ಸಿಂಹಳೀಯರ ನಾಡಲ್ಲಿ ಕನ್ನಡಿಗನ ಮುಂದಿದೆ ದೊಡ್ಡ ಅಗ್ನಿಪರೀಕ್ಷೆ
ಕೆ.ಎಲ್ ರಾಹುಲ್ಗೆ ವಿಶ್ವಕಪ್ ಆಡೋ ಅವಕಾಶ ಸಿಗುತ್ತದೆಯಾ?
ಈ ಅಗ್ನಿ ಪರೀಕ್ಷೆ ಗೆದ್ದರೆ ಮಾತ್ರ, ಸ್ಥಾನ ಸೇಫ್. ಇಲ್ಲದಿದ್ರೆ ಏನಾಗುತ್ತೆ?
ಶ್ರೀಲಂಕಾ ಪ್ರವಾಸ ಕನ್ನಡಿಗ K.L ರಾಹುಲ್ ಪಾಲಿಗೆ ಡು ಆರ್ ಡೈ ಸರಣಿ. ಸಿಂಹಳೀಯರ ನಾಡಲ್ಲಿ ನಡೆಯೋ 3 ಪಂದ್ಯಗಳ ಏಕದಿನ ಸರಣಿಯಲ್ಲಿ ನೀಡೋ ಪರ್ಫಾಮೆನ್ಸ್ ರಾಹುಲ್ ಭವಿಷ್ಯವನ್ನೇ ನಿರ್ಧರಿಸಲಿದೆ. ಈ ಅಗ್ನಿ ಪರೀಕ್ಷೆ ಗೆದ್ರೆ ಮಾತ್ರ, ಸ್ಥಾನ ಸೇಫ್. ಇಲ್ಲದಿದ್ರೆ, ಟೆಸ್ಟ್ಗೆ ಮಾತ್ರ ರಾಹುಲ್ ಸೀಮಿತವಾಗಲಿದ್ದಾರೆ. ಅಷ್ಟಕ್ಕೂ ರಾಹುಲ್ ಕರಿಯರ್ ಸಂಕಷ್ಟಕ್ಕೆ ಸಿಲುಕಿರೋದ್ಯಾಕೆ?.
ಇದನ್ನೂ ಓದಿ: ‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್ ಅಂದ್ರೆ ಇವರಿಗೆ ಭಯ, ಕಾರಣ?
ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸಕ್ಕೆ ಕೌಂಟ್ಡೌನ್ ಶುರುವಾಗಿದೆ. ಜುಲೈ 22ರಂದು ಟೀಮ್ ಇಂಡಿಯಾ ಲಂಕಾಗೆ ಹಾರಲಿದೆ. ಜುಲೈ 27ರಿಂದ ಟಿ20 ಸರಣಿ ನಡೆಯಲಿದ್ದು, ಅದಾದ ಬಳಿಕ ಏಕದಿನ ಸರಣಿ ನಡೆಯಲಿದೆ. ಚುಟುಕು ಸರಣಿಗಿಂತ ಸೀನಿಯರ್ಸ್ ಆಡ್ತಿರೋ ಏಕದಿನ ಸರಣಿ ಭಾರತೀಯ ಕ್ರಿಕೆಟ್ ಲೋಕದ ಗಮನ ಸೆಳೆದಿದೆ. ಮುಂದಿನ ವರ್ಷ ನಡೆಯೋ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಇದು ಕೆಲವರ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ.
ಇದನ್ನೂ ಓದಿ: IT ಕಂಪನಿಗಳ ಉದ್ಯೋಗಿಗಳಿಗೆ ಬಿಗ್ ಶಾಕ್.. ಇನ್ಮುಂದೆ 14 ಗಂಟೆ ಕೆಲಸ ಮಾಡೋದು ಫಿಕ್ಸ್?
ಕೆ.ಎಲ್ ರಾಹುಲ್ ಮುಂದಿದೆ ದೊಡ್ಡ ಸವಾಲ್.!
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಕೋಟಾದಲ್ಲಿ ಸ್ಥಾನ ಪಡೆದಿರೋ ರಾಹುಲ್ ಪಾಲಿಗೆ ಇದು ಅಗ್ನಿಪರೀಕ್ಷೆಯ ಕಣವಾಗಿದೆ. ಸಿಂಹಳೀಯರ ನಾಡಲ್ಲಿ ಆಡೋ ಪ್ರತಿ ಪಂದ್ಯವೂ ರಾಹುಲ್ ಹಣೆ ಬರಹವನ್ನೇ ನಿರ್ಧರಿಸಲಿದೆ. ಸರಣಿ 3 ಪಂದ್ಯಗಳಲ್ಲಿ ರಾಹುಲ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗೋದು ಕನ್ಫರ್ಮ್. ಆದ್ರೆ, ನಂತರದ ಸರಣಿಗಳಲ್ಲೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಂದ್ರೆ, ದೊಡ್ಡ ಸವಾಲುಗಳನ್ನ ಗೆಲ್ಲಬೇಕಿದೆ.
ಖಾಯಂ ಸ್ಥಾನಕ್ಕಾಗಿ ನಡೆಸಬೇಕಿದೆ ಸರ್ಕಸ್.!
ಓಪನರ್ ಸ್ಲಾಟ್ನಿಂದ ಔಟ್ ಆಗಿರೋ ರಾಹುಲ್ ಸದ್ಯ ಮಿಡಲ್ ಆರ್ಡರ್ ಬ್ಯಾಟರ್ ಆಗಿದ್ದಾರೆ. ಏಕದಿನ ವಿಶ್ವಕಪ್ನಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೋಟಾದಲ್ಲಿ ರಾಹುಲ್ಗೆ ಸ್ಥಾನ ಸಿಕ್ಕಿತ್ತು. ಇದೀಗ ವಿಕೆಟ್ ಕೀಪರ್ ರಿಷಬ್ ಪಂತ್ ಕಮ್ಬ್ಯಾಕ್ ಮಾಡಿದ್ದಾರೆ. ವಿಶ್ವಕಪ್ನಲ್ಲಿ ಪಂತ್ ಮೋಡಿ ಮಾಡಿದ ಮೇಲಂತೂ ಎಸ್ಪೆಷಲಿ ರಾಹುಲ್ ಸ್ಥಾನಕ್ಕೆ ಕುತ್ತು ಬಂದಿದೆ. ಕನ್ನಡಿಗ ಖಾಯಂ ಸ್ಥಾನ ಪಡೆದುಕೊಳ್ಳಬೇಕಂದ್ರೆ, ಲಂಕಾ ಟೂರ್ನಲ್ಲಿ ಮಿಂಚಲೇಬೇಕಿದೆ.
ಫೇಲ್ ಆದ್ರೆ ವೈಟ್ಬಾಲ್ ಫಾರ್ಮೆಟ್ನಿಂದ ಔಟ್.!
ನಿಧಾನಗತಿಯ ಬ್ಯಾಟಿಂಗ್, ಸ್ಥಾನಕ್ಕಿರೋ ಪೈಪೋಟಿಯ ಕಾರಣಕ್ಕೆ ಕೆ.ಎಲ್ ರಾಹುಲ್ ಈಗಾಗಲೇ ಟಿ20 ತಂಡದಿಂದ ಹೊರ ಬಿದ್ದಿದ್ದಾರೆ. ರಾಹುಲ್ ಸ್ಥಾನವನ್ನ ಸಂಜು ಸ್ಯಾಮ್ಸನ್ ಆಕ್ರಮಿಸಿಕೊಂಡಿದ್ದಾರೆ. ಇದೀಗ ಲಂಕಾ ಟೂರ್ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೋಟಾದಲ್ಲಿ ಸ್ಥಾನ ಪಡೆದಿರೋ ರಾಹುಲ್ ಫೇಲ್ ಆದ್ರೆ, ಸಂಜು ಸ್ಯಾಮ್ಸನ್ ಏಕದಿನ ತಂಡಕ್ಕೂ ಎಂಟ್ರಿ ಕೊಡೋ ಸಾಧ್ಯತೆಯಿದೆ. ಈಗಾಗಲೇ ರಿಷಬ್ ಪಂತ್ ತಂಡದ ಫಸ್ಟ್ ಚಾಯ್ಸ್ ಪ್ಲೇಯರ್ ಆಗಿದ್ದಾರೆ. ಇದೀಗ ರಾಹುಲ್ ಖಾಯಂ ಸ್ಥಾನಿಯಾಗಬೇಕಿದೆ.
ವೈಫಲ್ಯ ಕಂಡ್ರೆ ಚಾಂಪಿಯನ್ಸ್ ಟ್ರೋಫಿ ಕನಸು ಭಗ್ನ.!
ಮುಂದಿನ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸದ 3 ಪಂದ್ಯಗಳೂ ಸೇರಿದಂತೆ ಒಟ್ಟಾರೆ 6 ಏಕದಿನ ಪಂದ್ಯಗಳನ್ನ ಮಾತ್ರ ಆಡಲಿದೆ. ರಾಹುಲ್ ಸ್ಥಾನ ಉಳಿಸಿಕೊಳ್ಳಬೇಕಂದ್ರೆ, ಈ ಸರಣಿಯಲ್ಲಿ ಪರ್ಫಾಮ್ ಮಾಡೋದು ಅನಿವಾರ್ಯವಾಗಿದೆ. ಆಟದ ಮೂಲಕ ಮ್ಯಾನೇಜ್ಮೆಂಟ್ನ ಇಂಪ್ರೆಸ್ ಮಾಡಿದ್ರಷ್ಟೇ ಚಾಂಪಿಯನ್ಸ್ ಟ್ರೋಫಿ ಟಿಕೆಟ್ ಸಿಗಲಿದೆ. ಇಲ್ಲಾಂದ್ರೆ ಕನಸು ಭಗ್ನವಾಗಲಿದೆ.
ಇದನ್ನೂ ಓದಿ: ಗುರಾಯಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಯುವಕನ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?
2 ವರ್ಷ ರಾಹುಲ್ ಮುಂದಿದೆ 2 ಬಿಗ್ ಟಾಸ್ಕ್.!
ಮುಂದಿನ 2 ವರ್ಷದಲ್ಲಿ ಟೀಮ್ ಇಂಡಿಯಾ 2 ಐಸಿಸಿ ಟೂರ್ನಿಗಳನ್ನ ಆಡಲಿದೆ. 2025ರ ಚಾಂಪಿಯನ್ಸ್ ಟ್ರೋಫಿ, 2026ರ ಟಿ20 ವಿಶ್ವಕಪ್ಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಐಸಿಸಿ ಟೂರ್ನಿಗಳನ್ನ ಟಾರ್ಗೆಟ್ ಮಾಡಿರೋ ಮ್ಯಾನೇಜ್ಮೆಂಟ್ ಕೋರ್ ಟೀಮ್ ಕಟ್ತಾಯಿದೆ. ಏಕದಿನ ತಂಡದಲ್ಲಿರೋ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ರೆ, ಚಾಂಪಿಯನ್ಸ್ ಟ್ರೋಫಿ ಟೀಮ್ನಲ್ಲಿ ಕಾಣಿಸಿಕೊಳ್ಳೋದು ಕನ್ಫರ್ಮ್. ಒಂದು ವೇಳೆ, EXTRAORDINARY ಪರ್ಫಾಮೆನ್ಸ್ ನೀಡಿದ್ರೆ, T20 ತಂಡದ ಡೋರ್ ಓಪನ್ ಆಗೋ ಸಾಧ್ಯತೆ ಇದೆ. ವಿಶ್ವಕಪ್ ಆಡೋ ಅವಕಾಶವೂ ಸಿಗಲಿದೆ.
ಇದನ್ನೂ ಓದಿ: ತುಂಗಾಭದ್ರ ಡ್ಯಾಂ ಭರ್ತಿಗೆ ಕೆಲವೇ ಅಡಿಗಳು ಬಾಕಿ.. 3 ವಾರದಲ್ಲಿ ಹರಿದು ಬಂದಿರೋ ನೀರು ಎಷ್ಟು?
ಶ್ರೀಲಂಕಾ ಪ್ರವಾಸ ಕನ್ನಡಿಗ ಕೆ.ಎಲ್ ರಾಹುಲ್ ಪಾಲಿಗೆ ಅಳಿವು ಉಳಿವಿನ ಪ್ರವಾಸವಾಗಿದೆ. ಸಿಂಹಳೀಯರ ನಾಡಲ್ಲಿ ಅಬ್ಬರಿಸಿದ್ರೆ, ರಾಹುಲ್ ಕರಿಯರ್ಗೆ ಆಕ್ಸಿಜನ್ ಸಿಕ್ಕಂತಾಗಲಿದೆ. ಇಲ್ಲದಿದ್ರೆ, ವೈಟ್ಬಾಲ್ ಫಾರ್ಮೆಟ್ನಿಂದ ಹೊರಬಿದ್ದು, ಟೆಸ್ಟ್ ಕ್ರಿಕೆಟ್ಗೆ ಮಾತ್ರ ಸೀಮಿತವಾಗಬೇಕಾಗುತ್ತೆ. ಡು ಆರ್ ಡೈ ಸರಣಿಯಲ್ಲಿ ರಾಹುಲ್ ಸಾಲಿಡ್ ಪ್ರದರ್ಶನ ನೀಡಿ, ಸ್ಥಾನ ಭದ್ರಪಡಿಸಿಕೊಳ್ಳಲಿ ಅನ್ನೋದು ಕನ್ನಡಿಗರ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಸಿಂಹಳೀಯರ ನಾಡಲ್ಲಿ ಕನ್ನಡಿಗನ ಮುಂದಿದೆ ದೊಡ್ಡ ಅಗ್ನಿಪರೀಕ್ಷೆ
ಕೆ.ಎಲ್ ರಾಹುಲ್ಗೆ ವಿಶ್ವಕಪ್ ಆಡೋ ಅವಕಾಶ ಸಿಗುತ್ತದೆಯಾ?
ಈ ಅಗ್ನಿ ಪರೀಕ್ಷೆ ಗೆದ್ದರೆ ಮಾತ್ರ, ಸ್ಥಾನ ಸೇಫ್. ಇಲ್ಲದಿದ್ರೆ ಏನಾಗುತ್ತೆ?
ಶ್ರೀಲಂಕಾ ಪ್ರವಾಸ ಕನ್ನಡಿಗ K.L ರಾಹುಲ್ ಪಾಲಿಗೆ ಡು ಆರ್ ಡೈ ಸರಣಿ. ಸಿಂಹಳೀಯರ ನಾಡಲ್ಲಿ ನಡೆಯೋ 3 ಪಂದ್ಯಗಳ ಏಕದಿನ ಸರಣಿಯಲ್ಲಿ ನೀಡೋ ಪರ್ಫಾಮೆನ್ಸ್ ರಾಹುಲ್ ಭವಿಷ್ಯವನ್ನೇ ನಿರ್ಧರಿಸಲಿದೆ. ಈ ಅಗ್ನಿ ಪರೀಕ್ಷೆ ಗೆದ್ರೆ ಮಾತ್ರ, ಸ್ಥಾನ ಸೇಫ್. ಇಲ್ಲದಿದ್ರೆ, ಟೆಸ್ಟ್ಗೆ ಮಾತ್ರ ರಾಹುಲ್ ಸೀಮಿತವಾಗಲಿದ್ದಾರೆ. ಅಷ್ಟಕ್ಕೂ ರಾಹುಲ್ ಕರಿಯರ್ ಸಂಕಷ್ಟಕ್ಕೆ ಸಿಲುಕಿರೋದ್ಯಾಕೆ?.
ಇದನ್ನೂ ಓದಿ: ‘ಕೊಹ್ಲಿ ಶ್ರೇಷ್ಠ ಪ್ಲೇಯರ್, ರೋಹಿತ್ ಡೇಂಜರಸ್ ಬ್ಯಾಟರ್’.. ಆದ್ರೆ ಈ ಬೌಲರ್ ಅಂದ್ರೆ ಇವರಿಗೆ ಭಯ, ಕಾರಣ?
ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸಕ್ಕೆ ಕೌಂಟ್ಡೌನ್ ಶುರುವಾಗಿದೆ. ಜುಲೈ 22ರಂದು ಟೀಮ್ ಇಂಡಿಯಾ ಲಂಕಾಗೆ ಹಾರಲಿದೆ. ಜುಲೈ 27ರಿಂದ ಟಿ20 ಸರಣಿ ನಡೆಯಲಿದ್ದು, ಅದಾದ ಬಳಿಕ ಏಕದಿನ ಸರಣಿ ನಡೆಯಲಿದೆ. ಚುಟುಕು ಸರಣಿಗಿಂತ ಸೀನಿಯರ್ಸ್ ಆಡ್ತಿರೋ ಏಕದಿನ ಸರಣಿ ಭಾರತೀಯ ಕ್ರಿಕೆಟ್ ಲೋಕದ ಗಮನ ಸೆಳೆದಿದೆ. ಮುಂದಿನ ವರ್ಷ ನಡೆಯೋ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಇದು ಕೆಲವರ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿದೆ.
ಇದನ್ನೂ ಓದಿ: IT ಕಂಪನಿಗಳ ಉದ್ಯೋಗಿಗಳಿಗೆ ಬಿಗ್ ಶಾಕ್.. ಇನ್ಮುಂದೆ 14 ಗಂಟೆ ಕೆಲಸ ಮಾಡೋದು ಫಿಕ್ಸ್?
ಕೆ.ಎಲ್ ರಾಹುಲ್ ಮುಂದಿದೆ ದೊಡ್ಡ ಸವಾಲ್.!
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಕೋಟಾದಲ್ಲಿ ಸ್ಥಾನ ಪಡೆದಿರೋ ರಾಹುಲ್ ಪಾಲಿಗೆ ಇದು ಅಗ್ನಿಪರೀಕ್ಷೆಯ ಕಣವಾಗಿದೆ. ಸಿಂಹಳೀಯರ ನಾಡಲ್ಲಿ ಆಡೋ ಪ್ರತಿ ಪಂದ್ಯವೂ ರಾಹುಲ್ ಹಣೆ ಬರಹವನ್ನೇ ನಿರ್ಧರಿಸಲಿದೆ. ಸರಣಿ 3 ಪಂದ್ಯಗಳಲ್ಲಿ ರಾಹುಲ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗೋದು ಕನ್ಫರ್ಮ್. ಆದ್ರೆ, ನಂತರದ ಸರಣಿಗಳಲ್ಲೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಂದ್ರೆ, ದೊಡ್ಡ ಸವಾಲುಗಳನ್ನ ಗೆಲ್ಲಬೇಕಿದೆ.
ಖಾಯಂ ಸ್ಥಾನಕ್ಕಾಗಿ ನಡೆಸಬೇಕಿದೆ ಸರ್ಕಸ್.!
ಓಪನರ್ ಸ್ಲಾಟ್ನಿಂದ ಔಟ್ ಆಗಿರೋ ರಾಹುಲ್ ಸದ್ಯ ಮಿಡಲ್ ಆರ್ಡರ್ ಬ್ಯಾಟರ್ ಆಗಿದ್ದಾರೆ. ಏಕದಿನ ವಿಶ್ವಕಪ್ನಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೋಟಾದಲ್ಲಿ ರಾಹುಲ್ಗೆ ಸ್ಥಾನ ಸಿಕ್ಕಿತ್ತು. ಇದೀಗ ವಿಕೆಟ್ ಕೀಪರ್ ರಿಷಬ್ ಪಂತ್ ಕಮ್ಬ್ಯಾಕ್ ಮಾಡಿದ್ದಾರೆ. ವಿಶ್ವಕಪ್ನಲ್ಲಿ ಪಂತ್ ಮೋಡಿ ಮಾಡಿದ ಮೇಲಂತೂ ಎಸ್ಪೆಷಲಿ ರಾಹುಲ್ ಸ್ಥಾನಕ್ಕೆ ಕುತ್ತು ಬಂದಿದೆ. ಕನ್ನಡಿಗ ಖಾಯಂ ಸ್ಥಾನ ಪಡೆದುಕೊಳ್ಳಬೇಕಂದ್ರೆ, ಲಂಕಾ ಟೂರ್ನಲ್ಲಿ ಮಿಂಚಲೇಬೇಕಿದೆ.
ಫೇಲ್ ಆದ್ರೆ ವೈಟ್ಬಾಲ್ ಫಾರ್ಮೆಟ್ನಿಂದ ಔಟ್.!
ನಿಧಾನಗತಿಯ ಬ್ಯಾಟಿಂಗ್, ಸ್ಥಾನಕ್ಕಿರೋ ಪೈಪೋಟಿಯ ಕಾರಣಕ್ಕೆ ಕೆ.ಎಲ್ ರಾಹುಲ್ ಈಗಾಗಲೇ ಟಿ20 ತಂಡದಿಂದ ಹೊರ ಬಿದ್ದಿದ್ದಾರೆ. ರಾಹುಲ್ ಸ್ಥಾನವನ್ನ ಸಂಜು ಸ್ಯಾಮ್ಸನ್ ಆಕ್ರಮಿಸಿಕೊಂಡಿದ್ದಾರೆ. ಇದೀಗ ಲಂಕಾ ಟೂರ್ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೋಟಾದಲ್ಲಿ ಸ್ಥಾನ ಪಡೆದಿರೋ ರಾಹುಲ್ ಫೇಲ್ ಆದ್ರೆ, ಸಂಜು ಸ್ಯಾಮ್ಸನ್ ಏಕದಿನ ತಂಡಕ್ಕೂ ಎಂಟ್ರಿ ಕೊಡೋ ಸಾಧ್ಯತೆಯಿದೆ. ಈಗಾಗಲೇ ರಿಷಬ್ ಪಂತ್ ತಂಡದ ಫಸ್ಟ್ ಚಾಯ್ಸ್ ಪ್ಲೇಯರ್ ಆಗಿದ್ದಾರೆ. ಇದೀಗ ರಾಹುಲ್ ಖಾಯಂ ಸ್ಥಾನಿಯಾಗಬೇಕಿದೆ.
ವೈಫಲ್ಯ ಕಂಡ್ರೆ ಚಾಂಪಿಯನ್ಸ್ ಟ್ರೋಫಿ ಕನಸು ಭಗ್ನ.!
ಮುಂದಿನ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸದ 3 ಪಂದ್ಯಗಳೂ ಸೇರಿದಂತೆ ಒಟ್ಟಾರೆ 6 ಏಕದಿನ ಪಂದ್ಯಗಳನ್ನ ಮಾತ್ರ ಆಡಲಿದೆ. ರಾಹುಲ್ ಸ್ಥಾನ ಉಳಿಸಿಕೊಳ್ಳಬೇಕಂದ್ರೆ, ಈ ಸರಣಿಯಲ್ಲಿ ಪರ್ಫಾಮ್ ಮಾಡೋದು ಅನಿವಾರ್ಯವಾಗಿದೆ. ಆಟದ ಮೂಲಕ ಮ್ಯಾನೇಜ್ಮೆಂಟ್ನ ಇಂಪ್ರೆಸ್ ಮಾಡಿದ್ರಷ್ಟೇ ಚಾಂಪಿಯನ್ಸ್ ಟ್ರೋಫಿ ಟಿಕೆಟ್ ಸಿಗಲಿದೆ. ಇಲ್ಲಾಂದ್ರೆ ಕನಸು ಭಗ್ನವಾಗಲಿದೆ.
ಇದನ್ನೂ ಓದಿ: ಗುರಾಯಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಯುವಕನ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?
2 ವರ್ಷ ರಾಹುಲ್ ಮುಂದಿದೆ 2 ಬಿಗ್ ಟಾಸ್ಕ್.!
ಮುಂದಿನ 2 ವರ್ಷದಲ್ಲಿ ಟೀಮ್ ಇಂಡಿಯಾ 2 ಐಸಿಸಿ ಟೂರ್ನಿಗಳನ್ನ ಆಡಲಿದೆ. 2025ರ ಚಾಂಪಿಯನ್ಸ್ ಟ್ರೋಫಿ, 2026ರ ಟಿ20 ವಿಶ್ವಕಪ್ಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಐಸಿಸಿ ಟೂರ್ನಿಗಳನ್ನ ಟಾರ್ಗೆಟ್ ಮಾಡಿರೋ ಮ್ಯಾನೇಜ್ಮೆಂಟ್ ಕೋರ್ ಟೀಮ್ ಕಟ್ತಾಯಿದೆ. ಏಕದಿನ ತಂಡದಲ್ಲಿರೋ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ರೆ, ಚಾಂಪಿಯನ್ಸ್ ಟ್ರೋಫಿ ಟೀಮ್ನಲ್ಲಿ ಕಾಣಿಸಿಕೊಳ್ಳೋದು ಕನ್ಫರ್ಮ್. ಒಂದು ವೇಳೆ, EXTRAORDINARY ಪರ್ಫಾಮೆನ್ಸ್ ನೀಡಿದ್ರೆ, T20 ತಂಡದ ಡೋರ್ ಓಪನ್ ಆಗೋ ಸಾಧ್ಯತೆ ಇದೆ. ವಿಶ್ವಕಪ್ ಆಡೋ ಅವಕಾಶವೂ ಸಿಗಲಿದೆ.
ಇದನ್ನೂ ಓದಿ: ತುಂಗಾಭದ್ರ ಡ್ಯಾಂ ಭರ್ತಿಗೆ ಕೆಲವೇ ಅಡಿಗಳು ಬಾಕಿ.. 3 ವಾರದಲ್ಲಿ ಹರಿದು ಬಂದಿರೋ ನೀರು ಎಷ್ಟು?
ಶ್ರೀಲಂಕಾ ಪ್ರವಾಸ ಕನ್ನಡಿಗ ಕೆ.ಎಲ್ ರಾಹುಲ್ ಪಾಲಿಗೆ ಅಳಿವು ಉಳಿವಿನ ಪ್ರವಾಸವಾಗಿದೆ. ಸಿಂಹಳೀಯರ ನಾಡಲ್ಲಿ ಅಬ್ಬರಿಸಿದ್ರೆ, ರಾಹುಲ್ ಕರಿಯರ್ಗೆ ಆಕ್ಸಿಜನ್ ಸಿಕ್ಕಂತಾಗಲಿದೆ. ಇಲ್ಲದಿದ್ರೆ, ವೈಟ್ಬಾಲ್ ಫಾರ್ಮೆಟ್ನಿಂದ ಹೊರಬಿದ್ದು, ಟೆಸ್ಟ್ ಕ್ರಿಕೆಟ್ಗೆ ಮಾತ್ರ ಸೀಮಿತವಾಗಬೇಕಾಗುತ್ತೆ. ಡು ಆರ್ ಡೈ ಸರಣಿಯಲ್ಲಿ ರಾಹುಲ್ ಸಾಲಿಡ್ ಪ್ರದರ್ಶನ ನೀಡಿ, ಸ್ಥಾನ ಭದ್ರಪಡಿಸಿಕೊಳ್ಳಲಿ ಅನ್ನೋದು ಕನ್ನಡಿಗರ ಆಶಯವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ