/newsfirstlive-kannada/media/media_files/2025/09/11/karna-2025-09-11-17-35-42.jpg)
ಇಷ್ಟು ದಿನ ನಿಧಿ-ಕರ್ಣ ಅಭಿಮಾನಿಗಳು ಕಾಯ್ತಾಯಿದ್ದ ಆ ಕ್ಷಣ ಬಂದೇ ಬಿಟ್ಟಿದೆ. ನಿಧಿಗೆ ಕಾವಲು ಆಗಿ ಇರೋ ಪ್ರತಿಜ್ಞೆ ಮಾಡಿದ್ದಾನೆ ಕರ್ಣ. ಪರಸ್ಪರ ಆಕರ್ಷಕ ಭಾವನೆಗಳು ಪ್ರೀತಿಯ ಅಲೆಯಲ್ಲಿ ತೇಲುತ್ತಿವೆ.
ಇಬ್ಬರ ಕ್ಯೂಟ್ ಕ್ಷಣಗಳನ್ನ ವೀಕ್ಷಕರು ಎಂಜಾಯ್ ಮಾಡ್ತಿದ್ದಾರೆ. ಈ ನಡುವೆ ಕರ್ಣ ಹಾಗೂ ನಿತ್ಯಾ-ನಿಧಿ ಸಂಬಂಧದ ಗುಟ್ಟಿನ ಸುತ್ತ ಕಥೆ ಸಾಗ್ತಿದೆ. ಧಾರಾವಾಹಿಯಲ್ಲಿ ಮೇಜರ್ ಟ್ವಿಸ್ಟ್ ತೆರೆದುಕೊಳ್ತಿದೆ. ನಿತ್ಯಾ-ನಿಧಿ ಸೋದರ ಅತ್ತೆ ಮಗ ಕರ್ಣ ಇರಬಹುದು ಎಂಬ ಊಹೆ ಜೊತೆಗೆ ವೀಕ್ಷಕರು ಕುತೂಹಲದ ಚರ್ಚೆ ಮಾಡ್ತಿದ್ದಾರೆ.
ಇನ್ನೂ ನಿಧಿ-ನಿತ್ಯಾ ಫ್ಯಾನ್ಸ್ ಅಂತೂ ಕರ್ಣ ಯಾರನ್ನ ಮದುವೆ ಆಗ್ಬೇಕು ಎಂಬುದರ ಬಗ್ಗೆ ಕಾಮೆಂಟ್ಗಳ ಮೂಲಕ ಗಲಾಟೆ ಮಾಡ್ತಾನೆ ಇರ್ತಾರೆ. ಈ ನಡುವೆ ನಿತ್ಯಾ ಮದುವೆ ಸಂಚಿಕೆಗಳ ಶೂಟಿಂಗ್ ಈಗಾಗ್ಲೇ ಕಂಪ್ಲೀಟ್ ಆಗಿವೆ. ಸದ್ಯದಲ್ಲೇ ವೀಕ್ಷಕರ ಮುಂದೆ ಮಹಾ ತಿರುವು ಬರಲಿದೆ. ಮಾರಿಗುಡಿಗೆ ಇಡೀ ಕುಟುಂಬ ಹೋಗ್ತಿರೋವಾಗ ಗಣಪ ಎದುರಾಗ್ತಾನೆ. ಅಲ್ಲಿ ನಿತ್ಯಾ, ನಿಧಿ, ಕರ್ಣ ಸಖತ್ ಸ್ಟೆಪ್ ಹಾಕ್ತಾರೆ. ರೌಡಿಗಳ ಆಟ್ಯಾಕ್ ಆಗುತ್ತೆ. ಅತ್ತ ನಿಧಿಗೆ ಅರಶಿನ, ಇತ್ತ ನಿತ್ಯಾಗೆ ಕುಂಕುಮದ ಅಭಿಷೇಕ ಆಗುತ್ತೆ. ದೈವ ಬೆಸದ ಬೇಸುಗೆ ಇದು ಎಂಬ ರೀತಿಯಲ್ಲಿ ತೋರಿಸಲಾಯ್ತು.
ರಮೇಶ್ ಇಂದಿರಾ ಅವರ ನಿರ್ದೇಶನದಲ್ಲಿ ಕರ್ಣ ಮೂಡಿಬರುತ್ತಿದ್ದು, ಭರ್ಜರಿ ದೃಶ್ಯಗಳ ಶೂಟಿಂಗ್ ಪ್ಲ್ಯಾನ್ ಮಾಡಿಕೊಂಡಿದೆ ತಂಡ. ಅದ್ರಲ್ಲಿ ಕರ್ಣ ಹೇಗೆ ತೊಟ್ಟಿಯಲ್ಲಿ ತಾತನಿಗೆ ಸಿಕ್ಕಿದ? ನಿತ್ಯಾ ಮದುವೆ ಕಥೆ ಏನು? ಇದಲ್ಲವೂ ಮಾರಿಗುಡಿ ಸಂಚಿಕೆಗಳಲ್ಲಿ ಪ್ರಸಾರವಾಗಲಿವೆ. ಈ ನಡುವೆ ಅಣ್ಣಯ್ಯ ಹಾಗೂ ಕರ್ಣ ಮಹಾ ಸಂಗಮ ಬರೋ ಚಾನ್ಸ್ ಕೂಡ ಇದೆ.
ಇದನ್ನೂ ಓದಿ:ಸಂಕಷ್ಟಗಳಿಗೆ ಸಿಲುಕಿದ್ದ ನನಗೆ ಬಿಗ್ಬಾಸ್ ತೆಲುಗು ಸುವರ್ಣಾವಕಾಶ -ಸಂಜನಾ ಗಲ್ರಾನಿ