Advertisment

ಬಿಗ್ ಬಾಸ್​​ ಮನೆಗೆ ಬೀಗ.. ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​​ಬಾಸ್​ಗೆ (Bigg Boss) ಬೀಗ ಬದ್ದಿರುವ ವಿಚಾರ ಭಾರೀ ಸುದ್ದಿಯಾಗ್ತಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿ ಮತ್ತೊಂದು ಬೆಳವಣಿಗೆಯಾಗಿದೆ.

author-image
Ganesh Kerekuli
SUDEEP
Advertisment

ಬೆಂಗಳೂರು: ಕೊಳಚೆ ನೀರನ್ನು ಸಂಸ್ಕರಿಸದೆ ನಿಯಮ ಬಾಹೀರವಾಗಿ ಚರಂಡಿಗೆ ಹರಿಸಿದ ಪರಿಣಾಮ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದ್ದು, ಆದ್ರೀಗ ಈ ಪ್ರಕರಣದಲ್ಲಿ ಭಾರೀ ಬೆಳವಣಿಗೆಯಾಗಿದೆ. 

Advertisment

ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ..

ಜಾಲಿವುಡ್​ ಸ್ಟುಡಿಯೋಗೆ ಬೀಗ ಹಾಕಿದ ರಾಮನಗರ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಬಿಗ್​ಬಾಸ್ ತಂಡದ ಪರವಾಗಿ ವಕೀಲೆ ತೇಜಸ್ವಿನಿ ಅರೂರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ತುರ್ತಾಗಿ ವಿಚಾರಣೆ ನಡೆಸುವಂತೆ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿರುವ ಕೋರ್ಟ್, ಇವತ್ತು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸೋದಾಗಿ ತಿಳಿಸಿದೆ.

ಹೈಕೋರ್ಟ್ ತೀರ್ಪಿನ ಮೇಲೆ ಬಿಗ್​ಬಾಸ್​ ಶೋ ಭವಿಷ್ಯ ನಿಂತಿದೆ.  ಇಂದು ಮಧ್ಯಾಹ್ನ ಕೋರ್ಟ್​ನಲ್ಲಿ ಏನೆಲ್ಲ ವಿಚಾರಣೆ ನಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ. 

ಇದನ್ನೂ ಓದಿ:2ನೇ ಮದುವೆಗೆ ಪ್ಲಾನ್ ಮಾಡಿದ್ದ ಶಿಕ್ಷಕಿಗೆ 2.3 ಕೋಟಿ ವಂಚನೆ.. ಅಸಲಿಗೆ ಆಗಿದ್ದೇನು..?

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

kiccha sudeep ಕಿಚ್ಚನ ಚಪ್ಪಾಳೆ bigg boss jahnavi Bigg boss mallamma Bigg boss Bigg Boss Kannada 12
Advertisment
Advertisment
Advertisment