ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭದ್ರತಾ ಲೋಪ.. ಓಡೋಡಿ ಬಂದು ವೇದಿಕೆ ಏರಿದ ಯುವಕ

author-image
AS Harshith
Updated On
ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭದ್ರತಾ ಲೋಪ.. ಓಡೋಡಿ ಬಂದು ವೇದಿಕೆ ಏರಿದ ಯುವಕ
Advertisment
  • ವಿಧಾನಸೌಧದ ಮುಂಭಾಗ ಏರ್ಪಡಿಸಿದ ಕಾರ್ಯಕ್ರಮ
  • ಸಿಎಂ ಇದ್ದ ವೇದಿಕೆ ಏರಿದ ಯುವಕ.. ಆಮೇಲೆ ಏನು ಮಾಡಿದ ಗೊತ್ತಾ?
  • ಯುವಕನನ್ನು ವಶಕ್ಕೆ ಪಡೆದ ಪೊಲೀಸರು.. ಸದ್ಯ ಮುಂದುವರೆದ ವಿಚಾರಣೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಭದ್ರತಾಲೋಪ ಎದುರಾಗಿದೆ. ವಿಧಾನಸೌಧದ ಮುಂಭಾಗ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಯುವಕನೋರ್ವ ವೇದಿಕೆ ಏರಿದ ಘಟನೆ ನಡೆದಿದೆ.

ಇಂದು ಪ್ರಜಾಪ್ರಭುತ್ವದ ದಿನಾಚರಣೆಯ ಕಾರ್ಯಕ್ರಮವನ್ನು ವಿಧಾನಸೌಧದ ಮುಂದೆ ಆಯೋಜಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ವೇಳೆ ಸಿಎಂ ಇದ್ದ ವೇದಿಕೆಗೆ ಯುವಕನೋರ್ವ ಕೈಯಲ್ಲಿ ಶಾಲು ಹಿಡಿದು ಏಕಾಏಕಿ ನುಗ್ಗಿದ್ದಾನೆ.

publive-image

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಜೋಡಿ.. ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರಾ ಸುನಿತಾ ವಿಲಿಯಮ್ಸ್​ ಪತಿ?

ಸಚಿವರು, ಶಾಸಕರು ಭಾಗಿಯಾಗಿದ್ದ ವೇದಿಕೆಯನ್ನ ಯುವಕನೋರ್ವ ಓಡಿ ಬಂದು ಏರಿದ್ದಾನೆ. ಕೈಯಲ್ಲಿ ಶಾಲು ಹಿಡಿದು ಸಿಎಂ ಸಿದ್ದರಾಮಯ್ಯನವರತ್ತ ಎಸೆದಿದ್ದಾನೆ. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಯುವಕನ ವಿಚಾರಣೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment