ಬಿಗ್​​ಬಾಸ್​ಗೆ ಎಂಟ್ರಿ ಕೊಡ್ತಿದ್ದಾರಾ ಪಹಲ್ಗಾಮ್ ಸಂತ್ರಸ್ತೆ ಹಿಮಾಂಶಿ ನರ್ವಾಲ್? ಇದರ ಅಸಲಿಯತ್ತೇನು?

ಸಾಮಾನ್ಯವಾಗಿ ಬಿಗ್​ಬಾಸ್​ ಶೋ ಶುರುವಾಗುವ ಮುನ್ನ ಕೆಲವೊಂದು ಹೆಸರುಗಳು ಹರಿದಾಡುತ್ತಲೇ ಇರುತ್ತವೆ. ಆದ್ರೆ ಇದೀಗ ಈ ಬಾರಿಯ ಹಿಂದಿ ಬಿಗ್​ಬಾಸ್ ಸೀಸನ್ 19ಕ್ಕೆ ಹಿಮಾಂಶಿ ನರ್ವಾಲ್ ಹೋಗುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

author-image
Veenashree Gangani
Himanshi Narwal
Advertisment

ಈಗಂತೂ ಬಿಗ್​ಬಾಸ್​ದ್ದೇ ಹವಾ.. ವೀಕ್ಷಕರ ಚಿತ್ತ ಈಗ ಬಿಗ್​ಬಾಸ್​ ಮೇಲೆ ನೆಟ್ಟಿದೆ. ಈಗಾಗಲೇ ಕನ್ನಡ, ತೆಲುಗು ಸೇರಿ ಹಲವು ಭಾಷೆಗಳಲ್ಲಿ ಬಿಗ್​ಬಾಸ್​ ಶೋ ಆರಂಭಿಸಲು ತೆರೆಮರೆಯಿಂದ ಸಿದ್ಧತೆ ನಡೆಸಲಾಗುತ್ತಿದೆ. ಇದರ ಮಧ್ಯೆ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 19 ಆಗಸ್ಟ್ 24ರಂದು ಗ್ರ್ಯಾಂಡ್​ ಆಗಿ ಶುರುವಾಗುತ್ತಿದೆ. 

ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್​ನ್ಯೂಸ್.. ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ

BIGG BOSS: ಬಿಗ್​ಬಾಸ್​ ಶುರುವಾಗೋ ಮುನ್ನವೇ ಲೀಕ್ ಆಯ್ತು ಸ್ಪರ್ಧಿಗಳ ಹೆಸರು.. ಪಟ್ಟಿ ಇಲ್ಲಿದೆ!

ಸಾಮಾನ್ಯವಾಗಿ ಬಿಗ್​ಬಾಸ್​ ಶೋ ಶುರುವಾಗುವ ಮುನ್ನ ಕೆಲವೊಂದು ಹೆಸರುಗಳು ಹರಿದಾಡುತ್ತಲೇ ಇರುತ್ತವೆ. ಆದ್ರೆ ಇದೀಗ ಈ ಬಾರಿಯ ಹಿಂದಿ ಬಿಗ್​ಬಾಸ್ ಸೀಸನ್ 19ಕ್ಕೆ ಹಿಮಾಂಶಿ ನರ್ವಾಲ್ ಹೋಗುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

Himanshi Narwal(1)

ಹೌದು, ಹಿಮಾಂಶಿ ನರ್ವಾಲ್​ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪತಿಯನ್ನು ಕಳೆದುಕೊಂಡವರು. ವಿನಯ್ ಮತ್ತು ಹಿಮಾಂಶಿ ಹನಿಮೂನ್‌ಗೆಂದುಕಾಶ್ಮೀರಕ್ಕೆ ಹೋದಾಗ ಭಯೋತ್ಪಾದಕರು ನೌಕಾಪಡೆಯ ಅಧಿಕಾರಿ ವಿನಯ್ನರ್ವಾಲ್ ಅವರನ್ನು ಗುಂಡಿಕ್ಕಿ ಕೊಂದಿದ್ದರು.

ಸಲ್ಮಾನ್​ ಖಾನ್​ಗೆ ಗಂಭೀರ ಕಾಯಿಲೆ.. ಏನಿದು Trigeminal Neuralgia..?

ಆದ್ರೆ, ಇದೀಗ ಭಯೋತ್ಪಾದಕರ ದಾಳಿಯಿಂದ ಹುತಾತ್ಮರಾದ ನೌಕಾಪಡೆಯ ಅಧಿಕಾರಿ ವಿನಯ್ನರ್ವಾಲ್ ಪತ್ನಿ ಬಿಗ್​ಬಾಸ್​ಗೆ ಹೋಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲಾ ಆಗಸ್ಟ್​ 24 ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ನಲ್ಲಿ ಅಸಲಿ ವಿಚಾರ ಬೆಳಕಿಗೆ ಬರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

himanshi narwal, bigg boss 19
Advertisment