/newsfirstlive-kannada/media/media_files/2025/08/24/kiran-raj-2025-08-24-18-09-11.jpg)
ಕರ್ಣ ಸೀರಿಯಲ್ನಲ್ಲಿ ಕಿರಣ್ ರಾಜ್ ತಾಳ್ಮೆ, ಸಹನೆಯಿಂದ ನಡೆದುಕೊಳ್ಳೋದು ಫ್ಯಾನ್ಸ್ಗೆ ಇಷ್ಟ ಆಗುತ್ತಿಲ್ಲ. ಇಷ್ಟೊಂದು ಸಹನೆ ಒಳ್ಳೆದಲ್ಲ. ನಮ್ಮ ಹೀರೋ ಹೀಗ್ ಇರೋದನ್ನ ನೋಡೋಕೆ ಆಗಲ್ಲ ಅಂತ ಬೇಸರ ಹೊರ ಹಾಕುತ್ತಿದ್ದರು.
ಇದನ್ನೂ ಓದಿ: ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬ ಆಚರಿಸಿದ ಬಿಗ್ಬಾಸ್ ಖ್ಯಾತಿಯ ಧನರಾಜ್ ಆಚಾರ್ ದಂಪತಿ
ಕೊನೆಗೂ ಹೀರೋ ಖಡಕ್ ಡೈಲಾಗ್ ಹೊಡೆದು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಹೌದು, ತಾತನಿಗೆ ಕೊಟ್ಟ ಮಾತಿಗೆ ಕಟ್ಟು ಬಿದ್ದು, ಮನೆಯವ್ರು ಎಷ್ಟೇ ಕಷ್ಟ ಕೊಟ್ಟರು ಸಹಿಸಿಕೊಂಡು ನಗ್ತಾ ಇರೋ ಪಾತ್ರ ಕರ್ಣ. ಆದರೆ, ಹೀರೋ ಯಾವಾಗಲೂ ಗತ್ತಲ್ಲಿ ಇರ್ಬೇಕು ಅನ್ನೋದು ವೀಕ್ಷಕರ ಆಸೆ. ಈ ಆಸೆಗೆ ನಿರಾಸೆ ಮಾಡದೇ ಅಪ್ಪನ ವಿರುದ್ಧ ಕರ್ಣ ಧ್ವನಿಯತ್ತಿದ್ದು, ವೀಕ್ಷಕರ ಮನ ಗೆದ್ದಿದೆ. ಆ ಎಪಿಸೋಡ್ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ಕ್ಲಾಸ್ ಮಾಸ್ ಎರಡೂ ಶೇಡ್ನಲ್ಲೂ ಕಿರಣ್ ರಾಜ್ ಕಮಾಲ್ ಮಾಡ್ತಿದ್ದಾರೆ. ಸದ್ಯ ಲವರ್ ಬಾಯ್ ಲುಕ್ನಲ್ಲೂ ಹ್ಯಾಂಡ್ಸಮ್ ಆಗಿ ಕಾಣ್ತಿದ್ದಾರೆ ಡಾಕ್ಟ್ರು. ಕರ್ಣನಿಗೆ ಎಲ್ಲಿ ನೋಡಿದ್ರು ನಿಧಿನೇ ಕಾಣಸ್ತಿದ್ದು, ಡಾಕ್ಟರ್ಗೆ ನಿಧಿ ಕೊಟ್ಟಿರೋ ಲವ್ ಟಾನಿಕ್ ಚನ್ನಾಗಿಯೇ ವರ್ಕೌಟ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ