newsfirstkannada.com

ಆಸ್ಪತ್ರೆಗೆ ದಾಖಲಾದ ಸ್ಯಾಂಡಲ್​ವುಡ್​ ಸ್ಟಾರ್ ಶ್ರೀಮುರುಳಿ.. ಬಘೀರನಿಗೆ ಆಗಿದ್ದೇನು?

Share :

Published April 22, 2024 at 8:29am

    ಶ್ರೀಮುರಳಿ ನಟನೆಯ ಬಘೀರ ಸಖತ್ ಹೈಪ್ ಕ್ರಿಯೇಟ್ ಮಾಡಿದೆ

    ಕಾಲಿಗೆ ಗಂಭೀರವಾಗಿ ಗಾಯವಾಗಿದ್ದಲ್ಲದೇ ಕೈಗೂ ಸಣ್ಣಪುಟ್ಟ ಪೆಟ್ಟು

    ನೆಚ್ಚಿನ ನಟ ಬೇಗ ಗುಣಮುಖರಾಗಲಿ ಅಂತಾ ಫ್ಯಾನ್ಸ್ ಹಾರೈಸ್ತಿದ್ದಾರೆ

ಬಘೀರ.. ಶ್ರೀಮುರಳಿ ನಟನೆಯ ಹೊಂಬಾಳೆ ಫಿಲಂಸ್ ನಿರ್ಮಿಸ್ತಿರೋ ಬಹು ನಿರೀಕ್ಷಿತ ಚಿತ್ರ, ಈ ಚಿತ್ರದ ಶೂಟಿಂಗ್​ ಕೂಡ ಭರದಿಂದ ಸಾಗ್ತಿತ್ತು. ಆದ್ರೆ, ಶೂಟಿಂಗ್​ನ ನಡುವೆಯೇ ಚಿತ್ರಕ್ಕೆ ಬಿಗ್ ಶಾಕ್ ಎದುರಾಗಿದೆ. ನಾಯಕ ನಟ ಶ್ರೀಮುರಳಿ ಆಸ್ಪತ್ರೆ ಸೇರುವಂತಾಗಿದೆ.

ಈ ಟೀಸರ್​ ರಿಲೀಸ್​ನಿಂದ ರೋರಿಂಗ್​ ಸ್ಟಾರ್​ ಶ್ರೀ ಮುರಳಿ ನಟನೆಯ ಬಘೀರ ಚಿತ್ರ ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ನಿರೀಕ್ಷೆಯನ್ನೂ ಹುಟ್ಟಿಸಿತ್ತು. ಚಿತ್ರೀಕರಣವೂ ಭರದಿಂದ ಸಾಗ್ತಿತ್ತು. ಈ ವೇಳೆ ಅವಘಡವೊಂದು ಸಂಭವಿಸಿದೆ. ಚಿತ್ರದ ನಾಯಕ ನಟ ಶ್ರೀಮುರಳಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ.

ಇದನ್ನೂ ಓದಿ: ನಟಿಯಾಗಿ ಮಿಂಚಲು ಸಜ್ಜಾದ ‘ವೀರ ಮದಕರಿ’ ಚಿತ್ರದ ಬಾಲನಟಿ ಜೆರುಶಾ ಕ್ರಿಸ್ಟೋಫರ್; ಯಾವ ಸಿನಿಮಾ?

ಬಘೀರ ಚಿತ್ರದ ಶೂಟಿಂಗ್ ವೇಳೆ ನಟ‌ ಶ್ರೀಮುರಳಿ ಕಾಲಿಗೆ ಪೆಟ್ಟಾಗಿದೆ. ಫೈಟಿಂಗ್ ಸೀನ್ ಚಿತ್ರೀಕರಿಸುವ ವೇಳೆ ಶ್ರೀಮುರಳಿ ಕಾಲಿಗೆ ಗಾಯವಾಗಿದೆ. ಎಡ ಗಾಲಿಗೆ ಗಂಭೀರ ಗಾಯವಾಗಿದ್ರೆ ಕೈಗೂ ಸಣ್ಣ ಪೆಟ್ಟು ಆಗಿದೆ. ಮೈಸೂರಿನಲ್ಲಿ ಬಘೀರ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಸದ್ಯ ಗಾಯಗೊಂಡಿರೋ ಶ್ರೀಮುರಳಿಯನ್ನ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

‘ಬಘೀರ’ನ ಕಾಲಿಗೆ ಪೆಟ್ಟು!

  • ಶ್ರೀಮುರಳಿ ಗಾಯಾಳು ಆಗ್ತಿರೋದು ಇದೇ ಮೊದಲೇನಲ್ಲ
  • ಕಳೆದ 7-8 ತಿಂಗಳ ಹಿಂದೆ ಶೂಟಿಂಗ್ ವೇಳೆ ಎಡಗಾಲಿಗೆ ಪೆಟ್ಟು
  • ಆಗ ಆಪರೇಷನ್ ಮಾಡಿದ ಬಳಿಕ 6 ತಿಂಗಳ ಕಾಲ ವಿಶ್ರಾಂತಿ
  • 6 ತಿಂಗಳು ರೆಸ್ಟ್​ನಲ್ಲಿದ್ದ ಶ್ರೀಮುರಳಿ ಶೂಟಿಂಗ್​ಗೆ ಮರಳಿದ್ದರು
  • ಮತ್ತೆ ಅದೇ ಕಾಲಿಗೆ ಪೆಟ್ಟಾಗಿರೋದ್ರಿಂದ ಚಿತ್ರತಂಡಕ್ಕೆ ಆತಂಕ

ಇದನ್ನೂ ಓದಿ: ರಾತ್ರಿ ಸುವರ್ಣಸೌಧದ ಬಳಿ ಭಾರೀ ಗಲಾಟೆ, ಹೈಡ್ರಾಮಾ.. ಇಬ್ಬರು ಆಸ್ಪತ್ರೆಗೆ ದಾಖಲು

ಬಘೀರ ಸಿನಿಮಾದ ಬಹು ದೊಡ್ಡ ಸ್ಟಂಟ್ ಸೀನ್ ಶೂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪದೇ ಪದೆ ಪೆಟ್ಟು ಮಾಡಿಕೊಳ್ತಿರೋದು ಆತಂಕವನ್ನ ಹೆಚ್ಚಾಗಿಸಿದೆ. ಸದ್ಯ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಶ್ರೀಮುರಳಿಗೆ ಚಿಕಿತ್ಸೆ ಕೊಡಿಸಲಾಗ್ತಿದ್ದು, ಬೇಗ ಗುಣಮುಖರಾಗಲಿ ಅಂತಾ ಫ್ಯಾನ್ಸ್ ಹಾರೈಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಪತ್ರೆಗೆ ದಾಖಲಾದ ಸ್ಯಾಂಡಲ್​ವುಡ್​ ಸ್ಟಾರ್ ಶ್ರೀಮುರುಳಿ.. ಬಘೀರನಿಗೆ ಆಗಿದ್ದೇನು?

https://newsfirstlive.com/wp-content/uploads/2024/04/SRI_MURALI.jpg

    ಶ್ರೀಮುರಳಿ ನಟನೆಯ ಬಘೀರ ಸಖತ್ ಹೈಪ್ ಕ್ರಿಯೇಟ್ ಮಾಡಿದೆ

    ಕಾಲಿಗೆ ಗಂಭೀರವಾಗಿ ಗಾಯವಾಗಿದ್ದಲ್ಲದೇ ಕೈಗೂ ಸಣ್ಣಪುಟ್ಟ ಪೆಟ್ಟು

    ನೆಚ್ಚಿನ ನಟ ಬೇಗ ಗುಣಮುಖರಾಗಲಿ ಅಂತಾ ಫ್ಯಾನ್ಸ್ ಹಾರೈಸ್ತಿದ್ದಾರೆ

ಬಘೀರ.. ಶ್ರೀಮುರಳಿ ನಟನೆಯ ಹೊಂಬಾಳೆ ಫಿಲಂಸ್ ನಿರ್ಮಿಸ್ತಿರೋ ಬಹು ನಿರೀಕ್ಷಿತ ಚಿತ್ರ, ಈ ಚಿತ್ರದ ಶೂಟಿಂಗ್​ ಕೂಡ ಭರದಿಂದ ಸಾಗ್ತಿತ್ತು. ಆದ್ರೆ, ಶೂಟಿಂಗ್​ನ ನಡುವೆಯೇ ಚಿತ್ರಕ್ಕೆ ಬಿಗ್ ಶಾಕ್ ಎದುರಾಗಿದೆ. ನಾಯಕ ನಟ ಶ್ರೀಮುರಳಿ ಆಸ್ಪತ್ರೆ ಸೇರುವಂತಾಗಿದೆ.

ಈ ಟೀಸರ್​ ರಿಲೀಸ್​ನಿಂದ ರೋರಿಂಗ್​ ಸ್ಟಾರ್​ ಶ್ರೀ ಮುರಳಿ ನಟನೆಯ ಬಘೀರ ಚಿತ್ರ ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ನಿರೀಕ್ಷೆಯನ್ನೂ ಹುಟ್ಟಿಸಿತ್ತು. ಚಿತ್ರೀಕರಣವೂ ಭರದಿಂದ ಸಾಗ್ತಿತ್ತು. ಈ ವೇಳೆ ಅವಘಡವೊಂದು ಸಂಭವಿಸಿದೆ. ಚಿತ್ರದ ನಾಯಕ ನಟ ಶ್ರೀಮುರಳಿ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ.

ಇದನ್ನೂ ಓದಿ: ನಟಿಯಾಗಿ ಮಿಂಚಲು ಸಜ್ಜಾದ ‘ವೀರ ಮದಕರಿ’ ಚಿತ್ರದ ಬಾಲನಟಿ ಜೆರುಶಾ ಕ್ರಿಸ್ಟೋಫರ್; ಯಾವ ಸಿನಿಮಾ?

ಬಘೀರ ಚಿತ್ರದ ಶೂಟಿಂಗ್ ವೇಳೆ ನಟ‌ ಶ್ರೀಮುರಳಿ ಕಾಲಿಗೆ ಪೆಟ್ಟಾಗಿದೆ. ಫೈಟಿಂಗ್ ಸೀನ್ ಚಿತ್ರೀಕರಿಸುವ ವೇಳೆ ಶ್ರೀಮುರಳಿ ಕಾಲಿಗೆ ಗಾಯವಾಗಿದೆ. ಎಡ ಗಾಲಿಗೆ ಗಂಭೀರ ಗಾಯವಾಗಿದ್ರೆ ಕೈಗೂ ಸಣ್ಣ ಪೆಟ್ಟು ಆಗಿದೆ. ಮೈಸೂರಿನಲ್ಲಿ ಬಘೀರ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಸದ್ಯ ಗಾಯಗೊಂಡಿರೋ ಶ್ರೀಮುರಳಿಯನ್ನ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

‘ಬಘೀರ’ನ ಕಾಲಿಗೆ ಪೆಟ್ಟು!

  • ಶ್ರೀಮುರಳಿ ಗಾಯಾಳು ಆಗ್ತಿರೋದು ಇದೇ ಮೊದಲೇನಲ್ಲ
  • ಕಳೆದ 7-8 ತಿಂಗಳ ಹಿಂದೆ ಶೂಟಿಂಗ್ ವೇಳೆ ಎಡಗಾಲಿಗೆ ಪೆಟ್ಟು
  • ಆಗ ಆಪರೇಷನ್ ಮಾಡಿದ ಬಳಿಕ 6 ತಿಂಗಳ ಕಾಲ ವಿಶ್ರಾಂತಿ
  • 6 ತಿಂಗಳು ರೆಸ್ಟ್​ನಲ್ಲಿದ್ದ ಶ್ರೀಮುರಳಿ ಶೂಟಿಂಗ್​ಗೆ ಮರಳಿದ್ದರು
  • ಮತ್ತೆ ಅದೇ ಕಾಲಿಗೆ ಪೆಟ್ಟಾಗಿರೋದ್ರಿಂದ ಚಿತ್ರತಂಡಕ್ಕೆ ಆತಂಕ

ಇದನ್ನೂ ಓದಿ: ರಾತ್ರಿ ಸುವರ್ಣಸೌಧದ ಬಳಿ ಭಾರೀ ಗಲಾಟೆ, ಹೈಡ್ರಾಮಾ.. ಇಬ್ಬರು ಆಸ್ಪತ್ರೆಗೆ ದಾಖಲು

ಬಘೀರ ಸಿನಿಮಾದ ಬಹು ದೊಡ್ಡ ಸ್ಟಂಟ್ ಸೀನ್ ಶೂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪದೇ ಪದೆ ಪೆಟ್ಟು ಮಾಡಿಕೊಳ್ತಿರೋದು ಆತಂಕವನ್ನ ಹೆಚ್ಚಾಗಿಸಿದೆ. ಸದ್ಯ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಶ್ರೀಮುರಳಿಗೆ ಚಿಕಿತ್ಸೆ ಕೊಡಿಸಲಾಗ್ತಿದ್ದು, ಬೇಗ ಗುಣಮುಖರಾಗಲಿ ಅಂತಾ ಫ್ಯಾನ್ಸ್ ಹಾರೈಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More