MS ಧೋನಿ ಕ್ಯಾಪ್ಟನ್ಸಿಯಿಂದ ನಮ್ಮ ಕರಿಯರ್ ಅಂತ್ಯ.. ದಿಗ್ಗಜ ಆಟಗಾರರಿಂದ ಸ್ಫೋಟಕ ಹೇಳಿಕೆ..!

ನಾನು ಮತ್ತು ನನ್ನ ಸಹೋದರ ಶ್ರೀಲಂಕಾದಲ್ಲಿ ಪಂದ್ಯ ಗೆಲ್ಲಿಸಿದ್ವಿ. ನಮ್ಮ ಜಾಗದಲ್ಲಿ ಬೇರೆ ಯಾರೆ ಇದ್ದಿದ್ರೂ ಆ ಬಳಿಕ ಒಂದು ವರ್ಷ ಡ್ರಾಪ್​ ಆಗ್ತಾ ಇರಲಿಲ್ಲ. ಏಕೆಂದರೆ ಆ ಪಂದ್ಯದಲ್ಲಿ ಭಾರತದ ಗೆಲುವಿಗೆ 28 ಎಸೆತಗಳಲ್ಲಿ 60 ರನ್​ ಬೇಕಿದ್ದವು.

author-image
Bhimappa
DHONI
Advertisment

ಟೀಮ್​ ಇಂಡಿಯಾ ಕಂಡ ಸಕ್ಸಸ್​​ಫುಲ್​ ಕ್ಯಾಪ್ಟನ್​ ಧೋನಿ, ತಮಗೆ ಇಷ್ಟ ಅಲ್ಲ ಅಂದ್ರೆ ಅವರನ್ನ ಟಾರ್ಗೆಟ್​ ಮಾಡ್ತಿದ್ರಾ?, ಹೀಗೊಂದು ಪ್ರಶ್ನೆ ಹುಟ್ಟಿದೆ. ಇದಕ್ಕೆ ಕಾರಣ ಇರ್ಫಾನ್​ ಪಠಾಣ್​, ವೀರೇಂದ್ರ ಸೆಹ್ವಾಗ್​ ನೀಡಿರೋ ಸ್ಟೇಟ್​​ಮೆಂಟ್​ಗಳು. ಧೋನಿ ವಿಚಾರದಲ್ಲಿ ಪಠಾಣ್​, ಸೆಹ್ವಾಗ್​ ಸಿಡಿಸಿದ ಬಾಂಬ್​ ಏನು?. 

ಎಂ​.ಎಸ್​ ಧೋನಿ ಒಂದಲ್ಲ, ಎರಡಲ್ಲ ಮೂರು ಐಸಿಸಿ ಟ್ರೋಫಿಗಳನ್ನ ಗೆದ್ದ ಏಕೈಕ ನಾಯಕ. ಭಾರತಕ್ಕೆ  ಚೊಚ್ಚಲ ಟಿ20 ವಿಶ್ವಕಪ್​, 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್​, 2013ರಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ. ಧೋನಿ ನಾಯಕತ್ವವನ್ನ ವಿಶ್ವವೇ ಮೆಚ್ಚಿದೆ. ವಿಶ್ವ ಕ್ರಿಕೆಟ್​ ಕಂಡ ಒನ್​ ಆಫ್​ ದ ಶ್ರೇಷ್ಟ ಕ್ಯಾಪ್ಟನ್​ ಎಂದು ಕೊಂಡಾಡಿದೆ. 

irfan_pathan

ಧೋನಿ ನಾಯಕತ್ವದ ಬಗ್ಗೆ ದಿಗ್ಗಜರ ಬಿಗ್​ ಬಾಂಬ್​.!

ಕ್ಯಾಪ್ಟನ್​ ಧೋನಿ ಎರಡು ವಿಚಾರಕ್ಕೆ ಸದಾ ಸುದ್ದಿಯಲ್ಲಿರ್ತಾರೆ. ಚಾಣಾಕ್ಯ ನಾಯಕತ್ವ, ಅತ್ಯದ್ಭುತ ಸಾಧನೆಯಿಂದ ಒಂದು ಕಾರಣಕ್ಕೆ. ಇನ್ನೊಂದು ವಿವಾದಗಳಿಂದ. ಧೋನಿ ನಾಯಕತ್ವದಡಿಯಲ್ಲಿ ಆಡಿದ ಆಟಗಾರರು ನೀಡೋ ಹೇಳಿಕೆಗಳು ಸದಾ ಸೆನ್ಸೇಷನ್​ ಸೃಷ್ಟಿಸ್ತವೆ. ಹಲವು ಮಾಜಿ ಕ್ರಿಕೆಟರ್ಸ್​ ತಮ್ಮ ಕರಿಯರ್​ ಅಂತ್ಯವಾಗೋದಕ್ಕೆ ಧೋನಿ ಕಾರಣ ಎಂದ ಹಲವು ಉದಾಹರಣೆಗಳಿವೆ. ಇದೀಗ ಮತ್ತಿಬ್ಬರು ಕ್ರಿಕೆಟರ್ಸ್​​ ಧೋನಿಯನ್ನ ಬ್ಲೇಮ್​ ಮಾಡಿದ್ದಾರೆ. 

ಧೋನಿಯಿಂದಾಗಿ ಕರಿಯರ್​​ ಅಂತ್ಯ ಎಂದ ಪಠಾಣ್​.!

ಧೋನಿ ವಿಚಾರದಲ್ಲಿ ಸದ್ಯ ಹೊಸ ಬಾಂಬಾ ಹಾಕಿರೋದು ಮಾಜಿ ಆಲ್​​ರೌಂಡರ್​ ಇರ್ಫಾನ್​ ಪಠಾಣ್. ಒನ್​ ಅಫ್​​ ದ ಬೆಸ್ಟ್​​ ಅಲ್​​ರೌಂಡರ್​ ಎನಿಸಿಕೊಂಡಿದ್ದ ಇರ್ಫಾನ್​​ ಪಠಾಣ್​, ಇದಕ್ಕಿದ್ದಂತೆ ಟೀಮ್​ ಇಂಡಿಯಾದಿಂದ ದೂರವಾದ್ರು. ಏಕದಿನ ವಿಶ್ವಕಪ್ ಆಡೋ ಅವಕಾಶವೂ ಸಿಗಲಿಲ್ಲ. ಅದ್ರ ಹಿಂದಿನ ಕಥೆಯೇನು ಅನ್ನೋದನ್ನ ಇದೀಗ ಪಠಾಣ್​ ರಿವೀಲ್​ ಮಾಡಿದ್ದಾರೆ. 

ಡ್ರಾಪ್​ ಆಗೋಕೆ ಧೋನಿ ಕಾರಣ

ನಾನು ಮತ್ತು ಸಹೋದರ ಶ್ರೀಲಂಕಾದಲ್ಲಿ ಪಂದ್ಯ ಗೆಲ್ಲಿಸಿದ್ವಿ. ನಮ್ಮ ಜಾಗದಲ್ಲಿ ಬೇರೆ ಯಾರೆ ಇದ್ದಿದ್ರೂ ಆ ಬಳಿಕ ಒಂದು ವರ್ಷ ಡ್ರಾಪ್​ ಆಗ್ತಾ ಇರಲಿಲ್ಲ. ಆ ಪಂದ್ಯದಲ್ಲಿ ನಮ್ಮ ಗೆಲುವಿಗೆ 27-28 ಎಸೆತಗಳಲ್ಲಿ 60 ರನ್​ ಬೇಕಿದ್ವು. ಅಲ್ಲಿಂದ ನಾವು ಪಂದ್ಯ ಗೆಲ್ಲಿಸಿದ್ವಿ. ಆದ್ರೆ, ನ್ಯೂಜಿಲೆಂಡ್​ನಲ್ಲಿ ನನ್ನನ್ನ ಬೆಂಚ್​ಗೆ ಸೀಮಿತಗೊಳಿಸಲಾಯ್ತು. ಆಗ ನಾನು ಗ್ಯಾರಿ ಬಳಿ ನನ್ನನ್ನ ಯಾಕೆ ಡ್ರಾಪ್​ ಮಾಡಲಾಗಿದೆ ಎಂದು ಕೇಳಿದೆ. ಆಗ ಗ್ಯಾರಿ ನನ್ನ ಕೈಯಲ್ಲಿ ಏನೂ ಇಲ್ಲ ಅಂದ್ರು. ನನಗೆ ಇದ್ರಲ್ಲಿ ಯಾರ ಕೈ ಇದೆ ಅನ್ನೋದು ಗೊತ್ತಾಯ್ತು. ನಾಯಕ ಪ್ಲೇಯಿಂಗ್​-XI ನಿರ್ಧರಿಸ್ತಾ ಇದ್ದ. ಆಗ ಧೋನಿ ನಮ್ಮ ನಾಯಕನಾಗಿದ್ರು. 

ಇರ್ಫಾನ್​ ಪಠಾಣ್​​, ಮಾಜಿ ಕ್ರಿಕೆಟಿಗ

2009ರಲ್ಲಿ ಶ್ರೀಲಂಕಾ ಎದುರು ಮ್ಯಾಚ್​ ಗೆಲ್ಲಿಸಿದ ನಂತರ ಪಠಾಣ್ ಮತ್ತೆ ಏಕದಿನ ಪಂದ್ಯವನ್ನಾಡಿದ್ರು 2011ರ ಡಿಸೆಂಬರ್​ನಲ್ಲಿ. ಕಷ್ಟ ಪಟ್ಟು ಕಮ್​ಬ್ಯಾಕ್​ ಮಾಡಿದ್ರೂ ಯುವ ಆಟಗಾರರ ನಡುವಿನ ಪೈಪೋಟಿಯಲ್ಲಿ ಕಳೆದು ಹೋದ್ರು. ಅಂತಿಮವಾಗಿ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. 

ಧೋನಿಯಿಂದಾಗಿ ನಿವೃತ್ತಿಗೆ ಮುಂದಾಗಿದ್ದೆ.! 

ಪಠಾಣ್​ ಮಾತ್ರವಲ್ಲ, ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಸ್ಪೋಟಕ ಬ್ಯಾಟ್ಸ್​​​ಮನ್​ ವೀರೇಂದ್ರ ಸೆಹ್ವಾಗ್​ ಕೂಡ ಧೋನಿ ಬಗ್ಗೆ ಇದೀಗ ಆರೋಪ ಮಾಡಿದ್ದಾರೆ. ಧೋನಿಯಿಂದಾಗಿ 2008ರಲ್ಲೇ ನಾನು ಕ್ರಿಕೆಟ್​ಗೆ ಗುಡ್​ ಬೈ ಹೇಳೋಕೆ ಮುಂದಾಗಿದ್ದೆ ಎಂದಿದ್ದಾರೆ. 

‘ನಿವೃತ್ತಿ ಬಗ್ಗೆ ಯೋಚಿಸಿದ್ದೆ’

2007-08ರ ಆಸ್ಟ್ರೇಲಿಯಾ ಸರಣಿಯಲ್ಲಿ ನಾನು ಮೊದಲ 3 ಪಂದ್ಯ ಆಡಿದೆ. ಆ ಬಳಿಕ MS ಧೋನಿ ನನ್ನನ್ನ ಡ್ರಾಪ್​ ಮಾಡಿದ್ರು. ಆ ಬಳಿಕ ಕೆಲ ಕಾಲ ನಾನು ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಪ್ಲೇಯಿಂಗ್​- XIನಲ್ಲಿ ನನಗೆ ಚಾನ್ಸ್​ ಇಲ್ಲ ಎಂದ ಮೇಲೆ ಏಕದಿನ ಆಡೋದ್ರಲ್ಲಿ ಏನೂ ಉಪಯೋಗ ಇಲ್ಲ ಎನಿಸಿತು. ನಾನು ಸಚಿನ್​ ಬಳಿ ತೆರಳಿ ಏಕದಿನದಿಂದ ನಿವೃತ್ತಿ ಬಗ್ಗೆ ಯೋಚಿಸಿದ್ದೇನೆ ಎಂದೆ. ಅದಕ್ಕೆ ಸಚಿನ್​​ ನಾನು ಕೂಡ 1999-2000ರಲ್ಲಿ ಈ ಪರಿಸ್ಥಿತಿ ಎದುರಿಸಿ ನಿವೃತ್ತಿ ಬಗ್ಗೆ ಯೋಚಿಸಿದ್ದೆ. ಅದು ಬರುತ್ತೆ, ಹೋಗುತ್ತೆ. ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳಬೇಡ ಎಂದಿದ್ರು. 

ವೀರೇಂದ್ರ ಸೆಹ್ವಾಗ್​, ಮಾಜಿ ಕ್ರಿಕೆಟಿಗ

ಇದನ್ನೂ ಓದಿ:ಏಷ್ಯಾ ಕಪ್​ 2025; ಸೂರ್ಯ ಸೇರಿ ಈ ಬಿಗ್ ಹಿಟ್ಟರ್​, ಬಲಿಷ್ಠ ಆಲ್​ರೌಂಡರ್ ಆಡೋದು ಪಕ್ಕಾ..!

virender_sehwag

ತಂಡದಲ್ಲಿದ್ದೂ ಚಾನ್ಸ್​ ಸಿಗದೇ ಬೇಸತ್ತು ಏಕದಿನಕ್ಕೆ ಗುಡ್​ ಬೈ ಹೇಳೋಕೆ ಹೊರಟಿದ್ದ ಸೆಹ್ವಾಗ್​ನ ಸಚಿನ್​ ತಡೆದ್ರು. ಆ ಬಳಿಕ ಏಕದಿನ ವಿಶ್ವಕಪ್​ ಆಡಿದ ಸೆಹ್ವಾಗ್​​, ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. 

ಪಠಾಣ್​, ಸೆಹ್ವಾಗ್​ ಈಗ ಧೋನಿ ವಿಚಾರದಲ್ಲಿ ಬಾಂಬ್​ ಸಿಡಿಸಿದ್ದಾರೆ. ಆದ್ರೆ, ಈ ಹಿಂದೆಯೇ ಗೌತಮ್​ ಗಂಭೀರ್​, ಯುವರಾಜ್​ ಸಿಂಗ್​ ಸೇರಿದಂತೆ ಹಲವರು ಧೋನಿಯ ನಾಯಕತ್ವದ ವಿಚಾರದಲ್ಲಿ ಇದೇ ತರಹದ ಹೇಳಿಕೆಗಳನ್ನ ನೀಡಿದ್ರು. ಕ್ರಿಕೆಟ್​​ ಲೋಕದಲ್ಲಿ ಅವು ಸಖತ್​ ಸುದ್ದಿ ಕೂಡ ಆಗಿದ್ವು. ಆದ್ರೆ, ಧೋನಿಯದ್ದು ಮಾತ್ರ ಈ ವಿಚಾರದಲ್ಲಿ ಮೌನವೇ ಉತ್ತರ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Cricket news in Kannada MS Dhoni Indian cricket team news cricket players
Advertisment