ಬಜೆಟ್ ಮಂಡನೆಗೂ ಮೊದಲೇ ವಿಶೇಷ ಸ್ಥಾನಮಾನದ ಬಡಿದಾಟ ಶುರು
ನಿಜವಾಗುತ್ತಿವೆಯಾ ರಾಜಕೀಯ ಪಂಡಿತರು ಹಿಂದೆ ಹಾಕಿದ ಲೆಕ್ಕಾಚಾರ!
ಆರಂಭದಲ್ಲಿಯೇ ಶುರುವಾದ್ವಾ ಮೋದಿ ಮೈತ್ರಿ ಸರ್ಕಾರಕ್ಕೆ ಸಂಕಷ್ಟಗಳು?
ನವದೆಹಲಿ: ಮೋದಿ 3.O ಸರ್ಕಾರದ ಮೊದಲ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಇದೇ ಸಮಯದಲ್ಲಿ ಚುನಾವಣೆಗೂ ಮುನ್ನ ಯಾವೆಲ್ಲಾ ಊಹೆಗಳನ್ನು ರಾಜಕೀಯ ಪರಿಣಿತರು ಮಾಡಿದ್ದರೋ ಅವೆಲ್ಲವೂ ನಿಜವಾಗುವ ಸನ್ನಿವೇಶವೂ ಕೂಡ ಈಗ ಸೃಷ್ಟಿಯಾಗಿವೆ.
ಬಿಜೆಪಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದೇ ಮಿತ್ರಪಕ್ಷಗಳೊಂದಿಗೆ ಕೈ ಜೋಡಿಸಿ ಸರ್ಕಾರವನ್ನು ರಚನೆ ಮಾಡಬೇಕಾದ ಸ್ಥಿತಿ ಬಂತು. ಯಾವಾಗ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ ಪಕ್ಷಗಳ ಜೊತೆ ಕೈ ಜೋಡಿಸಿ ಬಿಜೆಪಿ ಸರ್ಕಾರ ರಚನೆ ಮಾಡಿತೋ ಅಂದಿನಿಂದಲೇ ಒಂದಿಷ್ಟು ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡಿದ್ದವು. ನಿತೀಶ್ ಕುಮಾರ್ ಮೂರು ಕೊಟ್ರೆ ಸೊಸೆ ಕಡೆ ಆರು ಕೊಟ್ರೆ ಅತ್ತೆ ಕಡೆ ಅನ್ನೋ ಮನಸ್ಥಿತಿಯವರು. ಚಂದ್ರಬಾಬು ನಾಯ್ಡು ಹಿಂದಿನಿಂದಲೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಅಂತ ಕೇಳುತ್ತಲೇ ಬಂದವರು ಮತ್ತು ಅದು ಸಿಗದಿದ್ದಾಗ ಈ ಹಿಂದೆ 2019ರಲ್ಲಿ ಎನ್ಡಿಎ ಕೂಟದಿಂದ ಆಚೆ ಬಂದವರು. ಹೀಗಾಗಿ ಇವರೆಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಒಂದು ಸಮರ್ಥ ಆಡಳಿತ ನೀಡುವುದು ಅಷ್ಟು ಸುಲಭವಲ್ಲ. ಈಗ ಮೊದಲ ಬಜೆಟ್ನಲ್ಲಿಯೇ ಅಂತಹದೊಂದು ಸಮಸ್ಯೆಗಳು ಶುರುವಾಗಿವೆ.
ಇದನ್ನೂ ಓದಿ: ಇಂದಿನಿಂದ ಮುಂಗಾರು ಅಧಿವೇಶನ.. ಪ್ರಧಾನಿ ಮೋದಿಯನ್ನು ಕಟ್ಟಿ ಹಾಕಲು ರಾಹುಲ್ ಗಾಂಧಿ ಪ್ಲಾನ್
ಮತ್ತೆ ಮುನ್ನೆಲೆಗೆ ಬಂದ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ
2012ರಲ್ಲಿ ಆಂತರಿಕ ಸಚಿವಾಲಯದ ತಂಡ ಬಿಹಾರಕ್ಕೆ ನೀಡಬೇಕಾದ ವಿಶೇಷ ಸ್ಥಾನಮಾನದ ಕುರಿತು ಒಂದು ವರದಿ ತಯಾರಿಸಿತ್ತು. ಆದ್ರೆ ಇಂದು ಕೇಂದ್ರ ಸರ್ಕಾರ ಅಂತಹ ಯಾವುದೇ ನಿರ್ಧಾರಗಳನ್ನು ನಮ್ಮ ಸರ್ಕಾರ ತೆಗೆದುಕೊಂಡಿಲ್ಲ ಎಂದು ಹೇಳುವ ಮೂಲಕ ಬಿಹಾರದಲ್ಲಿ ರಾಜ್ಯ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಕಿತ್ತಾಟಕ್ಕೆ ವೇದಿಕೆಯನ್ನು ಸೃಷ್ಟಿ ಮಾಡಿದೆ. ಅದು ಮಾತ್ರವಲ್ಲ ಬಿಜೆಪಿ ಮೈತ್ರಿ ಮಾಡಿಕೊಂಡು ಆಡಳಿತಕ್ಕೆ ಬಂದ ಮೊದಲ ಮೇಲೆ ಮೊದಲ ಬಾರಿಗೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿಯೂ ಕೂಡ ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದೇ ಬೇಡಿಕೆ ಇಡಲಾಗಿತ್ತು.
ಇದಕ್ಕೆ ಪ್ರತಿಯಾಗಿ ಹಣಕಾಸು ರಾಜ್ಯ ಖಾತೆ ಸಚಿವ ಪಂಕಜ್ ಚೌದರಿ ಲಿಖಿತ ರೂಪದಲ್ಲಿ ಉತ್ತರವನ್ನು ನೀಡಿದ್ದರು. ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಈ ಹಿಂದೆ ಕೆಲವು ರಾಜ್ಯಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡಿದೆ. ಹಾಗೆ ನೀಡಲು ಅನೇಕ ಮಾನದಂಡಗಳನ್ನು ಅನುಸರಿಸಲಾಗಿದೆ. ಬೆಟ್ಟಗುಡ್ಡದ ಮೇಲೆ ಕಡಿದಾದ ಹಾದಿಯಲ್ಲಿರುವ ರಾಜ್ಯಗಳು ಕಡಿಮೆ ಜನಸಂಖ್ಯೆ ಬುಡಕಟ್ಟು ಜನಾಂಗವನ್ನು ಹೊಂದಿರುವ, ಅಂತಾರಾಷ್ಟ್ರೀಯ ಗಡಿಯೊಂದಿಗೆ ಹೊಂದಿಕೊಂಡಿರುವ, ಮೂಲಭೂತ ಸೌಕರ್ಯಗಳು ಹಾಗೂ ಆರ್ಥಿಕವಾಗಿ ತೀರ ಹಿಂದುಳಿದ ರಾಜ್ಯಗಳಿಗೆ, ರಾಜ್ಯದ ಕೆಲವು ಪ್ರದೇಶಗಳಿಗೆ ಮಾತ್ರ ವಿಶೇಷ ಸ್ಥಾನಮಾನ ನೀಡಲಾಗಿದೆ ಅಂತ ಜೆಡಿಯುನ ಸಂಸದನ ಪ್ರಶ್ನೆಗೆ ಉತ್ತರಿಸಿರುವ ಚೌದರಿ ಅವರು ಈ ಹಿಂದೆ ಬಿಹಾರದ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಐಎಂಜಿ ಅಂದ್ರೆ ಆಂತರಿಕ ಸಚಿವರ ತಂಡ ಗಣನೆಗೆ ತೆಗೆದುಕೊಂಡು 30 ಮಾರ್ಚ್ 2012ರಲ್ಲಿ ಒಂದು ವರದಿಯನ್ನು ಸಿದ್ಧಪಡಿಸಿತ್ತು. ಆ ವರದಿಯ ಪ್ರಕಾರ ಬಿಹಾರ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಮಾನದಂಡಗಳ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಬರುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಟ್ರಂಪ್ಗೆ ಟಕ್ಕರ್ ಕೊಡ್ತಾರಾ ಕಮಲಾ ಹ್ಯಾರಿಸ್.. ಬೈಡನ್ ಜಾಗಕ್ಕೆ ಬಂದ ಭಾರತ ಮೂಲದ ದಿಟ್ಟ ನಾರಿ; ಇವ್ರ ಹಿನ್ನೆಲೆ ಏನು?
ಈ ಒಂದು ಲಿಖಿತ ಉತ್ತರ ಆರ್ಜೆಡಿಯ ಕೆಂಗಣ್ಣಿಗೆ ಗುರಿಯಾಗಿದೆ. ನಿತೀಶ್ ಕುಮಾರ್ ವಿರುದ್ಧ ಆರ್ಜೆಡಿ ಮುಗಿದು ಬೀಳುತ್ತಿದೆ. ನಿತೀಶ್ ಕುಮಾರ ಕೇಂದ್ರ ಹಾಗೂ ರಾಜ್ಯದಲ್ಲಿನ ಅಧಿಕಾರದ ಲಾಲಸೆಗೆ ಬಿಹಾರದ ಗೌರವ, ಅವರ ಅಂತರಾತ್ಮ, ಬಿಹಾರದ ಅಸ್ಮಿತೆ, ಬಿಹಾರ ಪ್ರಜೆಗಳ ಆಕಾಂಕ್ಷೆ ಮತ್ತು ಬಿಹಾರ ಜನರ ಮತಗಳ ಮಹತ್ವವನ್ನೂ ಕೂಡ ಮಾರಿ ಬಿಟ್ಟಿದ್ದಾರೆ. ಕೂಡಲೇ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತನ್ನ ಎಕ್ಸ್ ಖಾತೆಯಲ್ಲಿ ಗುಡುಗಿದೆ.
नीतीश कुमार केंद्र और राज्य की सत्ता के लिए अपना ज़मीर, अपनी अंतरात्मा, बिहार की अस्मिता, बिहारवासियों की आकांक्षाओं और बिहार के वोटों की महत्ता को बेच चुके हैं!
“नीतीश कुमार तुरंत इस्तीफ़ा दें, बोला था विशेष राज्य का दर्जा दिला देंगे! अब केंद्र ने मना कर दिया!”
– श्री… pic.twitter.com/yCLmiwZRzU— Rashtriya Janata Dal (@RJDforIndia) July 22, 2024
ಸದ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿವೆ. ಅದರ ಜೊತೆಗೆ ಆರಂಭದಲ್ಲಿಯೇ ಮೋದಿ ಸರ್ಕಾರಕ್ಕೆ ಹಲವು ಅಡೆತಡೆಗಳು ಶುರುವಾಗಿವೆ. ಇಲ್ಲಿಯವರೆಗೂ ಮೋದಿ ತಮ್ಮ ರಾಜಕಾರಣದ ಅನುಭವದಲ್ಲಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಬದುಕಿನಲ್ಲಿ ಎಂದಿಗೂ ಕೂಡ ಮಿತ್ರಪಕ್ಷಳ ಜೊತೆ ಕೈಜೋಡಿಸಿ ಆಡಳಿತ ನಡೆಸಿದ ಅನುಭವವನ್ನು ಹೊಂದಿದವರಲ್ಲ. ಇದೇ ಮೊದಲ ಬಾರಿಗೆ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಆರಂಭದಲ್ಲಿಯೇ ಸಾಕಷ್ಟು ವಿಘ್ನಗಳು ಎದುರಾಗಿವೆ. ಇವೆಲ್ಲವನ್ನೂ ಮೋದಿ ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನ ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಜೆಟ್ ಮಂಡನೆಗೂ ಮೊದಲೇ ವಿಶೇಷ ಸ್ಥಾನಮಾನದ ಬಡಿದಾಟ ಶುರು
ನಿಜವಾಗುತ್ತಿವೆಯಾ ರಾಜಕೀಯ ಪಂಡಿತರು ಹಿಂದೆ ಹಾಕಿದ ಲೆಕ್ಕಾಚಾರ!
ಆರಂಭದಲ್ಲಿಯೇ ಶುರುವಾದ್ವಾ ಮೋದಿ ಮೈತ್ರಿ ಸರ್ಕಾರಕ್ಕೆ ಸಂಕಷ್ಟಗಳು?
ನವದೆಹಲಿ: ಮೋದಿ 3.O ಸರ್ಕಾರದ ಮೊದಲ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಇದೇ ಸಮಯದಲ್ಲಿ ಚುನಾವಣೆಗೂ ಮುನ್ನ ಯಾವೆಲ್ಲಾ ಊಹೆಗಳನ್ನು ರಾಜಕೀಯ ಪರಿಣಿತರು ಮಾಡಿದ್ದರೋ ಅವೆಲ್ಲವೂ ನಿಜವಾಗುವ ಸನ್ನಿವೇಶವೂ ಕೂಡ ಈಗ ಸೃಷ್ಟಿಯಾಗಿವೆ.
ಬಿಜೆಪಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದೇ ಮಿತ್ರಪಕ್ಷಗಳೊಂದಿಗೆ ಕೈ ಜೋಡಿಸಿ ಸರ್ಕಾರವನ್ನು ರಚನೆ ಮಾಡಬೇಕಾದ ಸ್ಥಿತಿ ಬಂತು. ಯಾವಾಗ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ ಪಕ್ಷಗಳ ಜೊತೆ ಕೈ ಜೋಡಿಸಿ ಬಿಜೆಪಿ ಸರ್ಕಾರ ರಚನೆ ಮಾಡಿತೋ ಅಂದಿನಿಂದಲೇ ಒಂದಿಷ್ಟು ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡಿದ್ದವು. ನಿತೀಶ್ ಕುಮಾರ್ ಮೂರು ಕೊಟ್ರೆ ಸೊಸೆ ಕಡೆ ಆರು ಕೊಟ್ರೆ ಅತ್ತೆ ಕಡೆ ಅನ್ನೋ ಮನಸ್ಥಿತಿಯವರು. ಚಂದ್ರಬಾಬು ನಾಯ್ಡು ಹಿಂದಿನಿಂದಲೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಅಂತ ಕೇಳುತ್ತಲೇ ಬಂದವರು ಮತ್ತು ಅದು ಸಿಗದಿದ್ದಾಗ ಈ ಹಿಂದೆ 2019ರಲ್ಲಿ ಎನ್ಡಿಎ ಕೂಟದಿಂದ ಆಚೆ ಬಂದವರು. ಹೀಗಾಗಿ ಇವರೆಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಒಂದು ಸಮರ್ಥ ಆಡಳಿತ ನೀಡುವುದು ಅಷ್ಟು ಸುಲಭವಲ್ಲ. ಈಗ ಮೊದಲ ಬಜೆಟ್ನಲ್ಲಿಯೇ ಅಂತಹದೊಂದು ಸಮಸ್ಯೆಗಳು ಶುರುವಾಗಿವೆ.
ಇದನ್ನೂ ಓದಿ: ಇಂದಿನಿಂದ ಮುಂಗಾರು ಅಧಿವೇಶನ.. ಪ್ರಧಾನಿ ಮೋದಿಯನ್ನು ಕಟ್ಟಿ ಹಾಕಲು ರಾಹುಲ್ ಗಾಂಧಿ ಪ್ಲಾನ್
ಮತ್ತೆ ಮುನ್ನೆಲೆಗೆ ಬಂದ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ
2012ರಲ್ಲಿ ಆಂತರಿಕ ಸಚಿವಾಲಯದ ತಂಡ ಬಿಹಾರಕ್ಕೆ ನೀಡಬೇಕಾದ ವಿಶೇಷ ಸ್ಥಾನಮಾನದ ಕುರಿತು ಒಂದು ವರದಿ ತಯಾರಿಸಿತ್ತು. ಆದ್ರೆ ಇಂದು ಕೇಂದ್ರ ಸರ್ಕಾರ ಅಂತಹ ಯಾವುದೇ ನಿರ್ಧಾರಗಳನ್ನು ನಮ್ಮ ಸರ್ಕಾರ ತೆಗೆದುಕೊಂಡಿಲ್ಲ ಎಂದು ಹೇಳುವ ಮೂಲಕ ಬಿಹಾರದಲ್ಲಿ ರಾಜ್ಯ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಕಿತ್ತಾಟಕ್ಕೆ ವೇದಿಕೆಯನ್ನು ಸೃಷ್ಟಿ ಮಾಡಿದೆ. ಅದು ಮಾತ್ರವಲ್ಲ ಬಿಜೆಪಿ ಮೈತ್ರಿ ಮಾಡಿಕೊಂಡು ಆಡಳಿತಕ್ಕೆ ಬಂದ ಮೊದಲ ಮೇಲೆ ಮೊದಲ ಬಾರಿಗೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿಯೂ ಕೂಡ ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದೇ ಬೇಡಿಕೆ ಇಡಲಾಗಿತ್ತು.
ಇದಕ್ಕೆ ಪ್ರತಿಯಾಗಿ ಹಣಕಾಸು ರಾಜ್ಯ ಖಾತೆ ಸಚಿವ ಪಂಕಜ್ ಚೌದರಿ ಲಿಖಿತ ರೂಪದಲ್ಲಿ ಉತ್ತರವನ್ನು ನೀಡಿದ್ದರು. ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಈ ಹಿಂದೆ ಕೆಲವು ರಾಜ್ಯಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡಿದೆ. ಹಾಗೆ ನೀಡಲು ಅನೇಕ ಮಾನದಂಡಗಳನ್ನು ಅನುಸರಿಸಲಾಗಿದೆ. ಬೆಟ್ಟಗುಡ್ಡದ ಮೇಲೆ ಕಡಿದಾದ ಹಾದಿಯಲ್ಲಿರುವ ರಾಜ್ಯಗಳು ಕಡಿಮೆ ಜನಸಂಖ್ಯೆ ಬುಡಕಟ್ಟು ಜನಾಂಗವನ್ನು ಹೊಂದಿರುವ, ಅಂತಾರಾಷ್ಟ್ರೀಯ ಗಡಿಯೊಂದಿಗೆ ಹೊಂದಿಕೊಂಡಿರುವ, ಮೂಲಭೂತ ಸೌಕರ್ಯಗಳು ಹಾಗೂ ಆರ್ಥಿಕವಾಗಿ ತೀರ ಹಿಂದುಳಿದ ರಾಜ್ಯಗಳಿಗೆ, ರಾಜ್ಯದ ಕೆಲವು ಪ್ರದೇಶಗಳಿಗೆ ಮಾತ್ರ ವಿಶೇಷ ಸ್ಥಾನಮಾನ ನೀಡಲಾಗಿದೆ ಅಂತ ಜೆಡಿಯುನ ಸಂಸದನ ಪ್ರಶ್ನೆಗೆ ಉತ್ತರಿಸಿರುವ ಚೌದರಿ ಅವರು ಈ ಹಿಂದೆ ಬಿಹಾರದ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಐಎಂಜಿ ಅಂದ್ರೆ ಆಂತರಿಕ ಸಚಿವರ ತಂಡ ಗಣನೆಗೆ ತೆಗೆದುಕೊಂಡು 30 ಮಾರ್ಚ್ 2012ರಲ್ಲಿ ಒಂದು ವರದಿಯನ್ನು ಸಿದ್ಧಪಡಿಸಿತ್ತು. ಆ ವರದಿಯ ಪ್ರಕಾರ ಬಿಹಾರ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಮಾನದಂಡಗಳ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ಬರುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಟ್ರಂಪ್ಗೆ ಟಕ್ಕರ್ ಕೊಡ್ತಾರಾ ಕಮಲಾ ಹ್ಯಾರಿಸ್.. ಬೈಡನ್ ಜಾಗಕ್ಕೆ ಬಂದ ಭಾರತ ಮೂಲದ ದಿಟ್ಟ ನಾರಿ; ಇವ್ರ ಹಿನ್ನೆಲೆ ಏನು?
ಈ ಒಂದು ಲಿಖಿತ ಉತ್ತರ ಆರ್ಜೆಡಿಯ ಕೆಂಗಣ್ಣಿಗೆ ಗುರಿಯಾಗಿದೆ. ನಿತೀಶ್ ಕುಮಾರ್ ವಿರುದ್ಧ ಆರ್ಜೆಡಿ ಮುಗಿದು ಬೀಳುತ್ತಿದೆ. ನಿತೀಶ್ ಕುಮಾರ ಕೇಂದ್ರ ಹಾಗೂ ರಾಜ್ಯದಲ್ಲಿನ ಅಧಿಕಾರದ ಲಾಲಸೆಗೆ ಬಿಹಾರದ ಗೌರವ, ಅವರ ಅಂತರಾತ್ಮ, ಬಿಹಾರದ ಅಸ್ಮಿತೆ, ಬಿಹಾರ ಪ್ರಜೆಗಳ ಆಕಾಂಕ್ಷೆ ಮತ್ತು ಬಿಹಾರ ಜನರ ಮತಗಳ ಮಹತ್ವವನ್ನೂ ಕೂಡ ಮಾರಿ ಬಿಟ್ಟಿದ್ದಾರೆ. ಕೂಡಲೇ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತನ್ನ ಎಕ್ಸ್ ಖಾತೆಯಲ್ಲಿ ಗುಡುಗಿದೆ.
नीतीश कुमार केंद्र और राज्य की सत्ता के लिए अपना ज़मीर, अपनी अंतरात्मा, बिहार की अस्मिता, बिहारवासियों की आकांक्षाओं और बिहार के वोटों की महत्ता को बेच चुके हैं!
“नीतीश कुमार तुरंत इस्तीफ़ा दें, बोला था विशेष राज्य का दर्जा दिला देंगे! अब केंद्र ने मना कर दिया!”
– श्री… pic.twitter.com/yCLmiwZRzU— Rashtriya Janata Dal (@RJDforIndia) July 22, 2024
ಸದ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿವೆ. ಅದರ ಜೊತೆಗೆ ಆರಂಭದಲ್ಲಿಯೇ ಮೋದಿ ಸರ್ಕಾರಕ್ಕೆ ಹಲವು ಅಡೆತಡೆಗಳು ಶುರುವಾಗಿವೆ. ಇಲ್ಲಿಯವರೆಗೂ ಮೋದಿ ತಮ್ಮ ರಾಜಕಾರಣದ ಅನುಭವದಲ್ಲಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಬದುಕಿನಲ್ಲಿ ಎಂದಿಗೂ ಕೂಡ ಮಿತ್ರಪಕ್ಷಳ ಜೊತೆ ಕೈಜೋಡಿಸಿ ಆಡಳಿತ ನಡೆಸಿದ ಅನುಭವವನ್ನು ಹೊಂದಿದವರಲ್ಲ. ಇದೇ ಮೊದಲ ಬಾರಿಗೆ ಮೈತ್ರಿ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಆರಂಭದಲ್ಲಿಯೇ ಸಾಕಷ್ಟು ವಿಘ್ನಗಳು ಎದುರಾಗಿವೆ. ಇವೆಲ್ಲವನ್ನೂ ಮೋದಿ ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನ ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ