/newsfirstlive-kannada/media/media_files/2025/08/11/rajini-2025-08-11-12-02-49.jpg)
ಕನ್ನಡ ಕಿರುತೆರೆಯ ಅದ್ಭುತ ಕಲಾವಿದೆ ಅಂದ್ರೆ ಅದು ರಜಿನಿ. ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ, ದಶಕಗಳ ನಂತರ ಮತ್ತೆ ಸ್ಟಾರ್ ಸುವರ್ಣಗೆ ಮರಳಿದ್ದಾರೆ. ಈ ಮಧ್ಯೆ ನಟಿಯ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ನ್ಯೂಸ್.. ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ
ಹೌದು, ಸೋಶಿಯಲ್ ಮೀಡಿಯಾದಲ್ಲಿ ನಟಿ ರಜಿನಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೊಸ ಹೊಸ ಕಾನ್ಸೆಪ್ಟ್ನಲ್ಲಿ ರೀಲ್ಸ್ ಮಾಡುತ್ತಾ ಇರುತ್ತಾರೆ. ಇವರಿಗೆ ಬಾಡಿ ಬಿಲ್ಡರ್ ಅರುಣ್ ವೆಂಕಟೇಶ್ ಸಾಥ್ ಕೊಡುತ್ತಾರೆ. ಇನ್ನೂ, ನಟಿ ಬಾಡಿ ಬಿಲ್ಡರ್ ಅರುಣ್ ವೆಂಕಟೇಶ್ ಅವರ ಜೊತೆಗೆ ಹೆಚ್ಚು ರೀಲ್ಸ್ ಮಾಡುವುದನ್ನು ಗಮನಿಸಿದ ನೆಟ್ಟಿಗರು, ಅಭಿಮಾನಿಗಳು ಈ ಇಬ್ಬರು ಮದುವೆ ಆಗಲಿದ್ದಾರೆ ಎಂದು ಅಂದುಕೊಂಡಿದ್ದಾರೆ.
ಈ ಬಗ್ಗೆ ಖುದ್ದು ನಟಿ ರಜನಿ ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಗುಟ್ಟು ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಮಾತಾಡಿದ ನಟಿ, ಮದುವೆ ಆಗಿರುವವರ ಕಥೆ ನೋಡುತ್ತಿದ್ದೀವಿ. ಸಿಂಗಲ್ ಲೈಫ್ ಚೆನ್ನಾಗಿದೆ. ಮದುವೆ ಆದ ಬಳಿಕ ಜೀವನ ಚೆನ್ನಾಗಿತ್ತೆ. ನನ್ನ ಲೈಫ್ ಪಾಟ್ನರ್ ಯಾರಾಗುತ್ತಾರೆ ಅಂತ ಚರ್ಚೆ ಶುರುವಾಗಿದೆ. ನೋಡೋಣ ಯಾವಾಗ ಗಳಿಗೆ ಕೂಡಿ ಬರುತ್ತೆ ಅಂತ. ಗೆಳೆಯ ಲೈಫ್ ಪಾಟ್ನರ್ ಆಗ್ತಾರಾ ಅಂತ ನನಗೆ ಗೊತ್ತಿಲ್ಲ. ಯಾವಾಗ ಏನ್ ಆಗುತ್ತೆ ಅಂತ ಗೊತ್ತಿಲ್ಲ ಎಂದಿದ್ದಾರೆ.
ಇನ್ನೂ, ನಟಿ ರಜಿನಿ ಅವರು ನೆಗೆಟಿವ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಿಟ್ಲರ್ ಕಲ್ಯಾಣದಲ್ಲಿ ವಿಲನ್ ಆಗಿ ಮಿಂಚಿದ್ರು. ಸದ್ಯ ಹೊಸ ಪಾತ್ರ ಕೂಡ ಅದೇ ಶೇಡ್ನಲ್ಲಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿರೋ 'ನೀ ಇರಲು ಜೊತೆಯಲ್ಲಿ' ಸೀರಿಯಲ್ ನಲ್ಲಿ ಉರ್ಮಿಳಾ ದಿವಾನ್ ಆಗಿ ಕಾಣಿಸಿಕೊಳ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ