newsfirstkannada.com

ನಂಗ್​ ಅನ್ಸಿದ್ ಮಟ್ಟಿಗೆ ಆತ ಬಿಜೆಪಿಯೊಳಗಿರುವ ಹುಚ್ಚ- ಹೆಗಡೆ ವಿರುದ್ಧ ನಾಲಿಗೆ ಹರಿಬಿಟ್ಟ ಸಚಿವ ತಂಗಡಗಿ

Share :

Published January 18, 2024 at 2:59pm

Update January 18, 2024 at 3:00pm

    ‘ದಯಮಾಡಿ ರಾಜ್ಯಾಧ್ಯಕ್ಷರು ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು’

    ಇಲ್ಲದಿದ್ದರೆ ಹೆಗಡೆಗೆ ನಾವು ಟ್ರೀಟ್​​ಮೆಂಟ್ ಕೊಡಿಸ್ತೇವೆ

    ಅನಂತಕುಮಾರ್ ಹೆಗಡೆ ವಿರುದ್ಧ ಸಚಿವ ತಂಗಡಗಿ ವಾಗ್ದಾಳಿ

ಬೆಂಗಳೂರು: ಬಿಜೆಪಿ ಅವರು ಅನಂತಕುಮಾರ್ ಹೆಗಡೆಯನ್ನು ಹುಚ್ಚ ಎಂದು ತಿಳಿದುಕೊಂಡಿದ್ದಾರೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ನಾಲಿಗೆ ಹರಿಬಿಟ್ಟಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿರುವ ಅವರು.. ಮುಖ್ಯಮಂತ್ರಿಗಳಿಗೆ ಅವರು ಅವಾಚ್ಯ ಶಬ್ದಗಳನ್ನು ಬಳಸಿದ್ದರು. ನಾನು ಅವರಿಗೆ ಹೇಳಿದ್ದೇನೆ.. ನನಗೆ ಈಗ ಸಾಬೀತಾಗಿದೆ. ಬಿಜೆಪಿ ಅವರು ಅವನೊಬ್ಬ ಹುಚ್ಚ ಎಂದು ತಿಳಿದುಕೊಂಡಿದ್ದಾರೆ. ಯಾಕಂದರೆ ರಾಜ್ಯದ ಬಿಜೆಪಿ ಅಧ್ಯಕ್ಷರೇ ಹೇಳಿದ್ದಾರೆ. ಆತನ ಮಾತಿಗೆ ನಾವು ಬೆಲೆ ಕೊಡಲ್ಲ. ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ‘ಅದು ಪೊಲೀಸರ ದೌರ್ಬಲ್ಯ ಅಲ್ಲ, ಅದನ್ನೇ ವೀಕ್​​ನೆಸ್ ಅನ್ಕೊಂಡ್ರೆ..’-ಹೆಗಡೆಗೆ ಪರಮೇಶ್ವರ್ ವಾರ್ನ್

ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ ಮೇಲೆ ನನ್ನ ಪ್ರಕಾರ, ನನಗೆ ಅನಿಸಿದ್ದು ಆತ ಬಿಜೆಪಿಯೊಳಗಿನ ಒಬ್ಬ ಹುಚ್ಚ. ದಯಮಾಡಿ ಬಿಜೆಪಿ ಅವರು ಹುಚ್ಚಾಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡಲಿ. ಬಿಜೆಪಿ ರಾಜ್ಯಾಧ್ಯಕ್ಷರು ದಯಮಾಡಿ ಟ್ರೀಟ್ಮೆಂಟ್ ಕೊಡಿಸಬೇಕು. ಇಲ್ಲ ಅಂದರೆ ನಾವು ಕೊಡಿಸುತ್ತೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಂಗ್​ ಅನ್ಸಿದ್ ಮಟ್ಟಿಗೆ ಆತ ಬಿಜೆಪಿಯೊಳಗಿರುವ ಹುಚ್ಚ- ಹೆಗಡೆ ವಿರುದ್ಧ ನಾಲಿಗೆ ಹರಿಬಿಟ್ಟ ಸಚಿವ ತಂಗಡಗಿ

https://newsfirstlive.com/wp-content/uploads/2024/01/TANGADAGI-ANANT.jpg

    ‘ದಯಮಾಡಿ ರಾಜ್ಯಾಧ್ಯಕ್ಷರು ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು’

    ಇಲ್ಲದಿದ್ದರೆ ಹೆಗಡೆಗೆ ನಾವು ಟ್ರೀಟ್​​ಮೆಂಟ್ ಕೊಡಿಸ್ತೇವೆ

    ಅನಂತಕುಮಾರ್ ಹೆಗಡೆ ವಿರುದ್ಧ ಸಚಿವ ತಂಗಡಗಿ ವಾಗ್ದಾಳಿ

ಬೆಂಗಳೂರು: ಬಿಜೆಪಿ ಅವರು ಅನಂತಕುಮಾರ್ ಹೆಗಡೆಯನ್ನು ಹುಚ್ಚ ಎಂದು ತಿಳಿದುಕೊಂಡಿದ್ದಾರೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ನಾಲಿಗೆ ಹರಿಬಿಟ್ಟಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿರುವ ಅವರು.. ಮುಖ್ಯಮಂತ್ರಿಗಳಿಗೆ ಅವರು ಅವಾಚ್ಯ ಶಬ್ದಗಳನ್ನು ಬಳಸಿದ್ದರು. ನಾನು ಅವರಿಗೆ ಹೇಳಿದ್ದೇನೆ.. ನನಗೆ ಈಗ ಸಾಬೀತಾಗಿದೆ. ಬಿಜೆಪಿ ಅವರು ಅವನೊಬ್ಬ ಹುಚ್ಚ ಎಂದು ತಿಳಿದುಕೊಂಡಿದ್ದಾರೆ. ಯಾಕಂದರೆ ರಾಜ್ಯದ ಬಿಜೆಪಿ ಅಧ್ಯಕ್ಷರೇ ಹೇಳಿದ್ದಾರೆ. ಆತನ ಮಾತಿಗೆ ನಾವು ಬೆಲೆ ಕೊಡಲ್ಲ. ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ‘ಅದು ಪೊಲೀಸರ ದೌರ್ಬಲ್ಯ ಅಲ್ಲ, ಅದನ್ನೇ ವೀಕ್​​ನೆಸ್ ಅನ್ಕೊಂಡ್ರೆ..’-ಹೆಗಡೆಗೆ ಪರಮೇಶ್ವರ್ ವಾರ್ನ್

ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ ಮೇಲೆ ನನ್ನ ಪ್ರಕಾರ, ನನಗೆ ಅನಿಸಿದ್ದು ಆತ ಬಿಜೆಪಿಯೊಳಗಿನ ಒಬ್ಬ ಹುಚ್ಚ. ದಯಮಾಡಿ ಬಿಜೆಪಿ ಅವರು ಹುಚ್ಚಾಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡಲಿ. ಬಿಜೆಪಿ ರಾಜ್ಯಾಧ್ಯಕ್ಷರು ದಯಮಾಡಿ ಟ್ರೀಟ್ಮೆಂಟ್ ಕೊಡಿಸಬೇಕು. ಇಲ್ಲ ಅಂದರೆ ನಾವು ಕೊಡಿಸುತ್ತೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More