ಮಾರಾಮಾರಿ, ಹೊಡೆದಾಟ ನೋಡಿದ ಪೊಲೀಸರೇ ಸುಸ್ತು
ಕುಟುಂಬಸ್ಥರ ಜಗಳ ಬಿಡಿಸಲು ಪಾಪ ಪೊಲೀಸರ ಪರದಾಟ
ಸಿನಿಮೀಯ ರೀತಿಯಲ್ಲಿ ಹೊಡೆದಾಡಿಕೊಂಡ ಒಂದೇ ಕುಟುಂಬಸ್ಥರು
ಚಿಕ್ಕಬಳ್ಳಾಪುರ: ಇದು ನಿಜಕ್ಕೂ ಯಾವ ಸಿನಿಮಾ ಫೈಟಿಂಗ್ ಸೀನ್ಗಿಂತಲೂ ಕಮ್ಮಿ ಇಲ್ಲ. ಇವರ ಮಾರಾಮಾರಿ, ಹೊಡೆದಾಟ ನೋಡಿದ ಪೊಲೀಸರೇ ಸುಸ್ತಾಗಿ ಹೋಗಿದ್ದಾರೆ. ಒಂದೇ ಕುಟುಂಬಸ್ಥರ ಜಗಳ ಬಿಡಿಸಲು ಪಾಪ ಪೊಲೀಸರೇ ಪರದಾಡಿದ್ದಾರೆ.
ಇದನ್ನೂ ಓದಿ: ರಾಮನಗರದಲ್ಲಿ ತಾಯಿ, ಮಗನ ದುರಂತ.. ಸಾವಿನಲ್ಲೂ ಒಂದಾದ ಇಬ್ಬರು; ಆ ಕೋಣೆಯಲ್ಲಿ ಆಗಿದ್ದೇನೆ?
ಅಷ್ಟಕ್ಕೂ ಈ ಡೆಡ್ಲಿ ಫೈಟಿಂಗ್ ಸೀನ್ ನಡೆದಿದ್ದು ಚಿಕ್ಕಬಳ್ಳಾಪುರ ತಾಲ್ಲೂಕಿನ ಮೋಟ್ಲೂರು ಗ್ರಾಮದಲ್ಲಿ. ಜಮೀನು ವಿಭಾಗ ವಿಚಾರವಾಗಿ ಒಂದೇ ಕುಟುಂಬಸ್ಥರ ನಡುವೆ ಜಗಳ ನಡೆದಿದೆ. ಮಹಿಳೆಯರು, ಪುರುಷರು ಸಿನಿಮೀಯ ರೀತಿಯಲ್ಲಿ ಹಿಗ್ಗಾಮುಗ್ಗ ಹೊಡೆದಾಡಿಕೊಂಡಿದ್ದಾರೆ. ಜಮೀನಿನಲ್ಲಿ ಹೊಡೆದಾಡಿಕೊಂಡ ಒಂದೇ ಕುಟುಂಬದ ಸದಸ್ಯರು ಕೈಗೆ ಸಿಕ್ಕ ಕಲ್ಲು, ಮಣ್ಣು ಗಿಡಗಳಿಂದ ಬಡಿದಾಡಿಕೊಂಡಿದ್ದಾರೆ.
ಮೋಟ್ಲೂರು ಗ್ರಾಮದ ಚೌಡಮ್ಮ ಹೆಸರಲ್ಲಿದ್ದ 2.17 ಗುಂಟೆ ಜಮೀನು ಇತ್ತು. ಈ ಜಾಗ ಚೌಡಮ್ಮ, ನಾಗಪ್ಪ, ಮುನಿಅಕ್ಕಯಮ್ಮನಿಗೂ ಸೇರಬೇಕಾಗಿದೆ. ಚೌಡಮ್ಮ ಸುಮಾರು ನಲವತ್ತು ವರ್ಷಗಳಿಂದ ಒಡಹುಟ್ಟಿದವರಿಗೆ ಜಮೀನು ನೀಡದೇ ಸತಾಯಿಸಿದ್ದರಂತೆ. ಹೀಗಾಗಿ ಚೌಡಮ್ಮ ವಿರುದ್ಧ ಚೌಡಪ್ಪ ,ನಾಗಮ್ಮ ಮುನಿಅಕ್ಕಯಮ್ಮ ಕುಟುಂಬಸ್ಥರು ತಿರುಗಿಬಿದ್ದಿದ್ದಾರೆ.
ಇದನ್ನೂ ಓದಿ: ದರ್ಶನ್ ಕೇಸ್ಗೆ ಹೊಸ ಟ್ವಿಸ್ಟ್.. ರೇಣುಕಾಸ್ವಾಮಿ ಕ್ಷಮೆ ಕೇಳಿದ್ದ ವಿಡಿಯೋ ಏನಾಯ್ತು? ಸ್ಫೋಟಕ ಸತ್ಯ ಬಯಲು
ಜಮೀನಿಗಾಗಿ ಕುಟುಂಬಸ್ಥರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ, ಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಹೊಡೆದಾಟ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಗಲಾಟೆಯಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಾರಾಮಾರಿ, ಹೊಡೆದಾಟ ನೋಡಿದ ಪೊಲೀಸರೇ ಸುಸ್ತು
ಕುಟುಂಬಸ್ಥರ ಜಗಳ ಬಿಡಿಸಲು ಪಾಪ ಪೊಲೀಸರ ಪರದಾಟ
ಸಿನಿಮೀಯ ರೀತಿಯಲ್ಲಿ ಹೊಡೆದಾಡಿಕೊಂಡ ಒಂದೇ ಕುಟುಂಬಸ್ಥರು
ಚಿಕ್ಕಬಳ್ಳಾಪುರ: ಇದು ನಿಜಕ್ಕೂ ಯಾವ ಸಿನಿಮಾ ಫೈಟಿಂಗ್ ಸೀನ್ಗಿಂತಲೂ ಕಮ್ಮಿ ಇಲ್ಲ. ಇವರ ಮಾರಾಮಾರಿ, ಹೊಡೆದಾಟ ನೋಡಿದ ಪೊಲೀಸರೇ ಸುಸ್ತಾಗಿ ಹೋಗಿದ್ದಾರೆ. ಒಂದೇ ಕುಟುಂಬಸ್ಥರ ಜಗಳ ಬಿಡಿಸಲು ಪಾಪ ಪೊಲೀಸರೇ ಪರದಾಡಿದ್ದಾರೆ.
ಇದನ್ನೂ ಓದಿ: ರಾಮನಗರದಲ್ಲಿ ತಾಯಿ, ಮಗನ ದುರಂತ.. ಸಾವಿನಲ್ಲೂ ಒಂದಾದ ಇಬ್ಬರು; ಆ ಕೋಣೆಯಲ್ಲಿ ಆಗಿದ್ದೇನೆ?
ಅಷ್ಟಕ್ಕೂ ಈ ಡೆಡ್ಲಿ ಫೈಟಿಂಗ್ ಸೀನ್ ನಡೆದಿದ್ದು ಚಿಕ್ಕಬಳ್ಳಾಪುರ ತಾಲ್ಲೂಕಿನ ಮೋಟ್ಲೂರು ಗ್ರಾಮದಲ್ಲಿ. ಜಮೀನು ವಿಭಾಗ ವಿಚಾರವಾಗಿ ಒಂದೇ ಕುಟುಂಬಸ್ಥರ ನಡುವೆ ಜಗಳ ನಡೆದಿದೆ. ಮಹಿಳೆಯರು, ಪುರುಷರು ಸಿನಿಮೀಯ ರೀತಿಯಲ್ಲಿ ಹಿಗ್ಗಾಮುಗ್ಗ ಹೊಡೆದಾಡಿಕೊಂಡಿದ್ದಾರೆ. ಜಮೀನಿನಲ್ಲಿ ಹೊಡೆದಾಡಿಕೊಂಡ ಒಂದೇ ಕುಟುಂಬದ ಸದಸ್ಯರು ಕೈಗೆ ಸಿಕ್ಕ ಕಲ್ಲು, ಮಣ್ಣು ಗಿಡಗಳಿಂದ ಬಡಿದಾಡಿಕೊಂಡಿದ್ದಾರೆ.
ಮೋಟ್ಲೂರು ಗ್ರಾಮದ ಚೌಡಮ್ಮ ಹೆಸರಲ್ಲಿದ್ದ 2.17 ಗುಂಟೆ ಜಮೀನು ಇತ್ತು. ಈ ಜಾಗ ಚೌಡಮ್ಮ, ನಾಗಪ್ಪ, ಮುನಿಅಕ್ಕಯಮ್ಮನಿಗೂ ಸೇರಬೇಕಾಗಿದೆ. ಚೌಡಮ್ಮ ಸುಮಾರು ನಲವತ್ತು ವರ್ಷಗಳಿಂದ ಒಡಹುಟ್ಟಿದವರಿಗೆ ಜಮೀನು ನೀಡದೇ ಸತಾಯಿಸಿದ್ದರಂತೆ. ಹೀಗಾಗಿ ಚೌಡಮ್ಮ ವಿರುದ್ಧ ಚೌಡಪ್ಪ ,ನಾಗಮ್ಮ ಮುನಿಅಕ್ಕಯಮ್ಮ ಕುಟುಂಬಸ್ಥರು ತಿರುಗಿಬಿದ್ದಿದ್ದಾರೆ.
ಇದನ್ನೂ ಓದಿ: ದರ್ಶನ್ ಕೇಸ್ಗೆ ಹೊಸ ಟ್ವಿಸ್ಟ್.. ರೇಣುಕಾಸ್ವಾಮಿ ಕ್ಷಮೆ ಕೇಳಿದ್ದ ವಿಡಿಯೋ ಏನಾಯ್ತು? ಸ್ಫೋಟಕ ಸತ್ಯ ಬಯಲು
ಜಮೀನಿಗಾಗಿ ಕುಟುಂಬಸ್ಥರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ, ಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಹೊಡೆದಾಟ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಗಲಾಟೆಯಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ