ಶ್ರೀಕಾಂತ್ ಸತ್ತಿಲ್ಲ.. ರವಿಶಂಕರ್​​ನ ಕಳ್ಳಾಟ ಬಯಲು ಮಾಡಿ ಮರಳಿ ಬಂದ..!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಯಾರು ಊಹಿಸಿರದ ತಿರುವು ಸಿಕ್ಕಿದೆ.​ ಅಪಘಾತದಲ್ಲಿ ಸತ್ತು ಹೋಗಿದ್ದಾನೆ ಎಂದು ತಿಳಿದುಕೊಂಡಿದ್ದ ಶ್ರೀಕಾಂತ್‌ ಮರಳಿ ಬಂದಿದ್ದಾನೆ. ಹಾಗಾದ್ರೆ ಶ್ರೀಕಾಂತ್‌ ಇಷ್ಟುದಿನ ಎಲ್ಲಿದ್ದ? ಅಪಘಾತದಲ್ಲಿ ಹಾಗಿದಾದ್ರೂ ಏನು? ಇಷ್ಟು ದಿನ ಶ್ರೀಕಾಂತ್​ಗೆ ಮಗಳು ನೆನಪಾಗಲಿಲ್ವಾ?

author-image
Ganesh Kerekuli
laksminivasa kannada serial (3)
Advertisment

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಯಾರು ಊಹಿಸಿರದ ತಿರುವು ಸಿಕ್ಕಿದೆ.​ ಅಪಘಾತದಲ್ಲಿ  ಸತ್ತು ಹೋಗಿದ್ದಾನೆ ಎಂದು ತಿಳಿದುಕೊಂಡಿದ್ದ ಶ್ರೀಕಾಂತ್‌ ಮರಳಿ ಬಂದಿದ್ದಾನೆ. ಹಾಗಾದ್ರೆ ಶ್ರೀಕಾಂತ್‌ ಇಷ್ಟುದಿನ ಎಲ್ಲಿದ್ದ? ಅಪಘಾತದಲ್ಲಿ ಹಾಗಿದಾದ್ರೂ ಏನು? ಇಷ್ಟು ದಿನ ಶ್ರೀಕಾಂತ್​ಗೆ ಮಗಳು ನೆನಪಾಗಲಿಲ್ವಾ? ಮುಂದೆ ಸಿದ್ದೇಗೌಡ್ರು ಜೈಲಿನಿಂದ ಹೊರ ಬರ್ತಾರ? 

laksminivasa kannada serial (1)

ಈ ಹಿಂದೆ ಭಾವನಾ ಹಾಗೂ ಶ್ರೀಕಾಂತ್‌ ಮದುವೆಗೆ ಎಲ್ಲಾ ತಯಾರಿ ನಡೆದಿತ್ತು. ಶ್ರೀಕಾಂತ್‌ ತಂಗಿಯ ಗಂಡ ರವಿಶಂಕರ್‌,  ಶ್ರೀಕಾಂತ್ ಬರ್ತಿದ್ದ ಕಾರಿಗೆ ಆಕ್ಸಿಡೆಂಟ್ ಮಾಡಿಸಿದ್ದ. ಆಕ್ಸಿಡೆಂಟ್​ನಲ್ಲಿ ಶ್ರೀಕಾಂತ್‌ ಸತ್ತಿದ್ದಾನೆ ಅಂತಾ ಎಲ್ಲರೂ ಭಾವಿಸಿದ್ರು.. ಇದ್ರಿಂದ ಭಾವನ ಮದುವೆ ಕೂಡ ನಿಂತಿತ್ತು. ಬಳಿಕ ಭಾವನಾ, ಸಿದ್ದೇಗೌಡ್ರ ಮದುವೆ ನಡೆಯಿತು.

ಇದನ್ನೂ ಓದಿ:ಕ್ರಿಕೆಟ್ ಅಂಪೈರಿಂಗ್‌ ಮಾಡುತ್ತಿದ್ದಾಗ ಜೇನುನೊಣಗಳ ದಾಳಿ: ಅಂಪೈರ್‌ ದಾರುಣ ಸಾವು!!

laksminivasa kannada serial (2)

ಇದೀಗ ರವಿಶಂಕರ್‌ ಕುತಂತ್ರದಿಂದ ಶ್ರೀಕಾಂತ್‌ ಕಾರ್‌ನ್ನು ಅಪಘಾತ ಮಾಡಿದ ಆರೋಪವನ್ನ ಹೊತ್ತು ಸಿದ್ದೇಗೌಡ್ರು ಜೈಲು ಸೇರಿದ್ದಾರೆ. ಈ ವಿಚಾರವಾಗಿ ಕೋರ್ಟ್​ನಲ್ಲಿ ವಿಚಾರಣೆ ಕೂಡ ನಡೆಯುತ್ತಿದೆ.. ಒಂದು ಕಡೆ  ಸಿದ್ದೇಗೌಡ್ರನ್ನ ಬಿಡಿಸಲು ಭಾವನ ನೂರಾರು ಪ್ರಯತ್ನ ಮಾಡ್ತಿದ್ದಾಳೆ..  ಮತ್ತೊಂದು ಕಡೆ ಮಗಳು ಖುಷಿಗೆ ತಂದೆ ಶ್ರೀಕಾಂತ್​ ನೆನಪಾಗ್ತಿದೆ.

ಸಿದ್ದೇಗೌಡ್ರನ್ನು ಜೈಲಿಗೆ ಕಳಿಸಿದ ಬಳಿಕ, ನಾನು ಶ್ರೀಕಾಂತ್‌ ಆಸ್ತಿಯನ್ನು ಅನುಭವಿಸಿಕೊಂಡು ಇರೋಣ ಅಂತಾ ರವಿಶಂಕರ್‌ ಪ್ಲಾನ್​ ಮಾಡಿದ್ದ. ಆದ್ರೆ ಯಾರು ಊಹಿಸದ ತಿರುವೊಂದು ಬಂದಿದೆ. ಹೌದು ಎಲ್ಲರೂ ಅಪಘಾತದಲ್ಲಿ ಸತ್ತು ಹೋಗಿದ್ದಾನೆ ಅಂದುಕೊಂಡಿದ್ದ ಶ್ರೀಕಾಂತ್‌, ರವಿಶಂಕರ್​ ಕಳ್ಳಾಟವನ್ನ ಬಯಲು ಮಾಡಲು ಮರಳಿ ಬಂದಿದ್ದಾನೆ. 

ಇದನ್ನೂ ಓದಿ: ಖ್ಯಾತ ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿಗೆ ಎಸ್‌.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ: ಫೆಬ್ರವರಿ 21 ರಂದು ಪ್ರದಾನ

laksminivasa kannada serial

ಶ್ರೀಕಾಂತ್‌ ಬಂದೊಡನೇ ರವಿಶಂಕರ್​ನನ್ನೇ ಭೇಟಿಯಾಗಿದ್ದಾನೆ. ಶ್ರೀಕಾಂತ್​ನ್ನ ಕಂಡು ರವಿಶಂಕರ್​ ಶಾಕ್​ಗೆ ಒಳಗಾಗಿದ್ದಾನೆ. ಆದ್ರೂ ಭಾವ ನಿಮ್ಮನ್ನ ನೋಡಿ ಎಷ್ಟು ಖುಷಿಯಾಗ್ತಿದೆ ಗೊತ್ತಾ ಅಂತಾ ಶ್ರೀಕಾಂತ್​ನನ್ನ ನಂಬಿಸಿ ತನ್ನೋಡನೇ ಬರುವಂತೆ ಹೇಳಿ ಬಳಿಕ ಕಿಡ್ನ್ಯಾಪ್‌ ಮಾಡಿ ಸಾಯಿಸಲು ಪ್ಲಾನ್​ ಮಾಡ್ತಾನೆ. ಆದ್ರೆ ರವಿಶಂಕರ್​ ಪ್ಲಾನ್​, ಪ್ಲಾಪ್​​ ಆಗುತ್ತೆ.. ಕಾರಣ ಜಯಂತ್​ ಎಂಟ್ರಿ.. ಶ್ರೀಕಾಂತ್​ನನ್ನ ಕಿಡ್ನಾಪ್​ ಮಾಡಿದ್ದ ಜಾಗಕ್ಕೆ ಬಂದ ಜಯಂತ್, ಶ್ರೀಕಾಂತ್​ನನ್ನ ರಕ್ಷಿಸ್ತಾನೆ. ಇಬ್ಬರೂ ಸೇರಿಕೊಂಡು ಆ ಗೂಂಡಾಗಳನ್ನು ಹೊಡೆದು ಹಾಕ್ತಾರೆ.
ಒಟ್ನಲ್ಲಿ ಶ್ರೀಕಾಂತ್​ ಎಂಟ್ರಿಯಿಂದ ವೀಕ್ಷಕರು ಫುಲ್​ ಖುಷ್​ ಆಗಿದ್ದಾರೆ. ಹಾಗಂತಾ ಟ್ವಿಸ್ಟ್‌ ಇಷ್ಟಕ್ಕೆ ಮುಗಿದಿಲ್ಲ. ಮುಂದೆಯೂ ದೊಡ್ಡ ತಿರುವುಗಳು ಇವೆ.

ಇದನ್ನೂ ಓದಿ:ಕ್ರಿಕೆಟ್ ಅಂಪೈರಿಂಗ್‌ ಮಾಡುತ್ತಿದ್ದಾಗ ಜೇನುನೊಣಗಳ ದಾಳಿ: ಅಂಪೈರ್‌ ದಾರುಣ ಸಾವು!!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

lakshmi nivasa serial
Advertisment