ಸ್ನೇಹಕ್ಕೆ ಸೇತುವೆಯಾದ ಇನ್ಸ್ಟಾಗ್ರಾಂ
ಮುಖತಃ ಭೇಟಿಯಾಗಲು ಮುಂದಾದ ಯುವಕ ಮತ್ತು ಮಹಿಳೆ
ಭೇಟಿ ಮಾಡಿದ ಸ್ಥಳದಲ್ಲೇ ಎದುರಾಯ್ತು ಸಂಕಷ್ಟ.. ಮುಂದೇನಾಯ್ತು?
ಅವರಿಬ್ರೂ ಮುಖತಃ ಪರಿಚಯರಸ್ಥರಲ್ಲ. ಅವರ ಪರಿಚಯಕ್ಕೆ ಸೇತುವೆಯಾಗಿದ್ದು ಇನ್ಸ್ಟಾಗ್ರಾಂ. ಅತನ ವಯಸ್ಸಿಗೂ ಅಕೆಯ ವಯಸ್ಸಿಗೂ ಅಜಗಜಾಂತರ ವ್ಯತ್ಯಾಸ. ಎಷ್ಟು ದಿನಾ ಈ ಇನ್ಸ್ಟಾಗ್ರಾಂ ನಲ್ಲೇ ಮಾತುಕತೆ ಅಡೋದು ಒಮ್ಮೆ ನೇರವಾಗಿ ಭೇಟಿಯಾಗೋಣಾ ಅಂತಾ ಇಬ್ಬರು ಡಿಸೈಡ್ ಮಾಡಿದ್ರೂ. ಅದ್ರೆ ಅವರಿಬ್ರೂ ಭೇಟಿಯಾಗಿದ್ದಾಗ ನಡದದ್ದೇ ಬೇರೆ.
ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾಗಿದ್ದ ಯುವಕನ ಭೇಟಿಗೆಂದು ಬಂದಿದ್ದ ಮಹಿಳೆಗೆ ಶಾಕ್..!
ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನ ವಯಸ್ಸು 19, ಮಹಿಳೆಗೆ 36 ವರ್ಷ, ಇವರಿಬ್ಬರ ಸ್ನೇಹ ಗಟ್ಟಿಯಾಗಲು ಆರು ತಿಂಗಳಿಂದ ಚಾಟ್ ಮಾಡಿಕೊಂಡೇ ಬಂದಿದ್ದಾರೆ. ಎಷ್ಟು ದಿನಾ ಅಂತಾ ಈ ಮೊಬೈಲ್ ನಲ್ಲೇ, ಚಾಟ್ ಮಾಡೋದು, ಮಾತನಾಡೋದು. ಒಮ್ಮೆ ಭೇಟಿಯಾಗ್ಬೇಕು ಅಂತಾ ಇಬ್ಬರಿಗೂ ಅನಿಸಿದೆ. ಹಾಗಾಗಿ ಇಬ್ರೂ ಕೂಡ ಭೇಟಿಯಾಗೋಣ ಅಂತಾ ಬನ್ನೇರುಘಟ್ಟ ಚಂಪಕಧಾಮಸ್ವಾಮಿ ದೇವಸ್ಥಾನಕ್ಕೆ ಬಂದಿದ್ದಾರೆ. ದೇವರಿಗೆ ಕೈ ಮುಗಿದು ಬಳಿಕ ಬಂಡೆಯ ಮೇಲೆ ಕುಳಿತು ಮಾತಾನಾಡುತ್ತಿದ್ರು.
ಅಷ್ಟರಲ್ಲಿ ಸುರೇಶ ಹಾಗೂ ಗುರು ಎಂಬಾತ ಇವರ ಬಳಿ ಬಂದಿದ್ದು. ಇವರಿಬ್ಬರೂ ಮಾತನಾಡುತ್ತಿದ್ದ ವಿಡಿಯೋ ಮಾಡ್ಕೊಂಡಿದ್ದಾರೆ. ಇಬ್ಬರು ಇದನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕ್ತೀವಿ ಎಂದು ಬೆದರಿಸಿದ್ದಾರೆ. ನಿಮ್ಮ ಮನೆಯವರಿಗೆ ಕಳಿಸ್ತೀವಿ ಅಂತಾ ಹೇಳಿದ್ದಾರೆ. ಅದೇ ರೀತಿ ಯುವಕನನಿಗೆ ನಿನ್ನ ಪೋಲೀಸರಿಗೆ ಹೇಳಿ ಜೈಲಿಗೆ ಕಳುಹಿಸ್ತೀವಿ ಎಂದಿದ್ದಾರೆ.
ಇಷ್ಟಾದ ಬಳಿಕ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಮೊಬೈಲ್ ಕಿತ್ತುಕೊಂಡಿದ್ದಲ್ಲದೆ, ಯುವಕನ ಬಳಿಯಿಂದನೂ ಹಣ ನೀಡುವಂತೆ ಬೆದರಿಸಿದ್ದಾರೆ. ಮಾತ್ರವಲ್ಲದೆ, ಸ್ನೇಹಿತನಿಗೆ ಪೋನ್ ಮಾಡಿ ಆರೋಪಿಗಳ ನಂಬರ್ಗೆ 10 ಸಾವಿರ ರೂಪಾಯಿನ್ನ ಯುವಕ ಪೋನ್ ಪೇ ಮಾಡಿದ್ದ. ಅವೆಲ್ಲವನ್ನೂ ದೋಚಿ ಈ ಖದೀಮರು ಎಸ್ಕೇಪ್ ಅಗಿದ್ದಾರೆ.
ಬಳಿಕ ಮಹಿಳೆ ಹಾಗೂ ಯುವಕ ಬಂದು ಬನ್ನೇರುಘಟ್ಟ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀದರು ಆರೋಪಿಗಳ ಬಂಧಿಸಿ ಜೈಲಿಗಟ್ಟಿದ್ದಾರೆ. ಒಂದು ಭೇಟಿ ಯುವಕ ಮತ್ತು ಮಹಿಳೆಯ ಬಾಳಲ್ಲಿ ಇಷ್ಟು ದೊಡ್ಡ ಅವಾಂತರ ಸೃಷ್ಟಿಸಿದ್ದು ಮರೆಯಲಾಗದಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸ್ನೇಹಕ್ಕೆ ಸೇತುವೆಯಾದ ಇನ್ಸ್ಟಾಗ್ರಾಂ
ಮುಖತಃ ಭೇಟಿಯಾಗಲು ಮುಂದಾದ ಯುವಕ ಮತ್ತು ಮಹಿಳೆ
ಭೇಟಿ ಮಾಡಿದ ಸ್ಥಳದಲ್ಲೇ ಎದುರಾಯ್ತು ಸಂಕಷ್ಟ.. ಮುಂದೇನಾಯ್ತು?
ಅವರಿಬ್ರೂ ಮುಖತಃ ಪರಿಚಯರಸ್ಥರಲ್ಲ. ಅವರ ಪರಿಚಯಕ್ಕೆ ಸೇತುವೆಯಾಗಿದ್ದು ಇನ್ಸ್ಟಾಗ್ರಾಂ. ಅತನ ವಯಸ್ಸಿಗೂ ಅಕೆಯ ವಯಸ್ಸಿಗೂ ಅಜಗಜಾಂತರ ವ್ಯತ್ಯಾಸ. ಎಷ್ಟು ದಿನಾ ಈ ಇನ್ಸ್ಟಾಗ್ರಾಂ ನಲ್ಲೇ ಮಾತುಕತೆ ಅಡೋದು ಒಮ್ಮೆ ನೇರವಾಗಿ ಭೇಟಿಯಾಗೋಣಾ ಅಂತಾ ಇಬ್ಬರು ಡಿಸೈಡ್ ಮಾಡಿದ್ರೂ. ಅದ್ರೆ ಅವರಿಬ್ರೂ ಭೇಟಿಯಾಗಿದ್ದಾಗ ನಡದದ್ದೇ ಬೇರೆ.
ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾಗಿದ್ದ ಯುವಕನ ಭೇಟಿಗೆಂದು ಬಂದಿದ್ದ ಮಹಿಳೆಗೆ ಶಾಕ್..!
ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನ ವಯಸ್ಸು 19, ಮಹಿಳೆಗೆ 36 ವರ್ಷ, ಇವರಿಬ್ಬರ ಸ್ನೇಹ ಗಟ್ಟಿಯಾಗಲು ಆರು ತಿಂಗಳಿಂದ ಚಾಟ್ ಮಾಡಿಕೊಂಡೇ ಬಂದಿದ್ದಾರೆ. ಎಷ್ಟು ದಿನಾ ಅಂತಾ ಈ ಮೊಬೈಲ್ ನಲ್ಲೇ, ಚಾಟ್ ಮಾಡೋದು, ಮಾತನಾಡೋದು. ಒಮ್ಮೆ ಭೇಟಿಯಾಗ್ಬೇಕು ಅಂತಾ ಇಬ್ಬರಿಗೂ ಅನಿಸಿದೆ. ಹಾಗಾಗಿ ಇಬ್ರೂ ಕೂಡ ಭೇಟಿಯಾಗೋಣ ಅಂತಾ ಬನ್ನೇರುಘಟ್ಟ ಚಂಪಕಧಾಮಸ್ವಾಮಿ ದೇವಸ್ಥಾನಕ್ಕೆ ಬಂದಿದ್ದಾರೆ. ದೇವರಿಗೆ ಕೈ ಮುಗಿದು ಬಳಿಕ ಬಂಡೆಯ ಮೇಲೆ ಕುಳಿತು ಮಾತಾನಾಡುತ್ತಿದ್ರು.
ಅಷ್ಟರಲ್ಲಿ ಸುರೇಶ ಹಾಗೂ ಗುರು ಎಂಬಾತ ಇವರ ಬಳಿ ಬಂದಿದ್ದು. ಇವರಿಬ್ಬರೂ ಮಾತನಾಡುತ್ತಿದ್ದ ವಿಡಿಯೋ ಮಾಡ್ಕೊಂಡಿದ್ದಾರೆ. ಇಬ್ಬರು ಇದನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕ್ತೀವಿ ಎಂದು ಬೆದರಿಸಿದ್ದಾರೆ. ನಿಮ್ಮ ಮನೆಯವರಿಗೆ ಕಳಿಸ್ತೀವಿ ಅಂತಾ ಹೇಳಿದ್ದಾರೆ. ಅದೇ ರೀತಿ ಯುವಕನನಿಗೆ ನಿನ್ನ ಪೋಲೀಸರಿಗೆ ಹೇಳಿ ಜೈಲಿಗೆ ಕಳುಹಿಸ್ತೀವಿ ಎಂದಿದ್ದಾರೆ.
ಇಷ್ಟಾದ ಬಳಿಕ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಮೊಬೈಲ್ ಕಿತ್ತುಕೊಂಡಿದ್ದಲ್ಲದೆ, ಯುವಕನ ಬಳಿಯಿಂದನೂ ಹಣ ನೀಡುವಂತೆ ಬೆದರಿಸಿದ್ದಾರೆ. ಮಾತ್ರವಲ್ಲದೆ, ಸ್ನೇಹಿತನಿಗೆ ಪೋನ್ ಮಾಡಿ ಆರೋಪಿಗಳ ನಂಬರ್ಗೆ 10 ಸಾವಿರ ರೂಪಾಯಿನ್ನ ಯುವಕ ಪೋನ್ ಪೇ ಮಾಡಿದ್ದ. ಅವೆಲ್ಲವನ್ನೂ ದೋಚಿ ಈ ಖದೀಮರು ಎಸ್ಕೇಪ್ ಅಗಿದ್ದಾರೆ.
ಬಳಿಕ ಮಹಿಳೆ ಹಾಗೂ ಯುವಕ ಬಂದು ಬನ್ನೇರುಘಟ್ಟ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀದರು ಆರೋಪಿಗಳ ಬಂಧಿಸಿ ಜೈಲಿಗಟ್ಟಿದ್ದಾರೆ. ಒಂದು ಭೇಟಿ ಯುವಕ ಮತ್ತು ಮಹಿಳೆಯ ಬಾಳಲ್ಲಿ ಇಷ್ಟು ದೊಡ್ಡ ಅವಾಂತರ ಸೃಷ್ಟಿಸಿದ್ದು ಮರೆಯಲಾಗದಂತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ