/newsfirstlive-kannada/media/media_files/2025/08/21/annayya-serial-2025-08-21-19-38-18.jpg)
ಅಣ್ಣಯ್ಯ ಧಾರಾವಾಹಿ ಮಹಾ ತಿರುವು ಪಡೆದುಕೊಳ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಶಿವಣ್ಣನ ತಂಗಿಯರ ಮುಂದೆ ಶಾರದಮ್ಮನನ್ನ ಮನೆಗೆ ಕರೆದುಕೊಂಡು ಬಂದೇ ಬರುತ್ತೇನೆ ಅಂತ ಪಾರು ದಿಟ್ಟ ನಿರ್ಧಾರಕ್ಕೆ ಬಂದಿದ್ದಾಳೆ. ಹೀಗಾಗಿ ವೀಕ್ಷಕರ ಚಿತ್ತ ಅಣ್ಣಯ್ಯ ಸೀರಿಯಲ್ ಮೇಲೆ ನೆಟ್ಟಿದೆ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ವಿವಾಹಿತೆ.. ಕಾರು ಸಮೇತ ಕೆರೆಗೆ ತಳ್ಳಿ ಜೀವ ತೆಗೆದನಾ ಕಿರಾತಕ..?
ಇನ್ನೂ, ಇದೇ ಸೀರಿಯಲ್ನಲ್ಲಿ ಕ್ಯೂಟ್ ಕ್ಯೂಟ್ ಆಗಿ ಮಾತಾಡೋ ಶಿವಣ್ಣನ ಮುದ್ದು ತಂಗಿ ರಮ್ಯಾ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ರಮ್ಯಾ ಪಾತ್ರದಲ್ಲಿ ಅಂಕಿತಾ ಕಾಣಿಸಿಕೊಂಡಿದ್ದಾರೆ. ಮೂರು ಜನ ಸ್ವಂತ ತಂಗಿಯರ ನಡುವೆ ರಮ್ಯಾ ಎಲ್ಲೋ ಸಿಕ್ಕಿದವಳಾಗಿರುತ್ತಾಳೆ. ಆದರೂ ಅವಳನ್ನು ಸ್ವಂತ ತಂಗಿಯಂತೆಯೇ ಸಾಕಿರುತ್ತಾನೆ ಅಣ್ಣಯ್ಯ.
ಈಗ ನಟಿ ಅಂಕಿತಾ ನ್ಯೂಸ್ಫಸ್ಟ್ನೊಂದಿಗೆ ಮನಬಿಚ್ಚಿ ಮಾತಾಡಿದ್ದಾರೆ. ಈಗಿನ್ನೂ ನಟಿ ಅಂಕಿತಾ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಓದಿನ ಜೊತೆ ಜೊತೆಗೆ ಅಂಕಿತಾ ಶೂಟಿಂಗ್ಗೂ ಕೂಡ ಹಾಜರಾಗುತ್ತಾರೆ. ಅಷ್ಟೇ ಅಲ್ಲದೇ ಕಾಟೇರ ಸಿನಿಮಾದಲ್ಲೂ ಅಂಕಿತಾ ಜೂನಿಯರ್ ಆರಾಧನಾ ಆಗಿ ಅಂಕಿತಾ ಗೌಡ ಕಾಣಿಸಿಕೊಂಡಿದ್ದರು. ಇನ್ನು, ಅಣ್ಣಯ್ಯ ಸೀರಿಯಲ್ ಶೂಟಿಂಗ್ ವೇಳೆ ನಿಜವಾಗಲೂ ಕಣ್ಣೀರು ಹಾಕಿದ್ದೇ ಅಂತ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ್ದಾರೆ.
ಅದೊಂದು ನನಗೆ ದೊಡ್ಡ ಟಾಸ್ಕ್ ಆಗಿತ್ತೆ. ಮನೆಯಲ್ಲಿ ಯಾರೂ ಇರೋದಿಲ್ಲ. ನನ್ನ ಅಕ್ಕಂದಿರೆಲ್ಲಾ ಮನೆಯಲ್ಲಿ ಇರೋದಿಲ್ಲ. ಹುಡುಗಿ ದೊಡ್ಡವಾಳಾಗಿದ್ದಾಗ ಅಣ್ಣ ಅವಳನ್ನು ಹೇಗೆ ನೋಡಿಕೊಳ್ಳುತ್ತಾನೆ ಅನ್ನೋದು ಸೀನ್. ಆ ಸೀನ್ ಮಾಡೋವಾಗ ನಾನು ಮತ್ತೆ ಅಣ್ಣ ಇಬ್ಬರು ಅಳುತ್ತಾ ಇದ್ವಿ. ಅಲ್ಲಿ ನಿಂತಿರೋರೆಲ್ಲಾ ಯಾಕೆ ಅಳ್ತಾ ಇದ್ಯಾ ಅಂತ ಕೇಳುತ್ತಿದ್ದರು. ಅದರಲ್ಲೂ ಅಂತಹ ಸಂದರ್ಭದಲ್ಲಿ ಅಳುತ್ತಲೇ ಡೈಲಾಂಗ್ ಹೇಳಿದ್ದೇ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ