ಹಾಸನ ಲೈಂಗಿಕ ದೌರ್ಜನ್ಯ ಕೇಸ್‌.. ಪ್ರಜ್ವಲ್ ಬಂಧಿಸಲು ಹೊಸ ಪ್ಲಾನ್ ಮಾಡಿದ SIT; ಈಗ ಲಾಕ್‌ ಪಕ್ಕಾ!

author-image
admin
Updated On
ಜೆಡಿಎಸ್​ ಉಳಿವಿಗಾಗಿ ಈ ಚುನಾವಣೆ ಗೆಲ್ಲಲೇಬೇಕು; ದೇವೇಗೌಡ ಭಾವನಾತ್ಮಕ ಸಂದೇಶ
Advertisment
  • ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರಿಗೆ ಬಲೆ ಬೀಸಿದ SIT
  • ಪ್ರಜ್ವಲ್ ರೇವಣ್ಣ ವಾಪಸ್ ಕರೆತರಲು ಎಸ್​ಐಟಿ ನಿರಂತರ ಪ್ರಯತ್ನ
  • ಪ್ರಜ್ವಲ್ ಅವರ ದೇಶಿ ಬ್ಯಾಂಕ್ ಅಕೌಂಟ್ ಸೀಜ್ ಮಾಡೋದಕ್ಕೆ ಸಿದ್ಧತೆ

ಬೆಂಗಳೂರು: ಅಶ್ಲೀಲ ವಿಡಿಯೋ ವೈರಲ್‌, ಪೆನ್‌ಡ್ರೈವ್‌ ಪ್ರಕರಣದ ಜೊತೆಗೆ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಕೇಸಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಬಿಗ್ ಶಾಕ್ ಎದುರಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಖಾ ತನಿಖಾ ತಂಡ (SIT) ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರಿಗೆ ಬಲೆ ಬೀಸಿದೆ. ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಇದೀಗ ಅರೆಸ್ಟ್ ವಾರಂಟ್ ಜಾರಿಯಾಗಿದೆ.
ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಆರೋಪಿಯು ಹಲವು ಬಾರಿ ನೊಟೀಸ್ ನೀಡಿದ್ರೂ ವಿಚಾರಣೆಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅರೆಸ್ಟ್ ವಾರಂಟ್ ಜಾರಿ ಮಾಡಲು SIT ಮನವಿ ಮಾಡಿತ್ತು. ಈ ಮನವಿಯನ್ನು 42ನೇ ಎಸಿಎಂಎಂ ನ್ಯಾಯಾಲಯ ಪುರಸ್ಕರಿಸಿದೆ.

publive-image

ಇದನ್ನೂ ಓದಿ:ಸುತ್ತಿಗೆಯಿಂದ ಸ್ವಂತ ತಮ್ಮನ ತಲೆಗೆ ಹೊಡೆದು ಸಾಯಿಸಿದ ಪಾಪಿ ಅಣ್ಣ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ! 

ಪ್ರಜ್ವಲ್‌ ಭಾರತಕ್ಕೆ ಬಂದ್ರೆ ಲಾಕ್‌!
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈಗ ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಆಗಿದೆ. ಆದ್ರೆ ವಾರಂಟ್ ಅನ್ವಯ ಪ್ರಜ್ವಲ್ ರೇವಣ್ಣ ಭಾರತದ ಯಾವ ಮೂಲೆಯಲ್ಲಿ ಲ್ಯಾಂಡ್ ಆದರೂ SIT ಬಂಧಿಸಬಹುದು.
ಕಳೆದ ಏಪ್ರಿಲ್ 27ರಂದೇ ಆರೋಪಿ ಪ್ರಜ್ವಲ್ ರೇವಣ್ಣ ಅವರು ದೇಶ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ. ಅಂದಿನಿಂದ ಪ್ರಜ್ವಲ್ ವಾಪಸ್ ಕರೆತರೋದಕ್ಕೆ ಎಸ್​ಐಟಿ ನಿರಂತರ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ಪ್ರಜ್ವಲ್ ರೇವಣ್ಣ ಅವರ ವಿದೇಶಿ ಅಕೌಂಟ್‌ಗೆ ಲಕ್ಷ, ಲಕ್ಷ ಹಣ ವರ್ಗಾವಣೆ ಆಗಿರುವ ಅನುಮಾನಗಳಿವೆ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರ ದೇಶಿ ಬ್ಯಾಂಕ್ ಅಕೌಂಟ್ ಸೀಜ್ ಮಾಡೋದಕ್ಕೆ ಸಿದ್ಧತೆ ನಡೆಸಲಾಗಿದೆ.

ಈ ಅರೆಸ್ಟ್ ವಾರಂಟ್‌ನಿಂದ ಆರೋಪಿ ವಿದೇಶದಲ್ಲಿದ್ದಾಗ ಈ ವಾರಂಟ್ ಮೇಲೆ ಬಂಧಿಸುವಂತಿಲ್ಲ. ನಮ್ಮ ದೇಶದ ಗಡಿ ಒಳಗೆ ಬಂದಾಗ ಮಾತ್ರವೇ ಅರೆಸ್ಟ್ ಮಾಡಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಅರೆಸ್ಟ್ ವಾರಂಟ್ ಬೆನ್ನಲ್ಲೇ ರೆಡ್ ಕಾರ್ನರ್ ನೋಟಿಸ್ ಬಗ್ಗೆ​ ಚರ್ಚೆ ನಡೆಸಲಾಗುತ್ತಿದೆ. ರೆಡ್ ಕಾರ್ನರ್ ನೊಟೀಸ್​ ನೀಡಲು ಚಾರ್ಜ್ ಶೀಟ್ ಮುಖ್ಯವಾಗಿದೆ. ಮೊದಲು ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಬೇಕು ಇದಾದ ಬಳಿಕ ರೆಡ್ ಕಾರ್ನರ್ ನೊಟೀಸ್​ ಹೊರಡಿಸುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment