ಮಗನೇ ಮಾಡಿದ ಅನ್ಯಾಯಕ್ಕೆ ತಾಯಿ ಯಾರ ಬಳಿಗೆ ಹೋಗಬೇಕು?
ಎರಡನೇ ಮಗ ಮಾಡಿರುವ ಈ ಕೃತ್ಯಕ್ಕೆ ಅನಾಥಳಾದ ಹೆತ್ತ ತಾಯಿ
ಈ ವಯಸ್ಸಲ್ಲಿ ನಾನು ಎಲ್ಲಿಗೆ ಹೋಗಲೆಂದು ಅಂಗಲಾಚಿದ್ರು ಬಿಡಲಿಲ್ಲ
ಬೆಳಗಾವಿ: ವೃದ್ಧೆ ತಾಯಿ ವಾಸ ಮಾಡುತ್ತಿದ್ದ ಮನೆಯನ್ನು ಸ್ವಂತ ಮಗನೇ ಧ್ವಂಸ ಮಾಡಿರುವ ಅಮಾನವೀಯ ಕೃತ್ಯ ಬೆಳಗಾವಿ ಮಹಾನಗರದ ಅನಗೋಳದಲ್ಲಿ ನಡೆದಿದೆ.
ಇದನ್ನೂ ಓದಿ: ಶಾಲಾ-ಕಾಲೇಜುಗಳಿಗೆ ರಜೆ.. ಧಾರಾಕಾರ ಮಳೆ, ಜಲಾಶಯಗಳಿಗೆ ಜೀವ ಕಳೆ, ಇನ್ನೂ 4 ದಿನ ವರುಣಾರ್ಭಟ..!
ಅನಗೋಳದ ನಿವಾಸಿ ಶಾಂತಾಬಾಯಿ ಸಾತೇರಿ (80) ಎಂಬುವರಿಗೆ ಸೇರಿದ್ದ ಶೆಡ್ಡಿನ ಮನೆಯನ್ನು ಇವರ 2ನೇ ಮಗ ಚಾಂಗದೇವ ಸಾತೇರಿ ನಾಶ ಮಾಡಿದ್ದಾನೆ. ಸದ್ಯಕ್ಕೆ ವಾಸ ಮಾಡಲು ಮನೆ-ಮಠ ಇಲ್ಲದೇ ವೃದ್ಧೆ ಬೀದಿಗೆ ಬಂದಿದ್ದಾರೆ. ಮಗನಿಂದ ತನಗೆ ನ್ಯಾಯಬೇಕೆಂದು ಬೆಳಗಾವಿಯ ಉದ್ಯಮಭಾಗ ಠಾಣೆಯ ಪೊಲೀಸರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ.. ಕ್ಷಣದಲ್ಲೇ ಸಾವು; ವೈದ್ಯರ ವಿರುದ್ಧ ಆರೋಪ
ವೃದ್ಧೆ ಶಾಂತಾಬಾಯಿಗೆ ಮೂವರು ಗಂಡು ಮಕ್ಕಳು ಇದ್ದು ಬೆಳಗಾವಿಯ ಬೇರೆ ಬೇರೆ ಸ್ಥಳದಲ್ಲಿ ವಾಸ ಮಾಡುತ್ತಿದ್ದಾರೆ. ಈ ಮೂವರು ಸಹೋದರರು ಹಣ ಹಾಕಿ ತಾಯಿ ಹೆಸರಲ್ಲಿ ಅನಗೋಳದಲ್ಲಿ 30*30 ಅಡಿ ಜಾಗ ಖರೀದಿ ಮಾಡಿದ್ದರು. ಇದೇ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವೃದ್ಧೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. 2ನೇ ಮಗ ಉಪಾಯದಿಂದ ಹೊಸ ಮನೆ ಕಟ್ಟೋಣವೆಂದು ನಿವೇಶನ ಜಾಗವನ್ನೆಲ್ಲ ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದಾನೆ. ನಂತರ ತನ್ನ ಹೆಸರಲ್ಲಿದ್ದ ಜಾಗವನ್ನು ಹೆಂಡತಿ ಹೆಸರಿಗೆ ವರ್ಗಾವಣೆ ಮಾಡಿದ್ದಾನೆ.
ಇದನ್ನೂ ಓದಿ: ಗರ್ಭ ಧರಿಸಿಲ್ಲ, ಮರಿನೂ ಹಾಕಿಲ್ಲ.. ಆದ್ರೂ ಹಾಲು ಕೊಡುತ್ತೆ ಈ 3 ತಿಂಗಳ ಮೇಕೆ ಮರಿ..!
ಹೆಂಡತಿ ಹೆಸರಿಗೆ ಸ್ಥಳ ವರ್ಗಾವಣೆ ಆದ ಮೇಲೆ ಕೆಲ ದಿನ ಸುಮ್ಮನಿದ್ದ ಮಗ ನಂತರ ಮನೆ ಬಿಟ್ಟು ಹೋಗುವಂತೆ ತಾಯಿಗೆ ಕಿರುಕುಳ ನೀಡಿದ್ದಾನೆ. ಈ ವಯಸ್ಸಲ್ಲಿ ನಾನು ಎಲ್ಲಿಗೆ ಹೋಗಲಿ. ನಾನು ಮನೆ ಖಾಲಿ ಮಾಡಲ್ಲವೆಂದು ತಾಯಿ ಪಟ್ಟು ಹಿಡಿದಿದ್ದಾಳೆ. ಇದರಿಂದ ಕುಪಿತಗೊಂಡ ಮಗ ಚಾಂಗದೇವ ಶೆಡ್ ದ್ವಂಸಗೊಳಿಸಿ ವಿಕೃತಿ ಮೆರೆದಿದ್ದಾನೆ. ಇರಲು ಸ್ಥಳವಿಲ್ಲದೇ ವೃದ್ಧೆ ಬೀದಿಗೆ ಬಂದಿದ್ದು ನನಗೆ ನ್ಯಾಯಬೇಕು ಅಂತ ಬೆಳಗಾವಿಯ ಉದ್ಯಮಭಾಗ ಪೊಲೀಸರ ಮೊರೆ ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಗನೇ ಮಾಡಿದ ಅನ್ಯಾಯಕ್ಕೆ ತಾಯಿ ಯಾರ ಬಳಿಗೆ ಹೋಗಬೇಕು?
ಎರಡನೇ ಮಗ ಮಾಡಿರುವ ಈ ಕೃತ್ಯಕ್ಕೆ ಅನಾಥಳಾದ ಹೆತ್ತ ತಾಯಿ
ಈ ವಯಸ್ಸಲ್ಲಿ ನಾನು ಎಲ್ಲಿಗೆ ಹೋಗಲೆಂದು ಅಂಗಲಾಚಿದ್ರು ಬಿಡಲಿಲ್ಲ
ಬೆಳಗಾವಿ: ವೃದ್ಧೆ ತಾಯಿ ವಾಸ ಮಾಡುತ್ತಿದ್ದ ಮನೆಯನ್ನು ಸ್ವಂತ ಮಗನೇ ಧ್ವಂಸ ಮಾಡಿರುವ ಅಮಾನವೀಯ ಕೃತ್ಯ ಬೆಳಗಾವಿ ಮಹಾನಗರದ ಅನಗೋಳದಲ್ಲಿ ನಡೆದಿದೆ.
ಇದನ್ನೂ ಓದಿ: ಶಾಲಾ-ಕಾಲೇಜುಗಳಿಗೆ ರಜೆ.. ಧಾರಾಕಾರ ಮಳೆ, ಜಲಾಶಯಗಳಿಗೆ ಜೀವ ಕಳೆ, ಇನ್ನೂ 4 ದಿನ ವರುಣಾರ್ಭಟ..!
ಅನಗೋಳದ ನಿವಾಸಿ ಶಾಂತಾಬಾಯಿ ಸಾತೇರಿ (80) ಎಂಬುವರಿಗೆ ಸೇರಿದ್ದ ಶೆಡ್ಡಿನ ಮನೆಯನ್ನು ಇವರ 2ನೇ ಮಗ ಚಾಂಗದೇವ ಸಾತೇರಿ ನಾಶ ಮಾಡಿದ್ದಾನೆ. ಸದ್ಯಕ್ಕೆ ವಾಸ ಮಾಡಲು ಮನೆ-ಮಠ ಇಲ್ಲದೇ ವೃದ್ಧೆ ಬೀದಿಗೆ ಬಂದಿದ್ದಾರೆ. ಮಗನಿಂದ ತನಗೆ ನ್ಯಾಯಬೇಕೆಂದು ಬೆಳಗಾವಿಯ ಉದ್ಯಮಭಾಗ ಠಾಣೆಯ ಪೊಲೀಸರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ.. ಕ್ಷಣದಲ್ಲೇ ಸಾವು; ವೈದ್ಯರ ವಿರುದ್ಧ ಆರೋಪ
ವೃದ್ಧೆ ಶಾಂತಾಬಾಯಿಗೆ ಮೂವರು ಗಂಡು ಮಕ್ಕಳು ಇದ್ದು ಬೆಳಗಾವಿಯ ಬೇರೆ ಬೇರೆ ಸ್ಥಳದಲ್ಲಿ ವಾಸ ಮಾಡುತ್ತಿದ್ದಾರೆ. ಈ ಮೂವರು ಸಹೋದರರು ಹಣ ಹಾಕಿ ತಾಯಿ ಹೆಸರಲ್ಲಿ ಅನಗೋಳದಲ್ಲಿ 30*30 ಅಡಿ ಜಾಗ ಖರೀದಿ ಮಾಡಿದ್ದರು. ಇದೇ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವೃದ್ಧೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. 2ನೇ ಮಗ ಉಪಾಯದಿಂದ ಹೊಸ ಮನೆ ಕಟ್ಟೋಣವೆಂದು ನಿವೇಶನ ಜಾಗವನ್ನೆಲ್ಲ ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದಾನೆ. ನಂತರ ತನ್ನ ಹೆಸರಲ್ಲಿದ್ದ ಜಾಗವನ್ನು ಹೆಂಡತಿ ಹೆಸರಿಗೆ ವರ್ಗಾವಣೆ ಮಾಡಿದ್ದಾನೆ.
ಇದನ್ನೂ ಓದಿ: ಗರ್ಭ ಧರಿಸಿಲ್ಲ, ಮರಿನೂ ಹಾಕಿಲ್ಲ.. ಆದ್ರೂ ಹಾಲು ಕೊಡುತ್ತೆ ಈ 3 ತಿಂಗಳ ಮೇಕೆ ಮರಿ..!
ಹೆಂಡತಿ ಹೆಸರಿಗೆ ಸ್ಥಳ ವರ್ಗಾವಣೆ ಆದ ಮೇಲೆ ಕೆಲ ದಿನ ಸುಮ್ಮನಿದ್ದ ಮಗ ನಂತರ ಮನೆ ಬಿಟ್ಟು ಹೋಗುವಂತೆ ತಾಯಿಗೆ ಕಿರುಕುಳ ನೀಡಿದ್ದಾನೆ. ಈ ವಯಸ್ಸಲ್ಲಿ ನಾನು ಎಲ್ಲಿಗೆ ಹೋಗಲಿ. ನಾನು ಮನೆ ಖಾಲಿ ಮಾಡಲ್ಲವೆಂದು ತಾಯಿ ಪಟ್ಟು ಹಿಡಿದಿದ್ದಾಳೆ. ಇದರಿಂದ ಕುಪಿತಗೊಂಡ ಮಗ ಚಾಂಗದೇವ ಶೆಡ್ ದ್ವಂಸಗೊಳಿಸಿ ವಿಕೃತಿ ಮೆರೆದಿದ್ದಾನೆ. ಇರಲು ಸ್ಥಳವಿಲ್ಲದೇ ವೃದ್ಧೆ ಬೀದಿಗೆ ಬಂದಿದ್ದು ನನಗೆ ನ್ಯಾಯಬೇಕು ಅಂತ ಬೆಳಗಾವಿಯ ಉದ್ಯಮಭಾಗ ಪೊಲೀಸರ ಮೊರೆ ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ