newsfirstkannada.com

KKR ಫ್ರಾಂಚೈಸಿಗೆ ಟ್ರೋಫಿ ತಂದ್ಕೊಟ್ಟ ಅಯ್ಯರ್​.. ಇದರ ಹಿಂದಿದೆ ಒಂದು ಅಪಮಾನದ ಕಥೆ ಇದೆ..!

Share :

Published May 28, 2024 at 2:10pm

    ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಕೆಕೆಆರ್​​

    ಕೆಕೆಆರ್​ ತಂಡವನ್ನು ಲೀಡ್ ಮಾಡಿದ್ದ ಶ್ರೇಯಸ್​ ಅಯ್ಯರ್

    ಅಯ್ಯರ್ ಟ್ರೋಫಿ ಹುಡುಕಾಟದಲ್ಲಿತ್ತು ಒಂದು ಅವಮಾನ

ಶ್ರೇಯಸ್​​ ಅಯ್ಯರ್​​ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇದರ ಹಿಂದೆ ಒಂದು ಅಪಮಾನದ ಕಥೆ ಇದೆ. ಅಂದಾದ ಆ ಒಂದು ಅವಮಾನ ಅವರನ್ನ ಚಾಂಪಿಯನ್​​ ಕ್ಯಾಪ್ಟನ್ ಆಗುವಂತೆ ಮಾಡಿದೆ. ಅಷ್ಟಕ್ಕೂ ಶ್ರೇಯಸ್​​​​​ಗಾದ ಆ ಅವಮಾನ ಏನು? ಮಾಡಿದ್ದಾದ್ರು ಯಾರು?

ಶ್ರೇಯಸ್​​ ಅಯ್ಯರ್​​​​​ ಗತ್ತು, ಕಿಮ್ಮತ್ತು ಇದೀಗ ಇಡೀ ಜಗತ್ತಿಗೆ ಗೊತ್ತಾಗಿದೆ. ನಾಯಕನಾಗಿ ಕೆಕೆಆರ್​​ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟು ಸೈ ಅನ್ನಿಸಿಕೊಂಡಿದ್ದಾರೆ. ಇಂತಹ ಚಾಂಪಿಯನ್​​ ಕ್ಯಾಪ್ಟನ್​​​​​ನನ್ನ ಡೆಲ್ಲಿ ಕ್ಯಾಪಿಟಲ್ಸ್​​​​ ತಂಡ ರಿಲೀಸ್ ಮಾಡಿ ಅವಮಾನಿಸಿತ್ತು. ಶ್ರೇಯಸ್​ ಅಯ್ಯರ್​​ ಡೆಲ್ಲಿ ತೊರೆದ ಅಸಲಿ ಕಾರಣ ಇದೀಗ ಬಹಿರಂಗೊಂಡಿದೆ. 2022 ರಲ್ಲಿ ಡೆಲ್ಲಿ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ರಿಷಬ್​ ಪಂತ್​​​​ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಕ್ಲಾಶ್​ ಏರ್ಪಟ್ಟಿತ್ತು.

ಇದನ್ನೂ ಓದಿ:IPL ಫೈನಲ್​​ನಲ್ಲಿ WPL ಘಟನೆಗಳು ಪುನರಾವರ್ತನೆ.. ಐದು ಅಚ್ಚರಿಯ ಕಾಕತಾಳೀಯಗಳು ಇಲ್ಲಿವೆ..!

ಕೊನೆಗೆ ಫ್ರಾಂಚೈಸಿ ಹಿರಿಯ ಆಟಗಾರ ಶ್ರೇಯಸ್ ಬದಲು ರಿಷಭ್​​ ಪಂತ್​​​​ಗೆ ನಾಯಕತ್ವದ ಜವಾಬ್ದಾರಿ ನೀಡ್ತು. ಇದರಿಂದ ಶ್ರೇಯಸ್​ ಕೋಪಗೊಂಡ್ರು. ಇದು ತನಗಾದ ಅಪಮಾನ ಎಂದು ತಿಳಿದು ಡೆಲ್ಲಿ ತಂಡದಿಂದ ಹೊರಬರಲು ನಿರ್ಧರಿಸಿದ್ರು. ಆಗ ಫ್ರಾಂಚೈಸಿ ನೀವು ಕೇಳಿದಷ್ಟು ದುಡ್ಡು ಕೊಟ್ಟು ರಿಟೆನ್ಷನ್ ಮಾಡಿಕೊಳ್ತೀವಿ. ಯಾವುದೇ ಕಾರಣಕ್ಕೂ ತಂಡ ತೊರೆಯಬೇಡಿ ಎಂದು ಹೇಳಿತು.

ಆದರೂ ಶ್ರೇಯಸ್​ ತಂಡ ತೊರೆದ್ರು. ಯಾಕಂದ್ರೆ ಅದಕ್ಕೂ ಹಿಂದಿನ ಸೀಸನ್​​ನಲ್ಲಿ ಶ್ರೇಯಸ್​ ತಂಡವನ್ನ ರನ್ನರ್​ಅಪ್​ವರೆಗೆ ಕೊಂಡೊಯ್ದಿದ್ರು. ಯಶಸ್ವಿಯಾಗಿ ತಂಡವನ್ನ ಮುನ್ನಡೆಸಿದ್ರು, ನಾಯಕತ್ವ ನಿರಾಕರಣೆ ಮಾಡಿದ್ದಕ್ಕೆ ಶ್ರೇಯಸ್​​​ ಡೆಲ್ಲಿ ತೊರೆದು 2023 ರಲ್ಲಿ ಕೆಕೆಆರ್ ಕ್ಯಾಪ್ಟನ್ ಆದರು. ಆದ್ರೆ ಗಾಯದ ಕಾರಣದಿಂದ ಕಳೆದ ಸೀಸನ್​​​ನಲ್ಲಿ ಆಡಲಿಲ್ಲ. 2024 ರಲ್ಲಿ ಕಮ್​ಬ್ಯಾಕ್ ಮಾಡಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ರು.

ಇದನ್ನೂ ಓದಿ:ಈ 5 ಆಟಗಾರರು ಮಿಂಚಿದ್ರೆ ಟೀಂ ಇಂಡಿಯಾ T20 ವಿಶ್ವಕಪ್ ಚಾಂಪಿಯನ್ ಆಗೋದು ಪಕ್ಕಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KKR ಫ್ರಾಂಚೈಸಿಗೆ ಟ್ರೋಫಿ ತಂದ್ಕೊಟ್ಟ ಅಯ್ಯರ್​.. ಇದರ ಹಿಂದಿದೆ ಒಂದು ಅಪಮಾನದ ಕಥೆ ಇದೆ..!

https://newsfirstlive.com/wp-content/uploads/2024/05/Iyer-1.jpg

    ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಕೆಕೆಆರ್​​

    ಕೆಕೆಆರ್​ ತಂಡವನ್ನು ಲೀಡ್ ಮಾಡಿದ್ದ ಶ್ರೇಯಸ್​ ಅಯ್ಯರ್

    ಅಯ್ಯರ್ ಟ್ರೋಫಿ ಹುಡುಕಾಟದಲ್ಲಿತ್ತು ಒಂದು ಅವಮಾನ

ಶ್ರೇಯಸ್​​ ಅಯ್ಯರ್​​ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇದರ ಹಿಂದೆ ಒಂದು ಅಪಮಾನದ ಕಥೆ ಇದೆ. ಅಂದಾದ ಆ ಒಂದು ಅವಮಾನ ಅವರನ್ನ ಚಾಂಪಿಯನ್​​ ಕ್ಯಾಪ್ಟನ್ ಆಗುವಂತೆ ಮಾಡಿದೆ. ಅಷ್ಟಕ್ಕೂ ಶ್ರೇಯಸ್​​​​​ಗಾದ ಆ ಅವಮಾನ ಏನು? ಮಾಡಿದ್ದಾದ್ರು ಯಾರು?

ಶ್ರೇಯಸ್​​ ಅಯ್ಯರ್​​​​​ ಗತ್ತು, ಕಿಮ್ಮತ್ತು ಇದೀಗ ಇಡೀ ಜಗತ್ತಿಗೆ ಗೊತ್ತಾಗಿದೆ. ನಾಯಕನಾಗಿ ಕೆಕೆಆರ್​​ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟು ಸೈ ಅನ್ನಿಸಿಕೊಂಡಿದ್ದಾರೆ. ಇಂತಹ ಚಾಂಪಿಯನ್​​ ಕ್ಯಾಪ್ಟನ್​​​​​ನನ್ನ ಡೆಲ್ಲಿ ಕ್ಯಾಪಿಟಲ್ಸ್​​​​ ತಂಡ ರಿಲೀಸ್ ಮಾಡಿ ಅವಮಾನಿಸಿತ್ತು. ಶ್ರೇಯಸ್​ ಅಯ್ಯರ್​​ ಡೆಲ್ಲಿ ತೊರೆದ ಅಸಲಿ ಕಾರಣ ಇದೀಗ ಬಹಿರಂಗೊಂಡಿದೆ. 2022 ರಲ್ಲಿ ಡೆಲ್ಲಿ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ರಿಷಬ್​ ಪಂತ್​​​​ ಹಾಗೂ ಶ್ರೇಯಸ್ ಅಯ್ಯರ್ ನಡುವೆ ಕ್ಲಾಶ್​ ಏರ್ಪಟ್ಟಿತ್ತು.

ಇದನ್ನೂ ಓದಿ:IPL ಫೈನಲ್​​ನಲ್ಲಿ WPL ಘಟನೆಗಳು ಪುನರಾವರ್ತನೆ.. ಐದು ಅಚ್ಚರಿಯ ಕಾಕತಾಳೀಯಗಳು ಇಲ್ಲಿವೆ..!

ಕೊನೆಗೆ ಫ್ರಾಂಚೈಸಿ ಹಿರಿಯ ಆಟಗಾರ ಶ್ರೇಯಸ್ ಬದಲು ರಿಷಭ್​​ ಪಂತ್​​​​ಗೆ ನಾಯಕತ್ವದ ಜವಾಬ್ದಾರಿ ನೀಡ್ತು. ಇದರಿಂದ ಶ್ರೇಯಸ್​ ಕೋಪಗೊಂಡ್ರು. ಇದು ತನಗಾದ ಅಪಮಾನ ಎಂದು ತಿಳಿದು ಡೆಲ್ಲಿ ತಂಡದಿಂದ ಹೊರಬರಲು ನಿರ್ಧರಿಸಿದ್ರು. ಆಗ ಫ್ರಾಂಚೈಸಿ ನೀವು ಕೇಳಿದಷ್ಟು ದುಡ್ಡು ಕೊಟ್ಟು ರಿಟೆನ್ಷನ್ ಮಾಡಿಕೊಳ್ತೀವಿ. ಯಾವುದೇ ಕಾರಣಕ್ಕೂ ತಂಡ ತೊರೆಯಬೇಡಿ ಎಂದು ಹೇಳಿತು.

ಆದರೂ ಶ್ರೇಯಸ್​ ತಂಡ ತೊರೆದ್ರು. ಯಾಕಂದ್ರೆ ಅದಕ್ಕೂ ಹಿಂದಿನ ಸೀಸನ್​​ನಲ್ಲಿ ಶ್ರೇಯಸ್​ ತಂಡವನ್ನ ರನ್ನರ್​ಅಪ್​ವರೆಗೆ ಕೊಂಡೊಯ್ದಿದ್ರು. ಯಶಸ್ವಿಯಾಗಿ ತಂಡವನ್ನ ಮುನ್ನಡೆಸಿದ್ರು, ನಾಯಕತ್ವ ನಿರಾಕರಣೆ ಮಾಡಿದ್ದಕ್ಕೆ ಶ್ರೇಯಸ್​​​ ಡೆಲ್ಲಿ ತೊರೆದು 2023 ರಲ್ಲಿ ಕೆಕೆಆರ್ ಕ್ಯಾಪ್ಟನ್ ಆದರು. ಆದ್ರೆ ಗಾಯದ ಕಾರಣದಿಂದ ಕಳೆದ ಸೀಸನ್​​​ನಲ್ಲಿ ಆಡಲಿಲ್ಲ. 2024 ರಲ್ಲಿ ಕಮ್​ಬ್ಯಾಕ್ ಮಾಡಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ರು.

ಇದನ್ನೂ ಓದಿ:ಈ 5 ಆಟಗಾರರು ಮಿಂಚಿದ್ರೆ ಟೀಂ ಇಂಡಿಯಾ T20 ವಿಶ್ವಕಪ್ ಚಾಂಪಿಯನ್ ಆಗೋದು ಪಕ್ಕಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More