/newsfirstlive-kannada/media/media_files/2025/08/24/surya_kumar-1-2025-08-24-13-07-44.jpg)
ಏಷ್ಯಾಕಪ್ ಟೂರ್ನಿಯೊಂದಿಗೆ 2026ರ ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾದ ಸಿದ್ಧತೆ ಆರಂಭವಾಗಿದೆ. ಏಷ್ಯನ್ ಸಮರಕ್ಕೆ ಪ್ರಕಟಿಸಿರೋ ತಂಡವೇ ಬಹುತೇಕ ಚುಟುಕು ವಿಶ್ವಕಪ್ ಸಮರದಲ್ಲಿ ಆಡೋದು ಕನ್ಫರ್ಮ್ ಆಗಿದೆ. ತಂಡವೇನೋ ಮೆಲ್ನೋಟಕ್ಕೆ ಬಲಿಷ್ಠವಾಗೇ ಕಾಣ್ತಿದೆ. ಆದ್ರೆ, ಒಂದು ಪ್ರಶ್ನೆ ಮಾತ್ರ ಪ್ರಶ್ನೆಯಾಗೇ ಉಳಿದಿದೆ.
ಟೀಮ್ ಇಂಡಿಯಾ ಬದಲಾಗ್ತಿದೆ. ಕೆಲ ಆಟಗಾರರು ಟೀಮ್ ಇಂಡಿಯಾದಿಂದ ದೂರ ಆಗಿದ್ದಾರೆ. ಕೆಲ ಹಿರಿಯ ಆಟಗಾರರ ಭವಿಷ್ಯ ಅಂತ್ರತ್ರಕ್ಕೆ ಸಿಲುಕಿದೆ. ಮುಂದಿನ 6 ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ಗೆ ಒಂದೊಳ್ಳೆ ಟೀಮ್ ಕಟ್ಟುವ ಸವಾಲು ಗಂಭೀರ್ & ಟೀಮ್ ಮುಂದಿದೆ. ಇದಕ್ಕೆ ಈಗಾಗಲೇ ಸಿದ್ಧತೆಯೂ ಆರಂಭವಾಗಿದೆ. ಆದ್ರೂ, ಭವಿಷ್ಯದ ತಂಡ ಕಟ್ಟುವ ಲೆಕ್ಕಾಚಾರದಲ್ಲಿರುವ ಟೀಮ್ ಮ್ಯಾನೇಜ್ಮೆಂಟ್, ಕಣ್ಣಿದ್ದು ಕುರುಡಾಗಿದ್ಯಾ ಎಂಬ ಅನುಮಾನ ಹುಟ್ಟಿದೆ.
ಗಂಭೀರ್ ದೃಷ್ಟಿಯಲ್ಲಿ ಟೀಮ್ ಇಂಡಿಯಾಗೆ ಬೇಕಿಲ್ವಾ ‘ಫಿನಿಶರ್’.!?
ವೈಟ್ಬಾಲ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಡೇಂಜರಸ್ ಟೀಮ್. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಕಳೆದ ಐಸಿಸಿ ಟೂರ್ನಿಗಳ ರಿಸಲ್ಟ್. 2023ರ ಏಕದಿನ ವಿಶ್ವಕಪ್ ರನ್ನರ್ಸ್ ಆಗಿರೋ ಟೀಮ್ ಇಂಡಿಯಾ, 2024ರ ಟಿ20 ವಿಶ್ವಕಪ್ 2025ರ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ಸ್. ಇಂತಾ ಚಾಂಪಿಯನ್ ತಂಡದಲ್ಲೀಗ ಫಿನಿಶರ್ ಎಂಬ ಪದಕ್ಕೆ ಸ್ಥಾನವೇ ಇಲ್ಲ.
ಗೌತಮ್ ಗಂಭೀರ್, ಟೀಮ್ ಇಂಡಿಯಾ ಹೆಡ್ ಕೋಚ್ ಅದ್ಮೇಲೆ, ಟೀಮ್ ಇಂಡಿಯಾದಲ್ಲಿ ಫಿನಿಶರ್ ಎಂಬ ಪರಿಕಲ್ಪನೆಯೇ ಇಲ್ಲ. ಟಾಪ್ ಆರ್ಡರ್ಗೆ ನೀಡುವಷ್ಟು ಮಹತ್ವವನ್ನ ಲೋವರ್ ಆರ್ಡರ್ಗೆ ನೀಡದ ಗೌತಮ್ ಗಂಭೀರ್, ಅಗ್ರ ಕ್ರಮಾಂಕವೇ ತಂಡಕ್ಕೆ ಸಕ್ಸಸ್ ತಂದುಕೊಡುತ್ತೆ ಎಂದು ನಂಬಿದಂತಿದೆ. ಇದು ಟೀಮ್ ಇಂಡಿಯಾದಲ್ಲಿ ಫಿನಿಶರ್ ಪರಿಪಾಠ ಮರೆಯಾಗ್ತಿದೆಯಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಆಲ್ರೌಂಡರ್ಗಳ ಮೇಲಷ್ಟೇ ಗೌತಮ್ ಗಂಭೀರ್ ಒಲವು..!
ಹೆಡ್ ಕೋಚ್ ಗೌತಮ್ ಗಂಭೀರ್, ಟೀಮ್ ಇಂಡಿಯಾಗೆ ಬಂದ್ಮೇಲೆ ಹೆಚ್ಚು ಬದಲಾಗಿದೆ. ಟಿ20 ತಂಡದಲ್ಲಿ ನೋಡಿದ್ರೆ, ಸೆಕ್ಯೂರ್ ಟಾಪ್ ಆರ್ಡರ್ ಇದೆ. ಟಿ20 ಸ್ಪೆಷಲಿಸ್ಟ್ಗಳ ದಂಡಿದೆ. ಲೆಫ್ಟ್ ಆ್ಯಂಡ್ ರೈಟ್ ಕಾಂಬಿನೇಷನ್ ಬಗ್ಗೆ ಹೆಚ್ಚು ಯೋಚಿಸುವ ಗಂಭೀರ್, ಮತ್ತೊಂದ್ಕಡೆ ಆಲ್ರೌಂಡರ್ಗಳ ಮೇಲೆ ಒಲವು ಹೊಂದಿದ್ದಾರೆ.
ಈ ಹಿಂದಿನ ಟೀಮ್ ಇಂಡಿಯಾಗೆ ಹೋಲಿಕೆ ಮಾಡಿದ್ರೆ, ಸದ್ಯ ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಐದಾರು ಮಂದಿ ಆಲ್ರೌಂಡರ್ಗಳು ಸಿಕ್ತಾರೆ. ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಆಕ್ಷರ್ ಪಟೇಲ್, ವಾಷ್ಟಿಂಗ್ಟನ್ ಸುಂದರ್, ನಿತಿಶ್ ಕುಮಾರ್ ರೆಡ್ಡಿ ಹೀಗೆ ಬೌಲಿಂಗ್ & ಬ್ಯಾಟಿಂಗ್ನಲ್ಲಿ ಹೆಚ್ಚು ಆಯ್ಕೆಗಳಿಗೆ ಆದ್ಯತೆ ನೀಡ್ತಿದ್ದಾರೆ. ಆದ್ರೆ, ಈ ಹಿಂದೆ ಸ್ಪೆಷಲಿಸ್ಟ್ಗಳಾಗಿ ಫಿನಿಶರ್ ರೋಲ್ ಪ್ಲೇ ಮಾಡ್ತಿದ್ದ ಆಟಗಾರರಿಗೆ ಹೆಚ್ಚಿನ ಮನ್ನಣೆ ನೀಡ್ತಿಲ್ಲ.
ಇದನ್ನೂ ಓದಿ: ಹೆಚ್ಚಾಯಿತು ಗಿಲ್ ಡಿಮ್ಯಾಂಡ್.. ಬ್ರ್ಯಾಂಡ್ಗಳ ಪಾಲಿನ ಹೊಸ ಕೊಹ್ಲಿ ಆಗ್ತಾರಾ ಶುಭ್ಮನ್..?
ಏಷ್ಯಾಕಪ್ನಲ್ಲಿ ಕಂಡುಕೊಳ್ಳಬೇಕಿದೆ ಪ್ರಶ್ನೆಗೆ ಉತ್ತರ..!
ಟೀಮ್ ಇಂಡಿಯಾದಲ್ಲಿ ಬ್ಯಾಟಿಂಗ್ ಡೆಪ್ತ್ ಇದೆ. ಆದ್ರೆ, ಓತ್ತಡದ ನಡುವೆ ಹೋರಾಡುವ ಆಟಗಾರರು ಇಲ್ಲ. ಹೈಫ್ರಷರ್ ಗೇಮ್ಸ್ನಲ್ಲಿ ಈ ಆಲ್ರೌಂಡರ್ಗಳು ಕೈ ಹಿಡಿದ್ದಿಲ್ಲ. ಧೋನಿ ಬಳಿಕ ಹಾರ್ದಿಕ್ ಪಾಂಡ್ಯ ಫಿನಿಶರ್ ಆಗಿ ಹೆಸರು ಪಡೆದ್ರೂ, ಗೆಲ್ಲಿಸಿದ ಪಂದ್ಯಗಳು ಬೆರಳೆಣಿಕೆಯಷ್ಟು. ರಿಂಕು ಸಿಂಗ್ ನಯಾ ಫಿನಿಶರ್ ಆಗಿ ತಂಡಕ್ಕೆ ಬಂದ್ರೂ, ಆಡಿದ್ದು ಒಂದೆರೆಡು ಮ್ಯಾಚ್ ಮಾತ್ರ. ಐಪಿಎಲ್ನಲ್ಲಿ ನಡೆಯೋ ಶಿವಂ ದುಬೆ ಶಿವತಾಂಡವ ಟೀಮ್ ಇಂಡಿಯಾದಲ್ಲಿ ನಡೆದಿಲ್ಲ. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ 7 ಹಾಗೂ 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ರೂ, ಬ್ಯಾಟಿಂಗ್ನಲ್ಲಿ ಪವರ್ ಇಲ್ಲ. ಮುಂಬರೋ ಏಷ್ಯಾಕಪ್ನಲ್ಲಿ ಫಿನಿಶರ್ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೇಬೇಕಿದೆ.
ಬೇಕಿದೆ ಪೂರನ್, ಡೆವಿಡ್ರಂಥ ಫಿನಿಶರ್ಸ್, ಗೇಮ್ ಚೇಂಜರ್ಸ್..!
ಟೀಮ್ ಇಂಡಿಯಾದಲ್ಲಿ ಟಿ20 ಸ್ಪೆಷಲಿಸ್ಟ್ಗಳ ದಂಡೇ ಇದೆ. ಆಲ್ರೌಂಡರ್ಗಳು ಇದ್ದಾರೆ ನಿಜ. ಆದ್ರೆ, ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್, ಆಸ್ಟ್ರೇಲಿಯಾದ ಟಿಮ್ ಡೇವಿಡ್ರಂಥ ಪವರ್ ಹಿಟ್ಟರ್ಗಳ ಅನುಪಸ್ಥಿತಿ ಟೀಮ್ ಇಂಡಿಯಾಗೆ ಇದೆ. ಪವರ್ ಹಿಟ್ಟರ್, ಸಿಂಗಲ್ ಹ್ಯಾಂಡೆಡ್ಲಿ ಗೇಮ್ ಫಿನಿಶ್ ಮಾಡುವ ಗೇಮ್ ಚೇಂಜರ್ಸ್ ತಂಡಕ್ಕೆ ಬೇಕಿದ್ದಾರೆ. ಸ್ಪಿನ್, ಪೇಸರ್ಸ್ ಎನ್ನದೆ ಎದುರಾಳಿ ಎದುರು ಹೋರಾಡುವಂತ ಬ್ಯಾಟರ್ನ ಅಗತ್ಯತೆ ಇದೆ. ಏಷ್ಯಾಕಪ್ನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಫಿನಿಷರ್ ಯಾರು ಎಂಬ ಪ್ರಶ್ನೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇಲ್ಲದಿದ್ರೆ, 2026ರ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ, ಹಾಲಿ ಚಾಂಪಿಯನ್ಸ್ ಆಗಿ ಕಿರೀಟ ಉಳಿಸಿಕೊಳ್ಳುವುದು ಕಷ್ಟ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ