ್ ಗಾಯಕ್ವಾಡ್ ಆಟಗಾರನಾಗಿ 2021ರಲ್ಲಿ ಆರೆಂಜ್ ಕ್ಯಾಪ್ ಜಯಿಸಿ ಸಾಮರ್ಥ್ಯ ಸಾಬೀತುಪಡಿಸಿದ್ರು. ಒತ್ತಡದಲ್ಲಿ ತಾಳ್ಮೆಯುವ ವರ್ತಿಸುವ ಗುಣವಿದ್ದು, ತಪ್ಪುಗಳನ್ನ ಬೇಗನೆ ತಿದ್ದಿಕೊಳ್ಳಬಲ್ಲರು. ಸಿಎಸ್ಕೆ ತಂಡದ ಸಂಸ್ಕೃತಿ ಉಳಿಸುವ ಹಾಗೂ ಸಹ ಆಟಗಾರರನ್ನ ಗೌರವಿಸುವ ಗುಣವಿದೆ. ಈಗಿನ್ನೂ 27 ವರ್ಷ. ಸುದೀರ್ಘ ಕಾಲ ನಾಯಕನಾಗಿ ಬೆಳೆಸುವ ಅವಕಾಶವಿದೆ. ಜತೆಗೆ ಧೋನಿ ನಾಯಕತ್ವದಲ್ಲಿ ಸಾಕಷ್ಟು ಪಟ್ಟುಗಳನ್ನ ಕಲಿತ್ತಿದ್ದಾರೆ.
ಒಟ್ಟಿನಲ್ಲಿ 17ನೇ ಐಪಿಎಲ್ ಆರಂಭಕ್ಕೂ ಮುನ್ನವೇ ಸಿಎಸ್ಕೆ ತಂಡದ ಮಿಡ್ ಸೀಸನ್ ಕ್ಯಾಪ್ಟನ್ಸಿ ಬದಲಾವಣೆಯ ವಿಚಾರ ಬಿಸಿಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆದರೆ ಸಿಎಸ್ಕೆ ಫ್ರಾಂಚೈಸಿ ನಿಜವಾಗಿಯೂ ಧೋನಿ ಕೆಳಗಿಳಿಸಿ, ಗಾಯಕ್ವಾಡ್ ಪಟ್ಟ ಕಟ್ಟುತ್ತಾ? ಇಲ್ಲ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಬೇರೆಯವರು ಕ್ಯಾಪ್ಟನ್ಸಿ ರೇಸ್ಗೆ ಎಂಟ್ರಿಕೊಡ್ತಾರಾ? ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಈ ಬಾರಿ ಐಪಿಎಲ್ನಲ್ಲಿ ಧೋನಿ ಕ್ಯಾಪ್ಟನ್ಸಿ ಡೌಟ್
ಭವಿಷ್ಯದ ನಾಯಕನ ಹುಡುಕಾಟದಲ್ಲಿ ಸಿಎಸ್ಕೆ
ಜಡೇಜಾಗೆ ಕ್ಯಾಪ್ಟನ್ಸಿ ಕೊಟ್ಟು ಕೈಸುಟ್ಟುಕೊಂಡಿದ್ದ CSK
ಮಹೇಂದ್ರ ಸಿಂಗ್ ಧೋನಿ ಸಿಎಸ್ಕೆ ತಂಡದ ನಾಯಕತ್ವ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದು, ಭವಿಷ್ಯದ ನಾಯಕನಿಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಿಎಸ್ಕೆ ಅಂದುಕೊಂಡಂತೆ ಎಲ್ಲವೂ ಆದರೆ ಈ ಬಾರಿಯ ಐಪಿಎಲ್ನಲ್ಲಿ ಧೋನಿ ಕ್ಯಾಪ್ಟನ್ಸಿ ಇರುವುದಿಲ್ಲ.
2022ರಲ್ಲಿ ಸರ್ ರವೀಂದ್ರ ಜಡೇಜಾಗೆ ಕ್ಯಾಪ್ಟನ್ಸಿ ಕೊಟ್ಟಿದ್ದ ಸಿಎಸ್ಕೆ, ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆಯನ್ನಿಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿರುವ ಋತುರಾಜ್ ಗಾಯಕ್ವಾಡ್ಗೆ ಕ್ಯಾಪ್ಟನ್ಸಿ ಹಸ್ತಾಂತರ ಮಾಡಲು ನಿರ್ಧರಿಸಿದ್ದಾರೆ. ಹಾಗಾದ್ರೆ ಧೋನಿ ಬದಲು ರುತುರಾಜ್ಗೆ ಕ್ಯಾಪ್ಟನ್ಸಿ ಹಸ್ತಾಂತರ ಮಾಡ್ತಿರೋದ್ಯಾಕೆ ? ತಂಡದಲ್ಲಿ ಅನುಭವಿ ಆಟಗಾರರಿದ್ರು ಗಾಯಕ್ವಾಡ್ ಮೇಲೆ ಹೆಚ್ಚು ಒಲವೇಕೆ ? ಅವರೇಕೆ ಚೆನ್ನೈ ಕ್ಯಾಪ್ಟನ್ ಆಗಲು ಯೋಗ್ಯ? ಅನ್ನೋದಕ್ಕೆ ಕಾರಣ ಇಲ್ಲಿದೆ.
ಗಾಯಕ್ವಾಡ್ ಯಾಕೆ ಕ್ಯಾಪ್ಟನ್ ಆಗ್ಬೇಕು..?
ರುತುರಾಜ್ ಗಾಯಕ್ವಾಡ್ ಆಟಗಾರನಾಗಿ 2021ರಲ್ಲಿ ಆರೆಂಜ್ ಕ್ಯಾಪ್ ಜಯಿಸಿ ಸಾಮರ್ಥ್ಯ ಸಾಬೀತುಪಡಿಸಿದ್ರು. ಒತ್ತಡದಲ್ಲಿ ತಾಳ್ಮೆಯುವ ವರ್ತಿಸುವ ಗುಣವಿದ್ದು, ತಪ್ಪುಗಳನ್ನ ಬೇಗನೆ ತಿದ್ದಿಕೊಳ್ಳಬಲ್ಲರು. ಸಿಎಸ್ಕೆ ತಂಡದ ಸಂಸ್ಕೃತಿ ಉಳಿಸುವ ಹಾಗೂ ಸಹ ಆಟಗಾರರನ್ನ ಗೌರವಿಸುವ ಗುಣವಿದೆ. ಈಗಿನ್ನೂ 27 ವರ್ಷ. ಸುದೀರ್ಘ ಕಾಲ ನಾಯಕನಾಗಿ ಬೆಳೆಸುವ ಅವಕಾಶವಿದೆ. ಜತೆಗೆ ಧೋನಿ ನಾಯಕತ್ವದಲ್ಲಿ ಸಾಕಷ್ಟು ಪಟ್ಟುಗಳನ್ನ ಕಲಿತ್ತಿದ್ದಾರೆ.
ಒಟ್ಟಿನಲ್ಲಿ 17ನೇ ಐಪಿಎಲ್ ಆರಂಭಕ್ಕೂ ಮುನ್ನವೇ ಸಿಎಸ್ಕೆ ತಂಡದ ಮಿಡ್ ಸೀಸನ್ ಕ್ಯಾಪ್ಟನ್ಸಿ ಬದಲಾವಣೆಯ ವಿಚಾರ ಬಿಸಿಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆದರೆ ಸಿಎಸ್ಕೆ ಫ್ರಾಂಚೈಸಿ ನಿಜವಾಗಿಯೂ ಧೋನಿ ಕೆಳಗಿಳಿಸಿ, ಗಾಯಕ್ವಾಡ್ ಪಟ್ಟ ಕಟ್ಟುತ್ತಾ? ಇಲ್ಲ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಬೇರೆಯವರು ಕ್ಯಾಪ್ಟನ್ಸಿ ರೇಸ್ಗೆ ಎಂಟ್ರಿಕೊಡ್ತಾರಾ? ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್