newsfirstkannada.com

ಶಿವಮೊಗ್ಗದಲ್ಲಿ ಹಾಡಹಗಲೇ ಹರಿದ ನೆತ್ತರು.. ಕೊಲೆಯಾದ ಈ ರೌಡಿ ಸೇಬು ಯಾರು? ಅಸಲಿಗೆ ಆಗಿದ್ದೇನು?

Share :

Published May 8, 2024 at 9:33pm

    ಶೋಹೆಬ್ @ ಸೇಬುನನ್ನು ಹತ್ಯೆ ಮಾಡಿದ ಮತ್ತೊಂದು ಗ್ಯಾಂಗ್​

    ನಡುರಸ್ತೆಯಲ್ಲೇ ಎರಡು ರೌಡಿಶೀಟರ್​ ಗ್ಯಾಂಗ್​ಗಳ ಮಧ್ಯೆ ವಾರ್

    ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಇಬ್ಬರು ರೌಡಿಶೀಟರ್​ಗಳು ಸಾವು

ಶಿವಮೊಗ್ಗ: ನಡುರಸ್ತೆಯಲ್ಲೇ ಎರಡು ರೌಡಿಶೀಟರ್​ ಗುಂಪಿನ ಮಧ್ಯೆ ಸಿನಿಮೀಯ ಶೈಲಿಯ ಗ್ಯಾಂಗ್‌ ವಾರ್ ನಡೆದಿದೆ. ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ನಡೆದ ಈ ವಾರ್​ನಲ್ಲಿ ಇಬ್ಬರು ರೌಡಿಶೀಟರ್​ಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯಲ್ಲಿ ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ ಅಲಿಯಾಸ್​​ ಸೇಬುನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

 

ಇದನ್ನೂ ಓದಿ:  ಶಿವಮೊಗ್ಗದಲ್ಲಿ ಹಾಡಹಗಲೇ ಗ್ಯಾಂಗ್ ವಾರ್​; ಸ್ಥಳದಲ್ಲೇ ರೌಡಿಶೀಟರ್​​ ಸೇರಿ ಇಬ್ಬರು ಸಾವು

ಇನ್ನು, ಈ ಘಟನೆಯಲ್ಲಿ ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಇನ್ನೊಬ್ಬ ರೌಡಿಶೀಟರ್​ ಕೂಡ ಮೃತಪಟ್ಟಿದ್ದು, ಸದ್ಯ ಪೊಲೀಸ್​ ಅಧಿಕಾರಿಗಳು ಆತನ ಗುರುತನ್ನು ಪತ್ತೆ ಹಚ್ಚುತ್ತಿದ್ದಾರೆ. ಕೊಲೆಯಾದ ರೌಡಿಶೀಟರ್​ ಮೇಲೆ ಶೋಹೆಬ್ ಅಲಿಯಾಸ್​​ ಸೇಬು ಗ್ಯಾಂಗ್​ ಯಾಸೀನ್ ಖುರೇಶಿ ಮೇಲೆ ಅಟ್ಯಾಕ್ ಮಾಡಿದೆ. ಈ ವೇಳೆ ಶೋಹೆಬ್ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್​ ಮಾಡಿ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರ ಹತ್ಯೆ ಮಾಡಲಾಗಿದೆ. ಪರಿಣಾಮ ಇಬ್ಬರು ರೌಡಿಶೀಟರ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆದರೆ ರೌಡಿ ಶೀಟರ್ ಯಾಸೀನ್ ಮೇಲೆ ದುಷ್ಕರ್ಮಿಗಳ ಗುಂಪು ಚಾಕುವಿನಿಂದ ಹಲ್ಲೆ ಮಾಡಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಯಾಸೀನ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೊಲೆ ಮಾಡಿ ಆರೋಪಿಗಳು  ಪರಾರಿಯಾಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೋಟೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೇಸ್​ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಮೊಗ್ಗದಲ್ಲಿ ಹಾಡಹಗಲೇ ಹರಿದ ನೆತ್ತರು.. ಕೊಲೆಯಾದ ಈ ರೌಡಿ ಸೇಬು ಯಾರು? ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/smg-death1.jpg

    ಶೋಹೆಬ್ @ ಸೇಬುನನ್ನು ಹತ್ಯೆ ಮಾಡಿದ ಮತ್ತೊಂದು ಗ್ಯಾಂಗ್​

    ನಡುರಸ್ತೆಯಲ್ಲೇ ಎರಡು ರೌಡಿಶೀಟರ್​ ಗ್ಯಾಂಗ್​ಗಳ ಮಧ್ಯೆ ವಾರ್

    ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಇಬ್ಬರು ರೌಡಿಶೀಟರ್​ಗಳು ಸಾವು

ಶಿವಮೊಗ್ಗ: ನಡುರಸ್ತೆಯಲ್ಲೇ ಎರಡು ರೌಡಿಶೀಟರ್​ ಗುಂಪಿನ ಮಧ್ಯೆ ಸಿನಿಮೀಯ ಶೈಲಿಯ ಗ್ಯಾಂಗ್‌ ವಾರ್ ನಡೆದಿದೆ. ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ನಡೆದ ಈ ವಾರ್​ನಲ್ಲಿ ಇಬ್ಬರು ರೌಡಿಶೀಟರ್​ಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯಲ್ಲಿ ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ ಅಲಿಯಾಸ್​​ ಸೇಬುನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

 

ಇದನ್ನೂ ಓದಿ:  ಶಿವಮೊಗ್ಗದಲ್ಲಿ ಹಾಡಹಗಲೇ ಗ್ಯಾಂಗ್ ವಾರ್​; ಸ್ಥಳದಲ್ಲೇ ರೌಡಿಶೀಟರ್​​ ಸೇರಿ ಇಬ್ಬರು ಸಾವು

ಇನ್ನು, ಈ ಘಟನೆಯಲ್ಲಿ ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಇನ್ನೊಬ್ಬ ರೌಡಿಶೀಟರ್​ ಕೂಡ ಮೃತಪಟ್ಟಿದ್ದು, ಸದ್ಯ ಪೊಲೀಸ್​ ಅಧಿಕಾರಿಗಳು ಆತನ ಗುರುತನ್ನು ಪತ್ತೆ ಹಚ್ಚುತ್ತಿದ್ದಾರೆ. ಕೊಲೆಯಾದ ರೌಡಿಶೀಟರ್​ ಮೇಲೆ ಶೋಹೆಬ್ ಅಲಿಯಾಸ್​​ ಸೇಬು ಗ್ಯಾಂಗ್​ ಯಾಸೀನ್ ಖುರೇಶಿ ಮೇಲೆ ಅಟ್ಯಾಕ್ ಮಾಡಿದೆ. ಈ ವೇಳೆ ಶೋಹೆಬ್ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್​ ಮಾಡಿ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರ ಹತ್ಯೆ ಮಾಡಲಾಗಿದೆ. ಪರಿಣಾಮ ಇಬ್ಬರು ರೌಡಿಶೀಟರ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆದರೆ ರೌಡಿ ಶೀಟರ್ ಯಾಸೀನ್ ಮೇಲೆ ದುಷ್ಕರ್ಮಿಗಳ ಗುಂಪು ಚಾಕುವಿನಿಂದ ಹಲ್ಲೆ ಮಾಡಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಯಾಸೀನ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೊಲೆ ಮಾಡಿ ಆರೋಪಿಗಳು  ಪರಾರಿಯಾಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೋಟೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೇಸ್​ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More