ಪತಿಯ ಫೋನ್ ಕದ್ದಾಲಿಕೆ ಮಾಡಿದ್ರಾ ಖ್ಯಾತ ನಟಿ
ಗಂಡನ ಮೇಲಿನ ಅನುಮಾನದಿಂದ ವಿಚ್ಛೇದನ ಪಡೆದರೇ?
ತಾರಾ ಜೋಡಿ ವಿಚ್ಛೇದನಕ್ಕೆ ಫೋನ್ ಕದ್ದಾಲಿಕೆ ಕಾರಣವಾಯ್ತಾ?
ಇತ್ತೀಚೆಗೆ ತೆಲಂಗಾಣದಲ್ಲಿ ಮುನ್ನೆಲೆಗೆ ಬಂದ ಟೆಲಿಫೋನ್ ಕದ್ದಾಳಿಕೆ ಪ್ರಕರಣ ಅಗೆದಷ್ಟು ಬಯಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಖ್ಯಾತ ನಟ-ನಟಿಯರ ಫೋನ್ ಕದ್ದಾಲಿಕೆ ಮಾಡಿರುವ ಸಂಗತಿ ಹೊರಬರುತ್ತಿದೆ. ಅಚ್ಚರಿ ಸಂಗತಿ ಎಂದರೆ ನಟಿ ಸಮಂತಾ ರುತ್ ಪ್ರಭು ಹೆಸರು ಕೂಡ ಈ ಫೋನ್ ಕದ್ದಾಳಿಕೆಯಲ್ಲಿ ಕೇಳಿಬಂದಿದೆ ಎನ್ನಲಾಗುತ್ತಿದ್ದು, ಇದರಿಂದಾಗಿ ಆಕೆ ಮತ್ತು ನಾಗ ಚೈತನ್ಯ ಇಬ್ಬರ ವಿಚ್ಛೇದನ ಇದು ಕಾರಣವಾಯಿತೇ ಎಂಬ ಅನುಮಾನ ಅಭಿಮಾನಿಗಳಿಗೆ ಮೂಡಿದೆ.
ಟೆಲಿಫೋನ್ ಕದ್ದಾಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಣೀತ್ ರಾವ್ ಬಂಧನಕ್ಕೊಳಗಾಗಿದ್ದಾರೆ. ವಿಚಾರಣೆ ವೇಳೆ ಹಲವಾರು ಸಂಗತಿ ಬಾಯಿ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಪ್ರಣೀತ್ ರಾವ್ ತಂಡ ಉದ್ಯಮಿ, ಸಿನಿಮಾ, ರಾಜಕಾರಣಿ ಮತ್ತು ಸೆಲೆಬ್ರಿಟಿಗಳ ಫೋನ್ ಟ್ಯಾಪಿಂಗ್ನಲ್ಲಿ ಭಾಗಿಯಾಗಿತ್ತು. ಕೇವಲ ಕದ್ದಾಳಿಕೆ ಮಾತ್ರವಲ್ಲ, ಬೆದರಿಕೆ, ಸುಲಿಗೆ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂಬ ಸಂಗತಿ ಮುನ್ನೆಲೆಗೆ ಬಂದಿದೆ.
ದಕ್ಷಿಣ ಭಾರತದ ಪ್ರಖ್ಯಾತ ನಟಿಯೊಬ್ಬರು ಈ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಲುಕಿದ್ದು, ಅವರ ವೈಯಕ್ತಿಕ ಜೀವನದ ಗೌಪ್ಯತೆ ಇದರಲ್ಲಿ ಬಂದಿತ್ತು ಎಂಬ ಸಂಗತಿ ಹರಿದಾಡಿತ್ತು. ಇದೀಗ ನಟಿ ಸಮಂತಾ ಅವರು ಈ ಫೋನ್ ಕದ್ದಾಲಿಕೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ತಾರಾ ಜೋಡಿ ವಿಚ್ಚೇಧನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪತ್ನಿ ಮತ್ತು ಮಗುವಿನ ಜೊತೆ ಲಂಡನ್ ನೆನಪಿನ ಬುತ್ತಿ ತೆರೆದಿಟ್ಟ ಕೊಹ್ಲಿ.. ದೇವರಿಗೆ ಧನ್ಯವಾದ ಹೇಳಿದ್ದೇಕೆ ವಿರಾಟ್?
ತೆಲುಗಿನ ಕೆಲವು ಯ್ಯೂಟೂಬ್ ಚಾನೆಲ್ನಲ್ಲಿ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣ ಎಂದು ಬಿತ್ತರಿಸುತ್ತಿವೆ. ಮತ್ತೊಂದೆಡೆ ನಾಗ ಚೈತನ್ಯ ವರ್ತನೆ ಮೇಲೆ ಸಮಂತಾಗೆ ಅನುಮಾನವಿತ್ತು. ಈ ಕಾರಣಕ್ಕೆ ನಟಿ ಫೋನ್ ಟ್ಯಾಪಿಂಗ್ ಮಾಡಿಸಿದ್ದರು ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪತಿಯ ಫೋನ್ ಕದ್ದಾಲಿಕೆ ಮಾಡಿದ್ರಾ ಖ್ಯಾತ ನಟಿ
ಗಂಡನ ಮೇಲಿನ ಅನುಮಾನದಿಂದ ವಿಚ್ಛೇದನ ಪಡೆದರೇ?
ತಾರಾ ಜೋಡಿ ವಿಚ್ಛೇದನಕ್ಕೆ ಫೋನ್ ಕದ್ದಾಲಿಕೆ ಕಾರಣವಾಯ್ತಾ?
ಇತ್ತೀಚೆಗೆ ತೆಲಂಗಾಣದಲ್ಲಿ ಮುನ್ನೆಲೆಗೆ ಬಂದ ಟೆಲಿಫೋನ್ ಕದ್ದಾಳಿಕೆ ಪ್ರಕರಣ ಅಗೆದಷ್ಟು ಬಯಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಖ್ಯಾತ ನಟ-ನಟಿಯರ ಫೋನ್ ಕದ್ದಾಲಿಕೆ ಮಾಡಿರುವ ಸಂಗತಿ ಹೊರಬರುತ್ತಿದೆ. ಅಚ್ಚರಿ ಸಂಗತಿ ಎಂದರೆ ನಟಿ ಸಮಂತಾ ರುತ್ ಪ್ರಭು ಹೆಸರು ಕೂಡ ಈ ಫೋನ್ ಕದ್ದಾಳಿಕೆಯಲ್ಲಿ ಕೇಳಿಬಂದಿದೆ ಎನ್ನಲಾಗುತ್ತಿದ್ದು, ಇದರಿಂದಾಗಿ ಆಕೆ ಮತ್ತು ನಾಗ ಚೈತನ್ಯ ಇಬ್ಬರ ವಿಚ್ಛೇದನ ಇದು ಕಾರಣವಾಯಿತೇ ಎಂಬ ಅನುಮಾನ ಅಭಿಮಾನಿಗಳಿಗೆ ಮೂಡಿದೆ.
ಟೆಲಿಫೋನ್ ಕದ್ದಾಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಣೀತ್ ರಾವ್ ಬಂಧನಕ್ಕೊಳಗಾಗಿದ್ದಾರೆ. ವಿಚಾರಣೆ ವೇಳೆ ಹಲವಾರು ಸಂಗತಿ ಬಾಯಿ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಪ್ರಣೀತ್ ರಾವ್ ತಂಡ ಉದ್ಯಮಿ, ಸಿನಿಮಾ, ರಾಜಕಾರಣಿ ಮತ್ತು ಸೆಲೆಬ್ರಿಟಿಗಳ ಫೋನ್ ಟ್ಯಾಪಿಂಗ್ನಲ್ಲಿ ಭಾಗಿಯಾಗಿತ್ತು. ಕೇವಲ ಕದ್ದಾಳಿಕೆ ಮಾತ್ರವಲ್ಲ, ಬೆದರಿಕೆ, ಸುಲಿಗೆ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂಬ ಸಂಗತಿ ಮುನ್ನೆಲೆಗೆ ಬಂದಿದೆ.
ದಕ್ಷಿಣ ಭಾರತದ ಪ್ರಖ್ಯಾತ ನಟಿಯೊಬ್ಬರು ಈ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಲುಕಿದ್ದು, ಅವರ ವೈಯಕ್ತಿಕ ಜೀವನದ ಗೌಪ್ಯತೆ ಇದರಲ್ಲಿ ಬಂದಿತ್ತು ಎಂಬ ಸಂಗತಿ ಹರಿದಾಡಿತ್ತು. ಇದೀಗ ನಟಿ ಸಮಂತಾ ಅವರು ಈ ಫೋನ್ ಕದ್ದಾಲಿಕೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ತಾರಾ ಜೋಡಿ ವಿಚ್ಚೇಧನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪತ್ನಿ ಮತ್ತು ಮಗುವಿನ ಜೊತೆ ಲಂಡನ್ ನೆನಪಿನ ಬುತ್ತಿ ತೆರೆದಿಟ್ಟ ಕೊಹ್ಲಿ.. ದೇವರಿಗೆ ಧನ್ಯವಾದ ಹೇಳಿದ್ದೇಕೆ ವಿರಾಟ್?
ತೆಲುಗಿನ ಕೆಲವು ಯ್ಯೂಟೂಬ್ ಚಾನೆಲ್ನಲ್ಲಿ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣ ಎಂದು ಬಿತ್ತರಿಸುತ್ತಿವೆ. ಮತ್ತೊಂದೆಡೆ ನಾಗ ಚೈತನ್ಯ ವರ್ತನೆ ಮೇಲೆ ಸಮಂತಾಗೆ ಅನುಮಾನವಿತ್ತು. ಈ ಕಾರಣಕ್ಕೆ ನಟಿ ಫೋನ್ ಟ್ಯಾಪಿಂಗ್ ಮಾಡಿಸಿದ್ದರು ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ