ರೋಚಕ ಘಟ್ಟದಲ್ಲಿ ಅಮೃತಧಾರೆ.. ಭೂಮಿಕಾ ಮುಂದೆ ಕಳಚಿ ಬಿತ್ತು ಶಕುಂತಲಾ ಮುಖವಾಡ!

ಅಮೃತಾಧಾರೆ ಸೀರಿಯಲ್​ನಲ್ಲಿ ಮಹಾ ಟ್ವಿಸ್ಟ್​ವೊಂದು ಎದುರಾಗಿದೆ. ಕೊನೆಗೂ ಭೂಮಿಕಾ ಮುಂದೆ ಕಪಟ ನಾಟಕ ಸೂತ್ರಧಾರಿ ಶಕುಂತಲಾಳ ಮುಖವಾಡ ಕಳಚಿ ಬಿದ್ದಿದೆ. ಮನೆಯಲ್ಲೇ ಇದ್ದುಕೊಂಡು ಮಗುವಿಗೆ ತೊಂದರೆ ಮಾಡುತ್ತಾಳೆ ಅನ್ನೋ ಸತ್ಯವನ್ನು ಗೌತಮ್​ ತಾಯಿ ಭೂಮಿಕಾಗೆ ಹೇಳಿದ್ದಾರೆ.

author-image
Veenashree Gangani
amruthadhaare
Advertisment

ಅಮೃತಾಧಾರೆ ಸೀರಿಯಲ್​ನಲ್ಲಿ ಮಹಾ ಟ್ವಿಸ್ಟ್​ವೊಂದು ಎದುರಾಗಿದೆ. ಕೊನೆಗೂ ಭೂಮಿಕಾ ಮುಂದೆ ಕಪಟ ನಾಟಕ ಸೂತ್ರಧಾರಿ ಶಕುಂತಲಾಳ ಮುಖವಾಡ ಕಳಚಿ ಬಿದ್ದಿದೆ.

ಇದನ್ನೂ ಓದಿ:ಧರ್ಮಸ್ಥಳ ಕೇಸ್​ಗೆ ಅತಿದೊಡ್ಡ ಟ್ವಿಸ್ಟ್.. ನಿನ್ನೆ ಸಿಕ್ಕಿದ್ದು ಒಂದಲ್ಲ.. ಬರೋಬ್ಬರಿ 3 ಅಸ್ಥಿಪಂಜರ..!

amruthadhaare(1)

ಮನೆಯಲ್ಲೇ ಇದ್ದುಕೊಂಡು ಮಗುವಿಗೆ ಏನಾದ್ರೂ ಅನಾಹುತ ಮಾಡುತ್ತಾಳೆ ಅನ್ನೋ ಸತ್ಯವನ್ನು ಗೌತಮ್​ ತಾಯಿ ಭೂಮಿಕಾಗೆ ಹೇಳಿದ್ದಾರೆ. ಮಾತು ಬರುತ್ತಿದ್ದರು, ಒಳ್ಳೆಯ ಸಮಯ ನೋಡಿಕೊಂಡು ಮಾತಾಡೋಣ ಅಂತ ಸುಮ್ಮನಿಗೂ ಗೌತಮ್​ ತಾಯಿ ಭಾಗ್ಯ ಅಸಲಿ ಸತ್ಯ ಏನು ಎಂದು ಹೇಳಿಬಿಟ್ಟಿದ್ದಾಳೆ.

amruthadhaare(2)

ಇದೇ ವಿಚಾರ ಕೇಳಿದ ಭೂಮಿಕ ಫುಲ್​ ಶಾಕ್​ ಆಗಿದ್ದಾರೆ. ಅದೇ ಸಿಟ್ಟಿನಲ್ಲಿ ನೇರವಾಗಿ ಶಕುಂತಲಾಳ ಬಳಿಗೆ ಹೋಗಿ ನೀವು ಅಮೃತದ ಲೇಬಲ್ ಹಾಕಿರೋ ವಿಷ ಅಂತ ಭೂಮಿಕಾ ಕೆಂಡ ಕಾರಿದ್ದಾಳೆ. ಆಗ ಶಾಕುಂತಲ ನಿನಗೆ ಏನ್ ಗೊತ್ತಾಗಿದೇಯೋ ಅದೇ ಸತ್ಯ, ನೀನು ಯದ್ಧವನ್ನು ಡಿಕ್ಲೈರ್ ಮಾಡಿದ್ದೀಯಾ, ನಾನು ಅದನ್ನ ನೆಕ್ಸ್ಟ್ ಲೆವೆಲ್​ಗೆ ತೆಗೆದುಕೊಂಡು ಹೋಗ್ತೀನಿ ಎಂದಿದ್ದಾರೆ. ಆಗ ಅದಕ್ಕೆ ಈ ಭೂಮಿಕಾ ಬಿಡೋದಿಲ್ಲ. ಆಟ ಈಗ ಶುರು ಅಂತ ಭೂಮಿಕಾ ಶಾಕುಂತಲಗೆ ಸವಾಲ್​ ಹಾಕಿದ್ದಾಳೆ.

ಇನ್ನೂ, ಇದೇ ಪ್ರೋಮೋ ನೋಡಿದ ವೀಕ್ಷಕರು, ಇಷ್ಟು ದಿನ ಒಂದ್ ಲೆಕ್ಕ, ಆದ್ರೆ ಇನ್ನೂ ಮುಂದೆ ಬೇರೆನೇ ಲೆಕ್ಕ, ಅಸಲಿ ಆಟ ಇನ್ನು ಮೇಲೆ ಶುರು, ಸೂಪರ್ ಭೂಮಿಕಾ ಟೀಚರ್, ಭೂಮಿಕ ಸವಾಲ್ ತುಂಬಾ ಇಷ್ಟ ಆಯಿತು ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Naavu Nammavaru show, kannada serial
Advertisment