Advertisment

ಜಾಲಿವುಡ್ ಸ್ಟುಡಿಯೋಗೆ ಬೀಗ.. ಕಲುಷಿತ ನೀರು ಕುಡಿದು 10 ಜಾನುವಾರು ಸಾ*ನ್ನಪ್ಪಿರೋ ಆರೋಪ

ಕೊಳಚೆ ನೀರನ್ನು ಸಂಸ್ಕರಿಸದೇ ಚರಂಡಿಗೆ ಬಿಟ್ಟ ಆರೋಪದ ಮೇಲೆ ಜಾಲಿವುಡ್ ಸ್ಟುಡಿಯೋಗೆ ಈಗಾಗಲೇ ರಾಮನಗರ ಜಿಲ್ಲಾಡಳಿತ ಬೀಗ ಜಡಿದಿದೆ. ಆ ಕೊಳಚೆ ನೀರು ವೃಷಭಾವತಿಪುರ ಕೆರೆಗೆ ಸೇರಿದ್ದು, ಆ ನೀರನ್ನು ಕುಡಿದು ಸುಮಾರು ಹತ್ತಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂಬ ಆರೋಪ ಕೇಳಿಬಂದಿದೆ.

author-image
Ganesh Kerekuli
kumar
Advertisment

ರಾಮನಗರ: ಜಾಲಿವುಡ್ ಸ್ಟುಡಿಯೋ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಚರಂಡಿಗೆ ಹರಿಸಿದ ನೀರು ಬಿಡದಿ ಬಳಿಯ ವೃಷಭಾವತಿಪುತ ಕೆರೆಗೆ ಸೇರಿದ್ದು, ಈ ನೀರನ್ನು ಕುಡಿದ ಸುಮಾರು ಹತ್ತಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ ಎಂದು ಸ್ಥಳೀಯರೊಬ್ಬರು ಆರೋಪ ಮಾಡಿದ್ದಾರೆ.

Advertisment

15 ದಿನಗಳ ಹಿಂದೆಯೇ ಪ್ರಶ್ನೆ ಮಾಡಿದ್ವಿ..!

ಈ ಕುರಿತು ಸ್ಥಳೀಯರಾದ ಕುಮಾರ್ ಮಾತನಾಡಿದ್ದು, ಜಾಲಿವುಡ್​ಗಿಂತ ಮೊದಲು ಫಿಲ್ಮ್ ಸಿಟಿ ಇತ್ತು. ಬಳಿಕ ಜಾಲಿವುಡ್ ಸ್ಟುಡಿಯೋ ನಿರ್ಮಾಣವಾಯ್ತು. 15 ದಿನಗಳ ಹಿಂದೆಯೇ ಈ ಕುರಿತು ಪ್ರಶ್ನೆ ಮಾಡಲಾಗಿತ್ತು. ನೀರು ಬಿಡುವುದನ್ನು ನಿಲ್ಲಿಸುತ್ತೇವೆ ಎಂದಿದ್ದರೇ ಹೊರತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದ್ರೀಗ ನಿಯಮ ಉಲ್ಲಂಘದಡಿ ಬೀಗ ಹಾಕಿದ್ದಾರೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ತ್ಯಾಜ್ಯ ನೀರನ್ನು ಬಿಡಬಾರದು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್​ಗೆ ಸಮಾಧಾನದ ಸುದ್ದಿ ಕೊಟ್ಟ ರಾಮನಗರ ಜಿಲ್ಲಾಧಿಕಾರಿ, ಆದರೆ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
ಕಿಚ್ಚನ ಚಪ್ಪಾಳೆ kiccha sudeep bigg boss jahnavi Bigg boss Bigg boss mallamma Bigg Boss Kannada 12
Advertisment
Advertisment
Advertisment