/newsfirstlive-kannada/media/post_attachments/wp-content/uploads/2024/08/darshan-7-1.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿಚಾರಣೆ ಮುಕ್ತಾಯಗೊಂಡಿದೆ. ಈ ಕೃತ್ಯದಲ್ಲಿ ಐ ವಿಟ್ನೆಸ್ ಟಿಪಿ ಪೆರಡ್ ಆಗಿದೆ. ಭೌತಿಕ, ಸಾಂಧರ್ಭಿಕ, ತಾಂತ್ರಿಕ ಸಾಕ್ಷಿಗಳ ಸಂಗ್ರಹ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ, ಕೋರ್ಟ್ ಮುಂದೆ ಮಾತ್ರ ಹಾಜರಾಗಲು ಬಾಕಿ ಇದೆ. ಅದನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಬಹುದಾಗಿದೆ. ಹೀಗಾಗಿ ದರ್ಶನ್ ಜೈಲು ಶಿಫ್ಟ್​​ನಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ದರ್ಶನ್​ ವಿರುದ್ಧ ಜಾರ್ಜ್​​ ಶೀಟ್​ ಸಲ್ಲಿಕೆಯಾಗಬೇಕಿದೆ. ಆದಾದ ಬಳಿಕ ಟ್ರಯಲ್ ಆರಂಭ ಆಗಲಿದೆ. ಆಗಲೂ ವಿಡಿಯೋ ಕಾನ್ಫರೆನ್ಸ್​ ಮೂಲಕ ಆರೋಪಿ ಹಾಜರಾಗಬಹುದಾಗಿದೆ. ಒಟ್ಟಿನಲ್ಲಿ ದರ್ಶನ್ ಶಿಫ್ಟ್ ಕೇವಲ ಅವರ ಕುಟುಂಬಕ್ಕೆ ಮಾತ್ರ ಸಂಕಷ್ಟ ತಂದೊಡ್ಡಿದೆ.
/newsfirstlive-kannada/media/post_attachments/wp-content/uploads/2024/08/darshan-5-2.jpg)
ಇದನ್ನೂ ಓದಿ: ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?
ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್​ ಭೇಟಿಗೆ ಅವರ ಕುಟುಂಬಸ್ಥರು ಪದೇ ಪದೇ ಬರುತ್ತಿದ್ದರು. ಸ್ನೇಹಿತರು ವಾರಕ್ಕೆ ಎರಡು ಮೂರು ಬಾರಿ ಬಂದು ಹೋಗುತ್ತಿದ್ದರು. ಆದರೀಗ ಬಳ್ಳಾರಿ ಬಲು ದೂರವಾದ್ದರಿಂದ ಮತ್ತು ಬೆಂಗಳೂರಿನಿಂದ 300ಕ್ಕೂ ಹೆಚ್ಚು ಕಿಮೀ ಇರುವ ಕಾರಣ ದರ್ಶನ್​ ಭೇಟಿ ಮಾಡೋದು ಕಷ್ಟ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us