newsfirstkannada.com

ದರ್ಶನ್‌ಗೆ ಆಪ್ತ ನಿರ್ಮಾಪಕ.. ಸ್ನೇಹ ಜೀವಿಯಾಗಿದ್ದ ಸೌಂದರ್ಯ ಜಗದೀಶ್ ಬದುಕಲ್ಲಿ ಆಗಿದ್ದೇನು?

Share :

Published April 14, 2024 at 7:50pm

Update April 14, 2024 at 7:52pm

    ಯಾವುದಕ್ಕೂ ಭಯ ಪಡದೆ ಇರೋ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ಅಚ್ಚರಿ

    'ಮಸ್ತ್ ಮಜಾ ಮಾಡಿ' ಸೌಂದರ್ಯ ಜಗದೀಶ್​ ನಿರ್ಮಾಣದ ಚೊಚ್ಚಲ ಸಿನಿಮಾ

    ಸಿನಿಮಾ ಇಂಡಸ್ಟ್ರಿಯೇ ಅಚ್ಚರಿ ಪಡುವಂತೆ ಮಗಳಿಗೆ ಮದುವೆ ಮಾಡಿದ್ದ ಜಗದೀಶ್​

ಬೆಂಗಳೂರು: ಬೇಸಿಕಲಿ ಜಗದೀಶ್ ಓರ್ವ ಬಿಲ್ಡರ್​ ಆಗಿದ್ದರು. ಕಂಟ್ರ್ಯಾಕ್ಟರ್ ಆಗಿ ಕೆಲಸ ಆರಂಭಿಸಿದ್ದ ಜಗದೀಶ್​ ಆಮೇಲೆ ದೊಡ್ಡ ಬಿಲ್ಡರ್ ಆಗಿ ಬೆಳೆದಿದ್ದರು. ಹೋಟೆಲ್​ ಉದ್ಯಮವನ್ನೂ ಆರಂಭಿಸಿದರು. ಬೆಂಗಳೂರಿನ ಫೇಮಸ್ ಜೆಟ್​ಲ್ಯಾಗ್​ ಹೋಟೆಲ್​ ಇದೇ ಜಗದೀಶ್​ ಅವರದ್ದು. ಸೌಂದರ್ಯ ಜಗದೀಶ್​ ಖ್ಯಾತ ನಿರ್ಮಾಪಕ ಅಂತ ಎಲ್ಲರಿಗೂ ಗೊತ್ತಿದೆ. ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವ ಜಗದೀಶ್​, ಸ್ಟಾರ್​ ನಟರ ಬಳಗದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ವಲಯದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಸೌಂದರ್ಯ ಜಗದೀಶ್​, ರಿಯಲ್ ಸ್ಟಾರ್ ಉಪೇಂದ್ರ, ಗೋಲ್ಡನ್ ಗಣೇಶ್, ಗುರುಕಿರಣ್, ರಮೇಶ್ ಅರವಿಂದ್ ಹೀಗೆ ಖ್ಯಾತ ತಾರೆಯರ ಸ್ನೇಹ ಸಂಪಾದಿಸಿದ್ದರು. ಅದೇ ಕಾರಣಕ್ಕೆ ಸೌಂದರ್ಯ ಜಗದೀಶ್ ಅವರನ್ನ ಸ್ನೇಹಿಜೀವಿ ಅಂತಾನೂ ಕರೆಯುತ್ತಿದ್ದರು.

ಇದನ್ನೂ ಓದಿ: ಹುಟ್ಟು ಹಬ್ಬದ ದಿನವೇ ಹೊಸ ಕಾರು ಖರೀದಿಸಿದ ಬಿಗ್​ಬಾಸ್​​ ಸ್ಪರ್ಧಿ ನಮ್ರತಾ ಗೌಡ; ಅದರ ಬೆಲೆ ಎಷ್ಟು?

ಸೌಂದರ್ಯ ಜಗದೀಶ್ ಅವರನ್ನ ಯಾವಾಗಲೇ ನೋಡಿದರೂ, ಅವರನ್ನ ಯಾವ ಸಂದರ್ಭದಲ್ಲೂ ಮಾತನಾಡಿಸಿದರೂ ನಗು ಮೊಗದಲ್ಲೇ ಪ್ರತಿಕ್ರಿಯಿಸುತ್ತಿದ್ದರು. ಯಾಕಂದ್ರೆ ಅವರ ಸ್ವಭಾವವೇ ಅಂಥದ್ದೇ. ಜಗದೀಶ್ ಶಾಂತ ಸ್ವಭಾವದವರು, ಹೆಂಗರಳಿನ ವ್ಯಕ್ತಿತ್ವ ಹೊಂದಿದ್ದವರು. ಕಷ್ಟದಲ್ಲಿದ್ದ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಅನ್ನೋದು ಅವರ ಆಪ್ತ ಬಗಳವನ್ನ ವಿಚಾರಿಸಿದಾಗ ಗೊತ್ತಾಗುತ್ತೆ. ಹೀಗೆ ಸದಾ ಹಸನ್ಮುಖಿಯಾಗಿ, ಕಷ್ಟದಲ್ಲಿದ್ದವರಿಗೆ ಪರೋಪಕಾರಿಯಾಗಿದ್ದ ಸೌಂದರ್ಯ ಜಗದೀಶ್​ ದೀಢೀರ್ ಅಂತ ಆತ್ಮಹತ್ಯೆ ಮಾಡಿಕೊಂಡರೂ ಅಂದ್ರೆ ಯಾರಿಗೆ ಆಘಾತ ಆಗಲ್ಲ ಹೇಳಿ. ಅದರಲ್ಲೂ ಅವರನ್ನ ಹತ್ತಿರದಿಂದ ಬಲ್ಲವರಂತೂ ಈ ಸಾವು ಬಹುದೊಡ್ಡ ಅಘಾತ ತಂದಿದೆ.

ಸೌಂದರ್ಯ ಜಗದೀಶ್​ ಅಂದ್ರೆ ಓರ್ವ ಸಿನಿಮಾ ನಿರ್ಮಾಪಕ. ಯಾವಾಗಲೂ ಸ್ಟಾರ್ ನಟರ ಜೊತೆ ಓಡಾಡ್ಕೊಂಡು ಇರ್ತಾರೆ ಅಂತ ಅಂದ್ಕೋಡಿರೋರು ಇದ್ದಾರೆ. ಆದ್ರೆ ನೀವಂದುಕೊಂಡಂತೆ ಸೌಂದರ್ಯ ಜಗದೀಶ್​ ಸಾಮಾನ್ಯ ವ್ಯಕ್ತಿಯಲ್ಲ. ಸಾಮಾನ್ಯ ನಿರ್ಮಾಪಕನಂತೂ ಅಲ್ಲವೇ ಅಲ್ಲ. ಜಗದೀಶ್​ ಓರ್ವ ಶ್ರೀಮಂತ ವ್ಯಕ್ತಿ. ಪ್ರೊಫೆಶನಲ್ ಬಿಲ್ಡರ್ ಆಗಿರುವ ಸೌಂದರ್ಯ ಜಗದೀಶ್ ಸ್ಯಾಂಡಲ್​ವುಡ್​ನ ಶ್ರೀಮಂತ ನಿರ್ಮಾಪಕ. ಜಗದೀಶ್​ ಅವರು ಬೆಂಗಳೂರಿನ ನಾನಾ ಕಡೆ ಆಸ್ತಿ ಪಾಸ್ತಿ ಹೊಂದಿದ್ದಾರೆ. ಮಹಾಲಕ್ಷ್ಮಿ ಲೇಔಟ್​ನಲ್ಲಿ ಐಷಾರಾಮಿ ಬಂಗಲೆ ಜೊತೆಗೆ ರಾಜಾಜಿನಗರ, ಯಲಹಂಕ ಸೇರಿ ಹಲವು ಕಡೆಗಳಲ್ಲಿ ಅಪಾರ್ಟ್​ಮೆಂಟ್​ ಹಾಗೂ ಮನೆಗಳನ್ನ ಹೊಂದಿದ್ದರು ಎನ್ನಲಾಗಿದೆ. ಇದರ ಜೊತೆಗೆ ಕಾಸ್ಟ್​ಲೀ ಕಾರುಗಳು, ಬೈಕ್​ಗಳು ಜಗದೀಶ್ ಅವರ ಬಳಿ ಇತ್ತು. ಹತ್ತಾರು ಕೆಲಸಗಾರರು ಜಗದೀಶ್​ ಬಳಿ ಕೆಲಸ ಮಾಡ್ತಿದ್ದರು. ಹೀಗೆ ಬಹಳ ಆಡಂಬರವಾಗಿ ಜೀವನ ಸಾಗಿಸ್ತಿದ್ದ ಜಗದೀಶ್​ ಈಗ ದಿಢೀರ್ ಅಂತ ಸೂಸೈಡ್​ ಮಾಡ್ಕೋತಾರೆ ಅಂದ್ರೆ ನಿಜಕ್ಕೂ ಯಾರಿಗೂ ನಂಬೋಕೆ ಆಗ್ತಿಲ್ಲ.

2008ರಲ್ಲಿ ರಿಲೀಸ್ ಆದ ‘ಮಸ್ತ್ ಮಜಾ ಮಾಡಿ’ ಸೌಂದರ್ಯ ಜಗದೀಶ್​ ನಿರ್ಮಾಣದ ಚೊಚ್ಚಲ ಸಿನಿಮಾ. ಮೊದಲನೇ ಸಿನಿಮಾನೇ ಮಲ್ಟಿಸ್ಟಾರ್. ದೊಡ್ಡ ದೊಡ್ಡ ಆ್ಯಕ್ಟರ್​ಗಳನ್ನ ಒಂದೇ ಸಿನಿಮಾಗಾಗಿ ಕರೆತಂದಿದ್ದರು. ಕಿಚ್ಚ ಸುದೀಪ್, ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಉಪೇಂದ್ರ, ಶರ್ಮಿಳಾ, ಸಂಜನಾ, ರಾಗಿಣಿ, ಐಂದ್ರಿತಾ ಸೇರಿ ಸಾಕಷ್ಟು ತಾರೆಯರು ಈ ಚಿತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ‘ಸ್ನೇಹಿತರು’ ಅಂತ ಮತ್ತೊಂದು ಸಿನಿಮಾ ಮಾಡಿದರು. ಇದರಲ್ಲಿ ಸೃಜನ್ ಲೋಕೇಶ್, ತರುಣ್ ಚಂದ್ರ ಜೊತೆಗೆ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದ ನಂತರ ‘ಅಪ್ಪು ಪಪ್ಪು’ ಹಾಗೂ ‘ರಾಮ್​ಲೀಲಾ’ ಚಿತ್ರಗಳಿಗೂ ಸೌಂದರ್ಯ ಜಗದೀಶ್​ ಬಂಡವಾಳ ಹಾಕಿದ್ದರು. ಆಮೇಲೆ ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಬ್ಯುಸಿಯಾದ ಜಗದೀಶ್​ ಹೊಸ ಚಿತ್ರದ ಆರಂಭಕ್ಕೆ ತಯಾರಿ ನಡೆಸ್ತಿದ್ದರು. ಈ ನಡುವೆ ಮಗನನ್ನ ಹೀರೋ ಮಾಡಬೇಕು, ಇಂಡಸ್ಟ್ರಿಯಲ್ಲಿ ಒಳ್ಳೆ ಭವಿಷ್ಯ ರೂಪಿಸಬೇಕು ಅಂತಾನೂ ಪ್ಲಾನ್ ಮಾಡ್ತಿದ್ದರು. ಈ ನಡುವೆ ಇಡೀ ಇಂಡಸ್ಟ್ರಿ ವಾಹ್ ಅನ್ನೋಥರ ಮಗಳಿಗೆ ಮದುವೆನೂ ಮಾಡಿದರು.

ಸೌಂದರ್ಯ ಜಗದೀಶ್​ ದುಃಖದಲ್ಲಿದ್ದಿದ್ದು, ನೋವುನಲ್ಲಿದ್ದರೂ ಅನ್ನೋದಕ್ಕೆ ಕಾರಣಗಳೇ ಇರಲಿಲ್ಲ. ಮಿಗಿಲಾಗಿ ಯಾರ ಬಳಿಯೂ ತನ್ನ ಕಷ್ಟವನ್ನ ತೋಡಿಕೊಂಡವರಲ್ಲ. ಅದೇ ಕಾರಣಕ್ಕೆ ಸೌಂದರ್ಯ ಜಗದೀಶ್ ಅವರ ಈ ಸಾವು ಅನುಮಾನಕ್ಕೆ ಕಾರಣವಾಗಿದೆ. ದಿಲ್​ದಾರ್ ನಿರ್ಮಾಪಕ, ಗಟ್ಟಿ ವ್ಯಕ್ತಿತ್ವ, ಯಾವುದಕ್ಕೂ ಸೋಲದವ, ಯಾವುದಕ್ಕೂ ಭಯ ಪಡದವ ಅಂತೆಲ್ಲಾ ಬಿಂಬಿಸಿಕೊಂಡಿದ್ದ ಮನುಷ್ಯ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಅನ್ನೋದು ಹಲವು ಪ್ರಶ್ನೆಗಳನ್ನ ಮೂಡಿಸಿದೆ. ಇನ್ನು, ಮಹಾಲಕ್ಷ್ಮಿ ಲೇಔಟ್ ಪೊಲೀಸರು ಜಗದೀಶ್ ಅವರದ್ದು ಅನುಮಾನಸ್ಪಾದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ಮಾನಸಿಕವಾಗಿ ನೋವಿನಲ್ಲಿದ್ದರೂ, ಅದಕ್ಕೆ ಚಿಕಿತ್ಸೆನೂ ಪಡೆಯುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರಂತೆ. ಹಾಗಾಗಿ ಕುಟುಂಬಸ್ಥರ ಹೇಳಿಕೆ ಪಡೆದು ಜಗದೀಶ್ ಅವರ ಎರಡು ಮೊಬೈಲ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ. ಸೌಂದರ್ಯ ಜಗದೀಶ್​ ಅವರ ಈ ಸಾವು ಆಘಾತ ತಂದಿದೆ. ಅದೇ ಥರಾ ಕೆಲವು ಅನುಮಾನಗಳು ಮೂಡಿದೆ. ಈ ಎಲ್ಲಾ ಅನುಮಾನಗಳಿಗೆ ಪೊಲೀಸರ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ಗೆ ಆಪ್ತ ನಿರ್ಮಾಪಕ.. ಸ್ನೇಹ ಜೀವಿಯಾಗಿದ್ದ ಸೌಂದರ್ಯ ಜಗದೀಶ್ ಬದುಕಲ್ಲಿ ಆಗಿದ್ದೇನು?

https://newsfirstlive.com/wp-content/uploads/2024/04/jagadish1-1.jpg

    ಯಾವುದಕ್ಕೂ ಭಯ ಪಡದೆ ಇರೋ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು ನಿಜಕ್ಕೂ ಅಚ್ಚರಿ

    'ಮಸ್ತ್ ಮಜಾ ಮಾಡಿ' ಸೌಂದರ್ಯ ಜಗದೀಶ್​ ನಿರ್ಮಾಣದ ಚೊಚ್ಚಲ ಸಿನಿಮಾ

    ಸಿನಿಮಾ ಇಂಡಸ್ಟ್ರಿಯೇ ಅಚ್ಚರಿ ಪಡುವಂತೆ ಮಗಳಿಗೆ ಮದುವೆ ಮಾಡಿದ್ದ ಜಗದೀಶ್​

ಬೆಂಗಳೂರು: ಬೇಸಿಕಲಿ ಜಗದೀಶ್ ಓರ್ವ ಬಿಲ್ಡರ್​ ಆಗಿದ್ದರು. ಕಂಟ್ರ್ಯಾಕ್ಟರ್ ಆಗಿ ಕೆಲಸ ಆರಂಭಿಸಿದ್ದ ಜಗದೀಶ್​ ಆಮೇಲೆ ದೊಡ್ಡ ಬಿಲ್ಡರ್ ಆಗಿ ಬೆಳೆದಿದ್ದರು. ಹೋಟೆಲ್​ ಉದ್ಯಮವನ್ನೂ ಆರಂಭಿಸಿದರು. ಬೆಂಗಳೂರಿನ ಫೇಮಸ್ ಜೆಟ್​ಲ್ಯಾಗ್​ ಹೋಟೆಲ್​ ಇದೇ ಜಗದೀಶ್​ ಅವರದ್ದು. ಸೌಂದರ್ಯ ಜಗದೀಶ್​ ಖ್ಯಾತ ನಿರ್ಮಾಪಕ ಅಂತ ಎಲ್ಲರಿಗೂ ಗೊತ್ತಿದೆ. ಸದ್ಯ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವ ಜಗದೀಶ್​, ಸ್ಟಾರ್​ ನಟರ ಬಳಗದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ವಲಯದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಸೌಂದರ್ಯ ಜಗದೀಶ್​, ರಿಯಲ್ ಸ್ಟಾರ್ ಉಪೇಂದ್ರ, ಗೋಲ್ಡನ್ ಗಣೇಶ್, ಗುರುಕಿರಣ್, ರಮೇಶ್ ಅರವಿಂದ್ ಹೀಗೆ ಖ್ಯಾತ ತಾರೆಯರ ಸ್ನೇಹ ಸಂಪಾದಿಸಿದ್ದರು. ಅದೇ ಕಾರಣಕ್ಕೆ ಸೌಂದರ್ಯ ಜಗದೀಶ್ ಅವರನ್ನ ಸ್ನೇಹಿಜೀವಿ ಅಂತಾನೂ ಕರೆಯುತ್ತಿದ್ದರು.

ಇದನ್ನೂ ಓದಿ: ಹುಟ್ಟು ಹಬ್ಬದ ದಿನವೇ ಹೊಸ ಕಾರು ಖರೀದಿಸಿದ ಬಿಗ್​ಬಾಸ್​​ ಸ್ಪರ್ಧಿ ನಮ್ರತಾ ಗೌಡ; ಅದರ ಬೆಲೆ ಎಷ್ಟು?

ಸೌಂದರ್ಯ ಜಗದೀಶ್ ಅವರನ್ನ ಯಾವಾಗಲೇ ನೋಡಿದರೂ, ಅವರನ್ನ ಯಾವ ಸಂದರ್ಭದಲ್ಲೂ ಮಾತನಾಡಿಸಿದರೂ ನಗು ಮೊಗದಲ್ಲೇ ಪ್ರತಿಕ್ರಿಯಿಸುತ್ತಿದ್ದರು. ಯಾಕಂದ್ರೆ ಅವರ ಸ್ವಭಾವವೇ ಅಂಥದ್ದೇ. ಜಗದೀಶ್ ಶಾಂತ ಸ್ವಭಾವದವರು, ಹೆಂಗರಳಿನ ವ್ಯಕ್ತಿತ್ವ ಹೊಂದಿದ್ದವರು. ಕಷ್ಟದಲ್ಲಿದ್ದ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಅನ್ನೋದು ಅವರ ಆಪ್ತ ಬಗಳವನ್ನ ವಿಚಾರಿಸಿದಾಗ ಗೊತ್ತಾಗುತ್ತೆ. ಹೀಗೆ ಸದಾ ಹಸನ್ಮುಖಿಯಾಗಿ, ಕಷ್ಟದಲ್ಲಿದ್ದವರಿಗೆ ಪರೋಪಕಾರಿಯಾಗಿದ್ದ ಸೌಂದರ್ಯ ಜಗದೀಶ್​ ದೀಢೀರ್ ಅಂತ ಆತ್ಮಹತ್ಯೆ ಮಾಡಿಕೊಂಡರೂ ಅಂದ್ರೆ ಯಾರಿಗೆ ಆಘಾತ ಆಗಲ್ಲ ಹೇಳಿ. ಅದರಲ್ಲೂ ಅವರನ್ನ ಹತ್ತಿರದಿಂದ ಬಲ್ಲವರಂತೂ ಈ ಸಾವು ಬಹುದೊಡ್ಡ ಅಘಾತ ತಂದಿದೆ.

ಸೌಂದರ್ಯ ಜಗದೀಶ್​ ಅಂದ್ರೆ ಓರ್ವ ಸಿನಿಮಾ ನಿರ್ಮಾಪಕ. ಯಾವಾಗಲೂ ಸ್ಟಾರ್ ನಟರ ಜೊತೆ ಓಡಾಡ್ಕೊಂಡು ಇರ್ತಾರೆ ಅಂತ ಅಂದ್ಕೋಡಿರೋರು ಇದ್ದಾರೆ. ಆದ್ರೆ ನೀವಂದುಕೊಂಡಂತೆ ಸೌಂದರ್ಯ ಜಗದೀಶ್​ ಸಾಮಾನ್ಯ ವ್ಯಕ್ತಿಯಲ್ಲ. ಸಾಮಾನ್ಯ ನಿರ್ಮಾಪಕನಂತೂ ಅಲ್ಲವೇ ಅಲ್ಲ. ಜಗದೀಶ್​ ಓರ್ವ ಶ್ರೀಮಂತ ವ್ಯಕ್ತಿ. ಪ್ರೊಫೆಶನಲ್ ಬಿಲ್ಡರ್ ಆಗಿರುವ ಸೌಂದರ್ಯ ಜಗದೀಶ್ ಸ್ಯಾಂಡಲ್​ವುಡ್​ನ ಶ್ರೀಮಂತ ನಿರ್ಮಾಪಕ. ಜಗದೀಶ್​ ಅವರು ಬೆಂಗಳೂರಿನ ನಾನಾ ಕಡೆ ಆಸ್ತಿ ಪಾಸ್ತಿ ಹೊಂದಿದ್ದಾರೆ. ಮಹಾಲಕ್ಷ್ಮಿ ಲೇಔಟ್​ನಲ್ಲಿ ಐಷಾರಾಮಿ ಬಂಗಲೆ ಜೊತೆಗೆ ರಾಜಾಜಿನಗರ, ಯಲಹಂಕ ಸೇರಿ ಹಲವು ಕಡೆಗಳಲ್ಲಿ ಅಪಾರ್ಟ್​ಮೆಂಟ್​ ಹಾಗೂ ಮನೆಗಳನ್ನ ಹೊಂದಿದ್ದರು ಎನ್ನಲಾಗಿದೆ. ಇದರ ಜೊತೆಗೆ ಕಾಸ್ಟ್​ಲೀ ಕಾರುಗಳು, ಬೈಕ್​ಗಳು ಜಗದೀಶ್ ಅವರ ಬಳಿ ಇತ್ತು. ಹತ್ತಾರು ಕೆಲಸಗಾರರು ಜಗದೀಶ್​ ಬಳಿ ಕೆಲಸ ಮಾಡ್ತಿದ್ದರು. ಹೀಗೆ ಬಹಳ ಆಡಂಬರವಾಗಿ ಜೀವನ ಸಾಗಿಸ್ತಿದ್ದ ಜಗದೀಶ್​ ಈಗ ದಿಢೀರ್ ಅಂತ ಸೂಸೈಡ್​ ಮಾಡ್ಕೋತಾರೆ ಅಂದ್ರೆ ನಿಜಕ್ಕೂ ಯಾರಿಗೂ ನಂಬೋಕೆ ಆಗ್ತಿಲ್ಲ.

2008ರಲ್ಲಿ ರಿಲೀಸ್ ಆದ ‘ಮಸ್ತ್ ಮಜಾ ಮಾಡಿ’ ಸೌಂದರ್ಯ ಜಗದೀಶ್​ ನಿರ್ಮಾಣದ ಚೊಚ್ಚಲ ಸಿನಿಮಾ. ಮೊದಲನೇ ಸಿನಿಮಾನೇ ಮಲ್ಟಿಸ್ಟಾರ್. ದೊಡ್ಡ ದೊಡ್ಡ ಆ್ಯಕ್ಟರ್​ಗಳನ್ನ ಒಂದೇ ಸಿನಿಮಾಗಾಗಿ ಕರೆತಂದಿದ್ದರು. ಕಿಚ್ಚ ಸುದೀಪ್, ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಉಪೇಂದ್ರ, ಶರ್ಮಿಳಾ, ಸಂಜನಾ, ರಾಗಿಣಿ, ಐಂದ್ರಿತಾ ಸೇರಿ ಸಾಕಷ್ಟು ತಾರೆಯರು ಈ ಚಿತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ‘ಸ್ನೇಹಿತರು’ ಅಂತ ಮತ್ತೊಂದು ಸಿನಿಮಾ ಮಾಡಿದರು. ಇದರಲ್ಲಿ ಸೃಜನ್ ಲೋಕೇಶ್, ತರುಣ್ ಚಂದ್ರ ಜೊತೆಗೆ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದ ನಂತರ ‘ಅಪ್ಪು ಪಪ್ಪು’ ಹಾಗೂ ‘ರಾಮ್​ಲೀಲಾ’ ಚಿತ್ರಗಳಿಗೂ ಸೌಂದರ್ಯ ಜಗದೀಶ್​ ಬಂಡವಾಳ ಹಾಕಿದ್ದರು. ಆಮೇಲೆ ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಬ್ಯುಸಿಯಾದ ಜಗದೀಶ್​ ಹೊಸ ಚಿತ್ರದ ಆರಂಭಕ್ಕೆ ತಯಾರಿ ನಡೆಸ್ತಿದ್ದರು. ಈ ನಡುವೆ ಮಗನನ್ನ ಹೀರೋ ಮಾಡಬೇಕು, ಇಂಡಸ್ಟ್ರಿಯಲ್ಲಿ ಒಳ್ಳೆ ಭವಿಷ್ಯ ರೂಪಿಸಬೇಕು ಅಂತಾನೂ ಪ್ಲಾನ್ ಮಾಡ್ತಿದ್ದರು. ಈ ನಡುವೆ ಇಡೀ ಇಂಡಸ್ಟ್ರಿ ವಾಹ್ ಅನ್ನೋಥರ ಮಗಳಿಗೆ ಮದುವೆನೂ ಮಾಡಿದರು.

ಸೌಂದರ್ಯ ಜಗದೀಶ್​ ದುಃಖದಲ್ಲಿದ್ದಿದ್ದು, ನೋವುನಲ್ಲಿದ್ದರೂ ಅನ್ನೋದಕ್ಕೆ ಕಾರಣಗಳೇ ಇರಲಿಲ್ಲ. ಮಿಗಿಲಾಗಿ ಯಾರ ಬಳಿಯೂ ತನ್ನ ಕಷ್ಟವನ್ನ ತೋಡಿಕೊಂಡವರಲ್ಲ. ಅದೇ ಕಾರಣಕ್ಕೆ ಸೌಂದರ್ಯ ಜಗದೀಶ್ ಅವರ ಈ ಸಾವು ಅನುಮಾನಕ್ಕೆ ಕಾರಣವಾಗಿದೆ. ದಿಲ್​ದಾರ್ ನಿರ್ಮಾಪಕ, ಗಟ್ಟಿ ವ್ಯಕ್ತಿತ್ವ, ಯಾವುದಕ್ಕೂ ಸೋಲದವ, ಯಾವುದಕ್ಕೂ ಭಯ ಪಡದವ ಅಂತೆಲ್ಲಾ ಬಿಂಬಿಸಿಕೊಂಡಿದ್ದ ಮನುಷ್ಯ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಅನ್ನೋದು ಹಲವು ಪ್ರಶ್ನೆಗಳನ್ನ ಮೂಡಿಸಿದೆ. ಇನ್ನು, ಮಹಾಲಕ್ಷ್ಮಿ ಲೇಔಟ್ ಪೊಲೀಸರು ಜಗದೀಶ್ ಅವರದ್ದು ಅನುಮಾನಸ್ಪಾದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ಮಾನಸಿಕವಾಗಿ ನೋವಿನಲ್ಲಿದ್ದರೂ, ಅದಕ್ಕೆ ಚಿಕಿತ್ಸೆನೂ ಪಡೆಯುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರಂತೆ. ಹಾಗಾಗಿ ಕುಟುಂಬಸ್ಥರ ಹೇಳಿಕೆ ಪಡೆದು ಜಗದೀಶ್ ಅವರ ಎರಡು ಮೊಬೈಲ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ. ಸೌಂದರ್ಯ ಜಗದೀಶ್​ ಅವರ ಈ ಸಾವು ಆಘಾತ ತಂದಿದೆ. ಅದೇ ಥರಾ ಕೆಲವು ಅನುಮಾನಗಳು ಮೂಡಿದೆ. ಈ ಎಲ್ಲಾ ಅನುಮಾನಗಳಿಗೆ ಪೊಲೀಸರ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More