Advertisment

‘ನಾಪತ್ತೆಯಾದ ಅರ್ಜುನ್​ ಮೃತದೇಹ..’ ದಿವ್ಯದೃಷ್ಟಿ ಮೂಲಕ ಬಹಿರಂಗ ಪಡಿಸಿದ ಸಾಫ್ಟ್​​ವೇರ್​ ಸ್ವಾಮೀಜಿ

author-image
AS Harshith
Updated On
‘ನಾಪತ್ತೆಯಾದ ಅರ್ಜುನ್​ ಮೃತದೇಹ..’ ದಿವ್ಯದೃಷ್ಟಿ ಮೂಲಕ ಬಹಿರಂಗ ಪಡಿಸಿದ ಸಾಫ್ಟ್​​ವೇರ್​ ಸ್ವಾಮೀಜಿ
Advertisment
  • ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಇಂದಿಗೆ 15 ದಿನ
  • 17 ಶವಗಳು ಇರುವುದಾಗಿ ತಮ್ಮ ದಿವ್ಯದೃಷ್ಟಿಯ ಮೂಲಕ ಹೇಳಿದ ಸ್ವಾಮೀಜಿ
  • ಮಣ್ಣಿನ ಅಡಿಯಲ್ಲಿ 9 ಶವಗಳಿವೆ.. 24 ಅಡಿ ಆಳದಲ್ಲಿ ಲಾರಿ ಇದೆ ಎಂದ ಸ್ವಾಮೀಜಿ

ಶಿರೂರು ಗುಡ್ಡ ಕುಸಿದು ಇಂದಿಗೆ 15 ದಿನ. ನಾಪತ್ತೆಯಾದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್​, ಸ್ಥಳೀಯ ಜಗನ್ನಾಥ್​ ಮತ್ತು ಲೋಕೇಶ್​​ ಇನ್ನು ಪತ್ತೆಯಾಗಿಲ್ಲ. ಆದರೆ ನಾಪತ್ತೆಯಾದ ಅರ್ಜುನ್ ಶವ​ ನೀರಿನಿಂದ ತೇಲಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಉಡುಪಿ ದ್ವಾರಕಾಮಯಿ ಮಠದ ಸಾಯಿಈಶ್ವರ ಸ್ವಾಮೀಜಿ ಹೇಳಿದ್ದಾರೆ.

Advertisment

ಶಿರೂರಿನ ಗುಡ್ಡ ಕುಸಿದ ಸ್ಥಳಕ್ಕೆ ಬಂದ ಸಾಯಿಈಶ್ವರ ಸ್ವಾಮೀಜಿ, ಇಲ್ಲಿ 17 ಶವಗಳು ಇರುವುದಾಗಿ ತಮ್ಮ ದಿವ್ಯದೃಷ್ಟಿಯ ಮೂಲಕ ತಿಳಿಸಿದ್ದಾರೆ. ಮಾತ್ರವಲ್ಲದೆ, ಪೆಂಟೋಲಮ್​ ಮತ್ತು ಎಲೆಕ್ಟ್ರಾನಿಕ್​​ ಸ್ಕ್ಯಾನಿಂಗ್​​ ಬಳಸಿ ಹುಡುಕಾಡಿದ್ದಾರೆ.

publive-image

ಇದನ್ನೂ ಓದಿ: 25 ಕಿ.ಮೀ ದೂರದಲ್ಲಿ ಪತ್ತೆಯಾದ ಶವಗಳು.. ಕೇರಳದಲ್ಲಿ ಘೋರ ದುರಂತ; ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಸ್ವಾಮೀಜಿ ತನ್ನ ದಿವ್ಯ ದೃಷ್ಟಿಯ ಮೂಲಕ ಮಣ್ಣಿನ ಅಡಿಯಲ್ಲಿ 9 ಶವಗಳಿವೆ. 24 ಅಡಿ ಆಳದಲ್ಲಿ ಲಾರಿ ಇದೆ. ಅದರ ಹತ್ತಿರವೇ ಶವವಿದೆ. ನದಿಯಿಂದ 15 ಅಡಿ ಅಳದಲ್ಲಿ ಜಗನ್ನಾಥರ ಶವವಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

Advertisment

publive-image

ಶಿರೂರು ಬಳಿಕ ವಯನಾಡಿಗೂ ಆಘಾತ

ಶಿರೂರು ಘಟನೆ ಕಳೆದು 15 ದಿನಗಳ ಬಳಿಕ ಕೇರಳದ ವಯನಾಡಿನಲ್ಲೂ ಭಾರೀ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿದೆ. ಸುಮಾರು 70ಕ್ಕೂ ಅಧಿಕ ಜನರು ಈ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. 100 ಕ್ಕೂ ಹೆಚ್ಚು ಜನ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ  ಎನ್ನಲಾಗುತ್ತಿದೆ. ಸ್ಥಳದಲ್ಲಿ ಎನ್​ಡಿಆರ್​ಎಫ್​, ಅಗ್ನಿ ಶಾಮಕ ದಳ ಸೇರಿ ಸ್ಥಳೀಯ ತಂಡ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment